Fact Check : ಕರಿಮೆಣಸು, ಶುಂಠಿ, ಜೇನುತುಪ್ಪ ಕೋವಿಡ್ ನಿಯಂತ್ರಣಕ್ಕೆ ಔಷಧವಲ್ಲ…!
Team Udayavani, Apr 26, 2021, 1:45 PM IST
ನವದೆಹಲಿ : ಸದ್ಯ ದೇಶದಲ್ಲಿ ಜನರು ಕೋವಿಡ್ ಸೋಂಕಿನಿಂದ ತತ್ತರಿಸಿ ಹೋಗಿದ್ದಾರೆ. ಈ ವೇಳೆ ತಮ್ಮ ಜೀವ ಉಳಿಸಿಕೊಳ್ಳಲು ಏನನ್ನು ಬೇಕಾದರು ಮಾಡಲು ಜನ ಸಿದ್ಧರಿದ್ದಾರೆ. ಆದ್ರೆ ಇಂತಹ ಪರಿಸ್ಥಿತಿಯನ್ನೇ ಬಳಕೆ ಮಾಡಿಕೊಂಡಿರುವ ಕೆಲವರು ಸುಳ್ಳು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಕೋವಿಡ್ ಸೋಂಕು ದೇಶಕ್ಕೆ ಪ್ರವೇಶ ಪಡೆದ ಸಂದರ್ಭದಲ್ಲಿ ಕೆಲವು ಸುಳ್ಳು ಸುದ್ದಿಗಳು ಹರಿದಾಡಿದ್ದು, ಈ ಸೋಂಕನ್ನು ನಿವಾರಣೆ ಮಾಡಲು ಕರಿಮೆಣಸು, ಶುಂಠಿ, ಜೇನು ತುಪ್ಪವನ್ನು ಸೇವನೆ ಮಾಡಬೇಕು ಎಂದು ಹೇಳಲಾಗಿತ್ತು.
ಹೌದು ಈ ಸುದ್ದಿ ಸುಳ್ಳು ಎಂದು ಇದೀಗ WHO ಸ್ಪಷ್ಟ ಪಡಿಸಿದೆ. ಪಾಂಡಿಚರಿಯ ಒಬ್ಬ ವೈದ್ಯಕೀಯ ವಿದ್ಯಾರ್ಥಿ ಈ ಸುದ್ದಿಯನ್ನು ಹರಿಬಿಟ್ಟಿದ್ದ. ಕೋವಿಡ್ ಸೋಂಕನ್ನು ಕಡಿಮೆ ಮಾಡಲು ನೀವು ಶುಂಠಿ, ಕರಿಮೆಣಸು ಮತ್ತು ಜೇನು ತುಪ್ಪವನ್ನು ಸೇವಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ. ಇದನ್ನು ನಂಬಿದ ಅದೆಷ್ಟೋ ಜನ ಈ ಸಂಬಂಧದ ಮಾಹಿತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಫಾರ್ವರ್ಡ್ ಕೂಡ ಮಾಡಿದ್ದರು.
ಆದ್ರೆ ಇದೀಗ ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು. ಇಂತಹ ಮಾಹಿತಿಗಳನ್ನು ನಂಬಬೇಡಿ. ಅಧಿಕೃತ ಸಂಸ್ಥೆಗಳು ನೀಡುವ ಆರೋಗ್ಯದ ಮಾಹಿತಿಗಳನ್ನು ಮಾತ್ರ ನಂಬಿ. ಅಲ್ಲದೆ ಈ ರೀತಿಯ ಫೇಕ್ ಸುದ್ದಿಗಳು ನಿಮ್ಮ ಗಮನಕ್ಕೆ ಬಂದರೆ ಅವುಗಳನ್ನು ಶೇರ್ ಮಾಡಬೇಡಿ ಎಂದು ತಿಳಿಸಿದೆ.
एक #फ़र्ज़ी खबर में दावा किया जा रहा है कि पांडिचेरी विश्वविद्यालय के एक छात्र ने #COVID19 का घरेलू उपचार ढूंढ लिया है व @WHO द्वारा भी इसे स्वीकृति दी गई है।
ऐसे भ्रामक संदेश साझा न करें। #कोविड19 से जुड़ी सही जानकारी हेतु आधिकारिक सूत्रों पर ही विश्वास करें। pic.twitter.com/Utepz7OYps
— PIB Fact Check (@PIBFactCheck) April 25, 2021
ಈ ಸುದ್ದಿಯನ್ನು PIB fact check (ಪ್ರೆಸ್ ಇನ್ಫರ್ಮೇಷನ್ ಬ್ಯೂರೋ) ಟ್ವಿಟ್ಟರ್ ಖಾತೆ ಶೇರ್ ಮಾಡಿದೆ. ಅದ್ರಲ್ಲಿ ವೈದ್ಯಕೀಯ ವಿದ್ಯಾರ್ಥಿ ಶೇರ್ ಮಾಡಿದ್ದ ಲೇಖನದ ಸ್ಕ್ರೀನ್ ಶಾಟ್ ಹಾಕಿದ್ದು, ಇದು ಫೇಕ್ ಸುದ್ದಿ ಎಂದು ಬರೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ