ಸ್ತನ ಕ್ಯಾನ್ಸರ್‌- ಮ್ಯಾಮೊಗ್ರಾಮ್‌


Team Udayavani, Jan 29, 2023, 1:03 PM IST

5-breast-cancer

ಭಾರತ ಮತ್ತು ಜಗತ್ತಿನಲ್ಲಿ ಸರ್ವೇ ಸಾಮಾನ್ಯವಾಗಿ ಕಂಡು ಬರುವ ಕ್ಯಾನ್ಸರ್‌ ಸ್ತನ ಕ್ಯಾನ್ಸರ್‌. ಜಾಗತಿಕವಾಗಿ ವರ್ಷಕ್ಕೆ 22,61,419 ಸ್ತನ ಕ್ಯಾನ್ಸರ್‌ ಪ್ರಕರಣಗಳು ಕಂಡುಬರುತ್ತವಾದರೆ ಭಾರತದಲ್ಲಿ ಇದು 1,78,361ರಷ್ಟಿದೆ.

ಸ್ತನ ಕ್ಯಾನ್ಸರ್‌:

ಅಪಾಯಾಂಶಗಳೇನು?

„ ವಂಶವಾಹಿ ಮತ್ತು ವಂಶಪಾರಂಪರ್ಯ: ಕೆಲವು ವಂಶವಾಹಿ ಬದಲಾವಣೆಗಳು ವಂಶಪಾರಂಪರ್ಯವಾಗಿ ಬಂದಿರುತ್ತವೆ ಅಥವಾ ಹೆತ್ತವರಿಂದ ಮಕ್ಕಳಿಗೆ ಹರಿದು ಬರುತ್ತವೆ.

„ ಸ್ತನ ಕ್ಯಾನ್ಸರ್‌ನ ಕೌಟುಂಬಿಕ ಇತಿಹಾಸ ಹೊಂದಿರುವವರಿಗೆ ಈ ಕಾಯಿಲೆ ತಲೆದೋರುವ ಸಾಧ್ಯತೆಗಳು ಅಧಿಕ.

„ ಮಕ್ಕಳಾಗದ ಅಥವಾ 30 ವರ್ಷ ವಯಸ್ಸಿನ ಬಳಿಕ ಮೊದಲ ಮಗುವಿಗೆ ಜನ್ಮ ನೀಡಿರುವ ಮಹಿಳೆಯರಿಗೆ ಸ್ತನದ ಕ್ಯಾನ್ಸರ್‌ ಉಂಟಾಗುವ ಅಪಾಯ ಸ್ವಲ್ಪ ಹೆಚ್ಚು.

„ ಬೊಜ್ಜು ಮತ್ತು ದೈಹಿಕ ಚಟುವಟಿಕೆಗಳ ಕೊರತೆ ಸ್ತನದ ಕ್ಯಾನ್ಸರ್‌ ಉಂಟಾಗಲು ಅಪಾಯಾಂಶಗಳು ಎಂದು ಪರಿಗಣಿತವಾಗಿವೆ.

„ ಮದ್ಯಪಾನಕ್ಕೂ ಸ್ತನ ಕ್ಯಾನ್ಸರ್‌ ತಗಲುವ ಅಪಾಯ ಹೆಚ್ಚಳಕ್ಕೂ ಸಂಬಂಧವಿದೆ.

„ ಗರ್ಭಧಾರಣೆ ನಿಯಂತ್ರಣದ ಕೆಲವು ವಿಧಾನಗಳಲ್ಲಿ ಹಾರ್ಮೋನ್‌ ಗಳ ಬಳಕೆಯಾಗುತ್ತಿದ್ದು, ಇದು ಸ್ತನ ಕ್ಯಾನ್ಸರ್‌ ಉಂಟಾಗುವ ಅಪಾಯವನ್ನು ಹೆಚ್ಚಿಸಬಲ್ಲುದು.

„ ಶಿಶುವಿಗೆ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಎದೆಹಾಲು ಉಣಿಸುವುದರಿಂದ ಸ್ತನ ಕ್ಯಾನ್ಸರ್‌- ಮ್ಯಾಮೊಗ್ರಾಮ್‌ ಸ್ತನ ಕ್ಯಾನ್ಸರ್‌ ಉಂಟಾಗುವ ಅಪಾಯ ಸಾಕಷ್ಟು ಕಡಿಮೆಯಾಗುತ್ತದೆ ಎಂಬುದನ್ನು ಅನೇಕ ಅಧ್ಯಯನಗಳು ಹೇಳಿವೆ.

ತಪಾಸಣೆಗಾಗಿ ಮ್ಯಾಮೊಗ್ರಾಮ್‌

ಸ್ತನದಲ್ಲಿ ಯಾವುದೇ ಲಕ್ಷಣಗಳು ಅಥವಾ ಸಮಸ್ಯೆಗಳನ್ನು ಹೊಂದಿಲ್ಲದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ನ ಚಿಹ್ನೆಗಳನ್ನು ತಪಾಸಿಸುವುದಕ್ಕಾಗಿ ಸ್ಕ್ರೀನಿಂಗ್‌ ಮ್ಯಾಮೊಗ್ರಾಮ್‌ ಉಪಯೋಗಿಸಲಾಗುತ್ತದೆ. ರೂಢಿಗತ ಮ್ಯಾಮೊಗ್ರಾಮ್‌ಗಳಿಂದ ಸ್ತನ ಕ್ಯಾನ್ಸರ್‌ನ್ನು ಅದರ ಆರಂಭಿಕ ಹಂತಗಳಲ್ಲಿಯೇ ಪತ್ತೆ ಹಚ್ಚಬಹುದಾಗಿದ್ದು, ಈ ಹಂತಗಳಲ್ಲಿ ಚಿಕಿತ್ಸೆ ಒದಗಿಸಿದರೆ ಹೆಚ್ಚು ಯಶಸ್ವಿಯಾಗುತ್ತದೆ. ಮ್ಯಾಮೊಗ್ರಫಿ ಬಳಕೆಗೆ ಪ್ರಧಾನ ಕಾರಣ ಸ್ತನ ಕ್ಯಾನ್ಸರನ್ನು ಎಷ್ಟು ಸಾಧ್ಯವೋ ಅಷ್ಟು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚುವುದು. ಪ್ರತೀ ಸ್ತನದ ಅಂಗಾಂಶಗಳ ಎಕ್ಸ್‌-ರೇಗಳನ್ನು ಸಾಮಾನ್ಯವಾಗಿ 2 ವಿಭಿನ್ನ ಕೋನಗಳಿಂದ ತೆಗೆಯಲಾಗುತ್ತದೆ.

ತಪಾಸಣೆಗಾಗಿ ಮ್ಯಾಮೊಗ್ರಾಮ್‌: ಯಾವಾಗ ಮಾಡಿಸಿಕೊಳ್ಳಬೇಕು?

ಸ್ತನ ಕ್ಯಾನ್ಸರನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚುವುದು ಮತ್ತು ಆದಷ್ಟು ಬೇಗನೆ ಸಮಗ್ರ ಕ್ಯಾನ್ಸರ್‌ ಚಿಕಿತ್ಸೆಯನ್ನು ಪಡೆಯುವುದು ಸ್ತನ ಕ್ಯಾನ್ಸರ್‌ನಿಂದಾಗಿ ಉಂಟಾಗುವ ಸಾವುಗಳನ್ನು ತಡೆಯುವಲ್ಲಿ ನಿರ್ಣಾಯಕವಾಗಿರುವ ಎರಡು ಮಾರ್ಗಗಳು. ಸ್ತನ ಕ್ಯಾನ್ಸರ್‌ನ್ನು ಆರಂಭಿಕ ಹಂತದಲ್ಲಿ, ಅದು ಸಣ್ಣ ಪ್ರಮಾಣದಲ್ಲಿದ್ದು, ದೇಹದ ಇತರ ಭಾಗಗಳಿಗೆ ಹರಡಿಕೊಂಡಿರದಂತಹ ಸ್ಥಿತಿಯಲ್ಲಿಯೇ ಪತ್ತೆಹಚ್ಚಿದಾಗ ಗುಣಪಡಿಸಲು ಸುಲಭವಾಗುತ್ತದೆ. ನಿಯಮಿತವಾಗಿ ತಪಾಸಣೆಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಸ್ತನ ಕ್ಯಾನ್ಸರನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚುವುದಕ್ಕೆ ಇರುವ ಗಮನಾರ್ಹ ಕಾರ್ಯತಂತ್ರವಾಗಿದೆ.

ತಪಾಸಣೆಯ ಉದ್ದೇಶಗಳಿಗಾಗಿ, ಸ್ತನ ಕ್ಯಾನ್ಸರ್‌ನ ವೈಯಕ್ತಿಕ ಇತಿಹಾಸ ಹೊಂದಿಲ್ಲದ, ಸ್ತನ ಕ್ಯಾನ್ಸರ್‌ನ ಬಲವಾದ ಕೌಟುಂಬಿಕ ಇತಿಹಾಸ ಹೊಂದಿಲ್ಲದ ಅಥವಾ ಸ್ತನ ಕ್ಯಾನ್ಸರ್‌ ಉಂಟಾಗುವ ಅಪಾಯವನ್ನು ಹೆಚ್ಚಿಸಬಲ್ಲುದು ಎಂಬುದು ಖಚಿತವಾಗಿರುವ ವಂಶವಾಹಿ ರೂಪಾಂತರಗಳನ್ನು (ಬಿಆರ್‌ ಸಿಎ ವಂಶವಾಹಿಯಂಥವು) ಹೊಂದಿಲ್ಲದ ಮತ್ತು 30 ವರ್ಷ ವಯಸ್ಸಿಗೆ ಮುನ್ನ ಎದೆಯ ರೇಡಿಯೇಶನ್‌ ಚಿಕಿತ್ಸೆಗೆ ಒಳಗಾಗಿಲ್ಲದ ಮಹಿಳೆಯನ್ನು ಸ್ತನ ಕ್ಯಾನ್ಸರ್‌ನ ಸರಾಸರಿ ಅಪಾಯ ಹೊಂದಿರುವವರು ಎಂದು ಪರಿಗಣಿಸಲಾಗುತ್ತದೆ. ಈ ಸರಾಸರಿ ಅಪಾಯದಲ್ಲಿ:

40 ಮತ್ತು 44 ವರ್ಷ ವಯಸ್ಸಿನೊಳಗಿನ ಮಹಿಳೆ ಪ್ರತೀ ವರ್ಷ ಮ್ಯಾಮೊಗ್ರಾಮ್‌ ಸಹಿತ ತಪಾಸಣೆ ಮಾಡಿಸಿಕೊಳ್ಳುವ ಆಯ್ಕೆ ಹೊಂದಿರಬೇಕು.

„ 45ರಿಂದ 54 ವರ್ಷ ವಯಸ್ಸಿನೊಳಗಿನ ಮಹಿಳೆಯರು ಪ್ರತೀ ವರ್ಷ ಮ್ಯಾಮೊಗ್ರಾಮ್‌ ಮಾಡಿಸಿಕೊಳ್ಳಬೇಕು.

„ 55 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಮಹಿಳೆಯರು ವರ್ಷ ಬಿಟ್ಟು ವರ್ಷ ಮ್ಯಾಮೊಗ್ರಾಮ್‌ ಮಾಡಿಸಿಕೊಳ್ಳಬಹುದು ಅಥವಾ ಅವರು ಪ್ರತೀ ವರ್ಷವೂ ಮ್ಯಾಮೊಗ್ರಾಮ್‌ ಮಾಡಿಸಿಕೊಳ್ಳುವುದನ್ನು ಮುಂದುವರಿಸಬಹುದು. ಮಹಿಳೆ ಆರೋಗ್ಯವಾಗಿ ಮತ್ತು ಕನಿಷ್ಠ 10 ವರ್ಷ ನಿರೀಕ್ಷಿತ ಜೀವನ ಹೊಂದಿರುವವರೆಗೆ ತಪಾಸಣೆಯನ್ನು ಮುಂದುವರಿಸಬೇಕು.

ಕೆಲವು ನಿರ್ದಿಷ್ಟ ಅಂಶಗಳ ಆಧಾರದಲ್ಲಿ ಸ್ತನದ ಕ್ಯಾನ್ಸರ್‌ ಉಂಟಾಗುವ ಅಪಾಯವನ್ನು ಹೆಚ್ಚು ಹೊಂದಿರುವವ ಮಹಿಳೆಯರು ಪ್ರತೀ ವರ್ಷ ಸ್ತನದ ಎಂಆರ್‌ಐ ಸ್ಕ್ಯಾನ್‌ ಮತ್ತು ಮ್ಯಾಮೊಗ್ರಾಮ್‌ ಮಾಡಿಸಿಕೊಳ್ಳಬೇಕು. ಇದು ಸಾಮಾನ್ಯವಾಗಿ 30 ವರ್ಷ ವಯಸ್ಸಿನಿಂದ ಆರಂಭವಾಗಬೇಕು. ಇಂತಹ ಮಹಿಳೆಯರೆಂದರೆ:

„ ಅಪಾಯ ವಿಶ್ಲೇಷಣೆಯ ಆಧಾರದಲ್ಲಿ ಸ್ತನ ಕ್ಯಾನ್ಸರ್‌ನ ಜೀವಮಾನ ಅಪಾಯ ಶೇ. 20ರಿಂದ 25 ಅಥವಾ ಅದಕ್ಕಿಂತ ಹೆಚ್ಚು ಹೊಂದಿರುವವರು.

„ ಬಿಆರ್‌ಸಿಎ ವಂಶವಾಹಿ ಅಸಹಜತೆ ಹೊಂದಿರುವ ಮಹಿಳೆಯರು.

„ ಬಿಆರ್‌ಸಿಎ ವಂಶವಾಹಿ ಅಸಹಜತೆ ಹೊಂದಿರುವ ವ್ಯಕ್ತಿಗಳ ಮೊದಲ ದರ್ಜೆಯ ಸಂಬಂಧಿ ಮಹಿಳೆಯರು.

„ 10ರಿಂದ 30 ವರ್ಷ ವಯೋಮಾನದಲ್ಲಿ ಎದೆಯ ರೇಡಿಯೇಶನ್‌ ಚಿಕಿತ್ಸೆಗೆ ಒಳಗಾದವರು.

„ ವಂಶವಾಹಿ ಅಸಹಜತೆಗೆ ಸಂಬಂಧಿಸಿದ ನಿರ್ದಿಷ್ಟ ಸಿಂಡ್ರೋಮ್‌ಗಳನ್ನು ಹೊಂದಿರುವವರು.

ಮ್ಯಾಮೊಗ್ರಾಮ್‌ ಮಾಡಿಸಿಕೊಂಡ ಬಳಿಕ ಮುಂದೇನು?

ನಿಮ್ಮ ವೈದ್ಯರು ನಿಮ್ಮ ಮ್ಯಾಮೊಗ್ರಫಿಯಲ್ಲಿ ಏನಾದರೂ ಅಸಹಜತೆಗಳು ಇವೆಯೇ ಎಂದು ಪರಿಶೀಲಿಸುತ್ತಾರೆ. ಯಾವುದೇ ಅಸಹಜತೆಯ ಸಂದೇಹ ಕಂಡುಬಂದರೆ ಇನ್ನಷ್ಟು ಪರೀಕ್ಷೆಗಳಿಗೆ ಅವರು ಶಿಫಾರಸು ಮಾಡಬಹುದು. ಫ‌ಲಿತಾಂಶಗಳು ಸಹಜವಾಗಿದ್ದರೆ ಸೂಚಿತ ಕಾಲಮಾನಕ್ಕೆ ಸರಿಯಾಗಿ ಮುಂದಿನ ತಪಾಸಣೆಗಳಿಗೆ ಒಳಗಾಗುವಂತೆ ಸಲಹೆ ನೀಡಬಹುದು.

ಕಾಲಕ್ರಮದಲ್ಲಿ ಸ್ತನ ಕ್ಯಾನ್ಸರ್‌ ಗೆ ಚಿಕಿತ್ಸೆಯು ಸಾಕಷ್ಟು ಸುಧಾರಣೆ ಕಂಡಿದ್ದು, ಬದುಕುಳಿಯುವ ಪ್ರಮಾಣ ಮತ್ತು ಅನಂತರದ ಬದುಕನ್ನು ಸಹಜತೆಗೆ ಹೆಚ್ಚು ನಿಕಟವಾಗಿ ಸಾಗಿಸಬಹುದಾದಷ್ಟು ಪ್ರಗತಿ ಹೊಂದಿದೆ. ಹಿಂದೆ ಗುಣ ಹೊಂದುವ ಪ್ರಮಾಣ ಸಾಕಷ್ಟು ಕಡಿಮೆ ಮತ್ತು ಚಿಕಿತ್ಸೆಯ ಕೆಲವೇ ಆಯ್ಕೆಗಳಿದ್ದರೆ ಈಗ ನಿಖರವಾದ ಅತ್ಯಾಧುನಿಕ ಚಿಕಿತ್ಸೆಯ ಸೌಲಭ್ಯಗಳು ಆವಿಷ್ಕಾರಗೊಂಡಿವೆ. ಸ್ತನ ಕ್ಯಾನ್ಸರನ್ನು ಬೇಗನೆ ಪತ್ತೆ ಹಚ್ಚಿದರೆ ಅದನ್ನು ಗುಣಪಡಿಸಬಹುದಾದ ಸಾಧ್ಯತೆಗಳು ಅತ್ಯಂತ ಹೆಚ್ಚು. ಹೀಗಾಗಿ ಲಭ್ಯ ತಪಾಸಣೆಯ ವಿಧಾನ ಮತ್ತು ಸೌಲಭ್ಯಗಳ ಬಗ್ಗೆ ನಾವು ಅರಿವನ್ನು ಹೊಂದುವುದರಿಂದ ಅವುಗಳ ಗರಿಷ್ಠ ಪ್ರಯೋಜನವನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ.

ಡಾ| ಎಂ.ಎಸ್‌. ಅತಿಯಮಾನ್‌, ಪ್ರೊಫೆಸರ್‌ ಮತ್ತು ಮುಖ್ಯಸ್ಥರು, ರೇಡಿಯೋಥೆರಪಿ ಮತ್ತು ಓಂಕಾಲಜಿ ವಿಭಾಗ, ಕೆಎಂಸಿ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಕ್ಯಾನ್ಸರ್‌ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)

 

ಟಾಪ್ ನ್ಯೂಸ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

vijayapura

ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

4-cholestral

Cholesterol: ಕೊಲೆಸ್ಟರಾಲ್‌ ತಗ್ಗಿಸುವ ಔಷಧ ಸ್ಟಾಟಿನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.