ಮಕ್ಕಳಲ್ಲಿ ಅಸ್ತಮಾ ಬರುವುದೇಕೆ?ಯಾವ ಮಕ್ಕಳಿಗೆ ಅಸ್ತಮಾ ಹೆಚ್ಚು ಕಾಣಿಸಿಕೊಳ್ಳುತ್ತದೆ

ಮಗು ನೆಲಕ್ಕಿಂತಲೂ ಮಂಚದ ಮೇಲೆ ಮಲಗುವುದೇ ಸೂಕ್ತ.

Team Udayavani, Jan 27, 2023, 4:58 PM IST

ಮಕ್ಕಳಲ್ಲಿ ಅಸ್ತಮಾ ಬರುವುದೇಕೆ?ಯಾವ ಮಕ್ಕಳಿಗೆ ಅಸ್ತಮಾ ಹೆಚ್ಚು ಕಾಣಿಸಿಕೊಳ್ಳುತ್ತದೆ

ಅಸ್ತಮಾ ಪ್ರಾರಂಭದ ದಿನದಿಂದಲೇ ಅದನ್ನು ಗುರುತಿಸಿ ಸರಿಯಾದ ಚಿಕಿತ್ಸೆ ನೀಡಿದಾಗ ಮಗು ಬೇಗನೆ ಗುಣ ಹೊಂದಬಹುದು. ಈ ಕಾಯಿಲೆಯ ಬಗ್ಗೆ ತಿಳಿಯಲು ಜನಸಾಮಾನ್ಯರಿಗೆ ಕೆಲವು ವಿಷಯಗಳ ಪರಿಚಯ ಅವಶ್ಯಕ. ಅಸ್ತಮಾ ಇರುವ -ಬರುವ ಉಬ್ಬಸವನ್ನು ಬೇಗನೆ ಸೂಕ್ತ ಚಿಕಿತ್ಸೆ ನೀಡಿ ಶಮನಗೊಳಿಸುವುದರಿಂದ ತೀವ್ರವಾದ ಉಸಿರಾಟದ ತೊಂದರೆ ತಡೆಗಟ್ಟಬಹುದು.

ಅಸ್ತಮಾ ಕಾಯಿಲೆಯಿಂದ ಜಗತ್ತಿನಲ್ಲಿ ಸುಮಾರು 400 ಮಿಲಿಯನ್‌ ರೋಗಿಗಳು ಬಳಲುತ್ತಿದ್ದಾರೆ. ಇವರಲ್ಲಿ 100 ಮಿಲಿಯನ್‌ ರೋಗಿಗಳು ಭಾರತದಲ್ಲಿದ್ದಾರೆ. ಅತ್ಯಂತ ಅಪಾಯಕಾರಿ ಕಾಯಿಲೆಗಳಾದ ಡಯಾಬಿಟಿಸ್‌, ಹೃದ್ರೋಗ ಮತ್ತು ಕ್ಯಾನ್ಸರ್‌ಗಳಿಗಿಂತಲೂ ಹೆಚ್ಚು ಜನರು ಅಸ್ತಮಾ ಕಾಯಿಲೆಯಿಂದ ಸಾವು ಮತ್ತು ನೋವು ಅನುಭವಿಸುತ್ತಿದ್ದಾರೆ.

ಮುಂದುವರಿದ ರಾಷ್ಟ್ರಗಳಲ್ಲಿ ಪ್ರತಿಶತ 0.8ರಿಂದ 37ರಷ್ಟು ಮಕ್ಕಳು ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದು, ಭಾರತದಲ್ಲಿ ಪ್ರತಿಶತ ಶೇ.2ರಿಂದ 20ರಷ್ಟಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಅಸ್ತಮಾದಿಂದ ಬಳಲುವ ಮಕ್ಕಳ ಪ್ರಮಾಣ ಶೇ.11ರಿಂದ 31 ಎಂದು ವೈಜ್ಞಾನಿಕವಾಗಿ ಗಣತಿ ಮಾಡಿದ ದಾಖಲಾತಿಗಳಿಂದ ದೃಢಪಡಿಸಲಾಗಿದೆ.

ಅಸ್ತಮಾ ಪ್ರಾರಂಭದ ದಿನದಿಂದಲೇ ಅದನ್ನು ಗುರುತಿಸಿ ಸರಿಯಾದ ಚಿಕಿತ್ಸೆ ನೀಡಿದಾಗ ಮಗು ಬೇಗನೆ ಗುಣ ಹೊಂದಬಹುದು. ಈ ಕಾಯಿಲೆಯ ಬಗ್ಗೆ ತಿಳಿಯಲು ಜನಸಾಮಾನ್ಯರಿಗೆ ಕೆಲವು ವಿಷಯಗಳ ಪರಿಚಯ ಅವಶ್ಯಕವೆನಿಸುತ್ತದೆ. ಶ್ವಾಸಕೋಶದ ರಚನೆ, ಅಸ್ತಮಾದಲ್ಲಿ ಉಬ್ಬಸ ಎಂದರೇನು? ಮತ್ತು ಯಾವುದರಿಂದ ಉಬ್ಬಸ ಬರಬಹುದು, ಉಬ್ಬಸ ಬಂದಾಗ ಅದರ ಚಿಕಿತ್ಸೆ, ಆಧುನಿಕವಾಗಿ ಅಸ್ತಮಾದಲ್ಲಿ ಉಪಯೋಗಿಸುವ ಉಪಕರಣಗಳ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಗಿದೆ.

ಶ್ವಾಸಕೋಶದ ರಚನೆ: ಮೂಗಿನಿಂದ ಪ್ರಾರಂಭವಾಗಿ ಸಣ್ಣ ಸಣ್ಣದಾಗಿರುವ ಗಾಲಿ ಚೀಲದವರೆಗೆ ಶ್ವಾಸಕೋಶಗಳು ಸಂಪರ್ಕ ಹೊಂದಿವೆ. ಚಿಕ್ಕ ಗಾಳಿಚೀಲಗಳಲ್ಲಿ ಇಂಗಾಲದ ಡೈಆಕ್ಸೈಡ್‌ನ್ನು ಹೊರದೂಡಿ ಆಮ್ಲಜನಕವನ್ನು ಹೀರಿಕೊಳ್ಳುವ ಕೆಲಸ ಶ್ವಾಸಕೋಶದ್ದಾಗಿದೆ.

ಉಬ್ಬಸ ಎಂದರೇನು? ನಾವು ಉಸಿರಾಡುವ ಶ್ವಾಸಕೋಶದ ನಾಳಗಳು ಕಾರಣಾಂತರದಿಂದ ಸಂಕುಚಿತಗೊಂಡು ಅವುಗಳ ವ್ಯಾಸ ಕಮ್ಮಿಯಾಗಿ ರೋಗಿ ಉಸಿರಾಡುವಾಗ ಹೊರ ಹೊಮ್ಮುವ ಶಬ್ದ ಶಿಳ್ಳೆಯಂತೆ ಇರುತ್ತದೆ. ಅದನ್ನೇ ವೀಸ್‌ ಎಂದು ಕರೆಯಲಾಗುತ್ತದೆ. ಅದು ತೀವ್ರವಾದಾಗ ಆ ಶಬ್ದವು ಸ್ಕೆತಸ್ಕೋಫಿನ ಸಹಾಯ ಇಲ್ಲದೆ ಕೇಳಿಸುತ್ತದೆ. ಮಗುವಿಗೆ ಒಂದು ವರ್ಷದಲ್ಲಿ ಕನಿಷ್ಟ ಮೂರಕ್ಕಿಂತ ಹೆಚ್ಚು ಬಾರಿ ಉಬ್ಬಸದೊಂದಿಗೆ ಕೆಮ್ಮು ಇದ್ದು ಮತ್ತು ಆ ಕೆಮ್ಮು ಪ್ರತಿಬಾರಿಯೂ ಮೂರು ದಿನಕ್ಕಿಂತ ಹೆಚ್ಚು ದಿನವಿದ್ದರೆ ಅಂತ ಮಕ್ಕಳಿಗೆ ಅಸ್ತಮಾ ಇದೆ ಎಂದು ಗುರುತಿಸಲಾಗುವುದು.

ಉಬ್ಬಸ ಉಂಟಾಗುವುದು ಹೇಗೆ…?
ಇದಕ್ಕೆ ಮುಖ್ಯ ಕಾರಣವೆಂದರೆ ಶ್ವಾಸಕೋಶದ ನಾಳಗಳು. ಸುತ್ತುವರೆದ ಸ್ನಾಯುಗಳು ಸಂಕುಚಿತಗೊಳ್ಳುವುದರಿಂದ ನಾಳದೊಳಗೆ ಹೆಚ್ಚಿನ ಪ್ರಮಾಣದಲ್ಲಿ ಕಫ ಉತ್ಪತ್ತಿಯಾಗಿ, ನಾಳದೊಳಗಿರುವ ಮ್ಯೂಕಸ್‌ ಎಂಬ ಪದರಿನಲ್ಲಿ ಬಾವು ಉಂಟಾಗುತ್ತದೆ. ಈ ಮೂರು ಕ್ರಿಯೆಗಳು ಉಬ್ಬಸ ಬರುವ ಮಕ್ಕಳಿಗೆ ಪರಿಸರದಲ್ಲಾಗುವ ವ್ಯತ್ಯಾಸಗಳಿಗೆ ಬಹುಬೇಗನೆ ಅವಶ್ಯಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಉಂಟಾಗಿ ಕಾಯಿಲೆ ಲಕ್ಷಣಗಳಿಗೆ ಕಾರಣವಾಗುತ್ತದೆ.

ಯಾವ ಮಕ್ಕಳಿಗೆ ಅಸ್ತಮಾ ಹೆಚ್ಚು ಕಾಣಿಸಿಕೊಳ್ಳುತ್ತದೆ?: ಸಾಮಾನ್ಯವಾಗಿ ಒಂದು ವರ್ಷ ಮೇಲ್ಪಟ್ಟ ಮಕ್ಕಳಲ್ಲಿ. ಗಂಡು ಮಕ್ಕಳು ಪ್ರಾಯಕ್ಕಿಂತ ಮೊದಲು ಹಾಗೂ ಹೆಣ್ಣು ಮಕ್ಕಳು ಪ್ರಾಯದಲ್ಲಿದ್ದಾಗ. ಅಸ್ತಮಾ ಹಾಗೂ ಅಲರ್ಜಿ ಇರುವ ಪಾಲಕರಿದ್ದಲ್ಲಿ , ಮಗುವು ಕಡಿಮೆ ತೂಕದೊಂದಿಗೆ ಜನಿಸಿದ್ದಲ್ಲಿ , ಬಾಲ್ಯದಲ್ಲಿ ತಾಯಿಯ ಹಾಲನ್ನು ಉಣಿಸದಿದ್ದಲ್ಲಿ, ಮಗುವು ಕೈಗಾರಿಕೆಯಿಂದ ಮುಂದುವರಿದ ನಗರದಲ್ಲಿ ವಾಸಿಸುತ್ತಿದ್ದರೆ ಹಾಗೂ ಹೆಚ್ಚು ತೂಕ ಹೊಂದಿದ ಮಕ್ಕಳಲ್ಲಿ ಕಾಯಿಲೆ ಬೇರೆ ಮಕ್ಕಳಿಗಿಂತಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಯಾವ ಕಾರಣಗಳಿಗೆ ಉಬ್ಬಸ ಬರುತ್ತದೆ? ಪರಿಸರದ ವಾತಾವರಣದಲ್ಲಿ ವ್ಯತ್ಯಾಸ ಕಂಡು ಬಂದಾಗ. ಮಳೆ-ಚಳಿಗಾಲ, ಮನೆಯಲ್ಲಿ ಪಾಲಕರು ಧೂಮಪಾನ ಮಾಡುವುದರಿಂದ, ಮನೆಗೆ ಬಣ್ಣ ಮಾಡಿಸಿದಾಗ, ಜನರು ಬಹಳಷ್ಟು ಸೇರಿದೆಡೆಗೆ ಹೋದಾಗ(ಮದುವೆ-ಮಾರ್ಕೆಟ್‌-ಜಾತ್ರೆ ಇತ್ಯಾದಿ) ಸೋಂಕುಗಳು, ವೈರಸ್‌ ಸೋಂಕು, ಟಾನ್ಸಿಲೈಟಿಸ್‌ ಇತ್ಯಾದಿಗಳಿಂದ ಕರುಳಿನಲ್ಲಿ ಪರಾವಲಂಬಿ ಜಂತುಹುಳುಗಳು ಸೇರಿಕೊಂಡಾಗ, ಕೆಲವು ಔಷಧಿಗಳಿಂದ, ಸೆಂಟ್‌ ಮತ್ತು ಪೌಡರ್‌ಗಳಿಂದ, ಮಾನಸಿಕ ಒತ್ತಡಗಳಿಂದ, ಪರೀಕ್ಷೆ, ಮನೆಯಲ್ಲಿ ಗೊಂದಲ ವಾತಾವರಣ,  ಋತುಚಕ್ರವಾದಾಗ, ಐಸ್‌ಕ್ರೀಂ-ಆಹಾರ ಉತ್ಪನ್ನಗಳಿಗೆ ಬಳಸುವ ರಾಸಾಯನಿಕಗಳಿಂದ, ಹುಳಿ ಪದಾರ್ಥಗಳಿಂದ ಹಾಗೂ ದೈಹಿಕ ಶ್ರಮ ಮಾಡಿದಾಗ(ಆಟ, ಓಟ, ಅತ್ತಾಗ, ನಕ್ಕಾಗ) ಮಕ್ಕಳಿಗೆ ಉಬ್ಬಸ ಬರುವುದು ಎಂದಲ್ಲ..ಇವುಗಳಲ್ಲಿ ಕೆಲವೇ ಕೆಲವು ಮಕ್ಕಳಿಗೆ ಉಬ್ಬಸ ಬರಲು ಕಾರಣವಾಗುತ್ತದೆ. ಕೆಲವೊಮ್ಮೆ ಪರಿಸರದಲ್ಲಾಗುವ ವ್ಯತ್ಯಾಸ, ಆಹಾರದ ಪದಾರ್ಥ ಒಟ್ಟಿಗೆ ಸೇರಿ ಉಬ್ಬಸದ ತೀವ್ರತೆ ಹೆಚ್ಚಿಸುತ್ತದೆ.

ಅಸ್ತಮಾ ಇರುವ -ಬರುವ ಉಬ್ಬಸವನ್ನು ಬೇಗನೆ ಸೂಕ್ತ ಚಿಕಿತ್ಸೆ ನೀಡಿ ಶಮನಗೊಳಿಸುವುದರಿಂದ ತೀವ್ರವಾದ ಉಸಿರಾಟದ ತೊಂದರೆಯನ್ನು, ಆಸ್ಪತ್ರೆಗೆ ಸೇರಿಸುವ ಸಾಧ್ಯತೆಯನ್ನು ತಡೆಗಟ್ಟಬಹುದು. ಮಕ್ಕಳು ಉಬ್ಬಸದಿಂದ ಸಂಪೂರ್ಣವಾಗಿ ಮುಕ್ತವಾಗಬಲ್ಲರು. ಅಲ್ಲದೇ ಬಹಳ ದಿನಗಳಿಂದ ಉಬ್ಬಸ ಇದ್ದಲ್ಲಿ ಮಗುವಿನಲ್ಲಿ ಆಹಾರ ಸೇವನೆ, ಆಟ-ಚಟುವಟಿಕೆಗಳು ಕಡಿಮೆ ಆಗುತ್ತವೆ. ಅಲ್ಲದೇ ಗಣನೀಯವಾಗಿ ಬೆಳವಣಿಗೆ ಕುಂಠಿತವಾಗುತ್ತದೆ.

ಅಸ್ತಮಾದ ತೀವ್ರತೆಯನ್ನು ಪೀಕ್‌ ಫ್ಲೋಮೀಟರ್‌, ಸ್ಪೈರೋಮಿಟ್ರಿ, ರಕ್ತ ಪರೀಕ್ಷೆಯಿಂದ ಕಂಡು ಹಿಡಿಯಬಹುದು. ತೀಕ್ಷ್ಣತೆ ಹೆಚ್ಚಾದ ಸಂದರ್ಭ ಮಗುವಿಗೆ ಉಸಿರಾಡಲು ಅನುಕೂಲ ಆಗುವಂತೆ ಸ್ವಲ್ಪ ಎತ್ತರದಲ್ಲಿ ತಲೆಯನ್ನಿಟ್ಟು  ಮಲಗಿಸುವುದು. ಮಗುವಿನ ಬಟ್ಟೆಗಳನ್ನು ಸಡಿಲಗೊಳಿಸುವುದು, ಶಾಂತತೆ ಕಾಪಾಡಿ ಮತ್ತು ಸವಿಯಾದ ಮಾತುಗಳಿಂದ ಮಗುವನ್ನು ಸಂತೈಸುವುದು. ಮೊದಲಿಗೆ ನೀಡಿದ್ದ ಸ್ಪೇಸರ್‌ಗಳಿಗೆ ಇನ್‌ಹೇಲರ್‌ ಅಳವಡಿಸಿ ಔಷಧಿ ಸೇವನೆಗೆ ಅನುಕೂಲ ಮಾಡಿ ಪ್ರತಿ 20 ನಿಮಿಷಕ್ಕೊಮ್ಮೆ ಮರಳಿ, ಮರಳಿ ನೀಡುವುದರಿಂದ ತೀವ್ರತೆ ಕಡಿಮೆ ಆಗುತ್ತದೆ. ಪ್ರಿಡ್ನಿಸಲೋನ(ವೈಸಲಾನ್‌) ಮಾತ್ರೆಯನ್ನ ವೈದ್ಯರ ಸಲಹೆಗನುಗುಣವಾಗಿ ಕೊಡಬೇಕು. ಮಗು ಚೇತರಿಸಿಕೊಳ್ಳದಿದ್ದಲ್ಲಿ ವೈದ್ಯರ ಬಳಿಗೆ ಕೊಂಡೊಯ್ಯಬೇಕು.

ಮಕ್ಕಳಲ್ಲಿ ಉಬ್ಬಸದ ತೀವ್ರತೆ ಹೆಚ್ಚಾದಾಗ ಔಷಧಿಯನ್ನು ಅಣುವಿನಷ್ಟು ಬೆರೆಸಿ ಉಸಿರಾಟದೊಂದಿಗೆ ಸೇವಿಸುವ ಪ್ರಕ್ರಿಯೆಯೇ ಏರೋಸೆಲ್‌ ಚಿಕಿತ್ಸೆ. ಇದರಿಂದ ಮಗುವಿಗೆ ಅತಿ ಕಡಿಮೆ ಪ್ರಮಾಣದ ಔಷಧಿಗಳನ್ನು ಉಪಯೋಗಿಸಲಾಗುವುದು. ಔಷಧ ನೇರವಾಗಿ ಶ್ವಾಸಕೋಶಗಳಿಗೆ ಮುಟ್ಟುತ್ತದೆ. ತೀವ್ರಗತಿಯಲ್ಲಿ ರೋಗಿ ಗುಣಮುಖ ಆಗುತ್ತಾರೆ. ಈ ರೀತಿಯ ಔಷಧಗಳನ್ನು ಬಹಳ ದಿನ ಉಪಯೋಗಿಸುವುದರಿಂದ ಅದಕ್ಕೆ ಹೊಂದಿಕೊಳ್ಳುತ್ತಾರೆ ಎಂಬ ಅಪನಂಬಿಕೆಯೂ ಇದೆ. ಈ ರೀತಿಯಲ್ಲಿ ಔಷಧವನ್ನು ಉಪಯೋಗಿಸುವುದರಿಂದ ಆದಕ್ಕೆ ಹೊಂದಿಕೊಳ್ಳುವುದಿಲ್ಲ. ಸ್ಟಿರಾಯಿಡ್‌ ತುಂಬಾ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಆದ್ದರಿಂದ ಮಾತ್ರೆ ರೂಪದಲ್ಲಿ ತೆಗೆದುಕೊಳ್ಳುವ ಸ್ಟಿರಾಯಿಡ್‌ ಎಲ್ಲಾ ಅಂಗಾಂಗಗಳಿಗೆ ಹಾನಿಕರ ಅಲ್ಲ. ಏರೋಸೆಲ್‌ಗೆ ಮೀಟರ್‌ ಡೋಸ್‌ ಇನ್‌ಹೇಲರ್‌, ರೋಟಾ ಹೇಲರ್‌, ನೆಬ್ಯುಲೈಸರ್‌ ಬಳಕೆ ಮಾಡಲಾಗುತ್ತದೆ.

ಉಬ್ಬಸ ತಡೆಗಟ್ಟಲು ಮನೆಯನ್ನು ಚೊಕ್ಕಟವಾಗಿಡಬೇಕು. ಒದ್ದೆ ಬಟ್ಟೆಯಿಂದ ಹಲವಾರು ಬಾರಿ ಸಾರಿಸಬೇಕು. ದಿಂಬು, ಹಾಸಿಗೆ, ರಗ್‌ಗಳನ್ನು ಶುಚಿ ಮಾಡಿ, ರಗ್ಗುಗಳನ್ನು ವಾರಕ್ಕೊಮ್ಮೆ ಸೂರ್ಯನ ಬೆಳಕಿನಲ್ಲಿ ಒಣಗಿಸಬೇಕು. ಫ್ಯಾನ್‌ ಬಳಸುವ ಮೊದಲು ಅವುಗಳ ರೆಕ್ಕೆಗಳನ್ನು ಒದ್ದೆ ಬಟ್ಟೆಯಲ್ಲಿ ಒರೆಸಿ, ಉಪಯೋಗಿಸಬೇಕು. ಮಗುವಿಗೆ ಥಂಡಿ ಅನುಭವವಾಗದಂತೆ ಬೆಚ್ಚನೆಯ ಬಟ್ಟೆ ಹಾಕಿ, ಕಿಟಕಿಯಿಂದ ಹೊರ ಮಲಗಲು ಅನುವು ಮಾಡಿಕೊಡಬೇಕು. ಮನೆಯಲ್ಲಿ ಸಾಕು ಪ್ರಾಣಿಗಳನ್ನು ಇಟ್ಟುಕೊಳ್ಳದೇ ಇರುವುದು ಕ್ಷೇಮ. ಮನೆಯಲ್ಲಿ ಸಂಪೂರ್ಣವಾಗಿ ಧೂಮಪಾನ ನಿಲ್ಲಿಸಬೇಕು. ಮಗು ನೆಲಕ್ಕಿಂತಲೂ ಮಂಚದ ಮೇಲೆ ಮಲಗುವುದೇ ಸೂಕ್ತ.

ಸ್ನಾನ ಮಾಡುವಾಗ ಮಗುವಿಗೆ ಧೂಳಿನ ಅಲರ್ಜಿ ಇದ್ದಲ್ಲಿ ಸೀಗೆಕಾಯಿ ಪುಡಿ ಬಳಸಬಾರದು. ತಲೆ ಕೂದಲನ್ನು ಚಿಕ್ಕದಾಗಿ ಕತ್ತರಿಸಬೇಕು. ತಲೆಸ್ನಾನ ಮಾಡುವಾಗ ಮೊದಲು ಶಾಂಪೂ ಹಚ್ಚಿದ ಐದು ನಿಮಿಷದ ನಂತರ ತಲೆಯನ್ನು ಹಿಂದಕ್ಕೆ ಬಾಗಿಸಿ ಕೂದಲು ತೊಳೆಯಬೇಕು. ಆಹಾರ ಪದಾರ್ಥ ಕೊಡುವಾಗ ಉಬ್ಬಸಕ್ಕೆ ಕಾರಣವಾಗುವ ಆಹಾರ ತ್ಯಜಿಸುವುದು ಸೂಕ್ತ. ವಿನಾಕಾರಣ ಮಗುವನ್ನು ಪೌಷ್ಟಿಕ ಆಹಾರದಿಂದ ದೂರ ಇಡಬಾರದು. ಅಗತ್ಯ ಕ್ರಮ ಅನುಸರಿಸುವ ಮೂಲಕ ಮಾಹಿತಿಗನುಗುಣವಾಗಿ ಕಾಯಿಲೆಯಿಂದಾಗುವ ಸಾವು-ನೋವನ್ನು ತಡೆಗಟ್ಟಬಹುದು. ಮಕ್ಕಳಲ್ಲಿ ಅಸ್ತಮಾ ಕಂಡು ಬಂದಾಕ್ಷಣ ಹೆದರುವ, ಅಂಜುವ ಪ್ರಮೇಯವೇ ಬೇಡ. ವಾತಾವರಣಕ್ಕೆ ಅನುಗುಣವಾಗಿ ಮಕ್ಕಳ ಆರೈಕೆ, ಆಹಾರಕ್ಕೆ ಆದ್ಯತೆ ನೀಡುವ ಮೂಲಕ ಅಸ್ತಮಾದಿಂದ ಬಳಲುತ್ತಿರುವ ಮಕ್ಕಳು ಸಹ ಇತರೆ ಮಕ್ಕಳಂತೆ ಆಡುವ, ಪಾಡುವ, ನಲಿಯುವ ವಾತಾವರಣ ನಿರ್ಮಾಣ ಮಾಡುವುದು ಪೋಷಕರ ಕೈಯಲ್ಲಿದೆ.

ಡಾ| ಎನ್‌.ಕೆ. ಕಾಳಪ್ಪನವರ್‌, ಚಿಕ್ಕ ಮಕ್ಕಳ ತಜ್ಞ, ವೈದ್ಯಕೀಯ ನಿರ್ದೇಶಕರು, ಎಸ್‌.ಎಸ್‌.ಆಸ್ಪತ್ರೆ, ದಾವಣಗೆರೆ

ಟಾಪ್ ನ್ಯೂಸ್

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ

ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.