ಡಿಮೆನ್ಶಿಯಾ ಹೊಂದಿರುವ ವ್ಯಕ್ತಿಗಳ ಆರೈಕೆಗಾಗಿ ಕೆಲವು ಸಲಹೆಗಳು

ಹಂತ ಮತ್ತು ಸಂದರ್ಭಗಳ ಆಧಾರದ ಮೇಲೆ ಸೂಕ್ತವಾದ ಮಧ್ಯಸ್ಥಿಕೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಬಹುದು.

Team Udayavani, May 15, 2021, 2:50 PM IST

Dementia

ಡಿಮೆನ್ಸಿಯಾ ಹೊಂದಿರುವ ವ್ಯಕ್ತಿಯೊಂದಿಗೆ ಸಂವಹನ. ಸಂವಹನವು ಆರೈಕೆಯ ಒಂದು ಅವಿಭಾಜ್ಯ ಮತ್ತು ಅತ್ಯಾವಶ್ಯಕ ಭಾಗವಾಗಿದೆ. ಡಿಮೆನ್ಸಿಯಾ ಹೊಂದಿರುವ ವ್ಯಕ್ತಿಗೆ ತೊಂದರೆ ಕೊಡುವ ವಿಷಯಗಳನ್ನು ಸಂವಹನ ಮಾಡಲು ಸಾಧ್ಯವಾಗುವುದಿಲ್ಲ ಮತ್ತು ಅವರಿಗೆ ಏನಾದರೂ ಹೇಳಿದರೆ ಅದನ್ನು ಅರ್ಥಮಾಡಿಕೊಳ್ಳುವುದು ಕೂಡ ಕಷ್ಟಕರವಾಗಿದೆ. ಅದಕ್ಕಾಗಿ ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ.

 ಡಿಮೆನ್ಸಿಯಾ ಹೊಂದಿರುವ ವ್ಯಕ್ತಿಯು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯಕವಾದ ಸರಳ ಮತ್ತು ಒಂದು ಸರಿಯಾದ ಕ್ರಮದಲ್ಲಿ ಸೂಚನೆಗಳನ್ನು  ಬಳಸಿ.

 ಡಿಮೆನ್ಸಿಯಾ ಹೊಂದಿರುವ ವ್ಯಕ್ತಿಯನ್ನು ಕಣ್ಣಿನಲ್ಲಿ ಕಣ್ಣಿಟ್ಟು ಕಾಪಾಡಿಕೊಳ್ಳಿ.

 ನಿಧಾನವಾಗಿ ಮತ್ತು ಸ್ಪಷ್ಟವಾಗಿ ಮಾತನಾಡಿ. ಆ ವ್ಯಕ್ತಿಯು ಪ್ರತಿಕ್ರಿಯಿಸುವವರೆಗೆ ಕಾಯಿರಿ.

 ಹೌದು ಅಥವಾ ಇಲ್ಲ ಅನ್ನೋ ಉತ್ತರ ಕೊಡುವ ಪ್ರಶ್ನೆಗಳನ್ನು ಕೇಳಿ. ನಿಮಗೆ ಚಹಾ ಬೇಕೆ ? ಅನ್ನುವಂತಹ ಪ್ರಶ್ನೆಯೊಂದಿಗೆ ಕೊನೆಗೊಳ್ಳುವ ಹೇಳಿಕೆಗಳನ್ನು ಬಳಸಿ. ನೀವು ಏನನ್ನು ಕುಡಿಯಲು ಬಯಸುತ್ತೀರಿ ? ಅನ್ನೋ ಬದಲು ನಿಮಗೆ ಚಹಾ ಬೇಕೆ ಅಥವಾ ಕಾಫಿ ಬೇಕೆ ? ಎಂದು ಕೇಳಿ.

 ನಿಮ್ಮ ಆದೇಶಗಳನ್ನು ಮಾತಿನ ಮೂಲಕ ಗ್ರಹಿಸುವಲ್ಲಿ ಆ ವ್ಯಕ್ತಿಯು ತೊಂದರೆಯನ್ನು ಹೊಂದಿದ್ದರೆ ಚಿತ್ರಗಳನ್ನು ಮತ್ತು ಸನ್ನೆಗಳನ್ನು ಬಳಸಿ.

 ಅವರೊಂದಿಗೆ ಮಾತನಾಡುವಾಗ ಗೊಂದಲವನ್ನು ತಪ್ಪಿಸಲು ಟಿವಿಯ ಶಬ್ದ ಮತ್ತು ಗದ್ದಲದಿಂದ ಕೂಡಿದ ಕೊಠಡಿಯಲ್ಲಿ ಮಾತನಾಡದಿರುವುದು.

 ವ್ಯಕ್ತಿಯನ್ನು ಗದರಿಸಬೇಡಿ. ಅದು ಗೊಂದಲ ಅಥವಾ ಅವರ ಕೋಪಕ್ಕೆ ಕಾರಣವಾಗುತ್ತದೆ. ಜೋರಾಗಿ ಏರು ಧ್ವನಿಯಲ್ಲಿ ಮಾತನಾಡಬೇಡಿ.

 ಅವರು ಎಲ್ಲವನ್ನು ನೆನಪಿಟ್ಟುಕೊಳ್ಳುವಂತೆ ಹೇಳಬೇಡಿ. ಇದರಿಂದ ಅವರಿಗೆ ನೋವಾಗಬಹುದು. ಮತ್ತು ಅವಮಾನಿಸಿದಂತಾಗಬಹುದು. ವ್ಯಕ್ತಿಯು ಕಷ್ಟಪಡುತ್ತಿದ್ದರೆ ಅವರಿಗೆ ನೀವು ಸರಿಯಾದ ಮಾಹಿತಿಯನ್ನು ನೀಡಿ.

ಉದಾ.:  ಹಾಯ್‌ ಅಮ್ಮ , ಇದು ನಾನು ವಿನೋದ್‌ ಮತ್ತು ನಾನು ನಿಮ್ಮನ್ನು ಭೇಟಿ ಮಾಡಲು ನಿಮ್ಮ ಮೊಮ್ಮಗಳು ಅನಿತಾಳನ್ನು ಕರೆತಂದಿದ್ದೇನೆ.

 ಹಿರಿಯರು ತಮ್ಮ ಪ್ರೀತಿ-ಪಾತ್ರರ ಜೊತೆ ಸಂಪರ್ಕದಲ್ಲಿರಲು ಫೋನ್‌ ಬಳಸಿ.

 ನಂತರದ ಹಂತಗಳಲ್ಲಿ ಸಂವಹನವು ತೀವ್ರವಾಗಿ ದುರ್ಬಲಗೊಂಡಾಗ, ಅವರ ತೊಂದರೆಗಳನ್ನು ಗುರುತಿಸಿ ಮತ್ತು ಆ ವ್ಯಕ್ತಿಯು ಖುಷಿಯಾಗಿರುವಂತೆ ಮಾಡಿ.

ಸುರಕ್ಷತೆಯನ್ನು ಸುಧಾರಿಸುವ ಕ್ರಮಗಳು

ಡಿಮೆನ್ಸಿಯಾ ಹೊಂದಿರುವ ವ್ಯಕ್ತಿಯ ಸುರಕ್ಷತೆಗೆ ಆರೈಕೆದಾರರು ಒತ್ತು ನೀಡುವಲ್ಲಿ  ಆಸಕ್ತಿ ವಹಿಸುವುದು. ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ಉಂಟಾಗುವ ಪ್ರತಿಕೂಲ ಘಟನೆಗಳನ್ನು ತಡೆಯುತ್ತದೆ.

 ಪರಿಸರವನ್ನು ಉತ್ತಮವಾಗಿ ವ್ಯವಸ್ಥಿತ ರೀತಿಯಲ್ಲಿರಿಸಿ. ಅವರು ಏನನ್ನು ಬಳಸಬೇಕಾಗಿದೆಯೋ ಅದನ್ನು ಮಾತ್ರ ಇರಿಸಿ. ಉದಾ.: ಶೇವಿಂಗ್‌ ಕ್ರೀಮ್‌ ಮತ್ತು ಟೂತ್‌ಪೇಸ್ಟನ್ನು ಒಟ್ಟಿಗೆ ಇಡಬೇಡಿ. ಇಲ್ಲದಿದ್ದರೆ ಅವರು ಟೂತ್‌ಪೇಸ್ಟ್‌ ಬದಲು ಶೇವಿಂಗ್‌ ಕ್ರೀಮನ್ನು ಬಳಸಬಹುದು.

 ಚೂಪಾದ, ಹಾನಿಕಾರಕವಾದ, ಸೇವಿಸಲು ಯೋಗ್ಯವಲ್ಲದ (ಕೀಟನಾಶಗಳು, ಫಿನಾಯಿಲ್‌, ಡೆಟಾಲ್‌, ಔಗಧಿಗಳು ಇತ್ಯಾದಿ) ವಸ್ತುಗಳನ್ನು ಡಿಮೆನ್ಸಿಯಾ ಹೊಂದಿರುವ ವ್ಯಕ್ತಿಗಳಿಂದ ದೂರವಿರಿಸಿ. ಅನಿಲ ಸಿಲಿಂಡರ್‌ನಲ್ಲಿ ನಿಯಂತ್ರಕ ಬಟನ್‌ಗಳನ್ನು ಆಫ್ ಮಾಡಿ.

 ನೀರು ಬೀಳುವ ಜಾಗದಲ್ಲಿ  ಹೆಚ್ಚು ಕಾಳಜಿಯಿಂದಿರಬೇಕು ಮತ್ತು ಅಸ್ತವ್ಯಸ್ತವಾದ, ಜಾರುವ ಅಥವಾ ಒದ್ದೆಯಾದ ಮಹಡಿಗಳು, ಮನೆಯ ಹೊಸ್ತಿಲು, ಮೆಟ್ಟಿಲು ಮುಂತಾದ ಅಪಾಯದ ಜಾಗಗಳನ್ನು ಗುರುತಿಸುವುದು ಮತ್ತು ಪರಿಹರಿಸುವುದು ಅತ್ಯಾವಶ್ಯಕವಾಗಿದೆ. ಶೌಚಾಲಯವನ್ನು ಬಳಸಬೇಕಾದರೆ,  ಅದರಲ್ಲೂ ವಿಶೇಷವಾಗಿ ರಾತ್ರಿ ವೇಳೆ ಹೋಗುವ ದಾರಿಯಲ್ಲಿ ಸಾಕಷ್ಟು ಬೆಳಕು ಇದೆಯೇ ಎಂದು ಖಚಿತಪಡಿಸಿಕೊಳ್ಳಿ . ಅಗತ್ಯವಿದ್ದರೆ ಹಿಡಿದುಕೊಳ್ಳಲು ಸರಳುಗಳನ್ನು ಅಳವಡಿಸಿ, ಜಾರದಿರುವ ನೆಲ ಹಾಸುಗೆಯನ್ನು ಬಳಸಿ. ಸ್ನಾನಗೃಹದ ಬಾಗಿಲಿನ ಚಿಲಕಗಳನ್ನು ತೆಗೆದಿಡಿ. ಲುಂಗಿ, ಸೀರೆ ಅಥವಾ ಉದ್ದನೆಯ ಸಡಿಲವಾದ ಅಂಗಿಗಳನ್ನು ಮತ್ತು ಪಾದರಕ್ಷೆಗಳನ್ನು ಧರಿಸುವುದನ್ನು ತಪ್ಪಿಸಿ, ಪೀಠೊಪಕರಣಗಳನ್ನು ಮರು ಹೊಂದಿಸಬೇಡಿ.

 ಅವರು ಅಲೆದಾಡುವ ನಡವಳಿಕೆಯನ್ನು ಹೊಂದಿದ್ದರೆ, ಬಾಗಿಲಿನಲ್ಲಿ ಅಲರಾಂಗಳನ್ನು ಅಳವಡಿಸಿ, ಶೂ ಅಡಿಭಾಗದಲ್ಲಿ ಜಿ.ಪಿ.ಎಸ್‌. ಟ್ರಾಕರನ್ನು ಬಳಸುವುದು, ಮುಖ್ಯ ದ್ವಾರಕ್ಕೆ ಬೀಗ ಹಾಕುವುದು ಮತ್ತು ಕೀಗಳನ್ನು ದೂರದಲ್ಲಿ  ಇರಿಸಿ ಅದನ್ನು ಗಮನಿಸುತ್ತಿರುವುದು. ಅವರ ಪರ್ಸ್‌, ಕುತ್ತಿಗೆಗೆ ಹಾಕುವ ಟ್ಯಾಗ್‌, ಕೈ ಬಳೆ ಮುಂತಾದವು ಒಂದು ವೇಳೆ ಕಳೆದುಹೋದರೆ ಸಂಪರ್ಕಿಸಲು ತನ್ನೊಂದಿಗೆ ಗುರುತಿನ ಚೀಟಿಯನ್ನು ಒಯ್ಯುತ್ತಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಿ.

 ಫೋನ್‌ನಲ್ಲಿ ತ್ವರಿತವಾದ ಡಯಲ್‌ಗ‌ಳನ್ನು ಬಳಸಿ. ಇದರಿಂದ ಅವರು ನಿಮಗೆ ಸುಲಭವಾಗಿ ಕರೆ ಮಾಡಬಹುದು.

ನೀವು ಆರೈಕೆದಾರರಾಗಿ ಮೊದಲು ನಿಮ್ಮ ಸ್ವಂತ ಸುರಕ್ಷತೆಗೆ ಆದ್ಯತೆ ನೀಡುವುದು ಮುಖ್ಯ. ಸಂದರ್ಭವನ್ನು ಅರ್ಥಮಾಡಿಕೊಂಡು ಮತ್ತು ಅಗತ್ಯವಿದ್ದಾಗ ನೀವು ಮಾನಸಿಕ ಮತ್ತು ದೈಹಿಕ ಸಹಾಯವನ್ನು ಪಡೆಯಿರಿ. ಆರೈಕೆದಾರರು ಮಾಡುವ ಕೆಲಸವನ್ನು ಇತರ ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳಿ ಮತ್ತು ಅವರ ಸಹಾ ಯವನ್ನು  ಕೇಳಿ, ಇತರ ಆರೈಕೆದಾರರ ಅನುಭವವನ್ನು ತಿಳಿದುಕೊಳ್ಳಲು ಅವರೊಂದಿಗೆ ಸಂಪರ್ಕವನ್ನು ಬೆಳೆಸಿ. ನಿಮ್ಮ ಮತ್ತು ನಿಮ್ಮ ಆರೈಕೆಯನ್ನು ಸ್ವೀಕರಿಸುವವರ ಜೀವನದ ಗುಣಮಟ್ಟವನ್ನು ಸುಧಾರಿಸಲು ವೃತ್ತಿಪರರ ಸಲಹೆಯನ್ನು  ಪಡೆಯಿರಿ.

ಈ ಅಂಶಗಳು ರೋಗದ ಹಂತ, ಆರೈಕೆದಾರರ ಸಾಮರ್ಥ್ಯ, ಹಣಕಾಸಿನ ಮೂಲ ಮತ್ತು ಲಭ್ಯವಿರುವ ಬೆಂಬಲವನ್ನು ಅವಲಂಬಿಸಿರುತ್ತದೆ. ಪ್ರತೀ ಆರೈಕೆದಾರರ ಅನುಭವವು ವಿಭಿನ್ನವಾಗಿರುತ್ತದೆ ಮತ್ತು ತನ್ನದೇ ಆದ ಸವಾಲುಗಳನ್ನು ಹೊಂದಿರುವುದರಿಂದ ಬರುತ್ತದೆ. ಅವುಗಳನ್ನು ಪರಿಹರಿಸಲು ಬಂದಾಗೆ “ಒಂದೇ ರೀತಿಯ ವಿಧಾನ ಎಲ್ಲಾ ಕಡೆ’ ಸರಿಹೊಂದುವುದಿಲ್ಲ.  ಅಕ್ಯುಪೇಶನಲ್‌ ಥೆರಪಿ ವಿಭಾಗವು ಡಿಮೆನ್ಸಿಯಾ ಹೊಂದಿರುವ ವ್ಯಕ್ತಿ ಮತ್ತು ಅವರ ಆರೈಕೆದಾರರ ಪ್ರಮುಖ ಅಗತ್ಯತೆಗಳು, ಹಂತ ಮತ್ತು ಸಂದರ್ಭಗಳ ಆಧಾರದ ಮೇಲೆ ಸೂಕ್ತವಾದ ಮಧ್ಯಸ್ಥಿಕೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಬಹುದು.

ಈ ಲೇಖನವು ಭಾರತೀಯ ವೈದ್ಯಕೀಯ ಮಂಡಳಿಯ ಧನ ಸಹಯೋಗದೊಂದಿಗೆ ನಡೆಯುತ್ತಿರುವ ಇಂಡೋಸ್ವೀಡನ್‌ನ ಸಂಶೋಧನೆಯಾಗಿದೆ. ಡಾ| ಸಬೆಸ್ಟಿನಾ ಅನಿತಾ ಡಿಸೋಜಾ, ಪಿಹೆಚ್‌ಡಿ, ಪ್ರೊಫೆಸರ್‌, ಅಕ್ಯುಪೇಶನಲ್‌ ಥೆರಪಿ ವಿಭಾಗ, ಮಣಿಪಾಲ ಕಾಲೇಜ್‌ ಆಫ್ ಹೆಲ್ತ್‌ ಪ್ರೊಫೆಶನ್ಸ್‌, ಮಾಹೆ, ಮಣಿಪಾಲ ಇವರು ಈ ಯೋಜನೆಯ ಪ್ರಾಥಮಿಕ ತನಿಖಾಧಿಕಾರಿಯಾಗಿದ್ದಾರೆ. ಈ ಯೋಜನೆಯು ಡಿಮೆನ್ಸಿಯಾವನ್ನು ಹೊಂದಿರುವ ಹಿರಿಯರಿಗೆ ಮತ್ತು ಅವರ ಆರೈಕೆದಾರರಿಗೆ ಸಹಾಯ ಮಾಡಲು ವೈದ್ಯಕಿಯೇತರ ತಂತ್ರಗಳ (ಸಹಾಯಕ ಸಾಧನಗಳು) ಬಳಕೆಯ ಅಧ್ಯಯನವನ್ನು ಒಳಗೊಂಡಿರುತ್ತದೆ. ಈ ಯೋಜನೆಯು ಪ್ರಸ್ತುತ ಕಾರ್ಯರೂಪದಲ್ಲಿದ್ದು , ಉಡುಪಿ ಮತ್ತು ಮಂಗಳೂರಿನ ಪ್ರದೇಶದಲ್ಲಿ ವಾಸವಾಗಿರುವ ಡಿಮೆನ್ಶಿಯಾದಿಂದ (ಕನಿಷ್ಠತೆಯಿಂದ ಮಧ್ಯಮದ ಹಂತ) ಬಳಲುತ್ತಿರುವ ಹಿರಿಯರು ಮತ್ತು ಅವರ ಆರೈಕೆದಾರರು ಈ ಅಧ್ಯಯನದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ. ಭಾಗವಹಿಸುವವರಿಗೆ ತರಬೇತಿಯೊಂದಿಗೆ ಉಚಿತವಾಗಿ ಸಮಯ ಸಹಾಯಕ ಸಾಧನಗಳನ್ನು (ಈ ಲೇಖನದಲ್ಲಿ  ಉಲ್ಲೇಖೀಸಿದಂತೆ) ಒದಗಿಸಲಾಗುತ್ತದೆ. ಈ ಸಾಧನಗಳನ್ನು ಅವರು ಮೂರು ತಿಂಗಳ ಅವಧಿಗೆ ಬಳಸಬೇಕಾಗುತ್ತದೆ. ಅನಂತರ ಅವರನ್ನು ಮರುಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ಅವರ ಪ್ರತಿಕ್ರಿಯೆಗಳನ್ನು ತೆಗೆದುಕೊಳ್ಳಲಾಗುತ್ತದೆ.

ಟಾಪ್ ನ್ಯೂಸ್

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.