ಅನಾನಸ್ ನಿಂದ ಆರೋಗ್ಯ ಭಾಗ್ಯ
Team Udayavani, May 29, 2021, 1:35 PM IST
1.ಅನಾನಸ್ಗೆ ರಕ್ತಸ್ರಾವವನ್ನು ನಿಲ್ಲಿಸುವಂಥ ಗುಣವಿದೆ. ಆಗತಾನೆ ಆದ ಗಾಯದ ಮೇಲೆ ಅನಾನಸ್ನರಸವನ್ನು ಹಾಕಿದರೆ ರಕ್ತಸ್ರಾವ ನಿಲ್ಲುತ್ತದೆ.
2.ಅನಾನಸ್ ಹಣ್ಣಿನ ಸೇವನೆಯಿಂದ ಅಜೀರ್ಣ,ಆಮಶಂಕೆ, ಹೊಟ್ಟೆಯಲ್ಲಿ ಆಗಾಗ ಕಾಣಿಸಿಕೊಳ್ಳುವ ತೊಂದರೆಗಳನ್ನೂ ನಿವಾರಿಸಲುಸಾಧ್ಯವಿದೆ.
3.ಮಲಬದ್ಧತೆ, ಮೂತ್ರ ಕಟ್ಟುವಿಕೆ ಮತ್ತು ಮೂತ್ರದಲ್ಲಿ ಉರಿಯಂಥ ಸಮಸ್ಯೆಗಳು, ಅನಾನಸ್ ಹಣ್ಣಿನಸೇವನೆಯಿಂದ ದೂರಾಗುತ್ತವೆ.
4.ಅನಾನಸ್ ಹಣ್ಣಿನ ರಸವನ್ನು ಚರ್ಮದ ಮೇಲೆ ಲೇಪಿಸಿಕೊಂಡರೆ ಕಜ್ಜಿ, ತುರಿಕೆ, ನೆವೆಯನ್ನುಉಂಟುಮಾಡುವ ಚರ್ಮ ವ್ಯಾಧಿಗಳಿಂದ ಮುಕ್ತಿಪಡೆಯಲು ಸಾಧ್ಯವಿದೆ.
5.ಆಗಾಗ್ಗೆ ತಪ್ಪದೇ ಅನಾನಸ್ ಹಣ್ಣಿನ ರಸಸೇವನೆಯಿಂದ, ದೇಹವನ್ನು ಕಾಡುವ ಹಲವು ರೋಗಗಳ ನಿವಾರಣೆ ಸಾಧ್ಯವಿದೆ.
6.ಅನಾನಸ್ ಹಣ್ಣಿಗೆ ಕರಿಮೆಣಸಿನ ಪುಡಿಯನ್ನು ಹಾಕಿಸೇವಿಸಿದರೆ ಕೆಮ್ಮು, ಕಫದ ಸಮಸ್ಯೆ ಕಡಿಮೆ ಆಗುತ್ತದೆ.
7.ಅನಾನಸ್ ಹಣ್ಣಿನ ಹೋಳುಗಳನ್ನು ಜೇನುತುಪ್ಪದೊಡನೆ ಸೇವಿಸುವುದರಿಂದ ಯಕೃತ್ತಿನದೋಷ ಮತ್ತು ಅರಿಶಿನ ಕಾಮಾಲೆ ಗುಣವಾಗುತ್ತದೆ.
8.ಅನಾನಸ್ ಹಣ್ಣಿನ ಹೋಳುಗಳಿಗೆ ಸ್ವಲ್ಪ ಕಾಳುಮೆಣಸಿನ ಪುಡಿಯನ್ನು ಹಚ್ಚಿ ಸೇವಿಸುವುದರಿಂದ ಅಸಿಡಿಟಿ ದೂರವಾಗುತ್ತದೆ.