Tea Time: ರೆಗ್ಯುಲರ್ ಟೀ ಬದಲು ಇದನ್ನು ಕುಡಿದು ನೋಡಿ


Team Udayavani, Aug 27, 2020, 4:27 PM IST

Tea Time: ರೆಗ್ಯುಲರ್ ಟೀ ಬದಲು ಇದನ್ನು ಕುಡಿದು ನೋಡಿ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಚಹಾ ಮನಸ್ಸನ್ನು ಆಹ್ಲಾದಗೊಳಿಸುವ ಶಕ್ತಿಯನ್ನು ತನ್ನೊಳಗೆ ಹುದುಗಿಸಿಟ್ಟುಕೊಂಡಿರುವ ಪೇಯ.

ಶ್ರಮಿಕ ವರ್ಗದವರ ಸುಸ್ತು ನಿವಾರಕ, ಬುದ್ಧಿಗೆ ಚುರುಕು ಮುಟ್ಟಿಸುವ ಚೈತನ್ಯವರ್ಧಕ, ಹರಟೆಯಲ್ಲಿ ಜೊತೆಯಾಗುವ ಬೈಟೂ ಸ್ನೇಹಿತ.

ಇದು ನಾರ್ಮಲ್ ಚಹಾದ ಕಥೆಯಾದರೆ ಆರೋಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ಈ ಚಹಾ ನಾನಾ ಅವತಾರಗಳನ್ನು ತಾಳುವ ಸಾಮರ್ಥ್ಯವನ್ನು ಹೊಂದಿದೆ. ಬ್ಲ್ಯಾಕ್ ಟೀ, ಹನಿ ಟೀ, ಹರ್ಬಲ್ ಟೀ.. ಹೀಗೆ ಚಹಾದ ವಿಶ್ವರೂಪ ದರ್ಶನವೇ ನಮಗಾಗುತ್ತದೆ.

ಹೇಗೂ ಈಗ ಚಹಾ ಸಮಯ. ನಾವೊಂದು ನಿಮಗೆ ವಿಶಿಷ್ಟ ಚಹಾದ ಪರಿಚಯನ್ನು ಮಾಡಿಕೊಡುತ್ತಿದ್ದೇವೆ. ಅದನ್ನು ತಯಾರಿಸುವ ವಿಧಾನವೂ ಇಲ್ಲಿದೆ. ಯಾವುದಕ್ಕೂ ಒಮ್ಮೆ ಟ್ರೈಮಾಡಿ ನೋಡಿ.

ಕರಿಬೇವಿನ ಸೊಪ್ಪು, ತುಳಸಿ, ಎಣ್ಣೆ ಹುಲ್ಲು (ನಿಂಬೆ ಹುಲ್ಲು) ಇವುಗಳ ಸುವಾಸನೆ ಮಿಳಿತವಾಗಿರುವ ಹರ್ಬಲ್ ಚಹಾ ತಯಾರಿಸುವ ವಿಧಾನ ಇಲ್ಲಿದೆ.

ಈ ಚಹಾ ತಯಾರಿಸಲು ಇವೆಲ್ಲವನ್ನೂ ಜೊತೆಗಿರಿಸಿಕೊಳ್ಳಬೇಕು:

– 2 ಇಂಚಿನ ಎಣ್ಣೆ ಹುಲ್ಲಿನ ದಂಟು (ಇದರ ಬದಲಿಗೆ ನೀವು ಕರಿಬೇವಿನ ಸೊಪ್ಪು, ತುಳಸಿಯನ್ನೂ ಸಹ ಬಳಸಬಹುದು).

– ಎರಡು ದಾಲ್ಚಿನ್ನಿ ಕಡ್ಡಿಗಳು ಬೇಕು.

– ಆರು ಏಲಕ್ಕಿ ಬೀಜಗಳಿರಬೆಕು.

– ½ ಇಂಚು ಶುಂಠಿಯ ತುಂಡೂ ಜೊತೆಗಿರಲಿ.

– ಇನ್ನು ಮುಖ್ಯವಾಗಿ ಬೇಕಾಗುವುದು 2 ಲೋಟ ನೀರು.

ಇಷ್ಟೆಲ್ಲಾ ಸಾಮಾಗ್ರಿಗಳನ್ನು ಜೋಡಿಸಿಕೊಂಡ ಬಳಿಕ ಈಗ ಚಹಾ ಸಿದ್ಧಪಡಿಸೋಣ ಬನ್ನಿ:

ನೀರನ್ನು ಚೆನ್ನಾಗಿ ಕುದಿಯಲು ಬಿಡಿ. ಈ ನಡುವೆ ಎಣ್ಣೆ ಹುಲ್ಲು, ದಾಲ್ಚಿನ್ನಿ ಚೆಕ್ಕೆ ಮತ್ತು ಏಲಕ್ಕಿ ಕಾಳು ಹಾಗೂ ಶುಂಠಿಯನ್ನು ಚೆನ್ನಾಗಿ ಜಜ್ಜಿ.

ಈಗ ನೀರು ಕುದಿಯುತ್ತಿರುವಂತೆಯೇ ಇವನ್ನೆಲ್ಲಾ ಅದಕ್ಕೆ ಹಾಕಿಬಿಡಿ. ಬಳಿಕ ಚಮಚದ ಸಹಾಯದಿಂದ ಚೆನ್ನಾಗಿ ಕಲಸಿ ಮತ್ತು 3 ನಿಮಿಷ ಹಾಗೆಯೇ ಬಿಡಿ. ಅವುಗಳು ಚೆನ್ನಾಗಿ ಮಿಕ್ಸ್ ಆಗುತ್ತವೆ.

ಬಳಿಕ ಇದನ್ನು ಸೋಸಿ, ಇನ್ನು ನೀವು ಸಿಹಿ ಚಹಾ ಕುಡಿಯುವ ಅಭ್ಯಾಸದವರಾಗಿದ್ದರೆ ಒಂದು ಸ್ವಲ್ಪ ಬೆಲ್ಲವನ್ನು ಸೇರಿಸಿ.

ಈಗ ಸವಿಯಿರಿ ಈ ಹರ್ಬಲ್ ಚಹಾದ ಸವಿಯನ್ನು!

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.