ಮಿಶ್ರ ವೈದ್ಯಕೀಯ ಎಷ್ಟು ಸುರಕ್ಷಿತ?


Team Udayavani, Dec 13, 2020, 6:00 AM IST

ಮಿಶ್ರ ವೈದ್ಯಕೀಯ ಎಷ್ಟು ಸುರಕ್ಷಿತ?

ಸಾಂದರ್ಭಿಕ ಚಿತ್ರ

ಆಯುಷ್‌ ಮಂತ್ರಾಲಯದ ಅಧೀನ ಸಂಸ್ಥೆಯಾದ ಭಾರತೀಯ ವೈದ್ಯಶಾಸ್ತ್ರದ ಕೇಂದ್ರೀಯ ಪರಿಷತ್‌ ಇದೇ ನ. 20ರಂದು ಅಧಿಸೂಚನೆಯೊಂದನ್ನು ಹೊರಡಿಸಿತು. ಅದರ ಅನುಸಾರ ಆಯುರ್ವೇದ ವೈದ್ಯರು ಶಲ್ಯ ತಂತ್ರ, ಶಾಲಕ್ಯ ತಂತ್ರ ಎಂಬ ಹೆಸರಿನಲ್ಲಿ ಶಸ್ತ್ರ ಚಿಕಿತ್ಸಾ ಸ್ನಾತಕೋತ್ತರ ಪದವಿ ಹೊಂದಿ ಜನರಲ್‌ ಸರ್ಜರಿ, ಮೂತ್ರಜನಕಾಂಗ ವ್ಯೂಹ ಸಂಬಂಧಿ, ಜೀರ್ಣಾಂಗ ವ್ಯೂಹ ಸಂಬಂಧಿ, ಕಣ್ಣು-ಕಿವಿ- ಮೂಗು- ಗಂಟಲು ಸಂಬಂಧಿ ಹಾಗೂ ದಂತ ಚಿಕಿತ್ಸಾ ಶಸ್ತ್ರ ಚಿಕಿತ್ಸೆಗಳನ್ನು ಮಾಡಬಹುದೆಂದೂ, ತಮ್ಮ ಹೆಸರಿನ ಮುಂದೆ ಎಮ್‌.ಎಸ್‌. ಎಂದು ಬರೆದುಕೊಳ್ಳ ಬಹುದೆಂದೂ ಫ‌ರಮಾನು ಹೊರಡಿಸಿಬಿಟ್ಟಿತು.

ಅಂದರೆ ಪದವಿ ಶಿಕ್ಷಣವನ್ನು ಬರೀ ಆಯುರ್ವೇದ ಕಲಿತವರು ಸ್ನಾತಕೋತ್ತರ ಶಿಕ್ಷಣದಲ್ಲಿ ಎಮ್‌. ಎಸ್‌. ಕಲಿಯುವ ಅಪಾಯಕಾರಿ ಆದೇಶ. ಅಲ್ಲದೇ ಅದೇ ಆದೇಶದಲ್ಲಿ 58 ವಿವಿಧ ಶಸ್ತ್ರಚಿಕಿತ್ಸಾ ಕ್ರಮಗಳ ಪಟ್ಟಿಯನ್ನೂ ಬಿಡುಗಡೆ ಮಾಡಿತು. ಆಶ್ಚರ್ಯ ಹಾಗೂ ಆತಂಕಕಾರಿ ವಿಷಯವೆಂದರೆ ಆಧುನಿಕ ವೈದ್ಯಪದ್ಧತಿಯ ಈ ಶಸ್ತ್ರಚಿಕಿತ್ಸೆಗಳನ್ನು ಮಾಡುವಾಗ, ಸುಮಾರು ಹತ್ತು ವರ್ಷಗಳ ಕಠಿನ ಪರಿಶ್ರಮ ಹಾಗೂ ಹಿರಿಯ ಶಸ್ತ್ರಚಿಕಿತ್ಸಕರ ಮಾರ್ಗ ದರ್ಶನದಲ್ಲಿ ಪರಿಣತಿ ಪಡೆದಾಗ್ಯೂ ಹೊಸ ಸರ್ಜನ್‌ಗಳ ಎದೆಬಡಿತ ಹೆಚ್ಚಾಗುತ್ತದೆ. ಅಲ್ಲದೆ ಹಲವು ಶಸ್ತ್ರಚಿಕಿತ್ಸೆಗಳನ್ನು ಮಾಡಲು ಅದೇ ವಿಷಯಗಳಲ್ಲಿ ಇನ್ನೂ ಹೆಚ್ಚಿನ ತರಬೇತಿಯ ಅವಶ್ಯಕತೆ ಇರುವುದರಿಂದ ಸೂಪರ್‌ ಸ್ಪೆಷಾಲಿಟಿಗಳಿವೆ. ಎಮ್‌ಬಿಬಿಎಸ್‌ ಕಲಿತು, ಎಮ್‌.ಎಸ್‌. ಕಲಿತರೂ ಮೇಲಿನ ಪಟ್ಟಿಯಲ್ಲಿನ ಹಲವು ಶಸ್ತ್ರಚಿಕಿತ್ಸೆಗಳನ್ನು ಮಾಡಲು ಎಮ್‌.ಸಿ.ಎಚ್‌. ಎಂಬ ಮತ್ತೆ ಮೂರು ವರ್ಷದ ಕೋರ್ಸ್‌ ಮಾಡುವ ಘಟ್ಟದಲ್ಲಿ ನಾವಿರುವಾಗ, ಈ ಅಧಿಸೂಚನೆ ಬಂದದ್ದು ವೇಗವಾಗಿ ಚಲಿಸುವ ವಾಹನಕ್ಕೆ ಸಡನ್ನಾಗಿ ರಿವರ್ಸ್‌ ಗಿಯರ್‌ ಹಾಕಿದಂತಹ ಅನುಭವ!

ಆಯುರ್ವೇದವು ಮೂಲತಃ ನಿಸರ್ಗ ನಿರ್ಮಿತ ಔಷಧಗಳಿಂದ ಹಾಗೂ ನಿಯಮಿತ ಆಚರಣೆಗಳಿಂದ, ಜೀವನ ಪದ್ಧತಿಗಳಿಂದ ರೋಗಗಳನ್ನು ಗುಣಪಡಿಸುವ ವಿಧಾನವೇ ಹೊರತು ಆಧುನಿಕ ವೈದ್ಯ ಪದ್ಧತಿಯಲ್ಲಿನ ಸಾಕ್ಷ್ಯಾಧಾರಿತ ವೈದ್ಯಕೀಯ (Evidence Based Medicine) ಚಿಕಿತ್ಸೆ ಅಲ್ಲ. ಪ್ರಾಚೀನ ಆಯುರ್ವೇದ ಗ್ರಂಥಗಳಲ್ಲಿ ಅನೇಕ ಶಸ್ತ್ರಚಿಕಿತ್ಸಾ ವಿಧಾನಗಳನ್ನು ವಿವರಿಸಲಾಗಿದೆಯಾದರೂ ಆ ವಿಧಾನಗಳ ತರಬೇತಿ ಅಥವಾ ಅವುಗಳ ಮುಂದುವರಿಕೆ ಆದದ್ದಾಗಲೀ ಅಥವಾ ಆ ಶಸ್ತ್ರಚಿಕಿತ್ಸೆಗಳನ್ನು ಮಾಡಲು ಅತ್ಯಾವಶ್ಯಕವಾದ ಅರಿವಳಿಕೆ ಜ್ಞಾನವಾಗಲೀ ಇಲ್ಲವೇ ಇಲ್ಲ.

ಈಗ ಆಯುರ್ವೇದ ವೈದ್ಯರು ಶಸ್ತ್ರಚಿಕಿತ್ಸೆ ಮಾಡುತ್ತಾರಾ ದರೆ ಅವರಿಗೆ ತರಬೇತಿ ನೀಡುವವರಾರು? ಅಕಸ್ಮಾತ್‌ ಸರಕಾರ ತನ್ನ ಶಕ್ತಿ ಬಳಸಿ ಅಲೋಪಥಿ ವೈದ್ಯರನ್ನು ನಿಯೋ ಜಿಸಿ ಆಯುರ್ವೇದ ವೈದ್ಯರಿಗೆ ತರಬೇತಿ ನೀಡಿಸಿದರೂ ಅರಿವಳಿಕೆಗೆ ಬಳಸುವ ಔಷಧಗಳು ಯಾವುವು? ಶಸ್ತ್ರಚಿಕಿತ್ಸಾ ಅನಂತರದಲ್ಲಿ ನಂಜು ಆಗದಂತೆ, ಕೀವು ಆಗದಂತೆ ಬಳಸಲು ಆಂಟಿಬಾಯಾಟಿಕ್ಸ್‌ ಯಾವುವು? ನೋವು ಆಗದಂತೆ ನೀಡಲು ನೋವು ನಿವಾರಕಗಳೆಲ್ಲಿ? ಸಲೈನ್‌ಗಳು, ಇಂಜೆಕ್ಷನ್‌ಗಳು ಆಯುರ್ವೇದ ಹೇಗಾದಾವು? ಹಾಗಾದರೆ ಅಲೋಪಥಿ ಔಷಧಗಳನ್ನು ಆಯುರ್ವೇದ ವೈದ್ಯರು ಬಳಸಬೇಕೆ? ಹಾಗೆ ಬಳಸಬೇಕಾದರೆ ಅವುಗಳ ಜ್ಞಾನದ ಆವಶ್ಯಕತೆ ಇಲ್ಲವೇ? ಅವುಗಳ ಬಗ್ಗೆ ಜ್ಞಾನವಿಲ್ಲದೆ ಬಳಸಿದರೆ ರೋಗಿಗಳಿಗೆ ಅಪಾಯವಾಗುವುದಿಲ್ಲವೇ? ಅದನ್ನು ಕಲಿತು ಇದನ್ನು ಮಾಡಿದರೆ ಅದು ಕಿಚಡಿ ವೈದ್ಯಕೀಯ ಆಗುವುದಿಲ್ಲವೇ? ಅಂದರೆ ಸರಕಾರ ತಾನೇ ಮುಂದೆ ನಿಂತು ನಕಲಿ ವೈದ್ಯರನ್ನು ತಯಾರು ಮಾಡಿದಂತಾಗುವು ದಿಲ್ಲವೇ? (ಈ ಹಿಂದೆ ಇದ್ದ ಭಾರತ ವೈದ್ಯಕೀಯ ಪರಿಷತ್‌ ಪ್ರಕಾರ ಕಲಿತ ಪದ್ಧತಿಯನ್ನು ಬಿಟ್ಟು ಬೇರೆಯದನ್ನು ಬಳಕೆ ಮಾಡುವವರೆಲ್ಲ ನಕಲಿ ವೈದ್ಯರೇ! ಅಲೋಪತಿ ವೈದ್ಯರು ಆಯುರ್ವೇದ ಔಷಧ ಬಳಸಿದರೂ ನಕಲಿ ವೈದ್ಯರೇ) ಈ ನೂರೆಂಟು ಪ್ರಶ್ನೆಗಳಿಗೆ ಉತ್ತರ ಕೊಡುವವರಾರು?

ಭಾರತ ಇಂದಿಗೂ ಆಧುನಿಕ ವೈದ್ಯಕೀಯದ ಮುಖ್ಯ ಕೇಂದ್ರವಾಗಿದೆ. ಅನೇಕ ದೇಶಗಳ ಜನ ಭಾರತದ ಆಸ್ಪತ್ರೆಗಳೆಡೆ ಮುಖ ಮಾಡುತ್ತಿದ್ದಾರೆ. ಜಗತ್ತಿನಾದ್ಯಂತ ಸೇವೆ ಸಲ್ಲಿಸುತ್ತಿರುವ ಭಾರತೀಯ ವೈದ್ಯರು ದೇಶಕ್ಕೆ ಹೆಮ್ಮೆಯ ಪರಂಪರೆ ನೀಡಿದ್ದಾರೆ. ಆದರೆ Mixopathy ಎಂದು ಈಗೀಗ ಕರೆಸಿಕೊಳ್ಳುತ್ತಿರುವ ಮಿಶ್ರ ವೈದ್ಯಕೀಯ ಅಥವಾ ಕಿಚಡಿ ವೈದ್ಯಕೀಯದಿಂದ ಇಂತಹ ಪರಂಪರೆ ನಾಶವಾಗುತ್ತದೆ. ಸಂಶೋಧನೆ ಮತ್ತು ಬೆಳವಣಿಗೆಗಳು ಆಯಾ ವೈದ್ಯಕೀಯ ಕ್ಷೇತ್ರಗಳಲ್ಲಿ ನಡೆಯಬೇಕು ಮತ್ತು ಪ್ರತಿಯೊಬ್ಬರೂ ತಮ್ಮದೇ ಆದ ವೈದ್ಯಕೀಯ ಪದ್ಧತಿಯನ್ನು ಅನುಸರಿಸಬೇಕು. ಆಗ ಮಾತ್ರ ರೋಗಿಗಳು ತಮಗೆ ಇಷ್ಟವಾದ ಪದ್ಧತಿಯನ್ನು ಬಳಸಿ ಸುರಕ್ಷಿತವಾಗಿರಲು ಸಾಧ್ಯ.

ಡಾ| ಶಿವಾನಂದ ಕುಬಸದ (ಉಪಾಧ್ಯಕ್ಷರು, ಐಎಂಎ, ಕರ್ನಾಟಕ ರಾಜ್ಯ ಶಾಖೆ)

ಟಾಪ್ ನ್ಯೂಸ್

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.