Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!


Team Udayavani, Apr 16, 2024, 6:11 PM IST

6-thyroid

ಥೈರಾಯ್ಡ್ ಗ್ರಂಥಿಯ ಕಾರ್ಯಚಟುವಟಿಕೆಗಳಲ್ಲಿ ತೊಂದರೆ ತಲೆದೋರಿದಾಗ ಗೊಯಟರ್‌, ಹೈಪೊಥೈರಾಯ್ಡಿಸಂ ಮತ್ತು ಹೈಪರ್‌ ಥೈರಾಯ್ಡಿಸಂನಂತಹ ಅನಾರೋಗ್ಯಗಳು ಉಂಟಾಗುತ್ತವೆ. ಗೊಯಟರ್‌ ಎನ್ನುವುದು ಥೈರಾಯ್ಡ್ ಗ್ರಂಥಿಯ ಸಂರಚನೆಗೆ ಸಂಬಂಧಿಸಿದ ತೊಂದರೆ, ಇದರಿಂದಾಗಿ ಥೈರಾಯ್ಡ್ ಗ್ರಂಥಿ ಊದಿಕೊಳ್ಳುತ್ತದೆ. ಹೈಪೊಥೈರಾಯ್ಡಿಸಂ ಮತ್ತು ಹೈಪರ್‌ ಥೈರಾಯ್ಡಿಸಂಗಳು ಕ್ರಮವಾಗಿ ಥೈರಾಯ್ಡ್ ಹಾರ್ಮೋನ್‌ ಮಟ್ಟ ಕಡಿಮೆಯಾದಾಗ ಮತ್ತು ಹೆಚ್ಚಾದಾಗ ತಲೆದೋರುವ ಸಮಸ್ಯೆಗಳು. ಈ ಅನಾರೋಗ್ಯಗಳನ್ನು ನಿರ್ಲಕ್ಷಿಸಿದರೆ ಕೆಲವೊಮ್ಮೆ ಮಾರಕವಾದೀತು.

ಹೈಪರ್‌ಥೈರಾಯ್ಡಿಸಂ – ಥೈರಾಯ್ಡ್ ಪ್ರವಾಹ

ಅನಿಯಂತ್ರಿತವಾದ ಮತ್ತು ಪತ್ತೆಯಾಗದ ಹೈಪರ್‌ಥೈರಾಯ್ಡಿಸಂ ಅಥವಾ ಈ ಸಮಸ್ಯೆಗೆ ತೆಗೆದುಕೊಳ್ಳುತ್ತಿರುವ ಔಷಧವನ್ನು ಹಠಾತ್ತಾಗಿ ಸ್ಥಗಿತಗೊಳಿಸಿದರೆ ಥೈರಾಯ್ಡ್ ಹಾರ್ಮೋನ್‌ ಪ್ರವಾಹದೋಪಾದಿಯಲ್ಲಿ ಉತ್ಪಾದನೆಯಾಗಬಲ್ಲುದು. ಈ ಸಮಸ್ಯೆ ತಲೆದೋರಿದಾಗ ನಮ್ಮ ದೇಹದ ಪ್ರತಿಯೊಂದು ಅಂಗವೂ ಅತಿಯಾದ ಕಾರ್ಯಚಟುವಟಿಕೆಯಲ್ಲಿ ತೊಡಗಬಹುದು – ಈ ಸ್ಥಿತಿಯನ್ನು ಬೇಗನೆ ಪತ್ತೆಹಚ್ಚಿ ಚಿಕಿತ್ಸೆ ಒದಗಿಸದೆ ಇದ್ದಲ್ಲಿ ಪ್ರಾಣಾಪಾಯಕ್ಕೆ ಕಾರಣವಾದೀತು.

ಹೈಪರ್‌ಥೈರಾಯ್ಡಿಸಂ ಉಂಟಾದಾಗ ರೋಗಿ ದೇಹದ ತಾಪಮಾನದಲ್ಲಿ ಹೆಚ್ಚಳ, ಬೇಧಿ, ಹೃದಯ ಬಡಿತ ಹೆಚ್ಚಳ, ಗೊಂದಲ, ಕಾಲುಗಳು ಊದಿಕೊಳ್ಳುವುದು, ನಿಶ್ಶಕ್ತಿ, ತೂಕ ನಷ್ಟದಂತಹ ಲಕ್ಷಣಗಳನ್ನು ಅನುಭವಿಸಬಹುದು. ಒತ್ತಡ, ಸೋಂಕು, ಶಸ್ತ್ರಚಿಕಿತ್ಸೆಗಳು ಮತ್ತು ಹೃದಯಾಘಾತದ ಸಂದರ್ಭದಲ್ಲಿಯೂ ಇಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದಾಗಿದೆ.

ಹೈಪೊಥೈರಾಯ್ಡಿಸಂ – ಮೈಕ್ಸೆಡೇಮಾ ಕೋಮಾ

ತೀವ್ರ ತರಹದ ಹೈಪೊಥೈರಾಯ್ಡಿಸಂಗೆ ಒಳಗಾಗಿ, ಚಿಕಿತ್ಸೆಗೊಳಪಡದ ರೋಗಿಗಳು ಮೈಕ್ಸೆಡೇಮಾ ಕೋಮಾಕ್ಕೆ ತುತ್ತಾಗಬಹುದಾಗಿದೆ. ಈ ರೋಗಿಗಳು ಸಾಮಾನ್ಯವಾಗಿ ಕಾಲುಗಳು ಮತ್ತು ಮುಖದಲ್ಲಿ ಊತ, ಮಾತು ನಿಧಾನವಾಗುವುದು, ತೂಕ ಹೆಚ್ಚುವುದು, ನಿಶ್ಶಕ್ತಿ, ಜೊಂಪು ಮತ್ತು ಕೊಮಾದ ಲಕ್ಷಣಗಳನ್ನು ಹೊಂದಿರುತ್ತಾರೆ. ಈ ಅನಾರೋಗ್ಯದಿಂದ ಸಾವನ್ನಪ್ಪುವ ಪ್ರಮಾಣ ಹೆಚ್ಚಿರುವುದರಿಂದ ರೋಗಿಗಳಿಗೆ ತೀವ್ರ ನಿಗಾ ಘಟಕದಲ್ಲಿ ಆರೈಕೆ-ಚಿಕಿತ್ಸೆ ಆವಶ್ಯಕವಾಗಿರುತ್ತದೆ.

ಗೊಯಟರ್‌

ಸಾಮಾನ್ಯವಾಗಿ ಬಹುತೇಕ ಎಲ್ಲ ಗೊಯಟರ್‌ ಪ್ರಕರಣಗಳು ಪ್ರಾಣಾಪಾಯಕರ ಅಲ್ಲದಿದ್ದರೂ ಎಂಡೊಕ್ರೈನಾಲಜಿ ತಜ್ಞರಾಗಿ ನಾವು ಇದರ ಹಿಂದೆ ಇರಬಹುದಾದ ಕ್ಯಾನ್ಸರ್‌ ಸಾಧ್ಯತೆಗಳ ಬಗ್ಗೆ ಸಂದೇಹ ಪಡುತ್ತೇವೆ. ಹಿನ್ನೆಲೆಯ ಕಾರಣಗಳನ್ನು ಅವಲಂಬಿಸಿ ಥೈರಾಯ್ಡ್ ಕ್ಯಾನ್ಸರ್‌ಗಳು ನಿಧಾನಗತಿಯಲ್ಲಿ ಅಥವಾ ಕ್ಷಿಪ್ರಗತಿಯಲ್ಲಿ ಉಲ್ಬಣಗೊಳ್ಳುವಂಥವು ಆಗಿರಬಹುದು.

ಥೈರಾಯ್ಡ್ ಕ್ಯಾನ್ಸರ್‌ಗಳಲ್ಲಿ ಪ್ಯಾಪಿಲರಿ, ಫಾಲಿಕ್ಯುಲರ್‌, ಮೆಡ್ಯುಲರಿ ಮತ್ತು ಆನಾಪ್ಲಾಸ್ಟಿಕ್‌ ಎಂಬ ವಿಧಗಳಿವೆ. ಥೈರಾಯ್ಡನ ಅಲ್ಟ್ರಾಸೌಂಡ್‌ ಮತ್ತು ಎಫ್ಎನ್‌ಎ (ಫೈನ್‌ ನೀಡಲ್‌ ಆಸ್ಪಿರೇಶನ್‌)ಗಳನ್ನು ಉಪಯೋಗಿಸಿ ಗೊಯಟರ್‌ನ ವಿಶ್ಲೇಷಣೆ ನಡೆಸಲಾಗುತ್ತದೆ ಮತ್ತು ಶಸ್ತ್ರಚಿಕಿತ್ಸೆಯನ್ನು ಯೋಜಿಸಲಾಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಥೈರಾಯ್ಡ್ ಸಮಸ್ಯೆ ಸಾಮಾನ್ಯ ವಾದುದಾದರೂ ಅದನ್ನು ನಿರ್ಲಕ್ಷಿಸಬಾರದು. ಕ್ಲಪ್ತ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.

-ಡಾ| ಶ್ರೀನಾಥ್‌ ಪಿ. ಶೆಟ್ಟಿ

ಕನ್ಸಲ್ಟಂಟ್‌, ಎಂಡೊಕ್ರೈನಾಲಜಿ ವಿಭಾಗ

ಕೆಎಂಸಿ ಆಸ್ಪತ್ರೆ,

ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಎಂಡೊಕ್ರೈನಾಲಜಿ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.