ಈಂದ್ ಹುಡಿ ಉದರ ಸಮಸ್ಯೆಗಳಿಗೆ ಪರಿಹಾರ
ಇದನ್ನು ತರಿಸಿಕೊಂಡು ಮನೆಯಲ್ಲಿ ಕೆಡದಂತೆ ಬಹುಕಾಲದ ವರೆಗೆ ಶೇಖರಿಸಿ ಈಡಬಹುದು.
Team Udayavani, Jan 22, 2021, 10:41 AM IST
ಗ್ಯಾಸ್ಟ್ರಿಕ್, ಆ್ಯಸಿಡಿಟಿ, ಹೊಟ್ಟೆ ಉಬ್ಬರ,ಮಲಬದ್ಧತೆ ಆಗಾಗ ಕಾಡುವಂಥದ್ದು. ಇದಕ್ಕಾಗಿ ಪದೇಪದೇ ವೈದ್ಯರ ಬಳಿಗೆ ಹೋಗುವ ಬದಲು ಮನೆಯಲ್ಲಿ ಪರಿಹಾರ ಕಂಡುಕೊಳ್ಳಬಹುದು. ಇದಕ್ಕಾಗಿ ಹಳ್ಳಿಗಳಲ್ಲಿ ಬಳಸುವ ಒಂದು ಬಹುಪಯೋಗಿ ವಸ್ತು ಈಂದ್, ಬೈನೆ ಮರದ ತಿರುಳಿನಿಂದ ತಯಾರಿಸಿದ ಹುಡಿ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಲಭ್ಯವಾಗುವ ಇದನ್ನು ತರಿಸಿಕೊಂಡು ಮನೆಯಲ್ಲಿ ಕೆಡದಂತೆ ಬಹುಕಾಲದ ವರೆಗೆ ಶೇಖರಿಸಿ ಈಡಬಹುದು.
ಇದನ್ನೂ ಓದಿ:ಸಮಯ ಮತ್ತೆ ಮರಳಿ ಸಿಗಲ್ಲ….ಸಮಯ ಪಾಲನೆಯಿಂದ ನಮಗೇನು ಲಾಭ?
ಲಾಭ ಹಲವು
*ದೇಹದ ಉಷ್ಣತೆಯನ್ನು ನಿವಾರಿಸಿ ತಂಪಾಗಿರಿಸುತ್ತದೆ.
*ನರದೌರ್ಬಲ್ಯವನ್ನು ಕಡಿಮೆ ಮಾಡಿ ಮಾಂಸಖಂಡ ಚೆನ್ನಾಗಿ ಕೆಲಸ ಮಾಡಲು ಸಹಕರಿಸುತ್ತದೆ.
*ಆಹಾರ ವ್ಯತ್ಯಯದಿಂದ ಉಂಟಾಗುವ ಗ್ಯಾಸ್ಟ್ರಿಕ್, ಹೊಟ್ಟೆ ನೋವು, ಹುಳಿತೇಗು ಮತ್ತಿತರ ಉದರ ಸಂಬಂಧಿ ಕಾಯಿಲೆಯನ್ನು ದೂರವಿಡುತ್ತದೆ.
*ಜೀರ್ಣಶಕ್ತಿಯನ್ನು ಹೆಚ್ಚಿಸಿ ಪಚನ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
*ಸುಲಭವಾಗಿ ಜೀರ್ಣವಾಗುವ, ನಾರಿನಾಂಶ ಅಧಿಕವಿರುವ ಸಸ್ಯ ಮೂಲದ ಆಹಾರವಾಗಿರುವುದರಿಂದ ಮಕ್ಕಳಿಗೆ, ವಯಸ್ಕರಿಗೆ, ವೃದ್ಧರಿಗೆ ಆರೋಗ್ಯಕ್ಕೆ ಅತ್ಯುತ್ತಮ.
* ತಲೆ ಸುತ್ತು, ತಲೆನೋವು, ಅರೆ ತಲೆನೋವನ್ನು ನಿವಾರಿಸಿ ನಿದ್ರಾಹೀನತೆ ಯನ್ನು ತಡೆಗಟ್ಟುತ್ತದೆ.
*ಮಲಬದ್ಧತೆ ಸಮಸ್ಯೆಗೆ ಪರಿಹಾರ ವನ್ನೊದಗಿಸುತ್ತದೆ.
*ರಕ್ತಹೀನತೆಯುಳ್ಳವರಿಗೂ ಇದು ಪ್ರಯೋಜನಕಾರಿಯಾಗಿದೆ.
ಬಳಕೆ ಮಾಡುವ ವಿಧಾನ
ಎರಡು ಚಮಚ ಹುಡಿಯನ್ನು ಎರಡು ಲೋಟ ನೀರು ಅಥವಾ ಹಾಲಿನಲ್ಲಿ ಬೆರೆಸಿ ಸ್ವಲ್ಪ ಬೆಲ್ಲ, ತುಪ್ಪವನ್ನು ಸೇರಿಸಿ ಕಲಸಿ ಕುದಿಸಿ ಪಾಯಸದ ರೂಪಕ್ಕೆ ಬಂದಾಗ ತಣಿಸಿ ಸೇವಿಸಬಹುದು.ರುಚಿಗಾಗಿ ಬೇಕಿದ್ದರೆ ಮಾತ್ರ ಉಪ್ಪು ಬೆರೆಸಬಹುದು. ಅಲ್ಲದೇ ತುರ್ತು ಸಮಯದಲ್ಲಿ ಕೇವಲ ನೀರಿನಲ್ಲಿ ಕಲಸಿ ಕುಡಿಯಬಹುದು. ಇದರಲ್ಲಿ ಯಾವುದೇ ಅಡ್ಡ ಪರಿಣಾಮಗಳಿಲ್ಲದ ಕಾರಣ ಯಾರು ಬೇಕಾದರೂ ಸೇವಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು
Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್ ಮೊರೆಹೋಗಿ
World Kidney Day: ಹಿಮೋಡಯಾಲಿಸಿಸ್: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?
Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ
MUST WATCH
ಹೊಸ ಸೇರ್ಪಡೆ
21 ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ
AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!
Kerala-ಕರ್ನಾಟಕ-ತಮಿಳುನಾಡು ತ್ರಿಜಂಕ್ಷನ್: ಮತ್ತೆ ನಕ್ಸಲರ ಸದ್ದು?
Lok Sabha ಅಖಾಡಕ್ಕೆ ಲಾಲು ಪ್ರಸಾದ್ ಪುತ್ರಿ ಡಾ| ರೋಹಿಣಿ ಹೆಜ್ಜೆ
Infosys; 4 ತಿಂಗಳ ಮೊಮ್ಮಗನಿಗೆ 243 ಕೋಟಿ ರೂ.ಷೇರು ಗಿಫ್ಟ್ ನೀಡಿದ ಮೂರ್ತಿ