ಮಾದಕ ವಸ್ತುಗಳ ಬಗ್ಗೆ ತಪ್ಪು ನಂಬಿಕೆಗಳು


Team Udayavani, Jan 30, 2023, 4:00 PM IST

5

ಮಾದಕ ವಸ್ತುಗಳ ಉಪಯೋಗ ಸಾಮಾನ್ಯವಾಗಿ ಪ್ರಪಂಚದಾದ್ಯಂತ ಕಂಡುಬರುವ ಒಂದು ದೊಡ್ಡ ಪಿಡುಗು. ಇದು ಗಂಡು-ಹೆಣ್ಣು, ಬಡವ-ಶ್ರೀಮಂತ ಎನ್ನುವ ಯಾವುದೇ ಭೇದಭಾವವಿಲ್ಲದೆ ಎಲ್ಲೆಡೆಯೂ ಕಂಡುಬರುವ ತೊಂದರೆ.

ಸಾಮಾನ್ಯವಾಗಿ ಉಪಯೋಗಿಸುವ ಮಾದಕ ವಸ್ತುಗಳು: ಮದ್ಯ, ತಂಬಾಕು, ಗಾಂಜಾ, ಕೋಕೇನ್‌, ಓಪಿಯಮ್‌, ಆಂಫಿಟಮೈನ್‌, ಹಿರಾಯಿನ್‌, ಎಲ್‌.ಎಸ್‌.ಡಿ., ಪಿ.ಸಿ.ಪಿ., ನಿದ್ದೆ ಮಾತ್ರೆಗಳು, ಅನಿಲಗಳು (ವೈಟನರ್‌, ಪೆಟ್ರೋಲಿಯಮ್‌ ಉತ್ಪನ್ನಗಳು), ಇತ್ಯಾದಿ.

ಜನರಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿ ಇರುವುದು ಕಡಿಮೆ. ಅದರಲ್ಲೂ ನಿಜವಾದ ಮಾಹಿತಿಗಿಂತ ತಪ್ಪು ನಂಬಿಕೆಗಳು ಹಾಗೂ ಮೂಢನಂಬಿಕೆಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಮಾದಕ ವಸ್ತುಗಳಿಗೆ ಸಂಬಂಧಪಟ್ಟ ಮಾಹಿತಿ ಬಳಸುವವರಲ್ಲಿ ಹಾಗೂ ಜನರಲ್ಲಿ ಮಾಹಿತಿಯ ಕೊರತೆ ಎದ್ದು ಕಾಣುತ್ತದೆ ಆದರೆ ಈ ಪಿಡುಗಿನ ಬಗ್ಗೆ ಹಲವಾರು ಅಪನಂಬಿಕೆಗಳು ಪ್ರಚಲಿತವಾಗಿರುವುದು ವಿಪರ್ಯಾಸ.

ಸಮಾಜದಲ್ಲಿ ಮಾದಕ ವಸ್ತುಗಳ ಬಗ್ಗೆ ಹಲವಾರು ತಪ್ಪು ನಂಬಿಕೆಗಳು ಪ್ರಚಲಿತವಾಗಿವೆ. ಅವುಗಳಲ್ಲಿ ಕೆಲವನ್ನು ಈ ಕೆಳಗೆ ನಮೂದಿಸಲಾಗಿದೆ:

  1. ತಪ್ಪು: ಮಾದಕ ವಸ್ತುಗಳ ಉಪಯೋಗ ಒಂದು ಕಾಯಿಲೆಯಲ್ಲ, ಇದು ಕೇವಲ ವ್ಯಕ್ತಿಯ ಇಚ್ಛಾಶಕ್ತಿಯ ಕೊರತೆಯಷ್ಟೇ.  „ಸರಿ: ಮೇಲೆ ವಿವರಿಸಿದ ಹಾಗೆ ಇದನ್ನು ಒಂದು ಮೆದುಳಿನ ಕಾಯಿಲೆಯೆಂದು ಪರಿಗಣಿಸಲಾಗುತ್ತದೆ.
  2. ತಪ್ಪು: ಮಾದಕ ವಸ್ತುವೂ ದೈಹಿಕ ಅಥವಾ ಮಾನಸಿಕ ಆರೋಗ್ಯವನ್ನು ಹಾಳುಮಾಡಬೇಕಾದರೆ, ಅದನ್ನು ತುಂಬಾ ಸಮಯದ ವರೆಗೆ ಉಪಯೋಗಿಸಬೇಕು. „ಸರಿ: ಕೆಲವೊಮ್ಮೆ ಒಂದೇ ಸಲ ಉಪಯೋಗಿಸಿದರೂ ವ್ಯಕ್ತಿಯೂ ತೀವ್ರತರ ದೈಹಿಕ ಮತ್ತು ಮಾನಸಿಕ ತೊಂದರೆಗಳಿಗೀಡಾಗುತ್ತಾನೆ.
  3. ತಪ್ಪು: ಇದಕ್ಕೆ ಚಿಕಿತ್ಸೆಯೇನೂ ಬೇಕಾಗುವುದಿಲ್ಲ, ಇದನ್ನು ಮನಸ್ಸು ಗಟ್ಟಿ ಮಾಡಿ ಬೇಕಾದಾಗ ಬಿಡಬಹುದು. „ಸರಿ: ಮಾದಕ ವಸ್ತುಗಳ ಜಾಲದಿಂದ ಹೊರಬರಲು ಚಿಕಿತ್ಸೆ ಅತ್ಯಗತ್ಯ. ಇಚ್ಛಾಶಕ್ತಿಯಿಂದ ಬಿಡುವ ಸಾಧ್ಯತೆಗಳು ತುಂಬಾ ವಿರಳ.
  4. ತಪ್ಪು: ಹದಿಹರೆಯದವರು ಮಾದಕ ವಸ್ತುವಿನ ಚಟಕ್ಕೊಳಗಾಗುವುದಿಲ್ಲ. „ಸರಿ: ಹದಿಹರೆಯದವರು ಚಟಕ್ಕೊಳಗಾಗುತ್ತಾರೆ.
  5. ತಪ್ಪು: ಮಾದಕ ವಸ್ತುಗಳು ಮನಸ್ಸನ್ನು ಹಗುರವಾಗಿಸುತ್ತವೆ ಮತ್ತು ಮನಸ್ಸಿಗೆ ಶಾಂತಿ ನೀಡುತ್ತವೆ. „ಸರಿ: ಮಾದಕ ವಸ್ತುಗಳು ಸಮಸ್ಯೆಗಳ ಅವಲೋಕನ ಮತ್ತು ಪರಿಹಾರ ಹುಡುಕುವ ಶಕ್ತಿಯನ್ನು ಕದಡುತ್ತವೆ ಮತ್ತು ಮತ್ತಿನಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಭಾವನಾತ್ಮಕವಾಗಿದ್ದು, ಅಹಿತಕರ ಪರಿಣಾಮಗಳನ್ನು ಉಂಟುಮಾಡುತ್ತವೆ.
  6. ತಪ್ಪು: ಮಾದಕ ವಸ್ತುಗಳ ಉಪಯೋಗದಿಂದ ಲೈಂಗಿಕ ಶಕ್ತಿ ಹೆಚ್ಚಾಗುತ್ತದೆ. „ಸರಿ: ಮಾದಕ ವಸ್ತುಗಳಿಂದ ತಾತ್ಕಾಲಿಕವಾಗಿ ಲೈಂಗಿಕ ಆಸಕ್ತಿ ಹೆಚ್ಚಾದ ಹಾಗೆ ಅನ್ನಿಸುತ್ತದೆ, ಆದರೆ ನಿಜವಾಗಿ ಲೈಂಗಿಕ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ, ದೀರ್ಘ‌ಕಾಲದಲ್ಲಿ ವಿವಿಧ ಲೈಂಗಿಕ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ. ಉದಾ: ಲಿಂಗ ಉದ್ರೇಕಗೊಳ್ಳದಿರುವುದು, ಶೀಘ್ರ ಸ್ಖಲನವಾಗುವುದು.
  7. ತಪ್ಪು: ಮಾದಕ ವಸ್ತುಗಳನ್ನು ಉಪಯೋಗಿಸುವವರೆಲ್ಲ ಕೆಟ್ಟ ಜನ. „ಸರಿ: ಇದ ಉಪಯೋಗದಲ್ಲಿ ಸರಿ ಅಥವಾ ಕೆಟ್ಟ ಜನರೆಂಬ ಭೇದವಿಲ್ಲ. ಎಲ್ಲ ಗುಂಪಿನ ಜನರು ಇದಕ್ಕೊಳಗಾದವರಿದ್ದಾರೆ.
  8. ತಪ್ಪು: ಕಠಿನ (ಹಾರ್ಡ್‌) ಕೆಲಸ ಮಾಡುವವರಿಗೆ ಮೈ-ಕೈ ನೋವು ಕಡಿಮೆಯಾಗಲು ಮದ್ಯದಂತಹ ಮಾದಕ ವಸ್ತುಗಳು ಬೇಕೇ ಬೇಕು. ಯಾಕೆಂದರೆ, ಅವುಗಳು ನೋವು ನಿವಾರಕವಾಗಿವೆ. „ಸರಿ: ಮದ್ಯಪಾನ ಮಾಡಿದಾಗ ಅಥವಾ/ ಮಾದಕ ವಸ್ತುಗಳನ್ನು ಸೇವಿಸಿದಾಗ ವ್ಯಕ್ತಿಯ ಸಂವೇದನೆ (sensation) ಕಡಿಮೆಯಾಗುತ್ತದೆ ಹಾಗಾಗಿ ಮಾಂಸ ಖಂಡಗಳಲ್ಲಿ ಹಾನಿಯಾಗುತ್ತಿದ್ದರೂ ನೋವಿನ ಅನುಭವವಾಗುವುದಿಲ್ಲ. ಆದರೆ ಇದೇ ರೀತಿ ಮುಂದುವರಿದಾಗ ದೇಹದ ಮಾಂಸಖಂಡಗಳು ಹಾನಿಗೀಡಾಗುತ್ತವೆ ಹಾಗೂ ಯಾವಾಗಲೂ ನೋವಿನ ಅನುಭವವಾಗತೊಡಗುತ್ತದೆ. ಮದ್ಯ ಮತ್ತಿತರ ಮಾದಕ ವಸ್ತುಗಳು ಸಮಯ ಕಳೆದಂತೆ ಮಾಂಸಖಂಡಗಳಿಗೆ ಹಾನಿ ಮಾಡಿ ಯಾವಾಗಲೂ ಮೈ-ಕೈ ನೋವನ್ನು ಉಂಟುಮಾಡುತ್ತವೆ.
  9. ತಪ್ಪು: ಮಾದಕ ವಸ್ತು ಉಪಯೋಗಿಸುವವರಿಗೆ ಅವರಿಗೆ ಗೊತ್ತಿಲ್ಲದೆ ಮಾತ್ರೆ ಅಥವಾ ಟಿ.ವಿ.ಯಲ್ಲಿ ತೋರಿಸುವಂತೆ ಯಾವುದೋ ಪುಡಿ ಕೊಟ್ಟರೆ ಅವರು ಸಂಪೂರ್ಣ ಗುಣವಾಗಿಬಿಡುತ್ತಾರೆ. „ಸರಿ: ಇದರ ಚಿಕಿತ್ಸೆ ಒಂದು ರೂಪು-ರೇಷೆಯ ಮೇಲೆ ಸಾಗುವುದು. ಇದರಲ್ಲಿ ವ್ಯಕ್ತಿಯ ಪಾತ್ರ ಮುಖ್ಯವಾಗಿದ್ದು, ಅವನ ಸಮ್ಮತಿಯ ಮೇಲೆ ಚಿಕಿತ್ಸೆ ಮುಂದುವರಿಯುತ್ತದೆ. ಆವರಿಗೆ ಮಾದಕ ವಸ್ತುಗಳ ಪರಿಣಾಮಗಳ ಬಗ್ಗೆ, ಆಸೆ ನಿಯಂತ್ರಿಸಿಕೊಳ್ಳುವ ಬಗ್ಗೆ ವಿವರವಾಗಿ ಹೇಳಲಾಗುತ್ತದೆ.
  10. ತಪ್ಪು: ಒಂದು ಬಾರಿ ಚಿಕಿತ್ಸೆಗೊಳಗಾಗಿ ವ್ಯಕ್ತಿ ಸ್ವಲ್ಪ ಸಮಯದ ಅನಂತರ ಪುನಃ ಮಾದಕ ವಸ್ತು ಸೇವಿಸಲಾರಂಭಿಸಿದ್ದಾನೆ ಎಂದರೆ ಆತ ಇನ್ನು ಮುಂದೆ ಸುಧಾರಿಸಲು ಸಾಧ್ಯವೇ ಇಲ್ಲ. „ಸರಿ: ಹಲವಾರು ಸಲ ಮಾದಕ ವಸ್ತು ಬಿತ್ತು ಪುನಃ ಪ್ರಾರಂಭಿಸಿದ ವ್ಯಕ್ತಿ ಮತ್ತೆ ಮತ್ತೆ ಚಿಕಿತ್ಸೆಗೊಳಗಾಗಿ ಅದರ ಚಟದಿಂದ ಹೊರಬರಬಲ್ಲ.
  11. ತಪ್ಪು: ಮದ್ಯದಂತಹ ಮಾದಕ ವಸ್ತುವಿನ ಸೇವನೆಯ ಜತೆಗೆ ಹೊಟ್ಟೆ ತುಂಬ ಊಟ ಮಾಡಿದರೆ ಮಾದಕ ವಸ್ತುವು ದೇಹಕ್ಕೆ ಯಾವುದೇ ತೊಂದರೆಯನ್ನುಂಟುಮಾಡುವುದಿಲ್ಲ. „ಸರಿ: ಊಟ ಮಾಡಿದರೂ ಬಿಟ್ಟರೂ ಮಾದಕ ವಸ್ತುಗಳು ದೇಹಕ್ಕೆ ಹಾನಿ ಮಾಡಿಯೇ ಮಾಡುತ್ತವೆ.
  12. ತಪ್ಪು: ಒಳ್ಳೆಯ ಗುಣಮಟ್ಟದ ಮಾದಕ ವಸ್ತು ಉಪಯೋಗಿಸಿದರೆ ದೇಹಕ್ಕೇನೂ ಹಾನಿಯಾಗುವುದಿಲ್ಲ. ಉದಾ: ಒಳ್ಳೆಯ ಗುಣಮಟ್ಟದ ಮದ್ಯ ಸೇವಿಸಿದರೆ ದೇಹ ಸದೃಢಗೊಳ್ಳುತ್ತದೆ. „ಸರಿ: ಒಳ್ಳೆಯದಾಗಲಿ ಅಥವಾ ಕೀಳು ಗುಣಮಟ್ಟದ್ದಾಗಲಿ, ಮಾದಕ ವಸ್ತು ದೇಹಕ್ಕೆ ಮತ್ತು ಮಾನಸಿಕ ಆರೋಗ್ಯಕ್ಕೆ ಹಾನಿಯುಂಟುಮಾಡುತ್ತದೆ.
  13. ತಪ್ಪು: ಬೇರೆ ಜನರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಾದಕ ವಸ್ತು ಸೇವಿಸಿದರೂ ಆತನಿಗೆ ಮತ್ತೇರದಿದ್ದರೆ/ ಕಿಕ್‌ ಸಿಗದಿದ್ದರೆ ಆತ ತುಂಬಾ ಸ್ಟ್ರಾಂಗ್‌ ವ್ಯಕ್ತಿ ಮತ್ತು ಆತನಿಗೆ ಮಾದಕ ವಸ್ತುವಿಂದ ಯಾವುದೇ ತೊಂದರೆಯಾಗುವುದಿಲ್ಲ. „ಸರಿ: ವ್ಯಕ್ತಿಗೆ ಸಮಯ ಕಳೆದಂತೆ ಮತ್ತೇರಲು ಹೆಚ್ಚಿನ ಪ್ರಮಾಣದಲ್ಲಿ ಮಾದಕ ವಸ್ತು ಬೇಕಾಗಿದೆಯೆಂದರೆ, ಮಾದಕ ವಸ್ತುವಿಗೆ ಆತನ ದೇಹ ಮತ್ತು ಮನಸ್ಸಿನ ಸಹನಾಶಕ್ತಿ ಹೆಚ್ಚಾಗಿದೆ ಅಂದರೆ, ಆ ವ್ಯಕ್ತಿಯು ನಿಜವಾಗಿಯೂ ಮಾದಕ ವಸ್ತುಗಳ ಚಟಕ್ಕೆ ಒಳಗಾದವನು ಮತ್ತು ಅವನಿಗೆ ಇದರಿಂದ ಹೊರಬರಲು ಸಹಾಯ ಅಗತ್ಯವಿದೆ ಎಂದರ್ಥ.
  14. ತಪ್ಪು: ಮಾದಕ ವಸ್ತು ಉಪಯೋಗಿಸುವವರು ಅಧೋಗತಿಗಿಳಿದಾಗಲೇ ಅವರಿಗೆ ಬುದ್ಧಿ ಬರುವುದು, ಅಲ್ಲಿಯವರೆಗೆ ಅವರನ್ನು ಸುಧಾರಿಸಲು ಸಾಧ್ಯವೇ ಇಲ್ಲ. „ಸರಿ: ಅವರು ಯಾವುದೇ ಹಂತದಲ್ಲಿದ್ದರೂ ಸೂಕ್ತ ಚಿಕಿತ್ಸೆಯಿಂದ ಅವರನ್ನು ಬದಲಾಯಿಸಬಹುದು.
  15. ತಪ್ಪು: ಎಲ್ಲರೂ ಮಾದಕ ವಸ್ತುಗಳನ್ನು ಉಪಯೋಗಿಸುತ್ತಾರೆ ಅದಕ್ಕೆ ನಾನೂ ಕೂಡ ಮಾಡಲೇಬೇಕಾಗುತ್ತದೆ. „ಸರಿ: ಎಲ್ಲರಿಗೂ ತಿಳಿದ ಹಾಗೆ ಸಮಾಜದ ಎಲ್ಲರೂ ಮಾದಕ ವಸ್ತುಗಳನ್ನು ಬಳಸುವುದಿಲ್ಲ. ಇದು ಕೆವಲ ಒಂದು ನೆಪ ಎಂದು ಹೇಳಬಹುದು.
  16. ತಪ್ಪು: ಹೆಣ್ಣುಮಕ್ಕಳು ಮಾದಕ ವಸ್ತುಗಳ ಚಟಕ್ಕೊಳಗಾಗುವುದಿಲ್ಲ. „ಸರಿ: ಯಾವುದೇ ಲಿಂಗಭೇದವಿಲ್ಲದೇ ಎಲ್ಲರೂ ಚಟಕ್ಕೊಳಗಾಗುತ್ತಾರೆ.
  17. ತಪ್ಪು: ಬಿಯರ್‌ಎನ್ನುವುದು ಹಾರ್ಡ್‌ ಲಿಕ್ಕರ್‌ ಅಲ್ಲ, ಹಾಗಾಗಿ ಅದನ್ನು ಸುರಕ್ಷಿತವಾಗಿ ದಿನಾಲೂ ಬಳಸಬಹುದು. „ಸರಿ: ಬಿಯರ್‌ ಕೂಡ ಮದ್ಯವಾಗಿದ್ದು, ಇದರಲ್ಲಿ ಇತರ ಮದ್ಯಗಳಿಗಿಂತ ಕಡಿಮೆ ಪ್ರಮಾಣದಲ್ಲಿ ಮದ್ಯಸಾರವಿರುತ್ತದೆ. ಹಾಗಾಗಿ ಇದೂ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹಾನಿಯುಂಟುಮಾಡುತ್ತದೆ.
  18. ತಪ್ಪು: ಮಾದಕ ವಸ್ತುಗಳ ಸೇವನೆಯಿಂದ ಮೆದುಳಿನ ಚುರುಕುತನ/ ರಚನಾತ್ಮಕ ಕ್ರಿಯೆ ಹೆಚ್ಚಾಗುತ್ತದೆ. „ಸರಿ: ಮಾದಕ ವಸ್ತುಗಳ ಉಪಯೋಗದಿಂದ ಗ್ರಹಣಶಕ್ತಿ, ಆಲೋಚನ ಶಕ್ತಿ, ಯೋಜನಾ ಶಕ್ತಿ ಏರುಪೇರಾಗುತ್ತವೆ, ಇದರಿಂದಾಗಿ ಎಲ್ಲ ಕೆಲಸಗಳು ಅಸ್ತವ್ಯಸ್ತವಾಗಿಬಿಡುತ್ತವೆ.
  19. ತಪ್ಪು: ನಾವು ಸುಸಂಸ್ಕೃತ ಕುಟುಂಬದವರು ಮತ್ತು ತುಂಬಾ ಓದಿದವರು. ಹಾಗಾಗಿ ನಮ್ಮ ಮಕ್ಕಳಿಗೆ ಇವುಗಳ ಬಗ್ಗೆ ಎಲ್ಲ ಗೊತ್ತಿದೆ. ಇದರ ಬಗ್ಗೆ ಮಕ್ಕಳೊಂದಿಗೆ ಮಾತನಾಡುವ ಆವಶ್ಯಕತೆಯಿಲ್ಲ. „ಸರಿ: ಮಾದಕ ವಸ್ತುಗಳ ಉಪಯೋಗದ ತೊಂದರೆ ಸಮಾಜದ ಎಲ್ಲ ಜಾತಿ, ಧರ್ಮ, ಹಣಕಾಸು ವರ್ಗದ ಕುಟುಂಬಗಳಲ್ಲಿ ಕಂಡುಬಂದಿದೆ ಮತ್ತು ಇದರ ಬಗ್ಗೆ ಮಕ್ಕಳಿಗೆ ಮುಂಜಾಗ್ರತೆಯಾಗಿ ಮಾಹಿತಿ ನೀಡುವುದು ಸಹಾಯಕಾರಿಯಾಗಿದೆ.
  20. ತಪ್ಪು: ಮದ್ಯದಂತಹ ಮಾದಕ ವಸ್ತುಗಳು ಚಳಿಗಾಲದಲ್ಲಿ ದೇಹಕ್ಕೆ ಬಿಸಿ ನೀಡುತ್ತವೆ. „ಸರಿ: ಈ ನಂಬಿಕೆಗೆ ವ್ಯತಿರಿಕ್ತವಾಗಿ ಮದ್ಯವು ದೇಹದ ಉಷ್ಣತೆಯನ್ನು ಹೊರಹಾಕುವುದರಿಂದ ಚಳಿಗಾಲದಲ್ಲಿ ಇದರ ಉಪಯೋಗ ಕೆಲವೊಮ್ಮೆ ದೇಹದ ಉಷ್ಣಾಂಶ ಕಡಿಮೆಯಾಗಿ ಗಂಭೀರ ಸಮಸ್ಯೆಗಳುಂಟಾಗಬಹುದು.
  21. ತಪ್ಪು: ಎಲ್ಲ ಮಾದಕ ವಸ್ತುಗಳ ಉಪಯೋಗಕ್ಕೆ ಒಂದೇ ಚಿಕಿತ್ಸೆಯಿರುತ್ತದೆ. „ಸರಿ: ಬೇರೆ-ಬೇರೆ ಮಾದಕ ವಸ್ತುಗಳಿಗೆ ಬೇರೆಬೇರೆ ತರಹದ ಚಿಕಿತ್ಸೆಗಳು ಲಭ್ಯವಿವೆ.

ಇದೇ ರೀತಿ ಇನ್ನೂ ಹಲವಾರು ಆಧಾರರಹಿತ ತಪ್ಪು ಕಲ್ಪನೆಗಳು ಸಮಾಜದಲ್ಲಿ ಗಟ್ಟಿಯಾಗಿ ಬೇರೂರಿವೆ. ಇವುಗಳೆಲ್ಲ ವ್ಯಕ್ತಿಯ ಚಿಕಿತ್ಸೆಗೆ ಅಡ್ಡಗಾಲಾಗಿವೆ. ಹಾಗಾಗಿ ಮಾದಕ ವಸ್ತುಗಳ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳುವುದು ಅತ್ಯಗತ್ಯ. ಪ್ರಚಲಿತವಾಗಿರುವ ಅಪನಂಬಿಕೆಗಳಿಗೆ ಬಲಿಯಾಗಿ ಹಲವಾರು ಜನ ವ್ಯಸನಿಗಳಾಗಿದ್ದಾರೆ ಹಾಗೂ ಹಲವಾರು ಕುಟುಂಬದವರು ಇವರನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗಿಲ್ಲ. ಮನೋರೋಗ ತಜ್ಞರನ್ನು ಕಂಡು ಸೂಕ್ತ ಮಾಹಿತಿಯನ್ನು ಪಡೆದು ಚಿಕಿತ್ಸೆ ಪಡೆಯುವುದು ಅತ್ಯಗತ್ಯ. ಇದನ್ನು ಮರುಕಳಿಸದಂತೆ ಸರಿಯಾದ ಮಾಹಿತಿ ಪಡೆದು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು.

ಮಾದಕ ವಸ್ತುಗಳ ಚಟದ ಚಿಕಿತ್ಸೆಗಾಗಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮನೋರೋಗ ಚಿಕಿತ್ಸಾ ವಿಭಾಗದಲ್ಲಿ ಪ್ರತ್ಯೇಕ ಘಟಕವನ್ನು ಮಾಡಲಾಗಿದೆ. ಪ್ರತೀ ಬುಧುವಾರ ಮತ್ತು ಶನಿವಾರ (ಮೂರನೇ ಶನಿವಾರ ಹೊರತುಪಡಿಸಿ), ಮನೋರೋಗ ಚಿಕಿತ್ಸಾ ವಿಭಾಗದ ಒಪಿಡಿಯಲ್ಲಿ ನುರಿತ ತಜ್ಞ ಮನೋವೈದ್ಯರು ಲಭ್ಯರಿರುತ್ತಾರೆ ಹಾಗೂ ಅಡ್ಮಿಶನ್‌ ಸೌಲಭ್ಯ ಕೂಡ ಇರುತ್ತದೆ.

-ಡಾ| ರವೀಂದ್ರ ಮುನೋಳಿ, ಸಹ ಪ್ರಾಧ್ಯಾಪಕರು, ಮನೋರೋಗ ಚಿಕಿತ್ಸಾ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಸೈಕಿಯಾಟ್ರಿ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)

ಟಾಪ್ ನ್ಯೂಸ್

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ

ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.