Osteoporosis: ನೀವು ಭಾವಿಸಿದ್ದಕ್ಕಿಂತಲೂ ಹೆಚ್ಚು ವ್ಯಾಪಕವಾದುದು!


Team Udayavani, Dec 4, 2023, 8:00 AM IST

9-ostioporosis

ನಮಗೆ ವಯಸ್ಸಾಗುತ್ತಿದ್ದಂತೆ ಎಲುಬುಗಳು ದುರ್ಬಲವಾಗುತ್ತ ಬರುತ್ತವೆ – ಇದನ್ನು ಆಸ್ಟಿಯೊಪೊರೋಸಿಸ್‌ ಎನ್ನುತ್ತಾರೆ. ಅನೇಕರು ಇದನ್ನು ಸಂಧಿಗಳು ನಶಿಸುವ ಅಥವಾ ಹಾನಿಗೀಡಾಗುವ “ಆರ್ಥೈಟಿಸ್‌’ ಎಂದು ತಪ್ಪಾಗಿ ಭಾವಿಸುತ್ತಾರೆ. ಹಾಗೆಯೇ ವಯಸ್ಸಾಗುತ್ತಿದ್ದಂತೆ ಬೆನ್ನುಮೂಳೆ ಮಾತ್ರ ದುರ್ಬಲವಾಗುತ್ತದೆ ಮತ್ತು ಬಾಗುತ್ತದೆ ಎಂಬ ತಪ್ಪು ಕಲ್ಪನೆಯೂ ಇದೆ. ಮೇಲೆ ಹೇಳಲಾದ ತಪ್ಪು ಮಾಹಿತಿಗಳನ್ನು ಸರಿಪಡಿಸುವುದಷ್ಟೇ ಅಲ್ಲದೆ, ಆಸ್ಟಿಯೊಪೊರೋಸಿಸ್‌ (ನಿಶ್ಶಬ್ದ ಕಳ್ಳ) ಬೀರುವ ವಿಶಾಲ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು ಕೂಡ ಈ ಲೇಖನದ ಉದ್ದೇಶವಾಗಿದೆ.

ಯುವಜನರೂ ಆಸ್ಟಿಯೊಪೊರೋಸಿಸ್‌ಗೆ ತುತ್ತಾಗಬಹುದು ಎಂಬುದು ನಿಮಗೆ ಗೊತ್ತೇ?

ಬದುಕಿನ ಬೆಳವಣಿಗೆಯ ವರ್ಷಗಳಲ್ಲಿ ಮೂಳೆಗಳು ಸಾಂದ್ರಗೊಳ್ಳುವುದು ಸಹಜ. ಮೂಳೆ ಸಾಂದ್ರತೆಯು 30-35 ವರ್ಷ ವಯಸ್ಸಿನಲ್ಲಿ ಉಚ್ಛ್ರಾಯ ಸ್ಥಿತಿಗೆ ತಲುಪಿ ಆ ಬಳಿಕದ ವರ್ಷಗಳಲ್ಲಿ ಕ್ರಮೇಣ ಕಡಿಮೆಯಾಗುತ್ತ ಹೋಗುತ್ತದೆ.

ನಗರಗಳಲ್ಲಿ ವಾಸಿಸುವ ನಮ್ಮ ಯುವಜನರಲ್ಲಿ ಶೇ. 50ರಷ್ಟು ಮಂದಿ ಸಾಕಷ್ಟು ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ, ಜತೆಗೆ ಸಂಪೂರ್ಣವಾದ, ಸಮತೋಲಿತ ಆಹಾರ ಸೇವನೆಯನ್ನೂ ಮಾಡುವುದಿಲ್ಲ; ಬದಲಾಗಿ ಆಹಾರ ಸೇವನೆಯ ಹೆಚ್ಚು ಪಾಲು ಜಂಕ್‌ ಆಹಾರವೇ ಆಗಿರುತ್ತದೆ. ಇದರಿಂದಾಗಿ ಅವರಲ್ಲಿ ಮೂಳೆ ಸಾಂದ್ರತೆ ಪೂರ್ಣ ಪ್ರಮಾಣದಲ್ಲಿ ಸಾಧನೆಯಾಗುವುದಿಲ್ಲ. ಮೂಳೆ ಸಾಂದ್ರತೆಯು ಕಡಿಮೆಯಾಗಿದ್ದಾಗ ಯುವ ಜನರು ಸುಲಭವಾಗಿ ಮೂಳೆ ಮುರಿತಕ್ಕೆ ತುತ್ತಾಗಬಹುದಾಗಿದೆ. ಮಹಿಳೆಯರು ಋತುಚಕ್ರಬಂಧವಾದ ಬಳಿಕ ಮೂಳೆ ದೌರ್ಬಲ್ಯಕ್ಕೆ ಒಳಗಾಗುತ್ತಾರೆ.

ಅವರಲ್ಲಿ ಋತುಚಕ್ರ ಸರಿಯಾಗಿ ಆಗುತ್ತಿರುವ ವರೆಗೆ ನಿಯಮಿತವಾದ ಹಾರ್ಮೋನ್‌ ಸ್ರಾವದಿಂದಾಗಿ ಮೂಳೆಗಳ ಸಾಮರ್ಥ್ಯ ಚೆನ್ನಾಗಿರುತ್ತದೆ; ಋತುಚಕ್ರ ಅನಿಯಮಿತಗೊಳ್ಳುವುದು, ಸ್ಥಗಿತಗೊಳ್ಳುವುದು ಹಾಗೂ ಇದಕ್ಕೆ ಸಂಬಂಧಿಸಿದ ಔಷಧಗಳಿಂದಾಗಿ ಮೂಳೆಗಳು ದುರ್ಬಲಗೊಳ್ಳುತ್ತವೆ.

ಹಾಗೆಯೇ ಗರ್ಭಧಾರಣೆ ಮತ್ತು ಶಿಶುವಿಗೆ ಎದೆಹಾಲು ಉಣಿಸುವುದರಿಂದ ತಾಯಿಯ ದೇಹದಲ್ಲಿ ಕ್ಯಾಲ್ಸಿಯಂ ಅಂಶ ಕಡಿಮೆಯಾಗಿ ಮೂಳೆಗಳಿಗೆ ತೊಂದರೆಯಾಗುತ್ತದೆ. ಇದನ್ನು ಸರಿಯಾದ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ, ಕ್ಯಾಲ್ಸಿಯಂ ಪೂರಕ ಆಹಾರಗಳು ಮತ್ತು ಮಕ್ಕಳ ನಡುವೆ ಸರಿಯಾದ ವರ್ಷಗಳ ಅಂತರ ಹೊಂದುವ ಮೂಲಕ ಸರಿಪಡಿಸಿಕೊಳ್ಳಬೇಕಾಗಿರುತ್ತದೆ.

ಬೆನ್ನೆಲುಬಲ್ಲದೆ ಬೇರೆ ಯಾವ ಎಲುಬುಗಳು ಬಾಧಿತವಾಗುತ್ತವೆ?

ಬೆನ್ನೆಲುಬಿನ ನಿಶ್ಶಬ್ದ ಮುರಿತಗಳಿಂದಾಗಿ ಎತ್ತರ ಕಡಿಮೆಯಾಗುವುದು ಮತ್ತು ಮುಂದಕ್ಕೆ ಬಾಗುವುದು ಸಾಮಾನ್ಯ, ಅಂತಿಮವಾಗಿ ವ್ಯಕ್ತಿ ಕುಸಿಯುತ್ತಾನೆ. ಮಧ್ಯ ವಯಸ್ಸಿನ ಮಹಿಳೆಯರಲ್ಲಿ ಚಿಕ್ಕಪುಟ್ಟ ಬೀಳುವಿಕೆಯಲ್ಲಿಯೂ ಮಣಿಕಟ್ಟು ಮುರಿತಕ್ಕೊಳಗಾಗುವುದು ಸಾಮಾನ್ಯವಾಗಿದ್ದರೆ ಅದು ಭವಿಷ್ಯದಲ್ಲಿ ಆಸ್ಟಿಯೊಪೊರೋಸಿಸ್‌ ಉಂಟಾಗುವುದರ ಎಚ್ಚರಿಕೆಯ ಕರೆಘಂಟೆಯಾಗಿರುತ್ತದೆ.

ವಯೋವೃದ್ಧರು ಮನೆಯಲ್ಲಿ ಜಾರಿ ಬಿದ್ದು ಸೊಂಟದ ಮೂಳೆ ಮತ್ತು ತೊಡೆ ಮೂಳೆ ಮುರಿತಕ್ಕೆ ಒಳಗಾದ ಬಳಿಕ ಗುಣ ಹೊಂದುವುದು ನಿಧಾನವಾಗುತ್ತದೆ ಮತ್ತು ಜೀವನದ ಅಂತ್ಯಕ್ಕೆ ಕಾರಣವಾಗುತ್ತದೆ. ಇವೆಲ್ಲವೂ ಆಸ್ಟಿಯೊಪೊರೋಸಿಸ್‌ನ ಪರಿಣಾಮಗಳೇ ಎಂದು ಹೇಳಬಹುದಾಗಿದೆ.

ಮೂಳೆ ಗಡುಸಾಗುವುದು ಅಥವಾ ಆರ್ಥೈಟಿಸ್‌ನಿಂದಾಗಿ ಒಂದು ಭಾಗ ಉರಿಯೂತಕ್ಕೆ ಒಳಗಾಗುವುದು ಯಾ ನಿಶ್ಚಲಗೊಳ್ಳುವುದು ಅಥವಾ ಇಡೀ ಅಸ್ಥಿಪಂಜರವನ್ನು ಆಸ್ಟಿಯೊಪೊರೋಸಿಸ್‌ ಒಳಗೊಳ್ಳಬಹುದಾಗಿದೆ.

ಅಲ್ಲದೆ, ದೀರ್ಘ‌ಕಾಲೀನ ಆಸ್ಟಿಯೊಪೊರೋಸಿಸ್‌ನಿಂದಾಗಿ ಕ್ರೀಡಾ ಗಾಯಗಳು ಗುಣ ಹೊಂದುವುದು ಮತ್ತು ಸಂಧಿ ಬದಲಾವಣೆ ಶಸ್ತ್ರಚಿಕಿತ್ಸೆಗಳು ಮಾಯುವುದು ವಿಳಂಬವಾಗುತ್ತವೆ, ಜತೆಗೆ ಕಸಿ ಮಾಡಲಾದ ಲೋಹ ಭಾಗಗಳು ವಿಫ‌ಲಗೊಳ್ಳಬಹುದಾಗಿದೆ. ಆದ್ದರಿಂದಲೇ ಆಗಾಗ ಸಣ್ಣಪುಟ್ಟ ಮೂಳೆ ಮುರಿತಕ್ಕೆ ಒಳಗಾಗುತ್ತಿದ್ದರೆ ಅದನ್ನು ಎಚ್ಚರಿಕೆಯ ಕರೆಘಂಟೆಯಾಗಿ ಭಾವಿಸಬೇಕು ಮತ್ತು ಭಾರೀ ಮೂಳೆ ಮುರಿತವೊಂದು ಸಂಭವಿಸುವ ಮುನ್ನವೇ ಆಸ್ಟಿಯೊಪೊರೋಸಿಸ್‌ ಗೆ ಚಿಕಿತ್ಸೆಯನ್ನು ಆರಂಭಿಸಬೇಕು.

ಯಾವ ಪರಿಹಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ?

ಯಾವತ್ತೂ ಹೇಳುವ ಹಾಗೆ, ತೊಂದರೆ ಉಂಟಾದ ಮೇಲೆ ಚಿಕಿತ್ಸೆಗಿಂತ ತೊಂದರೆ ಆಗದಂತೆ ತಡೆಗಟ್ಟುವುದೇ ಉತ್ತಮ. ಆದ್ದರಿಂದಲೇ ಸರಿಯಾದ ವ್ಯಾಯಾಮದಲ್ಲಿ ತೊಡಗುವಂತೆ ಮತ್ತು ಉತ್ತಮ ದೇಹಭಂಗಿಯನ್ನು ಕಾಪಾಡಿಕೊಳ್ಳುವಂತೆ ನಾವು ನಮ್ಮ ಯುವ ಜನತೆಗೆ ಶಿಕ್ಷಣ ನೀಡಬೇಕಾಗಿದೆ.

ಜತೆಗೆ ನಮ್ಮ ಮಕ್ಕಳು ಸಾಕಷ್ಟು ಸಕ್ರಿಯವಾಗಿ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡಬೇಕಾಗಿದೆ. ಈ ಎಲುಬು ಕಾಯಿಲೆಯ ತಳಪಾಯ ಹದಿಹರಯದಲ್ಲಿ ನಿರ್ಮಾಣವಾಗುತ್ತದೆ. ಕುಳಿತು ಮಾಡುವ ಉದ್ಯೋಗಗಳಿಂದಾಗಿ ಉಂಟಾಗುವ ಮೂಳೆ-ಸ್ನಾಯು ಬಿಗಿತಗಳಿಗೆ ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಒದಗಿಸಬೇಕು.

ಇದಕ್ಕೆ ಸಹಾಯ ಮಾಡಬಲ್ಲ ಔಷಧಗಳಿವೆ; ಆದರೆ ಮೂಳೆ ಮುರಿತವುಂಟಾದ ಬಳಿಕ ಆಸ್ಟಿಯೊಪೊರೋಸಿಸ್‌ ಇರುವುದು ಪತ್ತೆಯಾದ ಬಳಿಕ ಅದು ಅಂತಿಮ ಆಯ್ಕೆಯಾಗಿರುತ್ತದೆ. ಆಸ್ಟಿಯೊಪೊರೋಸಿಸ್‌ ಗುಣಪಡಿಸಬಹುದಾದ ಇತ್ತೀಚೆಗಿನ ಔಷಧಗಳ ಜತೆಗೆ ತಜ್ಞ ವೈದ್ಯರ ಸಲಹೆ ಪಡೆಯುವುದು ಪ್ರಾಮುಖ್ಯವಾಗಿದೆ. ಹಾಗೆಯೇ ಜಂಕ್‌ ಫ‌ುಡ್‌, ಸಪ್ಲಿಮೆಂಟ್‌ ಔಷಧಗಳ ಮೊರೆ ಹೋಗುವುದರ ಬದಲಾಗಿ ಆರೋಗ್ಯಪೂರ್ಣವಾದ ಸಮತೋಲಿತ ಆಹಾರ ಸೇವನೆಯ ಮಹತ್ವವನ್ನು ಅರಿತು ಪಾಲಿಸಬೇಕು.

ಡಾ| ಯೋಗೀಶ್‌ ಕಾಮತ್‌,

ಕನ್ಸಲ್ಟಂಟ್‌ ಹಿಪ್‌, ನೀ ಆ್ಯಂಡ್‌ ನ್ಪೋರ್ಟ್ಸ್ ಇಂಜುರಿ ಸ್ಪೆಶಲಿಸ್ಟ್‌

ಕೆಎಂಸಿ ಆಸ್ಪತ್ರೆ, ಡಾ| ಅಂಬೇಡ್ಕರ್‌ ಸರ್ಕಲ್‌, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆರ್ಥೋಪೆಡಿಕ್‌ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)

ಟಾಪ್ ನ್ಯೂಸ್

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-health

Monsoon Diseases:ಮಳೆಗಾಲದಲ್ಲಿ ಸಾಮಾನ್ಯ; ಮಾನ್ಸೂನ್‌ ರೋಗಗಳು,ತಡೆಗಟ್ಟುವಿಕೆಗಾಗಿ ಸಲಹೆಗಳು

2-health

Scleroderma: ಸ್ಕ್ಲೆರೋಡರ್ಮಾ ಜತೆಗೆ ಜೀವಿಸುವುದು

6-health

Hemorrhoids: ಮಲದಲ್ಲಿ ರಕ್ತಸ್ರಾವವಾದಾಗಲೆಲ್ಲ ಮೂಲವ್ಯಾಧಿ ಕಾರಣವಲ್ಲ

4-health

Rhinoplasty: ರಿನೊಪ್ಲಾಸ್ಟಿ

9-hearing-screening

Hearing Screening: ಹಿರಿಯ ವಯಸ್ಕರಲ್ಲಿ ಶ್ರವಣ ತಪಾಸಣೆಯ ಅಗತ್ಯ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.