Pimples: ಮುಖದ ತ್ವಚೆಯಲ್ಲಿ ಗುಳಿಗಳು; ವಿವಾಹಪೂರ್ವ ಚರ್ಮ ಚಿಕಿತ್ಸೆ


Team Udayavani, Feb 18, 2024, 11:56 AM IST

5-skin-treatment

ಈಗ ವಿವಾಹಗಳ ಋತು. ವಿವಾಹವಾಗುವ ಯುವತಿಯರು ಮತ್ತು ಯುವಕರು ಚರ್ಮದ ಆರೈಕೆ ಮತ್ತು ಚಿಕಿತ್ಸೆಗಳ ಮೂಲಕ ತಮ್ಮ ಜೀವನದ ಈ ಬಹುದೊಡ್ಡ ದಿನಕ್ಕಾಗಿ ಮುಖವನ್ನು ಹೇಗೆ ಸುಂದರಗೊಳಿಸಿಕೊಳ್ಳಬಹುದು ಎಂದು ಚರ್ಚಿಸುವುದಕ್ಕೆ ಇದು ಸಕಾಲ.

ಚರ್ಮದ ಬಣ್ಣ ಬದಲಾವಣೆ, ಶುಷ್ಕ ಮತ್ತು ಪೇಲವ ಚರ್ಮ, ಜಿಡ್ಡಾದ ಚರ್ಮ, ಚರ್ಮದ ಮೇಲೆ ಕೆಂಪು ದದ್ದುಗಳು, ಗುಳಿಗಳು – ಹೀಗೆ ನವವಧುಗಳಿಗೆ ತಮ್ಮ ತ್ವಚೆಯ ಬಗ್ಗೆ ಹಲವಾರು ಪ್ರಶ್ನೆಗಳು, ಚಿಂತೆಗಳು ಇರಬಹುದು.

ವಿವಾಹಕ್ಕೆ ಮುನ್ನ ನಡೆಸುವ ಯಾವುದೇ ಚರ್ಮದ ಆರೈಕೆಯ ಚಿಕಿತ್ಸೆಗಳು ವಿವಾಹಕ್ಕಿಂತ ಮೂರರಿಂದ ಆರು ತಿಂಗಳು ಮುಂಚಿತವಾಗಿ ನಡೆಸಬೇಕು ಎನ್ನುವುದನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಯಾವುದೇ ಅಡ್ಡ ಪರಿಣಾಮಗಳನ್ನು ತಡೆಯುವುದಕ್ಕಾಗಿ ಮದುವೆಯ ದಿನಕ್ಕಿಂತ ಕೆಲವೇ ದಿನಗಳಿಗೆ ಮುನ್ನ ಚರ್ಮದ ಯಾವುದೇ ಆರೈಕೆ ಚಿಕಿತ್ಸೆಗಳನ್ನು ಮಾಡಿಸಿಕೊಳ್ಳಬಾರದು.

ಮುಖದ ಚರ್ಮದಲ್ಲಿ ಗುಳಿಗಳು ವಿಚಾರಕ್ಕೆ ಬಂದರೆ, ಇವು ಚರ್ಮದ ಮೇಲ್ಮೆ„ಯಲ್ಲಿ ಕಂಡುಬರುವ ಎದ್ದುಕಾಣುವ ರಚನೆಗಳು. ಪೈಲೊಸೆಬೇಶಿಯಸ್‌ ಫಾಲಿಕಲ್‌ಗ‌ಳು ದೊಡ್ಡದಾಗಿ ತೆರೆದುಕೊಂಡಿರುವುದರಿಂದ ಈ ಗುಳಿಗಳು ಉಂಟಾಗುತ್ತಿದ್ದು, ಮುಖದ ಮುಖದ ತ್ವಚೆಯಲ್ಲಿ ಗುಳಿಗಳು ಸೌಂದರ್ಯಕ್ಕೆ ಕುಂದು ತರುತ್ತವೆ.

ಮುಖದ ಚರ್ಮದಲ್ಲಿ ಗುಳಿಗಳು ಉಂಟಾಗುವುದಕ್ಕೆ ಕಾರಣಗಳು ಆಂತರಿಕವಾಗಿರಬಹುದು ಅಥವಾ ಬಾಹ್ಯ ಕಾರಣಗಳಿರಬಹುದು. ಆಂತರಿಕ ಕಾರಣಗಳಲ್ಲಿ ಲಿಂಗ, ವಂಶವಾಹಿ ಹಿನ್ನೆಲೆ, ವಯಸ್ಸು, ಲೈಂಗಿಕ ಹಾರ್ಮೋನ್‌ಗಳು, ಪದೇಪದೆ ದದ್ದುಗಳು ಉಂಟಾಗಿರುವುದು, ಅತಿಯಾದ ಸೆಬಮ್‌ ಸ್ರಾವ ಸೇರಿವೆ. ಬಾಹ್ಯ ಕಾರಣಗಳಲ್ಲಿ ಸೂರ್ಯನ ಬಿಸಿಲಿಗೆ ದೀರ್ಘ‌ ಕಾಲ ಒಡ್ಡಿಕೊಂಡಿರುವುದು, ಸೌಂದರ್ಯ ವರ್ಧಕಗಳ ಅಸಮರ್ಪಕ ಬಳಕೆ ಮತ್ತು ಕಳಪೆ ಮುಖ ತೊಳೆಯುವ ಅಭ್ಯಾಸ ಸೇರಿವೆ.

ಮುಖದಲ್ಲಿ ಗುಳಿಗಳು ಉಂಟಾಗುವುದಕ್ಕೆ ಮುಖ್ಯ ಮೂರು ರೋಗಶಾಸ್ತ್ರೀಯ ಕಾರಣಗಳು ಎಂದರೆ ಅತಿಯಾದ ಸೆಬಮ್‌ (ಚರ್ಮದ ಅಡಿಭಾಗದಲ್ಲಿ ಇರುವ ಸೆಬೇಶಿಯಸ್‌ ಗ್ರಂಥಿಗಳಿಂತ ಉತ್ಪಾದನಯಾಗುವ ಅಂಟಾದ ಜಿಡ್ಡಿನಂತಹ ದ್ರವ) ಸ್ರಾವ, ಚರ್ಮರಂಧ್ರಗಳ ಸುತ್ತ ನಮನೀಯತೆ ಕಡಿಮೆಯಾಗಿರುವುದು ಹಾಗೂ ದಪ್ಪನೆಯ ಕೂದಲಿನ ಸಹಿತ ರೋಮರಂಧ್ರಗಳ ಸಂಖ್ಯೆ ಹೆಚ್ಚಿರುವುದು.

ಮುಖದಲ್ಲಿ ಉಂಟಾಗುವ ಗುಳಿಗಳ ನಿರ್ವಹಣೆಯಲ್ಲಿ ಅನೇಕ ಬಗೆಯ ಸಾಮಗ್ರಿಗಳು ಮತ್ತು ಕ್ರಿಯೆಗಳನ್ನು ಪ್ರಯೋಗ ಮಾಡಿ ನೋಡಲಾಗಿದ್ದು, ಫ‌ಲಿತಾಂಶಗಳು ಬೇರೆ ಬೇರೆ ಆಗಿವೆ. ಪ್ರತೀ ರೋಗಿಯಲ್ಲೂ ಇದಕ್ಕೆ ಕಾರಣಗಳು ವಿಭಿನ್ನವಾಗಿರುವ ಹಿನ್ನೆಲೆಯಲ್ಲಿ ನಿರ್ವಹಣೆ ಮತ್ತು ಚಿಕಿತ್ಸೆಯೂ ರೋಗಿನಿರ್ದಿಷ್ಟವಾಗಿರಬೇಕಾಗುತ್ತದೆ.

ಮುಖದ ಗುಳಿಗಳಿಗೆ ಚಿಕಿತ್ಸೆಯ ವಿಚಾರಕ್ಕೆ ಬಂದರೆ, ರೆಟನಾಯ್ಡಗಳು ಮೊದಲ ಆದ್ಯತೆಯಲ್ಲಿವೆ. ಮುಖದ ಗುಳಿಯ ತೀವ್ರತೆಯನ್ನು ಆಧರಿಸಿ ಇದನ್ನು ಮುಖದ ಮೇಲೆ ಹಚ್ಚುವಂತೆ ಅಥವಾ ಬಾಯಿಯ ಮೂಲಕ ತೆಗೆದುಕೊಳ್ಳುವ ಔಷಧವಾಗಿ ಪ್ರಯೋಗಿಸಬಹುದು. ಇದು ಚರ್ಮದ ಮೇಲೆ ಎಣ್ಣೆಜಿಡ್ಡು ಸ್ರಾವಯಾಗುವ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಗುಳಿಗಳು ಕಡಿಮೆಯಾಗಲು ಸಹಾಯ ಮಾಡುತ್ತದೆ. ಇದು ಎಕ್ಸ್‌ ವರ್ಗದ ಔಷಧ ಆಗಿದ್ದು, ಗರ್ಭಧಾರಣೆಗೆ ಪ್ರಯತ್ನಿಸುತ್ತಿರುವವರು ಇದನ್ನು ಉಪಯೋಗಿಸಬಾರದು.

ಮುಖದ ಮೇಲೆ ಹಚ್ಚುವ ಔಷಧಗಳಲ್ಲಿ ಶೇ. 2 ನಿಯಾಸಿನಮೈಡ್‌ ಮತ್ತು ಎಲ್‌ ಕಾರ್ನಿಟೈನ್‌ ಸೇರಿವೆ. ಸಾಲಿಸೈಕ್ಲಿಕ್‌ ಆಮ್ಲದಂತಹ ಬೇಟಾ ಹೈಡ್ರಾಕ್ಸಿ ಆಮ್ಲ ಹಾಗೂ ಗ್ಲೈಕಾಲಿಕ್‌ ಆಮ್ಲ, ಲ್ಯಾಕ್ಟಿಕ್‌ ಆಮ್ಲ ಮತ್ತು ಮಾಂಡೆಲಿಕ್‌ ಆಮ್ಲದಂತಹ ಆಲ್ಫಾ ಹೈಡ್ರಾಕ್ಸಿ ಆಮ್ಲಗಳನ್ನು ಉಪಯೋಗಿಸಿ ಕೆಮಿಕಲ್‌ ಎಕ್ಸ್‌ಫಾಲಿಯೇಶನ್‌ ಕೂಡ ಮುಖದ ತ್ವಚೆಯ ಗುಳಿಗಳನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಮೇಲೆ ಹೇಳಲಾಗಿರುವ ಮುಖದ ಚರ್ಮದ ಮೇಲ್ಮೈಗೆ ನೀಡಲಾಗುವ ಚಿಕಿತ್ಸೆಗಳ ಜತೆಗೆ, ಸರ್ಫಕ್ಟಂಟ್‌ಗಳ ಸರಳ ದ್ರಾವಣದ ಎಣ್ಣೆಜಿಡ್ಡು ನಿವಾರಕಗಳು, ನೋ ಆಯಿಲ್‌ಗ‌ಳು, ವ್ಯಾಕ್ಸ್‌ಗಳು ಅಥವಾ ಫ್ಯಾಟಿ ಏಜೆಂಟ್‌ಗಳನ್ನು ಕೂಡ ಉಪಯೋಗಿಸಬಹುದಾಗಿದೆ. ನಾನ್‌-ಒಕ್ಲೂಸಿವ್‌, ನಾನ್‌ ಕಾಮೆಡಾನಿಕ್‌ ಮತ್ತು ಎಣ್ಣೆರಹಿತ ಸಾಮಗ್ರಿಗಳಿರುವ ಮಾಯಿಶ್ಚರೈಸರ್‌ ಮತ್ತು ಸನ್‌ಸ್ಕ್ರೀನ್‌ಗಳನ್ನು ಉಪಯೋಗಿಸಬೇಕು.

ಮೈಕ್ರೊ ನೀಡ್ಲಿಂಗ್‌ ರೇಡಿಯೋ ಫ್ರೀಕ್ವೆನ್ಸಿ, ಫಾಕ್ಶನಲ್‌ ಕಾರ್ಬನ್‌ ಡೈಆಕ್ಸೈಡ್‌ ಲೇಸರ್, ಮೈಕ್ರೊ ನೀಡ್ಲಿಂಗ್‌ ವಿದ್‌ ಡರ್ಮಾಪೆನ್‌, ಕಾರ್ಬನ್‌ ಪೀಲ್‌ ಮತ್ತು ಕ್ಯು ಸ್ವಿಚ್ಡ್ ವೈಎಜಿ ಲೇಸರ್‌ ಉಪಯೋಗಿಸಿ ಗೋಲ್ಡ್‌ ಟೋನಿಂಗ್‌ನಂತಹ ಲೈಟ್ಸ್‌ ಮತ್ತು ಲೇಸರ್‌ ಚಿಕಿತ್ಸೆಗಳು ಕೂಡ ಬೇರೆ ಬೇರೆ ರೀತಿಯ ಫ‌ಲಿತಾಂಶಗಳೊಂದಿಗೆ ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ. ‌ಪ್ಲೇಟ್‌ಲೆಟ್‌ ರಿಚ್‌ ಪ್ಲಾಸ್ಮಾ ಥೆರಪಿ, ಪೆಪ್ಟೆ„ಡ್‌ಗಳು ಮತ್ತು ಸ್ಕಿನ್‌ ಬೂಸ್ಟರ್‌ಗಳಂತಹ ಒಳರೋಗಿ ಚಿಕಿತ್ಸೆಗಳು ಕೂಡ ಪ್ರಯೋಜನಕಾರಿಯಾಗಿವೆ.

ಇಂಟ್ರಾಡರ್ಮಲ್‌ ಬೊಟುಲಿನಮ್‌ ಟಾಕ್ಸಿನ್‌, ಇಂಟೆನ್ಸ್‌ ಪಲ್ಸ್‌ ಲೈಟ್‌, ಫೊಟೊಡೈನಾಮಿಕ್‌ ಥೆರಪಿಗಳು, 1440 ಎನ್‌ಎಂ ಡಯೋಡ್‌ ಲೇಸರ್‌ಗಳು ಮತ್ತು ನಾನ್‌ಅಬ್ಲೇಟಿವ್‌ ರೇಡಿಯೊ ಫ್ರೀಕ್ವೆನ್ಸಿ-ಇವು ಚಿಕಿತ್ಸೆಯ ಇತರ ವಿಧಾನಗಳಲ್ಲಿ ಸೇರಿವೆ. ಮುಖದಲ್ಲಿ ದಪ್ಪನೆಯ ಕೂದಲುಗಳಿರುವುದರಿಂದಾಗಿ ಗುಳಿಗಳು ಉಂಟಾಗಿದ್ದರೆ ಲೇಸರ್‌ ಹೇರ್‌ ರಿಡಕ್ಷನ್‌ ವಿಧಾನವನ್ನು ಉಪಯೋಗಿಸುವುದು ಉತ್ತಮ.

ಹೆಚ್ಚು ಗ್ಲೈಸೇಮಿಕ್‌ ಇಂಡೆಕ್ಸ್‌ ಇರುವ ಆಹಾರ ಸೇವನೆಯಿಂದ ಸೆಬಮ್‌ ಸ್ರಾವ ಹೆಚ್ಚುವುದರಿಂದ ಆಹಾರ ಶೈಲಿಯಲ್ಲಿ ಬದಲಾವಣೆಯನ್ನು ಕೂಡ ಪ್ರಯೋಜನಕಾರಿಯಾದ ನಿರ್ವಹಣೆ ವಿಧಾನವಾಗಿ ಅನುಸರಿಸಬಹುದು.

ಡಾ| ಕಿರಣ್‌,

ಸೀನಿಯರ್‌ ರೆಸಿಡೆಂಟ್‌,

ಡರ್ಮಟಾಲಜಿ ವಿಭಾಗ,

ಕೆಎಂಸಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಡರ್ಮಟಾಲಜಿ, ವೆನರಾಲಜಿ ಮತ್ತು ಲೆಪ್ರಸಿ ವಿಭಾಗ, ಮಂಗಳೂರು)

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.