ಉಗ್ಗುವಿಕೆ: ಬೇಡ ಜಿಗುಪ್ಸೆ, ಪಡೆಯಿರಿ ಚಿಕಿತ್ಸೆ


Team Udayavani, Dec 4, 2022, 5:25 AM IST

ಉಗ್ಗುವಿಕೆ: ಬೇಡ ಜಿಗುಪ್ಸೆ, ಪಡೆಯಿರಿ ಚಿಕಿತ್ಸೆ

ಉಗ್ಗುವಿಕೆಯು ಶಬ್ದಗಳು ಉಚ್ಛಾರಾಂಶಗಳು ಅಥವಾ ಪದಗಳ ಪುನರಾವರ್ತನೆಯನ್ನು ಒಳಗೊಂಡಂತಹ ಮಾತಿನ ತೊಂದರೆಯಾಗಿದೆ. ಸಾಮಾನ್ಯವಾಗಿ ಸುಗಮವಾದ ನಿರರ್ಗಳ ಮಾತಿನ ಪ್ರಕ್ರಿಯೆಯಲ್ಲಿ ತಡೆ ಉಂಟಾಗುವುದನ್ನು ಉಗ್ಗುವಿಕೆ ಎನ್ನಬಹುದು. ಲೇಖಕ ವ್ಯಾನ್‌ ರೈಪರ್‌ ಅವರ ಪ್ರಕಾರ, “ಮಾತಿನ ಪ್ರಕ್ರಿಯೆಯಲ್ಲಿ ಯಾಂತ್ರಿಕ ಅಡೆತಡೆಗಳು ಉಂಟಾಗಿ ಸುಗಮವಾಗಿ ಹೊರಬರುವಂತಹ ಮಾತಿಗೆ ಅಡಚಣೆ ಉಂಟಾದಾಗ ಉಗ್ಗುವಿಕೆ ಸಂಭವಿಸುತ್ತದೆ’. ಇದೊಂದು ಸಂಪೂರ್ಣವಾದ ಮಾತಿನ ತೊಂದರೆ ಆಗಿದೆ. ಭಾಷಾ ಸಾಮರ್ಥ್ಯದ ಮೇಲೆ ಈ ತೊಂದರೆಯು ಯಾವುದೇ ರೀತಿಯ ಪ್ರಭಾವವನ್ನು ಬೀರುವುದಿಲ್ಲ.

ಉಗ್ಗುವಿಕೆಯ ಗುಣಲಕ್ಷಣಗಳು
ಉಗ್ಗುವಿಕೆಯ ಆರಂಭದ ಹಂತದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ 3 ಲಕ್ಷಣಗಳು
1. ಪುನರುತ್ಛರಿಸುವಿಕೆ
ಪದಗಳ ಪ್ರಾರಂಭದ ಅಕ್ಷರವನ್ನು 3-4 ಬಾರಿ ಉತ್ಛರಿಸುವುದು.
ಉದಾಹರಣೆ: ಕ ಕ ಕ ಕಪ್ಪು

2. ಅಕ್ಷರಗಳನ್ನು ಸುದೀರ್ಘ‌ವಾಗಿ ಉತ್ಛರಿಸುವುದು
ಕೆಲವು ಶಬ್ದಗಳನ್ನು ಅಥವಾ ಉಚ್ಛಾರಾಂಶಗಳನ್ನು ಎಳೆದು ಮಾತನಾಡುವುದು
ಉದಾಹರಣೆ: ಸೂ…………ಪ್‌

3. ಸ್ತಬ್ಧತೆ

ಮಾತಿನ ಪ್ರಕ್ರಿಯೆಗೆ ಅಗತ್ಯವಿರುವ ಗಾಳಿಯ ಸಂಚಾರ ಕುಂಠಿತವಾಗಿ ಸರಾಗವಾಗಿ

ಕಾರಣಗಳು
ಈ ವಿಷಯದ ಕುರಿತು ಸಾಕಷ್ಟು ಸಂಶೋಧನೆಗಳು ನಡೆದಿದ್ದರೂ ನಡೆಯುತ್ತಿದ್ದರೂ ನಿಖರವಾಗಿ ಇಂಥದ್ದೇ ಕಾರಣದಿಂದ ಉಗ್ಗುವಿಕೆ ಬರಬಹುದು ಎಂದು ತೀರ್ಮಾನಿಸುವುದು ಕಷ್ಟಸಾಧ್ಯ. ವೈಜ್ಞಾನಿಕವಾಗಿ ನೋಡುವುದಾದರೆ ಹಲವಾರು ಕಾರಣಗಳಿಂದ ಉಗ್ಗುವಿಕೆ ಉಂಟಾಬಹುದು.

ಬಹುಕ್ರಿಯಾತ್ಮಕ ಆನುವಂಶೀಯತೆ
ಅಂದರೆ ವಂಶಪಾರಂಪರ್ಯವಾಗಿ ಬಂದಿರುವಂತಹ ಕಾರಣಗಳು. ವಂಶವಾಹಿಗಳ ಮೂಲಕ ಕುಟುಂಬದಲ್ಲಿ ಬೇರೆ ಯಾರಿಗೋ ಉಗ್ಗುವಿಕೆ ಇದ್ದರೆ ಅದು ಕೂಡ ಒಂದು ಕಾರಣವಾಗಬಲ್ಲುದು.

ವಾತಾವರಣದ ಅಂಶಗಳು
ಟಿವಿಯಲ್ಲಿ ನೋಡಿ ಅಥವಾ ಯಾರನ್ನೋ ಅನುಕರಿಸಲೆಂದು ಮೋಜಿಗಾಗಿ ಆರಂಭಿಸಿ ಮತ್ತೆ ಅದೇ ಹವ್ಯಾಸವಾಗಬಹುದು. ಮನೆಯಲ್ಲಿ ಅಣ್ಣ /ತಮ್ಮನನ್ನು ಅನುಕರಿಸಲು ಹೊರಟು ಅದುವೇ ರೂಢಿಯಾಗಬಹುದು. ಮನೆಯ ವಾತಾವರಣ, ಬೇರೆಯವರೊಂದಿಗೆ ನಡೆದುಕೊಳ್ಳುವ ರೀತಿಯಲ್ಲಿ ವ್ಯತ್ಯಾಸವಾದರೂ ಕೂಡ ಉಗ್ಗುವಿಕೆ ಬರಬಹುದು.

ಅಂತಾರಾಷ್ಟ್ರೀಯ ಉಗ್ಗುವಿಕೆ ಜಾಗೃತಿ ಮಾಸ ಅಕ್ಟೋಬರ್‌
ಕನ್ನಡದಲ್ಲಿ ಈ ತೊಂದರೆಯನ್ನು ಉಗ್ಗುವಿಕೆ ಅಥವಾ ತೊದಲುವಿಕೆಯೆಂದು ಕರೆಯುತ್ತಾರೆ. ಉಗ್ಗುವಿಕೆಗೆ ತೊದಲುವಿಕೆ ಎಂಬ ಪದವನ್ನು ಕೂಡ ಪರ್ಯಾಯವಾಗಿ ಬಳಸಲಾಗುತ್ತದೆ. ಆದರೆ ವಿವರಣೆಯ ಮೂಲಕ ನೋಡುವುದಾದರೆ ತೊದಲುವಿಕೆ ಎಂದರೆ ಉತ್ಛರಣೆಯ ದೋಷ; ಉಗ್ಗುವಿಕೆ ಎಂದರೆ ಸರಾಗವಾದ ಮಾತಿನ ಪ್ರಕ್ರಿಯೆಯಲ್ಲಿ ಉಂಟಾಗುವ ಅಡಚಣೆಯಾಗಿದೆ. ಆಂಗ್ಲ ಭಾಷೆಯಲ್ಲಿ “ಸ್ಟಟರಿಂಗ್‌’ ಅಥವಾ “ಸ್ಟಾಮರಿಂಗ್‌’ ಎಂದು ಕರೆಯುತ್ತಾರೆ.

ಪ್ರತೀ ವರ್ಷ ಅಕ್ಟೋಬರ್‌ 22ರಂದು ಅಂತಾರಾಷ್ಟ್ರೀಯ ಉಗ್ಗುವಿಕೆ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. 1998ನೇ ಇಸವಿಯಲ್ಲಿ ಇಂಗ್ಲೆಂಡ್‌ ಮತ್ತು ಐರ್ಲಂಡ್‌ನ‌ಲ್ಲಿ ಪ್ರಪ್ರಥಮವಾಗಿ ಈ ದಿನವನ್ನು ಉಗ್ಗುವಿಕೆ ಜಾಗೃತಿ ದಿನವನ್ನಾಗಿ ಆಚರಿಸಲಾಯಿತು. ಈ ಕಾರ್ಯಕ್ರಮವು ಜನಸಾಮಾನ್ಯರಲ್ಲಿ ಉಗ್ಗುವಿಕೆಯ ಕುರಿತು ಜಾಗೃತಿಯನ್ನು ಮೂಡಿಸುವಂತಹ ಉದ್ದೇಶವನ್ನು ಹೊಂದಿದೆ. ಮಕ್ಕಳಲ್ಲಿ ಅಥವಾ ವಯಸ್ಕರಲ್ಲಿ ಉಗ್ಗುವಿಕೆಯ ತೊಂದರೆ ಇದ್ದರೆ ಅದನ್ನು ಆರಂಭದ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆಯನ್ನು ನೀಡುವ ಗುರಿಯನ್ನು ಈ ಕಾರ್ಯಕ್ರಮವು ಹೊಂದಿದೆ.

– ಡಾ| ರಾಕೇಶ್‌ ಚೌಕಳ್ಳಿ ವೀರಭದ್ರಪ್ಪ, ಸಹ ಪ್ರಾಧ್ಯಾಪಕರು
– ದೀಪಿಕಾ ಕೆ. ಕ್ಲಿನಿಕಲ್‌ ಸೂಪರ್‌ವೈಸರ್‌ ವಾಕ್‌ ಶ್ರವಣ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ

ಟಾಪ್ ನ್ಯೂಸ್

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

4-cholestral

Cholesterol: ಕೊಲೆಸ್ಟರಾಲ್‌ ತಗ್ಗಿಸುವ ಔಷಧ ಸ್ಟಾಟಿನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.