ಉಗ್ಗುವಿಕೆ: ಬೇಡ ಜಿಗುಪ್ಸೆ, ಪಡೆಯಿರಿ ಚಿಕಿತ್ಸೆ


Team Udayavani, Dec 4, 2022, 5:25 AM IST

ಉಗ್ಗುವಿಕೆ: ಬೇಡ ಜಿಗುಪ್ಸೆ, ಪಡೆಯಿರಿ ಚಿಕಿತ್ಸೆ

ಉಗ್ಗುವಿಕೆಯು ಶಬ್ದಗಳು ಉಚ್ಛಾರಾಂಶಗಳು ಅಥವಾ ಪದಗಳ ಪುನರಾವರ್ತನೆಯನ್ನು ಒಳಗೊಂಡಂತಹ ಮಾತಿನ ತೊಂದರೆಯಾಗಿದೆ. ಸಾಮಾನ್ಯವಾಗಿ ಸುಗಮವಾದ ನಿರರ್ಗಳ ಮಾತಿನ ಪ್ರಕ್ರಿಯೆಯಲ್ಲಿ ತಡೆ ಉಂಟಾಗುವುದನ್ನು ಉಗ್ಗುವಿಕೆ ಎನ್ನಬಹುದು. ಲೇಖಕ ವ್ಯಾನ್‌ ರೈಪರ್‌ ಅವರ ಪ್ರಕಾರ, “ಮಾತಿನ ಪ್ರಕ್ರಿಯೆಯಲ್ಲಿ ಯಾಂತ್ರಿಕ ಅಡೆತಡೆಗಳು ಉಂಟಾಗಿ ಸುಗಮವಾಗಿ ಹೊರಬರುವಂತಹ ಮಾತಿಗೆ ಅಡಚಣೆ ಉಂಟಾದಾಗ ಉಗ್ಗುವಿಕೆ ಸಂಭವಿಸುತ್ತದೆ’. ಇದೊಂದು ಸಂಪೂರ್ಣವಾದ ಮಾತಿನ ತೊಂದರೆ ಆಗಿದೆ. ಭಾಷಾ ಸಾಮರ್ಥ್ಯದ ಮೇಲೆ ಈ ತೊಂದರೆಯು ಯಾವುದೇ ರೀತಿಯ ಪ್ರಭಾವವನ್ನು ಬೀರುವುದಿಲ್ಲ.

ಉಗ್ಗುವಿಕೆಯ ಗುಣಲಕ್ಷಣಗಳು
ಉಗ್ಗುವಿಕೆಯ ಆರಂಭದ ಹಂತದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ 3 ಲಕ್ಷಣಗಳು
1. ಪುನರುತ್ಛರಿಸುವಿಕೆ
ಪದಗಳ ಪ್ರಾರಂಭದ ಅಕ್ಷರವನ್ನು 3-4 ಬಾರಿ ಉತ್ಛರಿಸುವುದು.
ಉದಾಹರಣೆ: ಕ ಕ ಕ ಕಪ್ಪು

2. ಅಕ್ಷರಗಳನ್ನು ಸುದೀರ್ಘ‌ವಾಗಿ ಉತ್ಛರಿಸುವುದು
ಕೆಲವು ಶಬ್ದಗಳನ್ನು ಅಥವಾ ಉಚ್ಛಾರಾಂಶಗಳನ್ನು ಎಳೆದು ಮಾತನಾಡುವುದು
ಉದಾಹರಣೆ: ಸೂ…………ಪ್‌

3. ಸ್ತಬ್ಧತೆ

ಮಾತಿನ ಪ್ರಕ್ರಿಯೆಗೆ ಅಗತ್ಯವಿರುವ ಗಾಳಿಯ ಸಂಚಾರ ಕುಂಠಿತವಾಗಿ ಸರಾಗವಾಗಿ

ಕಾರಣಗಳು
ಈ ವಿಷಯದ ಕುರಿತು ಸಾಕಷ್ಟು ಸಂಶೋಧನೆಗಳು ನಡೆದಿದ್ದರೂ ನಡೆಯುತ್ತಿದ್ದರೂ ನಿಖರವಾಗಿ ಇಂಥದ್ದೇ ಕಾರಣದಿಂದ ಉಗ್ಗುವಿಕೆ ಬರಬಹುದು ಎಂದು ತೀರ್ಮಾನಿಸುವುದು ಕಷ್ಟಸಾಧ್ಯ. ವೈಜ್ಞಾನಿಕವಾಗಿ ನೋಡುವುದಾದರೆ ಹಲವಾರು ಕಾರಣಗಳಿಂದ ಉಗ್ಗುವಿಕೆ ಉಂಟಾಬಹುದು.

ಬಹುಕ್ರಿಯಾತ್ಮಕ ಆನುವಂಶೀಯತೆ
ಅಂದರೆ ವಂಶಪಾರಂಪರ್ಯವಾಗಿ ಬಂದಿರುವಂತಹ ಕಾರಣಗಳು. ವಂಶವಾಹಿಗಳ ಮೂಲಕ ಕುಟುಂಬದಲ್ಲಿ ಬೇರೆ ಯಾರಿಗೋ ಉಗ್ಗುವಿಕೆ ಇದ್ದರೆ ಅದು ಕೂಡ ಒಂದು ಕಾರಣವಾಗಬಲ್ಲುದು.

ವಾತಾವರಣದ ಅಂಶಗಳು
ಟಿವಿಯಲ್ಲಿ ನೋಡಿ ಅಥವಾ ಯಾರನ್ನೋ ಅನುಕರಿಸಲೆಂದು ಮೋಜಿಗಾಗಿ ಆರಂಭಿಸಿ ಮತ್ತೆ ಅದೇ ಹವ್ಯಾಸವಾಗಬಹುದು. ಮನೆಯಲ್ಲಿ ಅಣ್ಣ /ತಮ್ಮನನ್ನು ಅನುಕರಿಸಲು ಹೊರಟು ಅದುವೇ ರೂಢಿಯಾಗಬಹುದು. ಮನೆಯ ವಾತಾವರಣ, ಬೇರೆಯವರೊಂದಿಗೆ ನಡೆದುಕೊಳ್ಳುವ ರೀತಿಯಲ್ಲಿ ವ್ಯತ್ಯಾಸವಾದರೂ ಕೂಡ ಉಗ್ಗುವಿಕೆ ಬರಬಹುದು.

ಅಂತಾರಾಷ್ಟ್ರೀಯ ಉಗ್ಗುವಿಕೆ ಜಾಗೃತಿ ಮಾಸ ಅಕ್ಟೋಬರ್‌
ಕನ್ನಡದಲ್ಲಿ ಈ ತೊಂದರೆಯನ್ನು ಉಗ್ಗುವಿಕೆ ಅಥವಾ ತೊದಲುವಿಕೆಯೆಂದು ಕರೆಯುತ್ತಾರೆ. ಉಗ್ಗುವಿಕೆಗೆ ತೊದಲುವಿಕೆ ಎಂಬ ಪದವನ್ನು ಕೂಡ ಪರ್ಯಾಯವಾಗಿ ಬಳಸಲಾಗುತ್ತದೆ. ಆದರೆ ವಿವರಣೆಯ ಮೂಲಕ ನೋಡುವುದಾದರೆ ತೊದಲುವಿಕೆ ಎಂದರೆ ಉತ್ಛರಣೆಯ ದೋಷ; ಉಗ್ಗುವಿಕೆ ಎಂದರೆ ಸರಾಗವಾದ ಮಾತಿನ ಪ್ರಕ್ರಿಯೆಯಲ್ಲಿ ಉಂಟಾಗುವ ಅಡಚಣೆಯಾಗಿದೆ. ಆಂಗ್ಲ ಭಾಷೆಯಲ್ಲಿ “ಸ್ಟಟರಿಂಗ್‌’ ಅಥವಾ “ಸ್ಟಾಮರಿಂಗ್‌’ ಎಂದು ಕರೆಯುತ್ತಾರೆ.

ಪ್ರತೀ ವರ್ಷ ಅಕ್ಟೋಬರ್‌ 22ರಂದು ಅಂತಾರಾಷ್ಟ್ರೀಯ ಉಗ್ಗುವಿಕೆ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. 1998ನೇ ಇಸವಿಯಲ್ಲಿ ಇಂಗ್ಲೆಂಡ್‌ ಮತ್ತು ಐರ್ಲಂಡ್‌ನ‌ಲ್ಲಿ ಪ್ರಪ್ರಥಮವಾಗಿ ಈ ದಿನವನ್ನು ಉಗ್ಗುವಿಕೆ ಜಾಗೃತಿ ದಿನವನ್ನಾಗಿ ಆಚರಿಸಲಾಯಿತು. ಈ ಕಾರ್ಯಕ್ರಮವು ಜನಸಾಮಾನ್ಯರಲ್ಲಿ ಉಗ್ಗುವಿಕೆಯ ಕುರಿತು ಜಾಗೃತಿಯನ್ನು ಮೂಡಿಸುವಂತಹ ಉದ್ದೇಶವನ್ನು ಹೊಂದಿದೆ. ಮಕ್ಕಳಲ್ಲಿ ಅಥವಾ ವಯಸ್ಕರಲ್ಲಿ ಉಗ್ಗುವಿಕೆಯ ತೊಂದರೆ ಇದ್ದರೆ ಅದನ್ನು ಆರಂಭದ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆಯನ್ನು ನೀಡುವ ಗುರಿಯನ್ನು ಈ ಕಾರ್ಯಕ್ರಮವು ಹೊಂದಿದೆ.

– ಡಾ| ರಾಕೇಶ್‌ ಚೌಕಳ್ಳಿ ವೀರಭದ್ರಪ್ಪ, ಸಹ ಪ್ರಾಧ್ಯಾಪಕರು
– ದೀಪಿಕಾ ಕೆ. ಕ್ಲಿನಿಕಲ್‌ ಸೂಪರ್‌ವೈಸರ್‌ ವಾಕ್‌ ಶ್ರವಣ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ

ಟಾಪ್ ನ್ಯೂಸ್

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-health

Monsoon Diseases:ಮಳೆಗಾಲದಲ್ಲಿ ಸಾಮಾನ್ಯ; ಮಾನ್ಸೂನ್‌ ರೋಗಗಳು,ತಡೆಗಟ್ಟುವಿಕೆಗಾಗಿ ಸಲಹೆಗಳು

2-health

Scleroderma: ಸ್ಕ್ಲೆರೋಡರ್ಮಾ ಜತೆಗೆ ಜೀವಿಸುವುದು

6-health

Hemorrhoids: ಮಲದಲ್ಲಿ ರಕ್ತಸ್ರಾವವಾದಾಗಲೆಲ್ಲ ಮೂಲವ್ಯಾಧಿ ಕಾರಣವಲ್ಲ

4-health

Rhinoplasty: ರಿನೊಪ್ಲಾಸ್ಟಿ

9-hearing-screening

Hearing Screening: ಹಿರಿಯ ವಯಸ್ಕರಲ್ಲಿ ಶ್ರವಣ ತಪಾಸಣೆಯ ಅಗತ್ಯ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.