ಹಿರಿಯರ ಆರೈಕೆ ಇರಲಿ ಎಚ್ಚರ
Team Udayavani, May 19, 2019, 9:31 AM IST
ಮನುಷ್ಯ ಮಗುವಾಗುವುದು ಎರಡೇ ಬಾರಿ ಒಂದು ಬಾಲ್ಯಾವಸ್ಥೆಯಲ್ಲಿ ಮತ್ತೂಂದು ವೃದ್ಧಾವಸ್ಥೆಯಲ್ಲಿ . ನಮ್ಮ ಬಾಲ್ಯದ ಆರಂಭದ ಹಂತಗಳು ಹೇಗಿರುತ್ತದೋ ಅದೇ ರೀತಿಯಲ್ಲಿಯೇ ವೃದ್ಧಾಪ್ಯ ಕೂಡ. ತನ್ನಲ್ಲಿರುವ ಎಲ್ಲ ದೈಹಿಕ ಶಕ್ತಿಗಳು ಹಂತ ಹಂತವಾಗಿ ಕಳೆದು ಶರೀರದ ಜತೆಗೆ ಎಲ್ಲವೂ ಕುಬ್ಜವಾಗತೊಡಗುತ್ತದೆ. ಅದೊಂದು ಸಹಜ ಪ್ರಕ್ರಿಯೆ. ಈ ವೇಳೆ ಹಿರಿಜೀವದ ಆರೈಕ ಅತೀ ಅಗತ್ಯ.
ಆರೈಕೆ ಹೀಗಿರಲಿ
ಆರೋಗ್ಯದ ಕಾಳಜಿ ವಹಿಸಿ
ಒಂದು ಸಣ್ಣ ಗಾಯವಾದರೂ ಸಾಕು ಹಿರಿ ಜೀವದ ಮನಸ್ಸು ಆತಂಕದಿಂದ ಕುಗ್ಗಿ ಹೋಗುತ್ತದೆ. ಹೀಗಾಗಿ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ಮನೆಮಂದಿಯೇ ವಹಿಸಿದರೆ ಅವರಲ್ಲಿರುವ ಆತಂಕವನ್ನು ದೂರ ಮಾಡಬಹುದು.
ಔಷಧಗಳ ಬಗ್ಗೆ ಎಚ್ಚರ
ಹಿರಿಯರುಗೊಂದಲದಿಂದಾಗಿ ತಪ್ಪಾದ ಔಷಧಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಅಲ್ಲದೇ ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳುವುದನ್ನು ಮರೆತುಬಿಡಬಹುದು. ಹೀಗಾಗಿ ಮನೆ ಮಂದಿಯೇ ಇದನ್ನು ನೋಡಿಕೊಂಡರೆ ಉತ್ತಮ.
ಏಕಾಂತದಲ್ಲಿರಲು ಅವಕಾಶ ನೀಡದಿರಿ
ಮನೆಯಲ್ಲಿರುವ ಹಿರಿಯರಿಗಾಗಿ ನಿತ್ಯದ ಬದುಕಿನಲ್ಲಿ ಸ್ವಲ್ಪವಾದರೂ ಸಮಯ ಕೊಡಿ. ಅವರ ಆಸಕ್ತಿಯನ್ನು ಕೇಳಿಕೊಳ್ಳಿ. ಅವರಲ್ಲಿ ಜೀವನೋತ್ಸಾಹ ತುಂಬಲು ಪ್ರಯತ್ನಿಸಿ.
ಆಹಾರದ ಬಗ್ಗೆ ಕಾಳಜಿ ವಹಿಸಿ
ವೃದ್ಧಾಪ್ಯದಲ್ಲಿ ಜೀರ್ಣಕ್ರಿಯೆ ಸಂಬಂಧಿ ಸಮಸ್ಯೆಗಳು ಕಾಡುವುದರಿಂದ ಅವರ ಆಹಾರದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಸುಲಭವಾಗಿ ಜೀರ್ಣವಾಗಬಲ್ಲ, ಅಗಿಯಲು ಸಾಧ್ಯವಾಗುವಂಥ ಆಹಾರವನ್ನೇ ನೀಡಬೇಕು. ಹಣ್ಣು, ತರಕಾರಿ ಹೆಚ್ಚು ಸೇವನೆಗೆ ಆದ್ಯತೆ ಕೊಡಬೇಕು.
ಹಿರಿ ಜೀವಕ್ಕೆ ಮುಖ್ಯವಾಗಿ ಬೇಕಿರುವುದು ಮನೆಮಂದಿಯ ಪ್ರೀತಿ, ಆರೈಕೆ. ಅವರು ತಮ್ಮ ಬದುಕಿನ ಕೊನೆಯ ತನಕ ಸಂತೋಷವಾಗಿ ಕಳೆಯಬೇಕೆಂದು ಬಯಸುತ್ತಾರೆ. ಅದಕ್ಕೆ ಅವಕಾಶ ಕಲ್ಪಿಸಿಕೊಡುವುದು ಮನೆಮಂದಿಯ ಕರ್ತವ್ಯವೂ ಹೌದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು
Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್ ಮೊರೆಹೋಗಿ
World Kidney Day: ಹಿಮೋಡಯಾಲಿಸಿಸ್: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?
Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ
MUST WATCH
ಹೊಸ ಸೇರ್ಪಡೆ
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ
Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ
Bhuvanam gaganam Teaser: ಭುವನಂ ಗಗನಂ ಟೀಸರ್ ಬಂತು
Bharjari Gandu: ಟ್ರೇಲರ್ನಲ್ಲಿ ಭರ್ಜರಿ ಗಂಡು
Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್ನಲ್ಲಿ ಶೂಟಿಂಗ್!