ದೇಹದ ತೂಕ ಇಳಿಸಲು ನೆರವಾಗುವ ಯೋಗ

ದೇಹವನ್ನು ನಿಧಾನವಾಗಿ ಮುಂದಕ್ಕೆ ಕಾಲುಗಳ ಕಡೆಗೆ ಬಗ್ಗಿಸಿ. ಸುಮಾರು 2 ನಿಮಿಷದವರೆಗೆ ಈ ಭಂಗಿಯಲ್ಲಿರಲು ಪ್ರಯತ್ನಿಸಿ.

Team Udayavani, Feb 8, 2021, 12:42 PM IST

ದೇಹದ ತೂಕ ಇಳಿಸಲು ನೆರವಾಗುವ ಯೋಗ

ದೇಹದ ತೂಕ ಹೆಚ್ಚಾಗಿದ್ದರೆ ಕಡಿಮೆ ಮಾಡುವ ಹಂಬಲ, ಕಡಿಮೆ ಇದ್ದರೆ ಕೊಂಚ ಹೆಚ್ಚು ಮಾಡುವ ತವಕ. ಇದು ಇಂದಿನ ಯುವ ಮನಸ್ಸುಗಳ ತೊಳಲಾಟ. ಕೆಲವರು ದೇಹದ ತೂಕ ಕಡಿಮೆ ಇದ್ದರೂ ಪರವಾಗಿಲ್ಲ ಹೆಚ್ಚಾಗಬಾರದು. ಹೆಚ್ಚಾದರೆ ಅದನ್ನು ಇಳಿಸುವುದೇ ಕಷ್ಟ ಎನ್ನುತ್ತಾರೆ. ಕೊಂಚ ಶ್ರಮಪಟ್ಟರೆ ಇದು ಕಷ್ಟವಲ್ಲ. ಯಾಕೆಂದರೆ ದೇಹದ ತೂಕ ಇಳಿಸುವ ಕೆಲವೊಂದು ಯೋಗ ಭಂಗಿಗಳನ್ನು ನಿತ್ಯವೂ ಮಾಡಿದರೆ ಅತೀ ಶೀಘ್ರದಲ್ಲಿ ತೂಕ ಇಳಿಕೆ ಮಾಡಬಹುದು.

ದೇಹದ ತೂಕ ಕಡಿಮೆ ಮಾಡುವಾಗ ಮುಖ್ಯವಾಗಿ ನಾವು ಕರುಳಿನ ಆರೋಗ್ಯದ ಬಗ್ಗೆ ಯೋಚಿಸಬೇಕು. ಯಾಕೆಂದರೆ ಕರುಳು ನಮ್ಮ ರೋಗನಿರೋಧಕ ವ್ಯವಸ್ಥೆಗೆ ಮಾತ್ರವಲ್ಲ ಉತ್ತಮ ಜೀರ್ಣಕಾರಿಗೂ ಸಹಾಯ ಮಾಡುತ್ತದೆ. ಕರುಳಿನ ಅನಾರೋಗ್ಯವು ಮಲಬದ್ಧತೆ, ಆಯಾಸ, ಆಹಾರ ಬೇಡವೆನಿಸುವಂತೆ ಮಾಡುವುದು ಮಾತ್ರವಲ್ಲ ದೇಹದ ತೂಕ ಹೆಚ್ಚಳಕ್ಕೂ ಕಾರಣವಾಗುತ್ತದೆ. ಹೀಗಾಗಿ ದೇಹದ ತೂಕ ಇಳಿಸಬೇಕು ಎಂದುಕೊಂಡಿದ್ದರೆ ಮೊದಲು ಕರುಳಿನ ಆರೋಗ್ಯವನ್ನು ಸಮತೋಲನದಲ್ಲಿರಿಸುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಸುಲಭವಾಗಿ ಜೀರ್ಣವಾಗುವ ಆಹಾರದ ಜತೆಗೆ ಪ್ರೋಬಯಾಟಿಕ್‌
ಅಂಶಗಳಿರುವ ಆಹಾರ ಸೇವನೆ ಬಹುಮುಖ್ಯವಾಗುತ್ತದೆ. ಇದರೊಂದಿಗೆ ಕರುಳಿನ ಆರೋಗ್ಯ ಕಾಪಾಡಲು ಯೋಗದಲ್ಲೂ ದಾರಿಯಿದೆ.

ಅರ್ಧಚಂದ್ರಾಕಾರ ಯೋಗಭಂಗಿ

ಒಂದು ರೀತಿಯಲ್ಲಿ ಇದು ತಿರುಚುವ ಯೋಗ ಭಂಗಿಯಾಗಿದೆ. ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಇದರಿಂದ ಹೊಟ್ಟೆಯ ಮೇಲೆ ಒತ್ತಡ ಹೆಚ್ಚಾಗಿ ಹೊಟ್ಟೆಯ ಕೊಬ್ಬು ಕರಗುವುದು. ಜತೆಗೆ ದೇಹದ ಅಂಗಾಂಗಗಳಿಗೆ ಮಸಾಜ್‌ ದೊರೆಯುವುದು.

ಮಾಡುವ ವಿಧಾನ
ನೆಲದ ಮೇಲೆ ನೇರವಾಗಿ ನಿಂತುಕೊಂಡು ಬಲಗಾಲನ್ನು ಮುಂದೆ ಇರಿಸಿ. ದೇಹವನ್ನು ಕೆಳಕ್ಕೆ ಇಳಿಸಿ. ಮುಂಭಾಗದ ಕಾಲು 90 ಡಿಗ್ರಿ ಕೋನದಲ್ಲಿರಲಿ. ಮೊಣಕಾಲಿನ ಗಂಟು ಮತ್ತು ಹಿಮ್ಮಟಿ ಛಾವಣಿಯ ಕಡೆಗೆ ಎತ್ತುವ ಮೂಲಕ ಎಡಗಾಲನ್ನು ನೇರವಾಗಿಸಿಕೊಳ್ಳಿ.

ಕೈಗಳನ್ನು ಹೃದಯದ ಮಧ್ಯದಲ್ಲಿ ಪ್ರಾರ್ಥನೆ ಭಂಗಿಯಲ್ಲಿರಿಸಿ ತಲೆಯನ್ನು ಬಲಭಾಗಕ್ಕೆ ತಿರುಗಿಸಿ. ಎಡ ಮೊಣಕೈಯನ್ನು ಬಲ ಮೊಣಕಾಲುಗಳಿಗೆ ಕೊಕ್ಕೆಯಂತೆ ಮಾಡಿ ಬಣ ಮೊಣಕೈಯನ್ನು ಆಕಾಶಕ್ಕೆ ವಿಸ್ತರಿಸಿ. ಛಾವಣಿ ನೋಡಿಕೊಂಡು ಬೆನ್ನು ಮೂಳೆ ನೇರವಾಗಿದೆ ಎಂಬುದನ್ನು ಖಚಿತಪಡಿಸಿ. ಸ್ವಲ್ಪ ಹೊತ್ತು ಹೀಗೆ ಇದ್ದು ನಿಧಾನವಾಗಿ ಉಸಿರಾಡುತ್ತಿರಿ.

ಬಿಲ್ಲಿನಂತ ಯೋಗಭಂಗಿ
ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇದರಿಂದ ದೇಹದಲ್ಲಿ ರಕ್ತದ ಹರಿವು ಹೆಚ್ಚಾಗುತ್ತದೆ. ಮಲಬದ್ಧತೆ ನಿವಾರಿಸಿ, ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಮಾಡುವ ವಿಧಾನ ಹೊಟ್ಟೆಯ ಮೇಲೆ ಮಲಗಿ. ಕಾಲುಗಳನ್ನು ಹಿಮ್ಮುಖವಾಗಿ ಮಡಸಿ ಕೈಗಳಿಂದ ಹಿಡಿದುಕೊಳ್ಳಿ.

ದೀರ್ಘ‌ವಾದ ಉಸಿರು ತೆಗೆದುಕೊಂಡು ಎದೆ ಮತ್ತು ಕಾಲುಗಳನ್ನು ನೆಲದಿಂದ ಮೇಲಕ್ಕೆ ಎತ್ತಿ. ಸ್ವಲ್ಪ ಹೊತ್ತು ಹೀಗೆ ಇದ್ದು, ಉಸಿರಾಟದತ್ತ ಗಮನವಿರಿಸಿ. ದೇಹ ಬಿಲ್ಲಿನಂತೆ ಬಿಗಿಯಾಗಿರಬೇಕು.

ಚಿಟ್ಟೆಯಂತ ಯೋಗಭಂಗಿ
ಜೀರ್ಣಕ್ರಿಯೆಯನ್ನು ಸುಧಾರಿಸುವ ಈ ಯೋಗಭಂಗಿಯು ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತದೆ.

ಮಾಡುವ ವಿಧಾನ
ಬೆನ್ನನ್ನು ನೇರವಾಗಿರಿಸಿ ಮೊಣಕಾಲುಗಳನ್ನು ಬಾಗಿಸಿ ನೆಲದ ಮೇಲೆ ಕುಳಿತುಕೊಳ್ಳಬೇಕು. ಬಾಗಿದ ಮೊಣಕಾಲುಗಳನ್ನು ಹೊರಭಾಗಕ್ಕೆ ಸರಿಸಿ ಎರಡೂ
ಕಾಲುಗಳ ಅಡಿಭಾಗವು ಮಧ್ಯೆ ಸಂಧಿಸುವಂತಿರಬೇಕು. ಎರಡೂ ಕಾಲುಗಳ ಪಾದಗಳನ್ನು ಕೈಗಳಿಂದ ಹಿಡಿದುಕೊಳ್ಳಿ.

ದೇಹವನ್ನು ನಿಧಾನವಾಗಿ ಮುಂದಕ್ಕೆ ಕಾಲುಗಳ ಕಡೆಗೆ ಬಗ್ಗಿಸಿ. ಸುಮಾರು 2 ನಿಮಿಷದವರೆಗೆ ಈ ಭಂಗಿಯಲ್ಲಿರಲು ಪ್ರಯತ್ನಿಸಿ. ಉಸಿರಾಟದ
ಮೇಲೆ ಗಮನವಿರಲಿ.

ಟಾಪ್ ನ್ಯೂಸ್

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.