ಕಾಡಾನೆ ಬಾಯಿಗೆ ಪಟಾಕಿ ಇಟ್ಟು ಸ್ಫೋಟಿಸಿದ ಅಮಾನವೀಯ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು ?
Team Udayavani, Jun 4, 2020, 5:29 PM IST
ಮಣಿಪಾಲ: ಆಹಾರವನ್ನು ಅರಸುತ್ತಾ ನಾಡಿಗೆ ಬಂದ ಕಾಡಾನೆಗೆ ಕಿಡಿಗೇಡಿಗಳು ಅನನಾಸಿನಲ್ಲಿ ಪಟಾಕಿ ಇಟ್ಟು ಕೊಟ್ಟಿದ್ದರು. ಏನೂ ಅರಿಯದ ಆನೆ ಅದನ್ನು ಜಗಿದಿದ್ದು, ಪಟಾಕಿ ಸ್ಫೋಟಿಸಿದೆ. ಇದರಿಂದ ಆನೆಯ ಇಡೀ ಬಾಯಿಗೆ ಹಾನಿಯಾಗಿದ್ದು, ನೋವಿನಿಂದ ನರಳಿ ಆ ಬಳಿಕ ಕೊನೆಯುಸಿರೆಳೆದಿದೆ. ಈ ಘಟನೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಉದಯವಾಣಿ ಕೂಡ ಈ ಅಮಾನವೀಯ ಘಟನೆಯ ಬಗ್ಗೆ ಜನರ ಅಭಿಪ್ರಾಯ ಕೇಳಿದ್ದು. ಆಯ್ದ ಅನಿಸಿಕೆಗಳನ್ನು ಇಲ್ಲಿ ಪ್ರಕಟಿಸಲಾಗಿದೆ.
ಬಸವರಾಜ್ ಗೌಡ ಡಿ.ಡಿ: ಸರ್ಕಾರ ಮತ್ತು ಅರಣ್ಯ ಅಧಿಕಾರಿಗಳು ಕಾಡು ಪ್ರಾಣಿಗಳಿಗೆ ಆಹಾರ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಅವುಗಳನ್ನು ಕಾಡಿನಿಂದ ನಾಡಿಗೆ ಬರದಂತೆ ಮಾಡಿ ಅವುಗಳಿಗೆ ಅಲ್ಲೆ ಆಹಾರ ವ್ಯವಸ್ತೆ ಮಾಡಬೇಕು. ಇತ್ತಿಚಿನ ದಿನಗಳಲ್ಲಿ ರೈತರು ಮೇಕೆ, ಕುರಿ, ಸಾಕಾಣಿಕೆ ಮಾಡಿದರೆ ಹುಲಿ –ಚಿರತೆಗಳು ದಾಳಿ ಮಾಡುತ್ತವೆ. ಇದರ ಜೊತೆಗೆ ಜೋತೆ ಬೀದಿ ನಾಯಿಗಳು ತೊಂದರೆ ನೀಡುತ್ತಿವೆ. ಹಳ್ಳಿಗಳಲ್ಲಿ ಪಶುಸಂಗೋಪನೆ ಮಾಡುವುದೇ ಕಷ್ಟಕರ. ಕಬ್ಬು -ಬಾಳೆ ಬೆಳೆದ ರೈತರಿಗೆ ಆನೆಗಳ ಹಾವಳಿ. ರಾಗಿ,ಶೇಂಗಾ, ಮೇಕ್ಕೆ ಜೋಳ ಬೆಳೆದರೆ ಹಂದಿಗಳು ತಿಂದು ಹಾಳು ಮಾಡುತ್ತವೆ. ಹಾಗಾಗಿ ಸರ್ಕಾರ ಕಾಡು ಪ್ರಣಿಗಳಿಗೆ ಕಾಡಿನಲ್ಲೆ ಆಹಾರ ವ್ಯವಸ್ತೆ ಮಾಡುವಂತಹ ಕ್ರಮ ಕೈಗೊಳ್ಳಬೇಕು.
ಸಣ್ಣಮಾರಪ್ಪ. ಚಂಗಾವರ: ಮನುಷ್ಯ ಪ್ರಾಣಿಗಳ ಮೇಲೆ ಮಾತ್ರ ಇಂತಹ ಕ್ರೌರ್ಯ ನಡೆಸುತ್ತಿಲ್ಲ. ಪ್ರಕೃತಿ ಮನುಷ್ಯನಿಗೆ ಜೀವಿಸಲು ನೀಡಿರುವ ಪ್ರತಿಯೊಂದು ವಸ್ತುವಿನ ಮೇಲೆಯೂ ಇಂತಹ ದಬ್ಬಾಳಿಕೆ ನಡೆಸುತ್ತಾ ಬಂದಿದ್ದಾನೆ. ಪ್ರಕೃತಿ ಆಗಿಂದ್ದಾಗೆ ಎಚ್ಚರಿಕೆ ನೀಡಿದರು ಅರಿತುಕೊಳ್ಳದೆ ತನ್ನ ಕ್ರೌರ್ಯ ಮುಂದಿವರಿಸುತ್ತಿರುವುದು ಮಾತ್ರ ದುರ್ದೈವ.
ಚಿ. ಮ. ವಿನೋದ್ ಕುಮಾರ್: ಇದು ಮಾನವನಲ್ಲಿರುವ ಮಾನವೀಯ ಗುಣ ಸತ್ತುಹೋಗಿದೆ ಎಂಬುದಕ್ಕೆ ನಿದರ್ಶನ.
ವಿದ್ಯಾಶಂಕರ್: ಭೂಮಿಯ ಮೇಲೆ ಮನುಷ್ಯನಿಗೆ ಬದುಕಲು ಎಷ್ಟು ಹಕ್ಕಿದೆಯೊ ಅಷ್ಟೇ ಹಕ್ಕು, ಪ್ರಾಣಿ, ಪಕ್ಷಿ, ಕ್ರಿಮಿ, ಕೀಟ, ಸಸ್ಯಗಳಿಗೂ ಇದೆ. ಇಂಥ ಹೇಯ ಕೃತ್ಯವನ್ನೆಸಗಿದವರಿಗೆ ಕಠಿಣ ಶಿಕ್ಷೆಯೆ ಆಗಬೇಕು. ಇತ್ತೀಚೆಗೆ ಯಾರೋ ಆಹಾರದಲ್ಲಿ ಪಟಾಕಿಯ ಬಾಂಬ್ ಒಂದನ್ನು ಇಟ್ಟು ಹಸುವಿಗೆ ತಿನ್ನಿಸಿ ಆ ಹಸುವಿನ ಬಾಯಿ ಕೂಡ ಛಿದ್ರ ಆಗಿ, ಏನೂ ತಿನ್ನಲಾಗದೆ ಹಸು ಅಸುನೀಗಿದೆ. ಇದಕ್ಕೆಲ್ಲಾ ಸರ್ಕಾರ ಪರಿಣಾಮಕರಿ ಕ್ರಮ ಕೈಗೊಳ್ಳಬೇಕು.
ಪುನೀತ್ ರಾಮಾಚಾರಿ: ಈ ಕೃತ್ಯಕ್ಕೆ ಕಾರಣರು ಯಾರೇ ಆದರೂ ಅವರೆಲ್ಲರೂ ಶಿಕ್ಷೆಗೆ ಒಳಪಡಲೇಬೇಕು. ನಾಗರೀಕ ಸಮಾಜ ನಮ್ಮದು ಎಂದು ಹೇಳಲು ನನಗೆ ನಾಚಿಕೆಯಾಗುತ್ತೆ. ಮತ್ತೊಮ್ಮೆ ಈ ರೀತಿಯ ಪ್ರಕರಣ ನಡೆಯಬಾರದು.
ಸುಬ್ಬಲಕ್ಷ್ಮಿ ಬಿ.ವಿ: ತಪ್ಪಿತಸ್ಥರಿಗೆ ಕಠಿಣವಾದ ಶಿಕ್ಷೆ ಕೊಡಬೇಕು. ಸರ್ಕಾರ ಇದನ್ನೊಂದು ಗಂಭೀರ ಪ್ರಕರಣವೆಂದು ಪರಿಗಣಿಸಬೇಕು
ಸುಜಾತ ಮರೋಳಿ: ಇದು ನಿಜವಾಗಿಯೂ ನಾಚಿಕೆಗೇಡಿತನದ ವಿಚಾರ. ಇಂತಹ ಅಮಾನವೀಯ ಕೃತ್ಯಗಳಿಂದಾಗಿಯೇ ನಾವು ಇಂದಿನ ನರಕಸದೃಶ ಪರಿಸ್ಥಿತಿಯನ್ನು ಎದುರಿಸುತ್ತಿರುವುದು. ತಪ್ಪಿತಸ್ಥರಿಗೆ ಸರಿಯಾದ ಕ್ರಮ ಜರುಗಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Mangaluru: ರೋಗಿಗಳಲ್ಲಿ ಭರವಸೆ ತುಂಬುವ ಕೆಲಸವಾಗಲಿ: ರೈ| ರೆ| ಡಾ| ಸಲ್ಡಾನ್ಹಾ
Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್ ಗೆ RLJP ಮುಖಂಡ ಪರಾಸ್ ರಾಜೀನಾಮೆ
ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು
Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ
Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!