ಭಕ್ತಿಗೆ ಅಡ್ಡಿಯಾಗದ ರಕ್ಷಣಾ ಸಚಿವೆ !
Team Udayavani, Mar 28, 2019, 6:05 AM IST
ಉಡುಪಿ: ಮಂಗಳವಾರ ಉಡುಪಿಗೆ ಆಗಮಿಸಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸರಳ ನಡೆಯ ಮೂಲಕ ಗಮನ ಸೆಳೆದರು. ಶ್ರೀಕೃಷ್ಣ ಮಠ ಭೇಟಿಯ ಸಂದರ್ಭದಲ್ಲಿ ಸಾಮಾನ್ಯ ಭಕ್ತನೋರ್ವ ಕನಕನ ಕಿಂಡಿಯಿಂದ ಶ್ರೀಕೃಷ್ಣ ದರ್ಶನ ಪಡೆಯುತ್ತಿದ್ದಾಗ ಅಲ್ಲಿಗೆ ಆಗಮಿಸಿದ ರಕ್ಷಣಾ ಸಚಿವರು ಆತನ ಭಕ್ತಿಗೆ ಅಡ್ಡಿಯಾಗಬಾರದೆಂದು ನಿಮಿಷಗಳ ಕಾಲ ಕಾದು ನಿಂತರು.
ಸಚಿವೆ ನಿರ್ಮಲಾ ಸೀತಾರಾಮ್ ಅವರನ್ನು ವೇದಘೋಷದೊಂದಿಗೆ ಬರಮಾಡಿಕೊಳ್ಳಲಾಗಿತ್ತು. ಆರಂಭದಲ್ಲಿ ಅವರು ಸಂಪ್ರದಾಯದಂತೆ ಕನಕನ ಕಿಂಡಿಯತ್ತ ತೆರಳಿದರು. ಆಗ ಅಲ್ಲೊಬ್ಬ ಭಕ್ತ ಸಚಿವರು ಬಂದಿರುವುದು ಗಮನಕ್ಕೆ ಬಾರದೆ ತನ್ಮಯನಾಗಿ ದೇವರ ದರ್ಶನ ಪಡೆಯುತ್ತಿದ್ದ.
ಪೊಲೀಸರು ಆತನನ್ನು ಬದಿಗೆ ಸರಿಸಲು ಮುಂದಾದಾಗ ಅದನ್ನು ಗಮನಿಸಿದ ಸಚಿವೆ, ಭಕ್ತನಿಗೆ ದರ್ಶನ ಮಾಡುವುದಕ್ಕೆ ಅಡ್ಡಿ ಮಾಡುವುದು ಬೇಡವೆಂದು ಸೂಚಿಸಿ, ಆತ ದರ್ಶನ ಪಡೆಯುವ ವರೆಗೆ ಅಲ್ಲೇ ಕಾದು ನಿಂತರು. ಬಳಿಕ ಅವರು ದೇವರ ದರ್ಶನ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ