ಪುತ್ತೂರು: ಇವರು ವೃತ್ತಿಯಲ್ಲಿ ಫೋಟೋಗ್ರಾಫರ್: ಪ್ರವೃತ್ತಿಯಲ್ಲಿ ಮೂರ್ತಿ ತಯಾರಕ..!
Team Udayavani, Aug 30, 2022, 3:33 PM IST
ಪುತ್ತೂರು: ಕಳೆದ 33 ವರ್ಷಗಳಿಂದ 200 ಕ್ಕೂ ಅಧಿಕ ಮಣ್ಣಿನ ಗಣೇಶ ಮೂರ್ತಿ ತಯಾರಿಸಿರುವ ಪುತ್ತೂರಿನ ಫೋಟೋಗ್ರಾಫರ್ ಶ್ರೀನಿವಾಸ ಪ್ರಭು ಅವರದ್ದು ತೆರೆಮರೆಯ ಪ್ರತಿಭೆ. ಯಾವುದೇ ಪ್ರಚಾರ ಬಯಸದೆ ತನ್ನ ಪಾಡಿಗೆ ತಾನು ಮೂರ್ತಿ ರಚಿಸುವುದು ಪ್ರಭು ಅವರ ವಿಶೇಷತೆ.
ತಾನೇ ಕಲಿತರು..! :
ಮೂಲತಃ ಅಡ್ಯನಡ್ಕದವರಾಗಿರುವ ಪ್ರಭು ಗಣಪತಿ ಮೂರ್ತಿ ತಯಾರಿಕೆಯನ್ನು ಯಾರಿಂದಲೂ ಕಲಿತಿಲ್ಲ. ತಾನೇ ಸ್ವಂತ ಅಭ್ಯಸಿಸಿದರು. ಉಪ್ಪಿನಂಗಡಿಯಲ್ಲಿ ಮೂರ್ತಿ ತಯಾರಿಕೆ ಪ್ರಾರಂಭಿಸಿದರು. ಅದಾದ ಬಳಿಕ ಪುತ್ತೂರಿನಲ್ಲಿ ಈ ಕಾಯಕ ಮುಂದುವರಿಯಿತು. ತನ್ನ ವೃತ್ತಿಯೊಂದಿಗೆ ಗಣೇಶ ಚತುರ್ಥಿ ಸಂದರ್ಭದಲ್ಲಿ ಮೂರ್ತಿ ತಯಾರಿಸುತ್ತಾರೆ. ಬೇಡಿಕೆಗೆ ತಕ್ಕಂತೆ ಪ್ರತಿ ವರ್ಷ 7 ರಿಂದ 9 ಮೂರ್ತಿ ತಯಾರಿಸುತ್ತಾರೆ. ಕಳೆದ ಹಲವು ವರ್ಷಗಳಿಂದ ಬೊಳುವಾರಿನ ಬಾಬುರಾಯರ ಹೊಟೇಲ್ ಹಿಂಭಾಗದ ಕೊಠಡಿಯಲ್ಲಿ ಮೂರ್ತಿ ನಿರ್ಮಿಸಿ ನೀಡುತ್ತಿದ್ದು ಅದಕ್ಕೆ ಬೇಕಾದ ಮಣ್ಣನ್ನು ಬೇರೆ ಕಡೆಗಳಿಂದ ಸಂಗ್ರಹಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ