ಕುಳಾಯಿ ಜಂಕ್ಷನ್ ಹೆದ್ದಾರಿ ಗುಂಡಿಗೆ ಶಾಶ್ವತ ಮುಕ್ತಿ: ಡಾ| ಭರತ್ ಶೆಟ್ಟಿ
ಕುಳಾಯಿ ಜಂಕ್ಷನ್ನ ಕಾಂಕ್ರೀಟ್ ರಸ್ತೆ ಉದ್ಘಾಟನೆ
Team Udayavani, Jan 23, 2020, 5:24 AM IST
ಕುಳಾಯಿ: ರಾಷ್ಟ್ರೀಯ ಹೆದ್ದಾ ರಿಯ ಕುಳಾಯಿ ಜಂಕ್ಷನ್ನಲ್ಲಿ ಹೆದ್ದಾರಿ ರಸ್ತೆ ಅನೇಕ ವರ್ಷಗಳಿಂದ ಹಾಳಾಗಿದ್ದು, ವಾಹನ ಸವಾರರು, ಪ್ರಯಾ ಣಿಕರು ತೊಂದರೆ ಅನುಭವಿಸುವುದರ ಜತೆಗೆ ಹೆದ್ದಾರಿಯ ಸುಗಮ ಸಂಚಾರಕ್ಕೂ ತಡೆಯಾಗುತ್ತಿತ್ತು. ಇದೀಗ ಹೆದ್ದಾರಿ ಇಲಾಖೆಗೆ ಕಾಂಕ್ರೀಟ್ ಕಾಮಗಾರಿ ನಡೆಸಿದ್ದು, ಸ್ಥಳೀಯರ ಬಹು ದಿನದ ಬೇಡಿಕೆ ಈಡೇರಿದಂತಾಗಿದೆ ಎಂದು ಶಾಸಕ ಡಾ|ಭರತ್ ಶೆಟ್ಟಿ ವೈ. ಹೇಳಿದರು.
ಬುಧವಾರ ಕುಳಾಯಿ ಜಂಕ್ಷನ್ನ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೊಡ್ಡ ಹೊಂಡ, ಗುಂಡಿಗಳು ಬಿದ್ದು ವಾಹನಗಳ ಬಿಡಿ ಭಾಗಗಳಿಗೆ ಹಾನಿ ಯಾಗುತ್ತಿದ್ದು, ಈ ಬಗ್ಗೆ ಸ್ಥಳೀಯ ರಿûಾ ಚಾಲಕರು ಸಂಕಷ್ಟ ಅನುಭವಿಸುತ್ತಿದ್ದರು. ಸಂಸದರ ಜತೆ ಚರ್ಚಿಸಿ ಹೆದ್ದಾರಿ ಇಲಾಖೆಗೆ ಕಾಂಕ್ರೀಟ್ ಹಾಕಲು ಸೂಚಿಸಿದ್ದೆ. ಇದೀಗ ರಸ್ತೆ, ಸುಸಜ್ಜಿತ ಮಳೆ ನೀರು ಹರಿಯಲು ಒಳಚರಂಡಿ ಕಾಮಗಾರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಫುಟ್ಪಾತ್ ನಿರ್ಮಿಸಲಾಗುವುದು.ಬೈಕಂಪಾಡಿ ಕೈಗಾರಿಕಾ ತಿರುವು ಜಂಕ್ಷನ್, ಕೂಳೂರು ಹೆದ್ದಾರಿ ಬಳಿ ಕೂಡ ಇದೇ ಮಾದರಿಯಲ್ಲಿ ಅಭಿವೃದ್ಧಿಗೆ ಸೂಚಿಸಲಾಗಿದೆ ಎಂದರು.
ಪಾಲಿಕೆ ಸದಸ್ಯ ವರುಣ್ ಚೌಟ, ಮಂಡಲ ಬಿಜೆಪಿ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು , ಪಾಲಿಕೆ ಸದಸ್ಯೆ ವೇದಾವತಿ, ಬಿಜೆಪಿ ಮುಖಂಡರಾದ ವಿಠಲ ಸಾಲ್ಯಾನ್, ರಮೇಶ್ ಅಳಪೆ, ಯೋಗೀಶ್ ಸನಿಲ್, ಭರತ್ ಶೆಟ್ಟಿ, ಗಂಗಾಧರ ಬಂಜನ್, ಎಂ.ಟಿ. ಸಾಲ್ಯಾನ್, ಸುನಿಲ್ ಕುಳಾಯಿ, ಕೆ.ಪಿ. ಚಂದ್ರಶೇಖರ್, ಜಯರಾಂ ಕುಳಾಯಿ, ಮಂಗಳೂರು ಉತ್ತರ ಸಂಚಾರಿ ಠಾಣೆಯ ಸಿ.ಐ. ಮೋಹನ್ ಕೊಟ್ಟಾರಿ ಮೊದಲಾದವರು ಉಪಸ್ಥಿತರಿದ್ದರು.
ಏಕಮುಖ ಸಂಚಾರ ಪ್ರಸ್ತಾವ
ಕುಳಾಯಿ ಮಾರ್ಗವಾಗಿ ಎಂಆರ್ಪಿಎಲ್, ಎಚ್ಪಿಸಿಎಲ್ ಸಹಿತ ಬೃಹತ್ ಕಂಪೆನಿಗಳಿಗೆ ಭಾರೀ ಗಾತ್ರದ ಟ್ರಕ್ಗಳು, ಟ್ಯಾಂಕರ್ ಓಡಾಡುತ್ತಿದ್ದು, ಅಪಾಯಕಾರಿಯಾಗಿದೆ. ಈ ಪ್ರದೇಶ ಹಲವು ಬಡಾವಣೆಗಳನ್ನು ಹೊಂದಿದ್ದು, ಟ್ರಕ್, ಟ್ಯಾಂಕರ್ಗಳನ್ನು ನಿಷೇ ಧಿಸಬೇಕೆಂಬ ಮನವಿ ಸಾರ್ವಜನಿಕರಿಂದ ಕೇಳಿ ಬಂತು. ಸುರತ್ಕಲ್ ಜಂಕ್ಷನ್ನಲ್ಲಿ ವಾಹನ ಒತ್ತಡ ಅಧಿ ಕವಾಗುವುದರಿಂದ ಕುಳಾಯಿ, ಸುರತ್ಕಲ್ನಲ್ಲಿ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡುವ ಪ್ರಸ್ತಾವ ವ್ಯಕ್ತವಾಯಿತು. ಉತ್ತರ ಸಂಚಾರ ಠಾಣೆಯ ಅ ಧಿಕಾರಿಗಳಿಗೆ ಈ ಬಗ್ಗೆ ಮುಂಜಾಗ್ರತಾ ಕ್ರಮ ಕ್ರಮಗೊಳ್ಳುವಂತೆ ಶಾಸಕ ಡಾ| ಭರತ್ ಶೆಟ್ಟಿ ವೈ. ಅವರು ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ