ತುಂಬೆ ಅಣೆಕಟ್ಟಿನಲ್ಲಿ ಹೂಳೆತ್ತುವಿಕೆಗೆ ಚಾಲನೆ
2.90 ಕೋಟಿ ರೂ. ವೆಚ್ಚ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನೇತೃತ್ವ
Team Udayavani, Jun 30, 2019, 10:01 AM IST
ಬಂಟ್ವಾಳ: ತುಂಬೆ ಅಣೆಕಟ್ಟು ಪ್ರದೇಶದಲ್ಲಿ ನೇತ್ರಾವತಿ ನದಿಯಿಂದ ಹೂಳೆತ್ತುವ ಕಾಮಗಾರಿ ಅಧಿಕೃತ ವಾಗಿ ಆರಂಭವಾಗಿದ್ದು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನೇತೃತ್ವ ದಲ್ಲಿ ಕೆಲಸ ನಡೆದಿದೆ. ಸುಮಾರು 500 ಲೋಡ್ ಮರಳನ್ನು ಈಗಾಗಲೇ ಸಂಗ್ರಹಿಸ ಲಾಗಿದೆ.
ಮೊದಲ ಹಂತದಲ್ಲಿ 2.90 ಕೋಟಿ ರೂ. ವೆಚ್ಚದಲ್ಲಿ ಹೂಳೆತ್ತಲು ಅನುಮತಿ ಲಭಿಸಿದೆ. ಜಿಲ್ಲಾಧಿಕಾರಿಗಳ ವಿಶೇಷ ಅನುದಾನದಲ್ಲಿ ಯೋಜನೆ ರೂಪಿಸ ಲಾಗಿದೆ. ಸಂಗ್ರಹವಾದ ಮರಳನ್ನು ಸರಕಾರಿ, ಖಾಸಗಿ ಕಾಮಗಾರಿಗಳಿಗೆ ಬಳಸಿಕೊಳ್ಳ ಲಾಗುವುದು ಎಂದು ಮೂಲಗಳು ತಿಳಿಸಿವೆ.
ಉಪ ಗುತ್ತಿಗೆ
ದಿಲ್ಲಿಯ ನೆಲ್ಕೊ ಕಂಪೆನಿ ಹೂಳೆತ್ತುವ ಗುತ್ತಿಗೆ ಪಡೆದಿದ್ದು ಉಪಗುತ್ತಿಗೆಯನ್ನು ಮಂಗಳೂರಿನ ಖಾಸಗಿ ವ್ಯಕ್ತಿಗಳು ವಹಿಸಿಕೊಂಡಿದ್ದಾರೆ. ಹೂಳೆತ್ತುವ 25 ಟನ್ ಸಾಮರ್ಥ್ಯದ ಪಂಟೂನ್ ತೇಲುವ ಗೋಲಗಳನ್ನು ಕಳೆದ ತಿಂಗಳಲ್ಲೇ ಸ್ಥಾಪಿಸಿದ್ದು, ಅನುಮತಿಗಾಗಿ ಕಾಯಲಾಗುತ್ತಿತ್ತು. ಪ್ರಸ್ತುತ ಅನುಮತಿ ಲಭಿಸಿದ್ದು, ಕಾಮಗಾರಿ ಆರಂಭಗೊಂಡಿದೆ.
ಯಂತ್ರಗಳ ಚಾಲನೆಗೆ ವಿದ್ಯುತ್ ಸಂಪರ್ಕವನ್ನು ಬಳಸಿಕೊಳ್ಳಲಾಗಿದೆ. 125 ಕೆ.ವಿ. ಅಶ್ವಶಕ್ತಿಯ ಜನರೇಟರನ್ನು ಸ್ಥಳದಲ್ಲಿ ಇರಿಸಿಕೊಂಡಿದ್ದು ಯಾವುದೇ ಸಂದರ್ಭ ವಿದ್ಯುತ್ ನಿಲುಗಡೆ ಆದರೂ ಯಂತ್ರ ಗಳು ಸ್ಥಗಿತವಾಗದಂತೆ ನೋಡಿ ಕೊಳ್ಳಲಾಗಿದೆ. ಡ್ರೆಜ್ಜಿಂಗ್ ಯಂತ್ರವು ಗಂಟೆಗೆ 100 ಎಂ.ಕ್ಯೂ. (ಕ್ಯುಬಿಕ್ ಮೀಟರ್) ಹೂಳನ್ನು ಮೇಲೆತ್ತಿ ಹಾಕುವುದು. ಹೂಳನ್ನು ಸಂಗ್ರಹಿಸು ವುದಕ್ಕಾಗಿ ನಾಲ್ಕು ಎಕರೆಯಷ್ಟು ವಿಶಾಲ ಪ್ರದೇಶವನ್ನು ಮೀಸಲಿಡಲಾಗಿದೆ. ಒಡಿಶಾ ಮತ್ತು ಕೊಚ್ಚಿಯಲ್ಲಿ ಇಂತಹ ಕಾಮಗಾರಿ ನಿರ್ವಹಿಸಿದ ಅನುಭವಿ ಗಳು ಇಲ್ಲಿಯೂ ಕೆಲಸದಲ್ಲಿ ತೊಡಗಿದ್ದಾರೆ.
ಸಿಸಿ ಕೆಮರಾ ಕಾವಲು
ಮರಳು ಸಂಗ್ರಹಿಸಿರುವ ಸ್ಥಳಕ್ಕೆ ಪೂರ್ವಾನುಮತಿ ಇಲ್ಲದೆ ಹೋಗಲು ಸಾಧ್ಯವಾ ಗದಂತೆ ತಡೆಬೇಲಿ ನಿರ್ಮಿಸಲಾಗಿದೆ. ಪ್ರವೇಶ ದ್ವಾರ ಮತ್ತು ಇತರ ಸ್ಥಳಗಳಲ್ಲಿ ಸಿಸಿ ಕೆಮರಾ ಸಹಿತ ಭದ್ರತೆ ಇದ್ದು, ಮರಳನ್ನು ಅಕ್ರಮ ವಾಗಿ ಸಾಗಿಸದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮರಳು ಸಂಗ್ರಹ ಹೇಗೆ?
ಬಿ. ಮೂಡ ಗ್ರಾಮದ ಕುಳತ್ತಬೆಟ್ಟು ಪ್ರದೇಶದಲ್ಲಿ ನದಿಪಾತ್ರದ 100 ಮೀಟರ್ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಯಾಂತ್ರೀಕೃತ ದೋಣಿಯಲ್ಲಿ ಡ್ರೆಜ್ಜಿಂಗ್ ಯಂತ್ರವನ್ನು ಇರಿಸಿ ನೀರು ಸಹಿತ ಹೂಳನ್ನು (ಮರಳು) ಮೇಲೆತ್ತಿ ಸಮೀಪದ ಹೊಂಡಕ್ಕೆ ರವಾನಿಸಲಾಗುತ್ತಿದೆ. ಹೊಂಡದಲ್ಲಿ ನೀರು ತುಂಬಿ ಹೊರ ಹರಿಯುವಾಗ ಕೆಸರು ಹೊರಹೋಗುವುದರಿಂದ ಶುದ್ಧವಾದ ಮರಳು ತಳದಲ್ಲಿ ನಿಲ್ಲುತ್ತದೆ. ಅಂತಹ ಮರಳನ್ನು ಜೆಸಿಬಿ ಬಳಸಿ ಮೇಲೆತ್ತಿ ಲಾರಿಗಳ ಮೂಲಕ ನಿರ್ದಿಷ್ಟ ಸ್ಥಳಕ್ಕೆ ಸಾಗಿಸಲಾಗುತ್ತದೆ.
ಡ್ರೆಜ್ಜಿಂಗ್ ಮೂಲಕ ಮರಳನ್ನು ಎತ್ತಿ ದಾಸ್ತಾನು ಮಾಡಿ ಲೆಕ್ಕಪತ್ರ ಇಡುವುದಷ್ಟೇ ನಮ್ಮ ಜವಾಬ್ದಾರಿ. ಉಳಿದಂತೆ ಅದರ ವಿಲೇವಾರಿ, ಮಾರಾಟ ಇತ್ಯಾದಿ ಗಣಿ ಇಲಾಖೆಗೆ ಸೇರಿದ್ದು, ಮರಳು ಅಗತ್ಯವುಳ್ಳವರು ಇಲಾಖೆ ಯನ್ನು ಸಂಪರ್ಕಿಸಬಹುದು.
ಧರ್ಮೇಶ್,
ತಾಂತ್ರಿಕ ನಿರ್ವಾಹಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ