ಶಾಲೆಗಳಿಗೆ ಬಂತು “ಅಕ್ಷಯ ತರಕಾರಿ ಬುಟ್ಟಿ’
ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸುವ ಯೋಜನೆ
Team Udayavani, Feb 19, 2020, 10:26 PM IST
ನಗರ : ಶಾಲಾ ಅಕ್ಷರ ದಾಸೋಹದಲ್ಲಿ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ತರಕಾರಿ ಸತ್ವ ದೊರಕಿಸುವ ದೃಷ್ಟಿಯಿಂದ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಲೋಕೇಶ್ ರೂಪಿಸಿದ “ಅಕ್ಷಯ ತರಕಾರಿ ಬುಟ್ಟಿ’ ಎಂಬ ವಿನೂತನ ಪ್ರಯೋಗವನ್ನು ಪ್ರಸ್ತುತ ತಾವು ಸೇವೆ ಸಲ್ಲಿಸುತ್ತಿರುವ ಪುತ್ತೂರು ತಾಲೂಕು ವ್ಯಾಪ್ತಿಗೂ ವಿಸ್ತರಿಸಿ ಯಶಸ್ಸು ಕಾಣುತ್ತಿದ್ದಾರೆ.
ಈ ಯೋಜನೆಯನ್ನು ಮಂಗಳೂರು, ಬೆಳ್ತಂಗಡಿಯಲ್ಲಿ ತಾವು ಸೇವೆ ಸಲ್ಲಿಸುತ್ತಿದ್ದಾಗ ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಲೋಕೇಶ್ ಪ್ರಯೋಗ ಮಾಡಿ ಯಶಸ್ಸು ಕಂಡಿದ್ದರು. ಅದೇ ಯೋಜನೆಯನ್ನು ಪುತ್ತೂರು ತಾಲೂಕಿನ ಸರಕಾರಿ ಶಾಲೆಗಳಲ್ಲೂ ಆರಂಭಗೊಳಿಸಿದ್ದಾರೆ.
ಪೌಷ್ಟಿಕಾಂಶಯುಕ್ತ ಆಹಾರ
ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿಯ ಮಕ್ಕಳಿಗೆ ಅಕ್ಷರ ದಾಸೋಹದಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು ಸರಕಾರದ ವತಿಯಿಂದ ನೀಡಲಾಗುತ್ತಿದೆ. ವಾರದಲ್ಲಿ ಬೇರೆ ಬೇರೆ ರೀತಿಯ ಕಾಳು, ಸೊಪ್ಪಿನ ಸಾಂಬಾರು ನಿಗದಿಪಡಿಸಲಾಗಿದ್ದರೂ, ಎಲ್ಲವನ್ನು ಮಾರುಕಟ್ಟೆಯಿಂದ ಖರೀದಿಸಿ ತರುವ ತರಕಾರಿಗಳಿವು. ಆದರೆ ಮಕ್ಕಳ ಮನೆಗಳಲ್ಲಿ ಬೆಳೆದ ಪೌಷ್ಟಿಕಾಂಶಯುಕ್ತ ತರಕಾರಿಗಳನ್ನು ಎಲ್ಲ ಮಕ್ಕಳ ಮೂಲಕ ಸ್ವಲ್ಪವೇ ತರಿಸಿ ಒಟ್ಟುಗೂಡಿಸಿ ಪೌಷ್ಟಿಕಾಂಶಗಳನ್ನು ನೀಡುವುದೇ “ಅಕ್ಷಯ ತರಕಾರಿ ಬುಟ್ಟಿ’ ಯೋಜನೆಯ ಉದ್ದೇಶ.
ಹೀಗೆ ಪ್ರಯೋಗ
ಮಕ್ಕಳು, ಸಾರ್ವಜನಿಕರು ಹಾಗೂ ಪೋಷಕರು ಶಾಲೆಗಳಿಗೆ ಅವರು ಬೆಳೆಯುವ ತರಕಾರಿಯನ್ನು ಶಕ್ತಿಯನುಸಾರ ನೀಡಬಹುದು. ಇದು ತರಕಾರಿಗಷ್ಟೆ ಸೀಮತ. ಓರ್ವ ವಿದ್ಯಾರ್ಥಿ ಒಂದು ಬಗೆಯ ತರಕಾರಿ ತಂದರೆ ಇನ್ನೋರ್ವ ವಿದ್ಯಾರ್ಥಿ ಇನ್ನೊಂದು ಬಗೆಯ ತರಕಾರಿ ತರುತ್ತಾರೆ. ಹೀಗೆ ವಿವಿಧ ಬಗೆಯ ತರಕಾರಿಗಳನ್ನು ವಾರದ ಒಂದು ದಿನ ಒಟ್ಟುಗೂಡಿಸಿ ಮಧ್ಯಾಹ್ನದ ಬಿಸಿಯೂಟದಲ್ಲಿ ತರಕಾರಿಯನ್ನೂ ಸೇರಿಸಿದ ಒಂದು ಪದಾರ್ಥ ತಯಾರಿಸಲಾಗುತ್ತದೆ.
ಶೇ. 75 ಶಾಲೆಗಳಲ್ಲಿ ಪ್ರಗತಿ
ತಾಲೂಕಿನ ಶೇ. 75 ಶಾಲೆ ಗಳಲ್ಲಿ ಅಕ್ಷಯ ತರಕಾರಿ ಬುಟ್ಟಿ ಯೋಜನೆ ಜಾರಿಗೊಳಿಸಿದ್ದೇವೆ. ಮಕ್ಕಳು ಮನೆಯಲ್ಲಿ ಬೆಳೆದ ತರಕಾರಿಗಳ ಪೈಕಿ ಒಂದೊಂದು ತರಕಾರಿ ತರುತ್ತಾರೆ. ಇದಕ್ಕೆ ಒತ್ತಡ ವಿಲ್ಲ. ಇದರಿಂದ ಮಕ್ಕಳಲ್ಲಿ ಅರಿವೂ ಮೂಡುತ್ತದೆ.
– ಸಿ. ಲೋಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ