ಹವಾಮಾನ ವೈಪರೀತ್ಯದಿಂದ ಕೈಕೊಟ್ಟ ಗೇರು ಬೆಳೆ

ಮಾರುಕಟ್ಟೆ ಧಾರಣೆ ಕುಸಿತ; ರೈತನಿಗೆ ಗಾಯದ ಮೇಲೆ ಮತ್ತೆ ಬರೆ

Team Udayavani, Jan 25, 2020, 5:42 AM IST

jan-18

ಅರಂತೋಡು: ಈ ವರ್ಷ ಹವಾಮಾನ ವೈಪರೀತ್ಯದಿಂದ ಗೇರು ಬೆಳೆ ಕುಸಿತಗೊಳ್ಳುವ ಮುನ್ಸೂಚನೆ ಎದುರಾಗಿದೆ. ಇತರ ಬೆಳೆಗಳಿಗ ಬಾಧಿಸಿರುವ ರೋಗ ಹಾಗೂ ಮಾರುಕಟ್ಟೆ ಧಾರಣೆ ಕುಸಿತದಿಂದ ಕಂಗೆಟ್ಟಿರುವ ರೈತನಿಗೆ ಈ ವರ್ಷ ಗೇರು ಬೆಳೆ ಕುಸಿತಗೊಂಡಿರುವ ಕಾರಣ ಗಾಯದ ಮೇಲೆ ಮತ್ತೆ ಬರೆ ಎಳೆದಂತಾಗಿದೆ.

2019ನೇ ಸಾಲಿನ ಡಿ. 15ರ ತನಕ ತಾಲೂಕು ಹಾಗೂ ನೆರೆಯ ತಾಲೂಕಿನಲ್ಲಿ ಮಳೆ ಇದ್ದ ಪರಿಣಾಮ ಹವಾಮಾನ ವೈಪರೀತ್ಯಗೊಂಡಿದೆ. ಮಳೆ ನಿಂತರೂ ಚಳಿ ಆರಂಭಗೊಳ್ಳಲೇ ಇಲ್ಲ. ಗೇರು ಮರ ಸೂಕ್ತವಾಗಿ ಫ‌ಲ ಬಿಡಲು ಫ‌ಲಗಾಳಿಯೂ ಇಲ್ಲ ಎಂದು ರೈತರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗೇರು ಮರ ಹೂ ಬಿಡಲು ತಡವಾಗಿದೆ. ಇನ್ನೂ ಕೆಲವೆಡೆ ಮರಗಳು ಹೂ ಬಿಟ್ಟಿಲ್ಲ. ಈ ಪರಿಣಾಮದಿಂದ ಜನವರಿ ತಿಂಗಳ ಕೊನೆಗೆ ಮೂರು ಎಕ್ರೆ ಗೇರು ತೋಟದಲ್ಲಿ 10 ಕ್ವಿಂಟಲ್‌ ಗೇರು ಬೀಜ ದೊರೆಯುತ್ತಿದ್ದ ರೈತರಿಗೆ ಈತನಕ ಸಿಕ್ಕಿದ್ದು 10 ಕೆ.ಜಿ.ಯಷ್ಟು ಮಾತ್ರ.

ಪೂರಕ ಬೆಳೆ ಕುಸಿತ
ಅಡಿಕೆಗೆ ಹಳದಿ ರೋಗ, ರಬ್ಬರ್‌ಗೆ ಧಾರಣೆ ಕುಸಿತ, ಕರಿಮೆಣಸಿಗೆ ಸೊರಬು ರೋಗದಿಂದ ತಾಲೂಕಿನ ರೈತರು ಬೇರೆ ಬೇರೆ ಪರ್ಯಾಯ ಬೆಳೆಯತ್ತ ಆಲೋಚಿಸಿದರು. ಅದರಲ್ಲಿ ಹೆಚ್ಚಿನವರು ಗೇರು ಕೃಷಿಯ ಬಗ್ಗೆ ಆಲೋಚಿಸಿ ಗೇರಿನ ವಿವಿಧ ಹೈಬ್ರಿಡ್‌ ತಳಿಗಳಾದ ಉಳ್ಳಾಲ-1 ಉಳ್ಳಾಲ-2, ಉಳ್ಳಾ-3 ,ಉಳ್ಳಾಲ-4 ಯು.ಎನ್‌.-50, ಚಿಂತಾಮಣಿ-1 ಭಾಸ್ಕರ ಹೀಗೆ ವಿವಿಧ ತಳಿಗಳನ್ನು ನಾಟಿ ಮಾಡಿದರು. ಗೇರು ಗಿಡಗಳು ಫ‌ಸಲು ನೀಡಲು ಪ್ರಾರಂಭವಾಗಿ ಅನೇಕ ವರ್ಷಗಳು ಕಳೆದಿವೆ. ಇನ್ನೂ ಕೆಲವರು ಮತ್ತೆ ಪ್ರತಿ ವರ್ಷ ಗೇರು ನಾಟಿ ಮಾಡುತ್ತಿದ್ದಾರೆ. ಸುಳ್ಯ ತಾಲೂಕಿನಲ್ಲಿ 2,500 ಹೆಕ್ಟೇರ್‌ ಭೂಮಿಯಲ್ಲಿ ಗೇರು ಬೆಳೆ ಬೆಳೆಯಲಾಗಿದೆ. ರಬ್ಬರ್‌, ಅಡಿಕೆ ಈ ಬೆಳೆಯಲ್ಲಿ ಆಗುತ್ತಿರುವ ನಷ್ಟವನ್ನು ರೈತ ಗೇರು ಬೆಳೆಯ ಮೂಲಕ ಒಂದಷ್ಟು ಸರಿದೂಗಿಸುವ ಲೆಕ್ಕ ಹಾಕುತ್ತಿರುವಾಗಲೇ ನಿರೀಕ್ಷಿತ ಫ‌ಲ ದೊರೆಯಲು ಅಸಾಧ್ಯ ಎಂದು ಚಿಂತೆ ಕಾಡತೊಡಗಿದೆ.

ಧಾರಣೆ ಏರುಪೇರು
2018ನೇ ಸಾಲಿನಲ್ಲಿ ಗೇರು ಬೀಜ ಕೆ.ಜಿ.ಯೊಂದಕ್ಕೆ 150ರಿಂದ 160 ರೂ. ಗಡಿ ದಾಟಿತ್ತು. ಆದರೆ ಕಳೆದ ವರ್ಷ ಕೆ.ಜಿ.ಯೊಂದಕ್ಕೆ 100ರಿಂದ 120ರ ತನಕ ಧಾರಣೆ ಇತ್ತು.

ಬೇಡಿಕೆ ಹೆಚ್ಚು
ಗೋಡಂಬಿ ವಿದೇಶಿ ವಿನಿಮಯ ಗಳಿಸುತ್ತಿರುವ ಬೆಳೆಗಳಲ್ಲಿ ಒಂದು. ಕರ್ನಾಟಕ ಕರಾವಳಿ ಪ್ರದೇಶಗಳು ಒಳನಾಡು ಒಣ ಪ್ರದೇಶಗಳು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆ. ಸಿಹಿತಿಂಡಿಗಳು, ಖಾರ ತಿಂಡಿಗಳು, ಪಾನೀಯ ಹಾಗೂ ಮದ್ಯ ತಯಾರಿಕೆಯಲ್ಲಿ ನೀರು ಬಸಿದು ಹೋಗುವಂತಹ ಕೆಂಪು ಗೋಡು, ಜಂಬಿಟ್ಟಿಗೆ ಮತ್ತು ಮಧ್ಯಮ ಕಪ್ಪು ಮಣ್ಣು ಈ ಬೆಳೆಗೆ ಸೂಕ್ತ.

ಗೋಡಂಬಿ ಬೆಳೆ ವಾತಾವರಣದಲ್ಲಿ ಹೆಚ್ಚು ತೇವಾಂಶ ಮತ್ತು ಹೆಚ್ಚು ಉಷ್ಣಾಂಶ ಇರುವ ತೀರ ಪ್ರದೇಶಗಳಲ್ಲಿ ಬೆಳೆಯಬಲ್ಲದು. ಅಲ್ಲದೆ ಮಣ್ಣಿನಲ್ಲಿ ತೇವಾಂಶ ಕಡಿಮೆ ಆದಾಗಲೂ ಅಂತಹ ಪರಿಸ್ಥಿತಿಗೆ ಹೊಂದಿಕೊಂಡು ಬೆಳೆಯಬಲ್ಲದು. ಹೈಬ್ರಿಡ್‌ ತಳಿಗಳು ಮೂರು ವರ್ಷದಲ್ಲಿ ಫ‌ಸಲು ನೀಡುತ್ತವೆ.

ದುಷ್ಪರಿಣಾಮ ಬೀರಬಹುದು
ಗೇರು ಬೆಳೆಯನ್ನು ತಾತ್ಸಾರ ಮಾಡುವ ಹಾಗಿಲ್ಲ. ಉತ್ತಮ ಫ‌ಸಲಿಗೆ ಕಾಲ ಕಾಲಕ್ಕೆ ತಕ್ಕಂತೆ ಎನ್‌.ಪಿ.ಕೆ. ಹಾಗೂ ಇತರ ಗೊಬ್ಬರವನ್ನು ಗಿಡಗಳ ಪ್ರಾಯಕ್ಕೆ ಅನುಗುಣವಾಗಿ ಹೊಂದಾಣಿಕೆ ಮಾಡಿಕೊಂಡು ಸೂಕ್ತ ಪ್ರಮಾಣದಲ್ಲಿ ನೀಡಬೇಕು. ಕಾಲ ಕಾಲಕ್ಕೆ ತಕ್ಕಂತೆ ನೀರುಣಿಸಬೇಕು. ಕೀಟಗಳ ಹತೋಟಿ ಮಾಡಬೇಕಾಗಿದೆ. ಈ ಬಾರಿಯ ಹವಾಮಾನ ಗೇರು ಬೆಳೆಗೆ ಸ್ವಲ್ಪ ಮಟ್ಟಿಗೆ ದುಷ್ಪರಿಣಾಮ ಬೀರಬಹುದು.
– ಅರ್ಬನ್‌ ಪೂಜಾರೆ , ಸಹಾಯಕ ಅಧಿಕಾರಿ, ತೋಟಗಾರಿಕಾ ಇಲಾಖೆ ಸುಳ್ಯ

ಇಳುವರಿ ಭಾರಿ ಕುಸಿತ
ಗೇರು ಮರ ಹೂ ಬಿಡುವ ಕಾಲದಲ್ಲಿ ವಿಪರೀತ ಮಳೆ ಸುರಿದಿದೆ. ಹವಾಮಾನದ ಬದಲಾವಣೆಯಿಂದ ಈ ವರ್ಷ ಗೇರು ಕೃಷಿಯ ಮೇಲೆ ದೊಡ್ಡ ಪರಿಣಾಮ ಬೀರಿದೆ. ಕಳೆದ ವರ್ಷ ಈ ಸಮಯಕ್ಕೆ ನನಗೆ 10 ಕ್ವಿಂಟಲ್‌ ಗೇರು ಬೀಜ ಆಗಿದೆ. ಈ ಸಲ 10 ಕೆ.ಜಿ. ಮಾತ್ರ ಬೆಳೆದಿದೆ. ಇಳುವರಿ ಭಾರೀ ಕುಸಿತವಾಗಿದೆ. ರೈತರಿಗೆ ಒಂದರ ಮೇಲೆ ಇನ್ನೊಂದು ಸಮಸ್ಯೆಯಾಗುತ್ತಿದೆ. ಸರಕಾರವು ಗೇರು ಬೆಳೆಗಾರರ ಕಡೆ ಗಮನ ಹರಿಸಬೇಕಾಗಿದೆ.
– ಸತೀಶ್‌ ರೈ ಕರ್ನೂರು , ಗೇರು ಕೃಷಿಕ

ತೇಜೇಶ್ವರ್‌ ಕುಂದಲ್ಪಾಡಿ

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.