ಮಾಣಿ-ಮೈಸೂರು ಹೆದ್ದಾರಿ ಕಾಮಗಾರಿ ತಾತ್ಕಾಲಿಕವಾಗಿ ಮುಂದಕ್ಕೆ
Team Udayavani, Mar 25, 2020, 4:55 AM IST
ಪುತ್ತೂರು: ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿರುವ ಮಾಣಿ-ಮೈಸೂರು ರಸ್ತೆಯಲ್ಲಿ ಮರು ಡಾಮರು ಕಾಮಗಾರಿ ನಡೆಯುತ್ತಿದ್ದು, ಕೋವಿಡ್-19 ಮುನ್ನೆಚ್ಚರಿಕೆ ಕ್ರಮದ ಹಿನ್ನೆಲೆಯಲ್ಲಿ ಮಂಗಳವಾರದಿಂದ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾ.ಹೆ. ಯ ಮಾಣಿ-ಸಂಪಾಜೆ ವ್ಯಾಪ್ತಿಯ 71.6 ಕಿ.ಮೀ. ರಸ್ತೆಯನ್ನು ಎರಡು ವಿಭಾಗಗಳಲ್ಲಿ ಮರು ಡಾಮರು ಕಾಮಗಾರಿ ನಡೆಸಲಾಗುತ್ತಿದೆ. 0-40 ಕಿ.ಮೀ. ವ್ಯಾಪ್ತಿಯ ಮಾಣಿಯಿಂದ ಜಾಲೂÕರು ಹಾಗೂ ಹಾಗೂ ಜಾಲಸೂರಿನಿಂದ ಸಂಪಾಜೆ ತನಕದ 31.6 ಕಿ.ಮೀ. ರಸ್ತೆಯನ್ನು ಪ್ರತ್ಯೇಕ ಟೆಂಡರ್ಗಳಿಗೆ ವಹಿಸಲಾಗಿದೆ. 0-40 ಕಿ.ಮೀ. ತನಕ 14 ಕೋಟಿ ರೂ. ಹಾಗೂ ಹಾಗೂ ಅನಂತರದ 31.6 ಕಿ.ಮೀ. ವ್ಯಾಪ್ತಿಗೆ 10.23 ಕೋಟಿ ರೂ. ಟೆಂಡರ್ ಆಗಿದೆ.
ಕೊರೋನಾ ಇಫೆಕ್ಟ್
ಹಾಲಿ ಕೊರೋನಾ ವೈರಸ್ ನಿಯಂತ್ರಣದ ದೃಷ್ಟಿಯಿಂದ ಎಲ್ಲ ಸರಕಾರಿ ಹಾಗೂ ಖಾಸಗಿ ಸಂಸ್ಥೆ, ಕೆಲಸಗಾರರಿಗೆ ರಜೆ ನೀಡಲಾಗಿದೆ. ಸಮುದಾಯ ಸೇರುವ ಹಾಗೂ ವಾಹನಗಳ ಸಂಚಾರ ಇರುವ ರಸ್ತೆಯಾಗಿರುವುದರಿಂದ ರಸ್ತೆ ಅಭಿವೃದ್ಧಿಯಲ್ಲಿ ಕೆಲಸ ಮಾಡುವ ಕಾರ್ಮಿಕರ ಹಿತದೃಷ್ಟಿಯಿಂದ ಮಾ. 30ರ ತನಕ ಕಾಮಗಾರಿಯನ್ನು ಸ್ಥಗಿತ ಗೊಳಿಸ ಲಾಗಿದೆ. ಸರಕಾರದ ಆದೇಶ ನೋಡಿ ಕೊಂಡು ಕಾಮಗಾರಿಯನ್ನು ಮುಂದು ವರಿಸುವ ಚಿಂತನೆ ನಡೆಸ ಲಾಗುವುದು ಎಂದು ರಾ.ಹೆ. ಹೆದ್ದಾರಿ ಸಹಾಯಕ ಎಂಜಿನಿಯರ್ ನಾಗರಾಜ್ ತಿಳಿಸಿದ್ದಾರೆ.
ಎ. 15: ಮುಕ್ತಾಯದ ಗುರಿ
ಮಾಣಿಯಿಂದ ಸಂಪ್ಯ ತನಕದ ಸುಮಾರು 18 ಕಿ.ಮೀ. ಹಾಗೂ ಜಾಲೂÕರಿನಿಂದ 15 ಕಿ.ಮೀ. ಡಾಮರು ಕಾಮಗಾರಿ ಪೂರ್ತಿಗೊಳಿಸಲಾಗಿದೆ. ಇನ್ನು 22 ಕಿ.ಮೀ. ಹಾಗೂ 16.6 ಕಿ.ಮೀ. ಸೇರಿ ಒಟ್ಟು ಸುಮಾರು 37.6 ಕಿ.ಮೀ. ಮರು ಡಾಮರು ಕಾಮಗಾರಿ ಬಾಕಿ ಇದೆ. ಒಂದೆರಡು ದಿನಗಳಲ್ಲಿ ವಾಹನಗಳ ಸಂಚಾರ ಕಡಿಮೆ ಇದ್ದ ಕಾರಣಕ್ಕೆ ಕಾಮಗಾರಿ ವೇಗವನ್ನೂ ಪಡೆದುಕೊಂಡಿತ್ತು. ಎ. 15ಕ್ಕೆ ಕಾಮಗಾರಿಯನ್ನು ಪೂರ್ತಿಗೊಳಿಸುವ ಗುರಿ ಇರಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು