ನೂಜಿಬಾಳ್ತಿಲ: ಜಲಕ್ಷಾಮಕ್ಕೆ ಬಹುಗ್ರಾಮ ಯೋಜನೆ ಪರಿಹಾರ
Team Udayavani, Dec 22, 2019, 4:01 AM IST
ಕಲ್ಲುಗುಡ್ಡೆ: ಇತ್ತೀಚಿನ ಕೆಲವು ವರ್ಷಗಳ ಬೇಸಗೆಯಲ್ಲಿ ಹಲ ವೆಡೆ ಕುಡಿಯುವ ನೀರಿನ ಅಭಾವ ಹೆಚ್ಚುತ್ತಿದ್ದು, ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯಲ್ಲಿಯೂ ಜಲಕ್ಷಾಮ ಕಾಡಿತ್ತು. ಪರಿಹಾರ ಮಾರ್ಗವಾಗಿ ಕಡಬ ತಾಲೂಕಿನ ನೂಜಿಬಾಳ್ತಿಲವನ್ನು ಕೇಂದ್ರವಾಗಿಟ್ಟುಕೊಂಡು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ರೂಪಿಸಬೇಕೆಂಬ ಆಗ್ರಹ ಗ್ರಾಮಸ್ಥರಿಂದ ಕೇಳಿ ಬಂದಿದೆ.
ಬೇಸಗೆಯಲ್ಲೂ ನೀರಿನ ಹರಿವು ಇರುವ ಗುಂಡ್ಯ ಹೊಳೆಯಿಂದ ನೀರಿನ ವ್ಯವಸ್ಥೆ ಮಾಡುವ ಆಗ್ರಹ ನೂಜಿಬಾಳ್ತಿಲ ಗ್ರಾಮಸಭೆಯಲ್ಲಿ ವ್ಯಕ್ತವಾಗಿದ್ದು, ಜನಪ್ರತಿನಿಧಿಗಳು ಸ್ಪಂದಿಸಿ ಕಾರ್ಯೋನ್ಮುಖವಾದಲ್ಲಿ ಈ ಯೋಜನೆ ಶೀಘ್ರ ರೂಪುಗೊಂಡು ಕಾರ್ಯಗತವಾದರೆ ಗ್ರಾಮದ ನೀರಿನ ಸಮಸ್ಯೆ ಅಂತ್ಯ ಕಾಣಲಿದೆ ಎನ್ನುವ ನಿರೀಕ್ಷೆ ವ್ಯಕ್ತವಾಗಿದೆ.
ಕುಡಿಯುವ ನೀರು ಯೋಜನೆ
ನೂಜಿಬಾಳ್ತಿಲ ಗ್ರಾಮದಲ್ಲಿ ಹರಿಯುತ್ತಿರುವ ಗುಂಡ್ಯ ಹೊಳೆಗೆ ಅಣೆಕಟ್ಟು ನಿರ್ಮಿಸಿ ಅಥವಾ ನೀರನ್ನು ಬೇರೆಡೆ ಸಂಗ್ರಹಿಸುವಂತೆ ವ್ಯವಸ್ಥೆ ಮಾಡಿ, ಶುದ್ಧೀಕರಿಸಿ ಕುಡಿಯುವ ನೀರಿಗೆ ಬಳಸುವಂತಹ ಯೋಜನೆ ಇದು. ಹೀಗಾದಲ್ಲಿ ಬೇಸಗೆಯಲ್ಲಿ ಈ ಭಾಗದ ನೀರಿನ ಸಮಸ್ಯೆ ದೂರವಾಗಲಿದೆ. ಜತೆಗೆ ನೂಜಿಬಾಳ್ತಿಲವನ್ನು ಕೇಂದ್ರೀಕರಿಸಿ ಈ ಯೋಜನೆ ರೂಪಿಸಿದ್ದಲ್ಲಿ ನೂಜಿಬಾಳ್ತಿಲ ಸಹಿತ ಪಕ್ಕದ ರೆಂಜಿಲಾಡಿ, ಕಡ್ಯ ಕೊಣಾಜೆ, ಇಚ್ಲಂಪಾಡಿ ಗ್ರಾಮಗಳಿಗೂ ಕುಡಿಯುವ ನೀರಿನ ವ್ಯವಸ್ಥೆಗೆ ಈ ಯೋಜನೆ ಸಹಕಾರಿಯಾಗಲಿದೆ.
ಉದ್ದೇಶಿತ ಬಹುಗ್ರಾಮ ಕುಡಿಯುವ ನೀರು ಯೋಜನೆ ವ್ಯವಸ್ಥಿತವಾಗಿ ನಡೆಯಬೇಕಾಗಿರುವುದರಿಂದ ಇದಕ್ಕೆ ರೂಪುರೇಷೆ, ಕ್ರಿಯಾ ಯೋಜನೆ ಸಿದ್ಧಪಡಿಸಿ ಸರಕಾರಕ್ಕೆ ಮನವಿ ಮಾಡುವುದರೊಂದಿಗೆ ಈ ಭಾಗದ ಜನಪ್ರತಿನಿಧಿಗಳು, ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಸಚಿವರ ಮೇಲೆ ಒತ್ತಡ ಹೇರಿದಾಗ ಈ ಯೋಜನೆ ಶೀಘ್ರ ಅನುಷ್ಠಾನ ಸಾಧ್ಯ ಎನ್ನುತ್ತಾರೆ ಗ್ರಾಮಸ್ಥರು.
ಕ್ರೀಯಾ ಯೋಜನೆ ಅಗತ್ಯ
ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಅಧಿಕ ಮೊತ್ತದ ಅನುದಾನ ಬೇಕಾಗಿರುವುದರಿಂದ ಯೋಜನೆಯ ಬಗ್ಗೆ ವೈಜ್ಞಾನಿಕವಾಗಿ ತಜ್ಞರಿಂದ ವರದಿ ಸಂಗ್ರಹಿಸಿ, ಸ್ಥಳೀಯರನ್ನು ಒಗ್ಗೂಡಿಸಿ, ಕ್ರೀಯಾ ಯೋಜನೆ ತಯಾರಿಸಬೇಕಾಗಿದೆ. ಕುಡಿಯುವ ನೀರಿನ ಪೂರೈಕೆ, ಫಲಾನುಭವಿಗಳ ಮಾಹಿತಿ, ಯೋಜನಾ ಸ್ಥಳದ ಪರಿಶೀಲನೆ ಮುಖ್ಯವಾಗಿರುತ್ತದೆ.
ಉತ್ತಮ ಯೋಜನೆ
ಬಹುಗ್ರಾಮ ನೀರಿನ ಯೋಜನೆ ಉತ್ತಮವಾದುದು. ಈ ಬಗ್ಗೆ ಗ್ರಾಮ ಸಭೆಯ ನಿರ್ಣಯ ಕಳುಹಿಸಲಾಗಿದ್ದು, ನಾವೂ ಒತ್ತಡ ಹೇರಿ ಶೀಘ್ರ ಯೋಜನೆ ಜಾರಿಗೆ ಪ್ರಯತ್ನಿಸುತ್ತಿದ್ದೇವೆ.
– ಪಿ.ಪಿ. ವರ್ಗೀಸ್, ಜಿ.ಪಂ. ಸದಸ್ಯ, ಕಡಬ ಕ್ಷೇತ್ರ
ಜಾರಿಗೆ ಬೆಂಬಲ
ನೂಜಿಬಾಳ್ತಿಲ ಗ್ರಾಮದೆಲ್ಲೆಡೆ ನೀರಿನ ಅಭಾವವಿದ್ದು, ಕೊಳವೆಬಾವಿ ಕೊರೆದರೂ ವ್ಯರ್ಥವಾಗುತ್ತಿದೆ. ಬಹುಗ್ರಾಮ ನೀರಿನ ಯೋಜನೆಯ ಬಗ್ಗೆ ಗ್ರಾಮಸಭೆಯಲ್ಲಿ ನಿರ್ಣಯಿಸಲಾಗಿದ್ದು, ತಾ.ಪಂ. ಮೂಲಕ ಜಿ.ಪಂ.ಗೆ ಕಳುಹಿಸಲಾಗಿದೆ. ಯೋಜನೆ ಜಾರಿಗೆ ನಮ್ಮ ಪಂಚಾಯತ್ನಿಂದ ಸಂಪೂರ್ಣ ಬೆಂಬಲವಿದೆ.
- ಸದಾನಂದ ಗೌಡ ಸಾಂತ್ಯಡ್ಕ, ಗ್ರಾ.ಪಂ. ಅಧ್ಯಕ್ಷ, ನೂಜಿಬಾಳ್ತಿಲ
ಸಕಾರಾತ್ಮಕ ಸ್ಪಂದನೆ
ಯೋಜನೆ ಜಾರಿಗೆ ಗ್ರಾಮಸಭೆಯಲ್ಲಿ ಆಗ್ರಹಿಸುವುದರೊಂದಿಗೆ, ಸ್ಥಳೀಯ ಶಾಸಕರಿಗೆ, ಉಸ್ತುವಾರಿ ಸಚಿವರಲ್ಲೂ ಮನವಿ ಮಾಡಿದ್ದೇವೆ. ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಗುಂಡ್ಯ ಹೊಳೆಯಲ್ಲಿ ನೀರಿನ ಲಭ್ಯತೆಯೂ ಇದ್ದು, ಯೋಜನೆ ಅನುಷ್ಠಾನದಿಂದ ಗ್ರಾಮದ ನೀರಿನ ಸಮಸ್ಯೆಗೆ ಮುಕ್ತಿ ಸಿಗಲಿದೆ.
- ಉಮೇಶ್ ಶೆಟ್ಟಿ ಸಾಯಿರಾಮ್, ಸಂಚಾಲಕ, ತೆಗ್ರ್ ತುಳುಕೂಟೊ, ನೂಜಿಬಾಳ್ತಿಲ
ದಯಾನಂದ ಕಲ್ನಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ
Karnataka ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು
Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ