ತೀರ್ಥಗಳ ಸಂಗಮ ಪಾಜಕ

ಪರಶುರಾಮ ಸೃಷ್ಟಿಸಿದ ಜಲಾಶಯ

Team Udayavani, Jan 9, 2020, 6:30 AM IST

26

ಉಡುಪಿ: ಮಧ್ವಾಚಾರ್ಯರು ಜನಿಸಿದ ಪಾಜಕದ ಸುತ್ತ ಕೆಲವು ಕಿ.ಮೀ. ಅಂತರದಲ್ಲಿ ಪರಶುತೀರ್ಥ, ಧನುಸ್ತೀರ್ಥ, ಗದಾತೀರ್ಥ, ಬಾಣ ತೀರ್ಥ ಎಂಬ ಹೆಸರಿನ ನಾಲ್ಕು ತೀರ್ಥಗಳಿವೆ. ಇವುಗಳನ್ನು ಪರಶುರಾಮ ದೇವರು ಪರಶು, ಧನುಸ್ಸು, ಗದಾ, ಬಾಣಗಳಿಂದ ನಿರ್ಮಿಸಿದರು ಎಂಬ ನಂಬಿಕೆಗಳಿವೆ. ಈ ತೀರ್ಥಗಳೂ ಪರಶು, ಧನುಸ್ಸು, ಗದೆ, ಬಾಣಗಳ ಆಕಾರದಲ್ಲಿವೆ. ಇವು ನಾಲ್ಕೂ ಬಂಡೆಗಳಲ್ಲಿರುವ ಜಲಾಶಯಗಳಾದರೆ ಮಧ್ವರು ವಾಸುದೇವನಾಗಿದ್ದಾಗ ನಿರ್ಮಿಸಿದ ವಾಸುದೇವ ತೀರ್ಥ ಸಹಜವಾದ ಜಲಾಶಯ.

ಯಾವುದೇ ಒಂದು ವಸ್ತು ವಿವರಣೆಗೆ ಒಳಪಡುವುದು ನೋಡುವವನ ದೃಷ್ಟಿಗೆ ಅವ ಲಂಬಿತ. ಇಲ್ಲಿ ಧಾರ್ಮಿಕ, ವೈಜ್ಞಾನಿಕ ಎರಡು ರೀತಿಯಲ್ಲಿ ವಿಶ್ಲೇಷಿಸಬಹುದು. ಧಾರ್ಮಿಕವಾಗಿ ಪಾಪಪರಿಹಾರಕ, ಪುಣ್ಯಪ್ರದ ಎನ್ನಬಹುದಾದರೆ, ವಿಜ್ಞಾನದ ಆಧಾರದಲ್ಲಿ ನೀರಿನಲ್ಲಿನ ಅಂಶಗಳನ್ನು ಸಂಶೋಧಿಸಿದರೆ ಇದರಲ್ಲಿ ರೋಗಪರಿಹಾರಕ ಗುಣವಿದೆ ಎನ್ನಬಹುದು.

ಪ್ರಾಕೃತಿಕ ಅಚ್ಚರಿ
ಈ ಜಲಾಶಯಗಳಲ್ಲಿ ಕಡು ಬೇಸಗೆಯಲ್ಲೂ ನೀರಿರುವುದು ಪ್ರಾಕೃತಿಕ ಅಚ್ಚರಿ. ಸುಮಾರು ಮೂರು ದಶಕಗಳ ಹಿಂದೆ ಪಾಜಕದಲ್ಲಿ ಗಣಿಗಾರಿಕೆ ತಲೆ ಎತ್ತಿದಾಗ ಪ್ರತಿಭಟಿಸದಿದ್ದರೆ ಈ ಅಚ್ಚರಿ ಇಂದು ಇರುತ್ತಿರಲಿಲ್ಲ. ಪೇಜಾವರ ಶ್ರೀಗಳು ಸಹಿತ ವಿವಿಧ ಪೀಠಾಧಿಪತಿಗಳು, ಚಿಂತಕರಾದ ಡಾ| ಬನ್ನಂಜೆ ಗೋವಿಂದಾಚಾರ್ಯ,ಡಾ|ಯು.ಆರ್‌. ಅನಂತಮೂರ್ತಿ, ಡಾ| ರವೀಂದ್ರನಾಥ ಶ್ಯಾನುಭಾಗ್‌ ಮತ್ತಿತರರು ಹೋರಾಟದಲ್ಲಿದ್ದರು.

ಬಾಣತೀರ್ಥ
ಪರಶುರಾಮ ಬೆಟ್ಟಕ್ಕೆ ಇದಿರಾಗಿ ಕುಂಜಾರು ಗಿರಿಯ ಒಂದೆಡೆ ಪರಶು ರಾಮರು ಅರ್ಧಚಂದ್ರಾಕೃತಿಯ ಬಾಣದಿಂದ ಶಿಲೆಯಲ್ಲಿ ತೀರ್ಥ ನಿರ್ಮಿಸಿದರು. ಇದುವೇ ಸರ್ವತೀರ್ಥಮಯವಾದ ಬಾಣತೀರ್ಥ. ಸ್ಕಂದ ಪುರಾಣದಲ್ಲಿ ಈ ತೀರ್ಥದ ಬಗ್ಗೆ ಉಲ್ಲೇಖವಿದೆ.

ಇದರ ತಟದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವಿದೆ. ಇದು ಅದಮಾರು ಮಠದ ಆಡಳಿತದಲ್ಲಿದ್ದು ಇದೇ ಮಠಕ್ಕೆ ಸೇರಿದ ಇಬ್ಬರು ಸ್ವಾಮೀಜಿಯವರ ವೃಂದಾವನಗಳಿವೆ. ಮಠದ ಪರಂಪರೆಯನ್ನು ಅವಲೋಕಿಸಿದಾಗ ಮೂವರು ಸ್ವಾಮೀಜಿಯವರ ವೃಂದಾವನಗಳನ್ನು ಇಲ್ಲಿ ನಿರ್ಮಿ ಸಿದ್ದರು ಎಂದು ತಿಳಿಯುತ್ತದೆ. ಪರಂಪರೆಯಲ್ಲಿ 12ನೆಯವರಾದ ಶ್ರೀ ವೇದಗರ್ಭತೀರ್ಥರು, 13ನೆಯವರಾದ ಶ್ರೀ ಹಿರಣ್ಯಗರ್ಭತೀರ್ಥರು, 18ನೆಯವರಾದ ಶ್ರೀ ವಾದೀಂದ್ರತೀರ್ಥರು ಇಲ್ಲಿ ವೃಂದಾ ವನಸ್ಥರಾಗಿದ್ದರು ಎಂಬ ಉಲ್ಲೇಖವಿದೆ.

ಪರಶುತೀರ್ಥ
ಪರಶುತೀರ್ಥವು ಪಾಜಕ ಕ್ಷೇತ್ರದಿಂದ ಪೂರ್ವಕ್ಕೆ ಮೂರು ಕಿ.ಮೀ. ದೂರದಲ್ಲಿರುವ ಬೆಳ್ಳೆ ಗ್ರಾಮದ ಬಳಿಯ ಬಂಡೆಯ ಬೆಟ್ಟದ ಮಧ್ಯದಲ್ಲಿದೆ. ಇದು ಪರಶುವಿನಿಂದ ಉದ್ಭವಿಸಿದ ತೀರ್ಥ. ಇದರ ಮಗ್ಗುಲಲ್ಲಿ ಗೋಪಾಲಕೃಷ್ಣ ದೇವಸ್ಥಾನವಿದೆ. ಇದು ಬೆಳ್ಳೆ ಸಾಮಗರ ವಂಶಕ್ಕೆ ಸೇರಿದೆ.

ಧನುಸ್ತೀರ್ಥ
ಪಾಜಕದಿಂದ ದಕ್ಷಿಣಕ್ಕೆ ಸುಮಾರು 6 ಕಿ.ಮೀ. ದೂರ ದಲ್ಲಿ ದೊಡ್ಡ ಏಕಶಿಲಾ ಬ ಬೆಟ್ಟದ ಮಧ್ಯೆ ಧನುಸ್ತೀರ್ಥ ವಿದೆ. ಸುಮಾರು 50 ಅಡಿ ಎತ್ತರದ ಬಂಡೆಯಲ್ಲಿ ಜಲಾಶಯವಿ ರುವುದು ಅಚ್ಚರಿ ತರುತ್ತದೆ. ಇಲ್ಲಿ ವರ್ಷವಿಡೀ ನೀರು ಇರುವುದೂ ಇನ್ನೊಂದು ಅಚ್ಚರಿ. ಶಾಧನುಸ್ಸಿನಿಂದ ಪರಶುರಾಮ ಈ ತೀರ್ಥವನ್ನು ನಿರ್ಮಿಸಿದ ಎಂಬ ಕಥೆ ಇದೆ.

ಗದಾತೀರ್ಥ
ಕುಂಜಾರು ಗಿರಿ ಬೆಟ್ಟದ ಎದುರಿನ ಪರಶುರಾಮ ಬೆಟ್ಟದಲ್ಲಿ ಪರಶುರಾಮ ದೇವಾಲಯವಿದೆ. ಇದಕ್ಕೆ ಹೊಂದಿ ಕೊಂಡಂತೆ ಉತ್ತರದಲ್ಲಿ ಬಂಡೆಯೊಳಗೆ ಪರಶುರಾಮ ತನ್ನ ಕೌಮೋದಕೀ ಗದೆಯಿಂದ ಉದ್ಭವಿಸಿದ ತೀರ್ಥ ಗದಾತೀರ್ಥ. ಒಂದೊಂದು ತೀರ್ಥಕ್ಕೂ ವಿಭಿನ್ನ ಹಿನ್ನೆಲೆ ಇದೆ ಮತ್ತು ಪ್ರತಿ ತೀರ್ಥದ ಸ್ನಾನಕ್ಕೂ ಪ್ರತ್ಯೇಕ ಫ‌ಲಗಳಿವೆ.

ವಾಸುದೇವತೀರ್ಥ
ಮಧ್ವರು ವಾಸುದೇವನಾಗಿದ್ದಾಗ ಉಪನಯ ನವಾದ ಸಮಯ ನಾಲ್ಕೂ ತೀರ್ಥಗಳಲ್ಲಿ ಸ್ನಾನ ಮಾಡಿ ಬರುತ್ತಿದ್ದರಂತೆ. ಚಿಕ್ಕ ಮಗ ಒಬ್ಬನೇ ದೂರ ಹೋಗಿ ಸ್ನಾನ ಮಾಡಿ ಬರುವುದಕ್ಕೆ ತಾಯಿ ಆತಂಕ ವ್ಯಕ್ತಪಡಿಸಿದರು. ತಮ್ಮ ದಂಡದಿಂದ ನಾಲ್ಕೂ ತೀರ್ಥಗಳ ಸನ್ನಿಧಾನವಿರುವಂತೆ ತೀರ್ಥ ವೊಂದನ್ನು ನಿರ್ಮಿಸಿದರು. ಇದೇ ವಾಸುದೇವ ತೀರ್ಥ. ಇದು ಪಾಜಕದ ಮುಖ್ಯ ಕ್ಷೇತ್ರದ ಆವರಣದಲ್ಲಿದೆ.

ಟಾಪ್ ನ್ಯೂಸ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಲರಾ ರೋಗ ತಡೆಗೆ ಸಕಲ ಮುನ್ನೆಚ್ಚರಿಕೆ; ತೆರೆದ ಸ್ಥಿತಿಯಲ್ಲಿ ಆಹಾರೋತ್ಪನ್ನ ಮಾರಾಟ ಅಪಾಯಕಾರಿ

ಕಾಲರಾ ರೋಗ ತಡೆಗೆ ಸಕಲ ಮುನ್ನೆಚ್ಚರಿಕೆ; ತೆರೆದ ಸ್ಥಿತಿಯಲ್ಲಿ ಆಹಾರೋತ್ಪನ್ನ ಮಾರಾಟ ಅಪಾಯಕಾರಿ

Former Prime Minister ಇಂದಿರಾ ಗಾಂಧಿಗೆ ಪುನರ್‌ಜನ್ಮ ನೀಡಿ, ಪ್ರಧಾನಿಯಾಗಿಸಿದ ಕ್ಷೇತ್ರ

Former Prime Minister ಇಂದಿರಾ ಗಾಂಧಿಗೆ ಪುನರ್‌ಜನ್ಮ ನೀಡಿ, ಪ್ರಧಾನಿಯಾಗಿಸಿದ ಕ್ಷೇತ್ರ

ಶ್ರೀಕೃಷ್ಣನಿಗೆ ಪಾರ್ಥಸಾರಥಿ ಸುವರ್ಣ ರಥ: ಪುತ್ತಿಗೆ ಶ್ರೀ ಸಂಕಲ್ಪ

Udupi; ಶ್ರೀಕೃಷ್ಣನಿಗೆ ಪಾರ್ಥಸಾರಥಿ ಸುವರ್ಣ ರಥ: ಪುತ್ತಿಗೆ ಶ್ರೀ ಸಂಕಲ್ಪ

Manipal ಮಾಹೆ ವಿ.ವಿ.ಗೆ ಕ್ವಾಕ್ವರೆಲಿ ಸಿಮಾಂಡ್ಸ್‌ ಶ್ರೇಯಾಂಕ ಗರಿ

Manipal ಮಾಹೆ ವಿ.ವಿ.ಗೆ ಕ್ವಾಕ್ವರೆಲಿ ಸಿಮಾಂಡ್ಸ್‌ ಶ್ರೇಯಾಂಕ ಗರಿ

Udupi-Chikmagalur Constituency; ಈವರೆಗಿನ ಅಭ್ಯರ್ಥಿ, ಸಂಸದರು ಕರಾವಳಿಗರೇ ಆಗಿದ್ದರು!

Udupi-Chikmagalur Constituency; ಈವರೆಗಿನ ಅಭ್ಯರ್ಥಿ, ಸಂಸದರು ಕರಾವಳಿಗರೇ ಆಗಿದ್ದರು!

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.