ಹಿಂದೂ ವ್ಯಕ್ತಿಯಿಂದ 30 ದಿನಗಳ ರಂಜಾನ್ ಉಪವಾಸ, ಸಾಮೂಹಿಕ ಪ್ರಾರ್ಥನೆ!
Team Udayavani, Apr 23, 2023, 6:51 PM IST
ಕುಷ್ಟಗಿ: ಮುಸ್ಲಿಮರು ಪವಿತ್ರ ರಂಜಾನ ಮಾಸವನ್ನು ಆಚರಿಸಿದಂತೆ ಹಿಂದೂ ವ್ಯಕ್ತಿ ಮುಸ್ಲಿಮರಂತೆ ಉಪವಾಸ (ರೋಜಾ) ಆಚರಿಸಿರುವುದು ಬೆಳಕಿಗೆ ಬಂದಿದೆ.
ಕುಷ್ಟಗಿಯ ಪ್ರಸನ್ನಕುಮಾರ ಹಿರೇಮಠ ಅವರು ರಂಜಾನ್ ಮಾಸ ಆರಂಭವಾದಾಗಿನಿಂದ ರಂಜಾನ ಮಾಸದ ಕೊನೆಯ 30 ದಿನಗಳವರೆಗೆ ಉಪವಾಸ ತಪ್ಪದೇ ಆಚರಿಸಿದ್ದಾರೆ. 1994ರಿಂದ ಪ್ರತಿ ವರ್ಷ 11 ದಿನ ಹಾಗೂ 21 ದಿನ ರೋಜಾ ಮಾಡುತ್ತಿದ್ದ ಪ್ರಸನ್ನಕುಮಾರಈ ಬಾರಿ ಬರೋಬ್ಬರಿ 30 ದಿನಗಳವರೆಗೆ ಆಚರಿಸಿದ್ದಾರೆ. ಅಲ್ಲದೇ ರಂಜಾನ್ ಹಬ್ಬದಂದು ಈದ್ಗಾದಲ್ಲಿ ಮುಸ್ಲಿಂ ಸಮುದಾಯದವರೊಂದಿಗೆ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದಾನೆ.
ರಂಜಾನ ಮಾಸದಲ್ಲಿ ಪ್ರತಿ ನಿತ್ಯ ಸಂಜೆ ಜಾಮೀಯ ಮಸೀಧಿಗೆ ಹೋಗಿ ಮುಸ್ಲಿಂ ಸಮುದಾಯವರೊಂದಿಗೆ ಸಾಮೂಹಿಕ ಪ್ರಾರ್ಥನೆ ಬಳಿಕ, ಹಣ್ಣು, ಪಾನಕ ಲಘು ಉಪವಾಸ ಸೇವಿಸಿ ಉಪವಾಸ ಕೊನೆಗೊಳಿಸುತ್ತಿದ್ದ.
ಹಿಂದೂ, ಮುಸ್ಲಿಂ ಧರ್ಮಗಳ ಸಂಘರ್ಷದ ದಿನಮಾನದಲ್ಲಿ ಹಿಂದೂ ವ್ಯಕ್ತಿ ಸದ್ಯ ಬಿಜೆಪಿ ಕಾರ್ಯಕರ್ತನಾಗಿರುವ ಪ್ರಸನ್ನಕುಮಾರ ಹಿರೇಮಠ ಅವರು, ಜೀವಿತಾವಧಿಯವರೆಗೂ ಮುಸ್ಲಿಮರ ಪವಿತ್ರ ರಂಜಾನ ಮಾಸದಲ್ಲಿ ರೋಜಾ ಮಾಡುವುದು ಸಂಕಲ್ಪಿಸಿಕೊಂಡಿದ್ದಾರೆ.
———–
ರಂಜಾನ್ ಮಾಸದಲ್ಲಿ ಪ್ರತಿ ದಿನ ರೋಜಾದಿಂದ ನನ್ನ ಆರೋಗ್ಯ ಸ್ಥಿರವಾಗಿದೆ. ನನ್ನ ಸಂಕಲ್ಪದಿಂದ ತಾಯಿಯ ಆರೋಗ್ಯ ಸುಧಾರಿಸಿದೆ. ನನ್ನ ದೈನಂದಿನ ವ್ಯವಹಾರ ಸುಧಾರಣೆ ನನ್ನಲ್ಲಿ ಸಂತೃಪ್ತ ಭಾವನೆ ಬಂದಿದೆ. ನನ್ನ ತಾಯಿ, ಪತ್ನಿ ಸಹಕರಿಸಿ, ಪ್ರೋತ್ಸಾಹಿಸಿದರಲ್ಲದೇ, ಮನೆಯಲ್ಲಿ ಖುಷಿಯ ವಾತವರಣ ಇದೆ. ಇದಕ್ಕಿಂತ ಮಿಗಿಲಾಗಿ ಹಿಂದು-ಮುಸ್ಲಿಂ ಸೌಹಾರ್ಧಯುತಕ್ಕೆ ನನ್ನ ಕೈಲಾದ ಮಟ್ಟಿಗೆ ಅಳಿಲು ಸೇವೆ ಸಲ್ಲಿಸುತ್ತಿರುವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು