ಶಿಕ್ಷಣದ ಖಾಸಗೀಕರಣವನ್ನು ಪ್ರೋತ್ಸಾಹಿಸುವ ಆಯವ್ಯಯ
Team Udayavani, Feb 1, 2020, 7:45 PM IST
ಕೇಂದ್ರ ಸರ್ಕಾರ ಮಂಡಿಸದ ಆಯವ್ಯಯ ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣವನ್ನು ಮತ್ತಷ್ಟು ವೇಗವರ್ಧಿಸುವುದಲ್ಲದೆ ಶಿಕ್ಷಣವನ್ನು ಪೂರ್ಣವಾಗಿ ಖಾಸಗೀಕರಣಕ್ಕೆ ತೆರೆದಿಡುತ್ತದೆ. ಆಯವ್ಯದಲ್ಲಿ ಶಿಕ್ಷಣಕ್ಕೆ ಒಟ್ಟು 99,300 ಕೋಟಿಗಳನ್ನು ಒದಗಿಸಿದ್ದು ಕಳೆದ ಬಾರಿಗೆ ಹೋಲಿಸಿ ನೋಡಿದರೆ ಅತ್ಯಲ್ಪ, ಅಂದರೆ 5453 ಕೋಟಿ ಹೆಚ್ಚಳ ಕಂಡಿದೆ. ಶೇಕಡವಾರು ಹೆಚ್ಚಳ ಕೇವಲ 5.8 .
ಅತ್ಯಂತ ಅಪಾಯಕಾರಿ ಬೆಳವಣಿಗೆಯೆಂದರೆ ಶಿಕ್ಷಣಕ್ಕೆ ಹೊರಗಿನಿಂದ ಸಾಲ ಪಡೆಯುವ ಮತ್ತು ವಿದೇಶಿ ನೇರ ಬಂಡವಾಳವನ್ನು ಆಹ್ವಾನಿಸುವ ಪ್ರಸ್ತಾವನೆ . ಶಿಕ್ಷಣ ಕ್ಷೇತ್ರಕ್ಕೆ ಹಣ ಹೂಡಿಕೆ ದೇಶದ ಆದ್ಯತೆಯಲ್ಲವೆಂಬ ಸಂದೇಶವನ್ನು ಕೇಂದ್ರ ಸರ್ಕಾರ ಈ ಆಯವ್ಯಯದ ಮೂಲಕ ರುಜುವಾತು ಪಡಿಸಿದೆ. ಜಗತ್ತಿನಲ್ಲಿ ಯಾವ ರಾಷ್ಟ್ರವು ಹೊರಗಿನಿಂದ ಸಾಲ ಪಡೆದು ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಿದ ಉದಾಹರಣೆಗಳಿಲ್ಲ .
ನಿನ್ನೆಯಷ್ಟೆ ಬಿಡುಗಡೆಯಾದ ಆರ್ಥಿಕ ಸಮೀಕ್ಷೆ 2019 -20 ರ ಅನ್ವಯ ಪ್ರಾಥಮಿಕ ಹಂತದಲ್ಲಿ ಸರ್ಕಾರ ಶಿಕ್ಷಣಕ್ಕೆ ಸರಾಸರಿ ವಾರ್ಷಿಕವಾಗಿ 1253 ರೂಗಳನ್ನು ಖರ್ಚು ಮಾಡುತ್ತಿದ್ದು ಅದೇ ಖಾಸಗಿ ಶಾಲೆಯಲ್ಲಿ ವಾರ್ಷಿಕ ಸರಾಸರಿ ವೆಚ್ಚ 12,889 ರೂಗಳು. ಇಂಥಹ ಪರಿಸ್ಥಿತಿಯಲ್ಲಿ ಈಗ ಆಯವ್ಯದಲ್ಲಿ ಮೀಸಲಿಟ್ಟಿರುವ ಹಣವನ್ನು ನೋಡಿದರೆ ‘ ಆನೆಗೆ ಮೂರು ಕಾಸು ಮಜ್ಜಿಗೆ’ ಎಂಬಂತಾಗಿದೆ.
ಒಟ್ಟಾರೆ , ಈ ಆಯವ್ಯಯ ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣ, ವಿದೇಶಿ ಸಾಲ ಪಡೆಯುವ ಪ್ರಸ್ತಾವನೆ, ಅವಕಾಶ ವಂಚಿತ ಸಮುದಾಯಕ್ಕೆ ನೇರ ಆನ್-ಲೈನ್ ಉನ್ನತ ಶಿಕ್ಷಣ,ವಿದೇಶಿ ನೇರ ಬಂಡವಾಳ ಹಾಗು ಸಾರ್ವಜನಿಕ -ಖಾಸಗಿ ಸಹಭಾಗಿತ್ವದ ಮೂಲಕ ಶಿಕ್ಷಣವನ್ನು ಪೂರ್ಣವಾಗಿ ಮುಕ್ತ ಮಾರುಕಟ್ಟೆಗೆ ತೆರೆದಿಡುವ ನೀಲಿ ನಕಾಶೆಯಂತಿದೆ .ಇದು ಧೀರ್ಘಕಾಲದಲ್ಲಿ ಸಾಮಾಜಿಕ , ಆರ್ಥಿಕ ಮತ್ತು ದೇಶೀ ಸಂಸ್ಕೃತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರ
– ನಿರಂಜನಾರಾಧ್ಯ .ವಿ.ಪಿ
ಸೀನಿಯರ್ ಫೆಲೋ ಮಗು ಮತ್ತು ಕಾನೂನು ಕೇಂದ್ರ
ರಾಷ್ಟ್ರೀಯ ಕಾನೂನು ಶಾಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Budget 2024-25; ಕೇಂದ್ರಕ್ಕೆ ಏಟು, ರಾಜ್ಯಕ್ಕೆ ಸ್ವೀಟು!
Mangaluru ಸೇರಿ 11 ಮಹಾನಗರಗಳಲ್ಲಿ ತಡರಾತ್ರಿ 1 ಗಂಟೆಯವರೆಗೆ ವ್ಯಾಪಾರ
Budget 2024-25; ಬೆಂಗಳೂರು, ಮೈಸೂರಿಗೆ ಸಿಂಹಪಾಲು; ಉತ್ತರಕ್ಕೆ ಸಮಪಾಲು
Expert’s Opinion: ಗ್ಯಾರಂಟಿ ಭಾರ ಇಲ್ಲದಿದ್ದರೆ ಇನ್ನೂ ಉತ್ತಮ ಆಗಿರುತ್ತಿತ್ತು
Start-up Sector; ನವ ಕರ್ನಾಟಕ ನಿರ್ಮಾಣಕ್ಕೆ ಸಿದ್ದು ಸ್ಟಾರ್ಟ್ ಅಪ್
MUST WATCH
ಹೊಸ ಸೇರ್ಪಡೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು