ಎಸಿಬಿ ದಾಳಿ : 17.80 ಲಕ್ಷ ರೂ.ಅಕ್ರಮ ಹಣ ವಶ, ಮೂವರ ಬಂಧನ
Team Udayavani, Mar 8, 2022, 8:08 PM IST
ಧಾರವಾಡ : ಅಕ್ರಮ ಹಣದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಕೈಗೊಂಡ ಧಾರವಾಡ ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ ಠಾಣೆಯ ತಂಡವು ಒಟ್ಟು 17,80,000 ರೂ. ಹಣ ಪತ್ತೆ ಮಾಡುವುದರ ಜತೆಗೆ ಮೂರು ಜನ ಆರೋಪಿಗಳನ್ನು ಮಂಗಳವಾರ ವಶಕ್ಕೆ ಪಡೆದಿದೆ.
ಸಣ್ಣ ನೀರಾವರಿಯ ಧಾರವಾಡ ಉಪ-ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರರ ಕಚೇರಿಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಶಿವಪ್ಪ ಸಂಗಪ್ಪ ಮಂಜಿನಾಳ, ಧಾರವಾಡದ ನೀರಾವರಿ ತನಿಖಾ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಪ್ರಶಾಂತ ಶಾಮರಾವ್ ಸತ್ತೂರ ಹಾಗೂ ಶಿವಪ್ಪ ಅವರ ಅಣ್ಣನ ಮಗ ಮಹಾಂತೇಶ ರೇವಣಪ್ಪ ಮಂಜಿನಾಳ ಬಂಧಿತ ಮೂವರು ಆರೋಪಿಗಳು. ಈ ಪೈಕಿ ಶಿವಪ್ಪ ಅವರು, ಭ್ರಷ್ಟಾಚಾರ ಮಾಡಿ, ಸಂಗ್ರಹಿಸಿದ ಅಕ್ರಮ ಹಣವನ್ನು ಪ್ರಶಾಂತ ಸತ್ತೂರ ಮನೆಯಲ್ಲಿ ಇರಿಸಿದ್ದಾರೆ. ಈ ಹಣವನ್ನು ಮಂಗಳವಾರ ಬೆಳಿಗ್ಗೆ ಬೇರೆಡೆ ಸಾಗಿಸಲಿದ್ದಾರೆ ಎಂಬ ಗೌಪ್ಯ ಖಚಿತ ಮಾಹಿತಿಯು ಎಸಿಬಿಯ ಡಿಎಸ್ಪಿ ಅವರಿಗೆ ಬಂದಿದ್ದು, ಕೂಡಲೇ ಈ ಬಗ್ಗೆ ಪರಿಶೀಲಿಸುವಂತೆ ಪಿಐ ಅಲಿ ಎ. ಶೇಖಗೆ ಸೂಚಿಸಿದ್ದಾರೆ.
ಶಿವಪ್ಪನವರ ಅಣ್ಣನ ಮಗ ಮಹಾಂತೇಶನು ಪ್ರಶಾಂತ ಅವರ ಮನೆಗೆ ತೆರೆಳಿ, ಚೀಲವೊಂದನ್ನು ತೆಗೆದುಕೊಂಡು ಹೋಗಲು ಅಣಿಯಾಗಿದ್ದಾನೆ. ಆಗ ಎಸಿಬಿ ತಂಡವು ದಾಳಿ ಮಾಡಿ ಚೀಲದೊಂದಿಗೆ ಮಹಾಂತೇಶನನ್ನು ವಶಕ್ಕೆ ಪಡೆದು, ವಿಚಾರಣೆ ಕೈಗೊಂಡಿದೆ. ಆಗ ಶಿವಪ್ಪನವರ ಸೂಚನೆ ಮೇರೆಗೆ ಈ ಹಣದ ಚೀಲವನ್ನು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕ ಕಂದಗನೂರ ಗ್ರಾಮದ ತಮ್ಮ ಮನೆಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ಮಹಾಂತೇಶ ತಿಳಿಸಿದ್ದು, ಈ ಬಗ್ಗೆ ಎಸಿಬಿಯ ಪಿಐ ಅಲಿ ಶೇಖ ಅವರು ಸರಕಾರದ ಪರ ದೂರು ಸಲ್ಲಿಸಿದ್ದಾರೆ.
ಇದನ್ನೂ ಓದಿ : ಕೋಮು ಪ್ರಚೋದನಕಾರಿ ಹೇಳಿಕೆ : ಮುಕ್ರಂ ಖಾನ್ ಬಂಧನ ;ಆಸ್ಪತ್ರೆಯಲ್ಲಿ ಚಿಕಿತ್ಸೆ
ಡಿಎಸ್ಪಿ ಮಹಾಂತೇಶ್ವರ ಎಸ್. ಜಿದ್ದಿ ಅವರು, ಕೂಡಲೇ ಈ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಪಿಐ ವೀರಭದ್ರಪ್ಪ ಎನ್. ಕಡಿ ಅವರಿಗೆ ವಹಿಸಿದ್ದಾರೆ. ಅದರನ್ವಯ ಕೂಡಲೇ ಪಂಚರು ಹಾಗೂ ಸಿಬ್ಬಂದಿಗಳೊಂದಿಗೆ ಪ್ರಶಾಂತ ಸತ್ತೂರ ಮನೆಗೆ ತೆರಳಿ ಹಣದ ಚೀಲ ಹಾಗೂ ಮನೆಯನ್ನು ಶೋಽಸಿದಾಗ, ಚೀಲದಲ್ಲಿ 16 ಲಕ್ಷ ರೂ.ಹಾಗೂ ಮನೆಯಲ್ಲಿ 1,80,000 ರೂ.ಸೇರಿದಂತೆ ಒಟ್ಟು 17,80,000 ರೂ. ಅಕ್ರಮ ಹಣ ದೊರೆತಿದೆ. ಈ ಅಕ್ರಮ ಹಣ ಹಾಗೂ ಎಲ್ಲ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು, ತನಿಖೆ ಮುಂದುವರೆಸಲಾಗಿದೆ.
ಬೆಳಗಾವಿಯ ಎಸಿಬಿ ಉತ್ತರ ವಲಯ ಪೊಲೀಸ್ ಅಧೀಕ್ಷಕ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ ಡಿಎಸ್ಪಿ ಮಹಾಂತೇಶ್ವರ ಎಸ್.ಜಿದ್ದಿ ನೇತೃತ್ವದಲ್ಲಿ ಪಿಐ ಅಲಿ ಶೇಖ ಮಾಹಿತಿ ಪರಿಶೀಲಿಸಿ, ದೂರು ಸಲ್ಲಿಸಿದ್ದಾರೆ. ಪಿಐ ವಿ.ಎನ್.ಕಡಿ ತನಿಖೆ ಕೈಗೊಂಡಿದ್ದು, ಗದಗ ಪಿಐ ಆರ್.ಎಫ್.ದೇಸಾಯಿ, ಸಿಬ್ಬಂದಿಗಳಾದ ಎಸ್.ಕೆ.ಕೆಲವಡಿ, ಗಿರೀಶ ಎಸ್. ಮನಸೂರ, ಶ್ರೀಶೈಲ ಎಸ್.ಕಾಜಗಾರ, ಎಸ್.ಐ.ಬೀಳಗಿ, ಎಲ್.ಎ.ಬೆಂಡಿಕಾಯಿ, ಕೆ.ಆರ್.ಹುಯಿಲಗೋಳ, ವಿ.ಎಸ್.ದೇಸಾಯಿಗೌಡ್ರ, ವಿರೇಶ ಎಸ್., ಎಸ್.ಎಸ್.ನರಗುಂದ, ರವೀಂದ್ರ ಯರಗಟ್ಟಿ, ಗಣೇಶ ಶಿರಗಟ್ಟಿ ಶೋಧನಾ ಕಾರ್ಯಾಚರಣೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
MUST WATCH
ಹೊಸ ಸೇರ್ಪಡೆ
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…