Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

ಎಟಿಎಂ ಕಾರ್ಡ್‌ ಇಲ್ಲದೆಯೂ ಹಣ ಡೆಪಾಸಿಟ್‌ ಸಾಧ್ಯ: ಆರ್‌ಬಿಐ

Team Udayavani, Apr 6, 2024, 12:58 PM IST

9-upi

ಮುಂಬಯಿ: ಇನ್ನು ಮುಂದೆ ನೀವು ಎಟಿಎಂ ಕೇಂದ್ರಗಳಲ್ಲೇ ಯುಪಿಐ ಮೂಲಕ ನಿಮ್ಮ ಖಾತೆಗೆ ನಗದನ್ನು ಜಮೆ ಮಾಡಬಹುದು! ಇದಕ್ಕೆ ಯಾವ ಕಾರ್ಡುಗಳ ಅಗತ್ಯವೂ ಇರುವುದಿಲ್ಲ.

ಹೌದು, ಯುಪಿಐ ಮೂಲಕ ಹಣ ಡೆಪಾಸಿಟ್‌ ಸೌಲಭ್ಯ ಒದಗಿಸುವ ಮಹತ್ವದ ನಿರ್ಧಾರವನ್ನು ಭಾರ ತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಕೈಗೊಂಡಿದೆ. ಆದರೆ ಇದು ಹೇಗೆ ಕಾರ್ಯನಿರ್ವಹಿಸಲಿದೆ ಎಂಬ ವಿವರವನ್ನು ನೀಡಿಲ್ಲ. ಸದ್ಯದಲ್ಲೇ ಈ ಕುರಿತು ವಿಸ್ತೃತ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಆರ್‌ ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ.

ಪ್ರಸ್ತುತ, ಕೇವಲ ಡೆಬಿಟ್‌ ಕಾರ್ಡ್‌ಗಳ ಮೂಲಕವಷ್ಟೇ ಎಟಿಎಂ ಕೇಂದ್ರಗಳಲ್ಲಿ ಹಣವನ್ನು ಡೆಪಾಸಿಟ್‌ ಮಾಡಲು ಸಾಧ್ಯವಾಗುತ್ತಿದೆ. ಜತೆಗೆ ಯುಪಿಐ ಮೂಲಕ ಎಟಿಎಂ ಕೇಂದ್ರಗಳಿಂದ ಹಣ ವಿತ್‌ಡ್ರಾ ಮಾಡುವ ಅವಕಾಶವನ್ನೂ ಕಲ್ಪಿಸಲಾಗಿದೆ. ಆದರೆ ಇದೇ ಮೊದಲ ಬಾರಿಗೆ ಯುಪಿಐ ಮೂಲಕ ನಗದನ್ನು ಜಮೆ ಮಾಡುವ ಸೌಲಭ್ಯ ಒದಗಿಸುವುದಾಗಿ ಆರ್‌ಬಿಐ ಹೇಳಿದೆ. ಇದಲ್ಲದೇ ಥರ್ಡ್‌ ಪಾರ್ಟಿ ಯುಪಿಐ ಆ್ಯಪ್‌ಗಳ ಮೂಲಕ ಪ್ರೀಪೇಯ್ಡ ಪೇಮೆಂಟ್‌ ಇನ್‌ಸ್ಟ್ರೆಮೆಂಟ್‌(ಪಿಪಿಐ)ಗಳನ್ನು ಲಿಂಕ್‌ ಮಾಡುವುದಕ್ಕೂ ಅನುಮತಿ ನೀಡಲು ಆರ್‌ಬಿಐ ನಿರ್ಧರಿಸಿದೆ.

ಅನುಕೂಲವೇನು?

 ಗ್ರಾಹಕರು ಬ್ಯಾಂಕ್‌ಗಳಲ್ಲಿ ಸರದಿಯಲ್ಲಿ ಕಾಯುವ ಅಗತ್ಯವಿರುವುದಿಲ್ಲ

 ಸುಲಭ ಹಾಗೂ ಸರಳವಾಗಿ ನಗದು ಠೇವಣಿ ಮಾಡಬಹುದು

 ಬ್ಯಾಂಕ್‌ ಶಾಖೆಗಳಲ್ಲಿ ನಗದು ನಿರ್ವಹಣೆಯ ಭಾರ ತಗ್ಗಲಿದೆ

ಯುಪಿಐ ಮೂಲಕ ಹಣ ಜಮೆ ಹೇಗೆ?

ಕ್ಯಾಷ್‌ ಡೆಪಾಸಿಟ್‌ ಮೆಷಿನ್‌ಗಳ ಮೂಲಕವೇ ಈ ಪ್ರಕ್ರಿಯೆ ನಡೆಸಬೇಕಾಗುತ್ತದೆ. ಪ್ರಸ್ತುತ ಡೆಬಿಟ್‌ ಕಾರ್ಡ್‌ಗಳ ಮೂಲಕ ಹಣ ಜಮೆ ಮಾಡಬೇಕೆಂದರೆ, ನೀವು ಮೊದಲು ನಿಮ್ಮ ಕಾರ್ಡ್‌ ಹಾಕಿ, ಪಿನ್‌ ನಮೂದಿಸಿ, “ಡೆಪಾಸಿಟ್‌’ ಆಯ್ಕೆಯನ್ನು ಒತ್ತಿ, ನಗದನ್ನು ಜಮೆ ಮಾಡುತ್ತೀರಿ. ಯುಪಿಐ ಮೂಲಕ ಹಣ ಜಮೆ ಮಾಡುವುದಿದ್ದರೆ, ಡೆಬಿಟ್‌ ಕಾರ್ಡ್‌ನ ಬಳಕೆಯ ಬದಲಾಗಿ ನಿಮ್ಮ ಬ್ಯಾಂಕ್‌ ಖಾತೆಯೊಂದಿಗೆ ಲಿಂಕ್‌ ಆಗಿರುವ ಯುಪಿಐ ಬಳಸಿ ಡೆಪಾಸಿಟ್‌ ಮಾಡಬೇಕಾಗುತ್ತದೆ.

Ad

ಟಾಪ್ ನ್ಯೂಸ್

Road Mishap; ಅಪರಿಚಿತ ವಾಹನ ಡಿಕ್ಕಿ: ಪಾದಚಾರಿ ಸಾವು

Road Mishap; ಅಪರಿಚಿತ ವಾಹನ ಡಿಕ್ಕಿ: ಪಾದಚಾರಿ ಸಾವು

Holehonnuru; ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಸಾವು ಪ್ರಕರಣ; ಮೂವರು ಆರೋಪಿಗಳ ಬಂಧನ

Holehonnuru; ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಸಾವು ಪ್ರಕರಣ; ಮೂವರು ಆರೋಪಿಗಳ ಬಂಧನ

SAvsZIM: South Africa innings victory

SAvsZIM: ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌ ಜಯಭೇರಿ

CPY-Ramanagar

ನನಗೆ ಸಚಿವ ಸ್ಥಾನ ಬೇಕಿಲ್ಲ, ಡಿ.ಕೆ.ಶಿವಕುಮಾರ್‌ ಸಿಎಂ ಆದ್ರೆ ಸಾಕು: ಸಿ.ಪಿ.ಯೋಗೇಶ್ವರ್‌

Dharwad: ಸಿಎಂ ಬದಲಾವಣೆ ಸೀನ್ ಸದ್ಯಕ್ಕಿಲ್ಲ: ಸಚಿವೆ ಹೆಬ್ಬಾಳ್ಕರ್

Dharwad: ಸಿಎಂ ಬದಲಾವಣೆ ಸೀನ್ ಸದ್ಯಕ್ಕಿಲ್ಲ: ಸಚಿವೆ ಹೆಬ್ಬಾಳ್ಕರ್

12-dotihala

ಸರಕಾರದ ಉಚಿತ ಬಸ್‌ ವ್ಯವಸ್ಥೆ ಇಲ್ಲದೆ ಹಣ ಪಾವತಿಸಿ ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿನಿಯರು

RCR–Hanuma

ಮೊಹರಂ ಆಚರಣೆ ವೇಳೆ ಕೆಂಡದ ಕುಣಿಗೆ ಬಿದ್ದಿದ್ದ ಗಾಯಾಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Microsoft: ಮತ್ತೆ 9000 ಉದ್ಯೋಗಿಗಳ ವಜಾಕ್ಕೆ ಮುಂದಾದ ಟೆಕ್‌ ದೈತ್ಯ ಮೈಕ್ರೋಸಾಫ್ಟ್‌

Microsoft: ಮತ್ತೆ 9000 ಉದ್ಯೋಗಿಗಳ ವಜಾಕ್ಕೆ ಮುಂದಾದ ಟೆಕ್‌ ದೈತ್ಯ ಮೈಕ್ರೋಸಾಫ್ಟ್‌

Jio: 5ಜಿ ಸ್ಪೀಡ್ ಚಾರ್ಟ್‌ನಲ್ಲಿ ಜಿಯೋಗೆ ಅಗ್ರಸ್ಥಾನ… ಟ್ರಾಯ್ ಡ್ರೈವ್ ಟೆಸ್ಟ್ ರಿಪೋರ್ಟ್

Jio: 5ಜಿ ಸ್ಪೀಡ್ ಚಾರ್ಟ್‌ನಲ್ಲಿ ಜಿಯೋಗೆ ಅಗ್ರಸ್ಥಾನ… ಟ್ರಾಯ್ ಡ್ರೈವ್ ಟೆಸ್ಟ್ ರಿಪೋರ್ಟ್

Dyson WashG1: Tired of mopping? Here’s a new solution

Dyson WashG1: ಮಾಪಿಂಗ್ ಮಾಡಿ ಸುಸ್ತಾಗಿದ್ದೀರಾ? ಇಲ್ಲಿದೆ ಹೀಗೊಂದು ಹೊಸ ಪರಿಹಾರ

3-oneplus

ಒನ್‌ಪ್ಲಸ್‌ನಿಂದ ಭಾರತದಲ್ಲಿ 19,000+ ಪಿನ್‌ಕೋಡ್‌ಗಳ ಮನೆ ಬಾಗಿಲಿಗೆ ಪಿಕಪ್ ಡ್ರಾಪ್ ಸರ್ವೀಸ್

Amazon

ಅಮೆಜಾನ್ ಇಂಡಿಯಾದಿಂದ 2,000 ಕೋಟಿ ರೂ. ಹೂಡಿಕೆ: ಭಾರತದಲ್ಲಿ ಕಾರ್ಯಾಚರಣೆ ವಿಸ್ತರಣೆ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

ಕೊಚ್ಚಿ ಹೋಗುವ ಪರಿಸ್ಥಿತಿಯಲ್ಲಿ ತೀರ್ಥಹಳ್ಳಿಯ ಕುನ್ನಿಕೇವಿ ಸೇತುವೆ..!

ಕೊಚ್ಚಿ ಹೋಗುವ ಪರಿಸ್ಥಿತಿಯಲ್ಲಿ ತೀರ್ಥಹಳ್ಳಿಯ ಕುನ್ನಿಕೇವಿ ಸೇತುವೆ..!

sullia

Kundapura: ಬೈಕ್‌ ಸವಾರ ಮೃತಪಟ್ಟ ಪ್ರಕರಣ; ಲಾರಿ ಚಾಲಕನಿಗೆ 1.6 ವರ್ಷ ಜೈಲು ಶಿಕ್ಷೆ

Road Mishap; ಅಪರಿಚಿತ ವಾಹನ ಡಿಕ್ಕಿ: ಪಾದಚಾರಿ ಸಾವು

Road Mishap; ಅಪರಿಚಿತ ವಾಹನ ಡಿಕ್ಕಿ: ಪಾದಚಾರಿ ಸಾವು

Holehonnuru; ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಸಾವು ಪ್ರಕರಣ; ಮೂವರು ಆರೋಪಿಗಳ ಬಂಧನ

Holehonnuru; ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಸಾವು ಪ್ರಕರಣ; ಮೂವರು ಆರೋಪಿಗಳ ಬಂಧನ

SAvsZIM: South Africa innings victory

SAvsZIM: ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌ ಜಯಭೇರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.