ಕಿಷ್ಕಿಂದಾ ಅಂಜನಾದ್ರಿಯೇ ಹನುಮ ಜನಿಸಿದ ಸ್ಥಳ: ವಿಶ್ವಪ್ರಸನ್ನತೀರ್ಥ ಶ್ರೀ
Team Udayavani, Oct 26, 2021, 11:00 PM IST
ಗಂಗಾವತಿ: ವೇದ ಪುರಾಣ ಸೇರಿ ಭಾರತದ ಮಹಾನ್ ಗ್ರಂಥಗಳಲ್ಲಿ ಉಲ್ಲೇಖೀಸಿದಂತೆ ಕಿಷ್ಕಿಂದಾ ಅಂಜನಾದ್ರಿಯೇ ಹನುಮಂತ ಜನಿಸಿದ ಸ್ಥಳ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಹೇಳಿದರು.
ಅವರು ಮಂಗಳವಾರ ಮರಳಿ ಗ್ರಾಮದ ತಪೋವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮೊದಲು ತುಂಗಭದ್ರಾ ನದಿಗೆ ಪಂಪಾನದಿ ಎಂದು ಕರೆಯಲಾಗುತ್ತಿತ್ತು. ಪಂಪಾನದಿ ತಟದಲ್ಲಿರುವ ಋಷ್ಯಮುಖ ಪರ್ವತದ ಬಳಿ ಶ್ರೀರಾಮ ಲಕ್ಷ್ಮಣರನ್ನು ಹನುಮಂತ ಭೇಟಿಯಾಗಿ ಕಿಷ್ಕಿಂದಾ ಅರಸ ಸುಗ್ರೀವನ ಬಳಿಗೆ ಕರೆದೊಯ್ದು ಭೇಟಿ ಮಾಡಿದ ಜಾಗವಿದೆ. ವಾಲಿಯನ್ನು ಶ್ರೀರಾಮಚಂದ್ರ ಹತ ಮಾಡಿದ್ದು ಆನೆಗೊಂದಿ ಬಳಿಯ ಜಾಗವನ್ನು ವಾಲಿದಿಬ್ಬ ಎಂದು ಕರೆಯಲಾಗುತ್ತಿದೆ ಎಂದರು.
ಇದನ್ನೂ ಓದಿ:ಕೋವಿಡ್ ಲಸಿಕೆ ಪಡೆದವರಿಗಷ್ಟೇ ಹಾಸನಾಂಬೆ ದರ್ಶನ ಭಾಗ್ಯ
ವಾನರರು ಮಹಾ ಶಿಲ್ಪಿಗಳಾಗಿದ್ದರು. ಇದನ್ನು ಮನಗಂಡ ಶ್ರೀರಾಮಚಂದ್ರ ಕಿಷ್ಕಿಂದಾ ಪ್ರದೇಶಕ್ಕೆ ಆಗಮಿಸಿ ವಾನರರ ಸಹಾಯದಿಂದ ಸಮುದ್ರದಲ್ಲಿ ಶ್ರೀಲಂಕಾ ದೇಶದವರೆಗೆ ಸೇತುವೆ ನಿರ್ಮಿಸಿ ರಾವಣನನ್ನು ವಧೆ ಮಾಡಿ ಸೀತಾಮಾತೆಯನ್ನು ಕರೆ ತಂದಿದ್ದರು. ಹೀಗಾಗಿ ಹನುಮ ಜನ್ಮಸ್ಥಳ ಕುರಿತ ಟಿಟಿಡಿಯವರ ಹೇಳಿಕೆಗೆ ಬದಲಾಗಿ ಕರ್ನಾಟಕ ಸರಕಾರ ಪೂರಕ ದಾಖಲೆ ಬಿಡುಗಡೆ ಮಾಡಬೇಕು ಎಂದು ಶ್ರೀಗಳು ಸಲಹೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ
Lok Sabha ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ಗೆಲ್ಲಲ್ಲ: ಶ್ರೀರಾಮುಲು
Congress ಪ್ರಧಾನಿ ಅಭ್ಯರ್ಥಿ ಯಾರು ಹೇಳಿ ನೋಡೋಣ: ಯಡಿಯೂರಪ್ಪ
Karadi Sanganna: ಬಿಜೆಪಿ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಗೊಂಡ ಸಂಗಣ್ಣ ಕರಡಿ
Koppala: ಬೆಂಬಲಿಗರ ಜೊತೆ ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿದ ಸಂಸದ ಸಂಗಣ್ಣ ಕರಡಿ…