ಅಸತೋಮಾ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ


Team Udayavani, Apr 13, 2021, 5:10 AM IST

ಅಸತೋಮಾ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ

ದೀಪವನ್ನು ಸೂರ್ಯ ಮತ್ತು ಅಗ್ನಿಯ ಸಂಕೇತವೆಂದು ವ್ಯಾಖ್ಯಾನಿಸಲಾಗಿದ್ದು, . ದೀಪವು ಮಂಗಳಕರವಾದುದು. ಮಾನವನು ಅನ್ವೇಷಿಸಿದ ಅನೇಕ ಅದ್ಭುತಗಳಲ್ಲಿ ಅಗ್ನಿಯೂ ಒಂದು. ದೀಪವು ಬೆಳಕಿನ ಜತೆಗೆ ಜೀವಗಳಿಗೆ ರಕ್ಷಣೆಯನ್ನು ನೀಡಿದ ಮತ್ತು ನೀಡುತ್ತಿರುವುದರಿಂದ ದೀಪಕ್ಕೆ ಮನುಷ್ಯ ದೈವತ್ವದ ಸ್ಥಾನವನ್ನು ನೀಡಿದ್ದಾನೆ. ಭಾರ ತೀಯ ಪರಂಪರೆಯಲ್ಲಿ ಅಗ್ನಿ ಅಥವಾ ಜ್ಯೋತಿಗೆ ವಿಶೇಷವಾದ ಸ್ಥಾನಮಾನವಿದೆ. ವೇದಗಳ ಪ್ರಕಾರ ಇಂದ್ರನು ಪ್ರಮುಖ ದೇವತೆಯಾದರೆ ಅನಂತರದ ಸ್ಥಾನ ಅಗ್ನಿಗೇ. ದೀಪದ ಕಲ್ಪನೆ ಬಂದಂದಿನಿಂದ ನಾಗರಿಕತೆಯು ಹೊಸತಾದ ಶಕ್ತಿಯನ್ನು ಪಡೆಯಿತು. ದೀಪದ ಬೆಳಕೇ ಮನುಷ್ಯ ನಿಗೆ ಜ್ಞಾನದ ಮೂಲವಾಗಿದ್ದು, ಇದನ್ನು ಸಾಂಸ್ಕೃತಿಕ ಪರಂಪರೆಯಲ್ಲಿ ಪವಿತ್ರವಾ ದದ್ದೆಂದು ಭಾವಿಸಲಾಗಿದೆ. ದೀಪದ ಮಹಿಮೆಯನ್ನು ಅರಿತ ಮಾನವ ಅದನ್ನು ವಿವಿಧ ರೂಪಗಳಲ್ಲಿ ಸುಂದರಗೊಳಿಸಲು ಪ್ರಯತ್ನಿಸಿದ ಎನ್ನಬಹುದು.

ದೀಪ ಎಂದರೆ ಶಾಂತಿ, ಸಮೃದ್ಧಿ, ಬೆಳಕು, ಆರೋಗ್ಯ, ಸಂಪತ್ತು, ಮತ್ತು ಪ್ರಖರತೆಯ ಪ್ರತಿರೂಪ. ದೀಪವು ನಮ್ಮ ಜೀವನದ ಒಂದು ಸಕಾರಾತ್ಮಕ ಬೆಳವಣಿಗೆಯ ಸಂಕೇತ. ಇಂತಹ ದೀಪವನ್ನು ಬೆಳಗಿಸುವುದರಿಂದ ನಮ್ಮ ಜೀವನಕ್ಕೆ ಸಂತೋಷ, ನೆಮ್ಮದಿ, ಶಾಂತಿ ಯನ್ನು ದೊರೆಯುತ್ತದೆ. ದೀಪವನ್ನು ಬೆಳಗಿಸುವುದರ ಹಿಂದೆ ಒಂದು ಆಳ ವಾದ ತಣ್ತೀ ಅಡಗಿದೆ. ನಮ್ಮ ಕಷ್ಟ ಮತ್ತು ದುಃಖವನ್ನು ಹೋಗಲಾಡಿಸಿ, ಸಂತೋಷವನ್ನು ತೆರೆದ ಬಾಹುಗಳಿಂದ ಬರಮಾಡಿಕೊಳ್ಳಲು ದೀಪವನ್ನು ಹಚ್ಚು ತ್ತೇವೆ. ನಮಗೆ ಜ್ಞಾನದ ಬೆಳಕನ್ನು ನೀಡಿ, ಅಜ್ಞಾನದ ಅಂಧಕಾರವನ್ನು ಹೋಗ ಲಾಡಿಸಲು ದೀಪಲಕ್ಷ್ಮಿಯನ್ನು ಬೆಳಗಿಸಿ, ಪ್ರಾರ್ಥಿಸುತ್ತೇವೆ.

ದೀಪವನ್ನು ಬೆಳಗುವುದೆಂದರೆ ನಮ್ಮನ್ನು ನಾವು, ನಮ್ಮ ಆತ್ಮವನ್ನು ಬೆಳಗಿಕೊಂಡಂತೆ. ದೀಪದಲ್ಲಿ ಎಣ್ಣೆಯನ್ನು ತುಂಬುವ ಸ್ಥಳವನ್ನು ಮನುಷ್ಯನ ಮನಸ್ಸಿಗೆ ಹೋಲಿಸಲಾಗಿದೆ. ದೀಪವನ್ನು ಹಚ್ಚಿದಾಗ ನಮ್ಮ ಮನಸ್ಸಿನಲ್ಲಿ ನಮ್ಮ ಬದುಕಿನ ಪ್ರಾಮುಖ್ಯದ ಅರಿವುಂಟಾಗುತ್ತದೆ. ಇದು ನಮಗೆ ಬೌದ್ಧಿಕವಾದ ಜ್ಞಾನ ವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. ಬಡವ-ಬಲ್ಲಿದ, ಜಾತಿ ಮತ್ತು ಪಕ್ಷಗಳ ಭೇದವಿಲ್ಲದೇ ದೀಪವು ಅರಮನೆ ಅಥವಾ ಗುಡಿಸಲೆಂಬ ಭೇದವಿಲ್ಲದೇ ಸಮಾನವಾಗಿಯೇ ಬೆಳಗುತ್ತದೆ. ಮನುಷ್ಯನೂ ಯಾವುದೇ ಭೇದಭಾವವಿಲ್ಲದೆ ಬದುಕಿ ಸಮಾಜವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಬೇಕು ಎಂಬ ಸಂದೇಶವನ್ನು ದೀಪವು ನೀಡುತ್ತದೆ.

ಜ್ಞಾನದ ಸಂಕೇತವಾದ ದೀಪವು, ಕತ್ತಲೆಯಂತಿರುವ ಅಜ್ಞಾನವನ್ನು ಹೋಗ ಲಾಡಿಸುವ ಬೆಳಕು. ದೀಪಗಳನ್ನು ಮನೆಗಳಲ್ಲಿ ಬೆಳಗುವದರಿಂದ ನಮ್ಮ ಮನಸ್ಸುಗಳಲ್ಲಿ ತುಂಬಿರುವ ಅಜ್ಞಾನ ವೆಂಬ ಕತ್ತಲೆ(ತಮ)ಯು ದೂರ ಸರಿ ಯುತ್ತದೆ. ದೀಪ ಜೀವನದ ಪ್ರತೀ ಕ್ಷಣದಲ್ಲೂ ಆವರಿಸಿಕೊಂಡಿದ್ದು, ನಿತ್ಯ ದೀಪಗಳನ್ನು ಬೆಳಗುವುದರಿಂದ ನಮ್ಮ ಜೀವನದಲ್ಲಿ ಸಂತೋಷ, ನೆಮ್ಮದಿ, ಶಾಂತಿಯನ್ನು ತರಬಲ್ಲುದು.

“ಅಸತೋಮಾ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ, ಮೃತ್ಯೋರ್ಮಾ ಅಮೃತಂಗಮಯ ಓಂ ಶಾಂತಿಃ ಶಾಂತಿಃ ಶಾಂತಿಃ..’ ಎಂಬ ಶ್ಲೋಕವೇ ಹೇಳುವಂತೆ ಮನದೊಳಗೆ ತುಂಬಿರುವ ಅಸತ್ಯದಿಂದ ಸತ್ಯದೆಡೆಗೆ, ಅಜ್ಞಾನವೆಂಬ ಕತ್ತಲಿನಿಂದ ಜ್ಞಾನ ಎಂಬ ಬೆಳಕಿನ ಕಡೆಗೆ, ಮೃತ್ಯುವಿನಿಂದ ಅಮೃತತ್ವದೆಡೆಗೆ ನಂದಾದೀಪವು ನಮ್ಮನ್ನು ನಡೆಸುತ್ತದೆ ಎಂಬ ನಂಬಿಕೆ ಯಿದೆ. ಜೀವನವೆಂಬ ನೌಕೆಯಲ್ಲಿ ಪ್ರತಿಯೊಬ್ಬರೂ ಒಂದೊಂದು ಸಣ್ಣ ಸಣ್ಣ ಜ್ಯೋತಿಗಳು, ನಾವು ನಮ್ಮೊಳಗೆ ಇರುವ ಜ್ಞಾನವೆಂಬ ಜ್ಯೋತಿಗಳನ್ನು ಬೆಳಗು ವುದರಿಂದ ಮನಸ್ಸಿನಲ್ಲಿರುವಂತಹ ಅಜ್ಞಾನ, ಕಷ್ಟ, ನೋವುಗಳು ದೂರವಾಗಿ ಜ್ಞಾನ ಮತ್ತು ನೆಮ್ಮದಿಯ ಬೆಳಕು ಎಲ್ಲೆಡೆ ಪಸರಿಸುವಂತಾಗುತ್ತದೆ.

ಮನೆಯಲ್ಲಿ ದೀಪವನ್ನು ಹಚ್ಚುವು ದರಿಂದ ಆ ಪರಿಸರದಲ್ಲಿ ಶಾಂತಿ, ನೆಮ್ಮದಿ ಹಾಗೂ ಧನಾತ್ಮಕವಾದ ಚಿಂತನೆಗಳು ಹೆಚ್ಚುತ್ತದೆ ಎಂಬುದು ವೈಜ್ಞಾನಿಕವಾ ಗಿಯೂ ಸಾಬೀತಾಗಿದೆ. “ದೀಪದಿಂದ ದೀಪವ ಹಚ್ಚಬೇಕು ಮಾನವ’ ಎಂಬ ಕವಿವಾಣಿಯಂತೆ ಹೊಸವರ್ಷದ ಮೊದಲ ದಿನವಾದ ಯುಗಾದಿಯಂದು ನಮ್ಮಲ್ಲಿರುವ ಉತ್ತಮ ಜ್ಞಾನವನ್ನು ಇತರರಿಗೂ ಹಂಚಿ ಎಲ್ಲೆಡೆ ಜ್ಞಾನದ ಜ್ಯೋತಿಯು ಪ್ರಜ್ವಲಿಸುವಂತೆ ಮಾಡುವ ಸಂಕಲ್ಪ ಮಾಡೋಣ.

- ಸಂತೋಷ್‌ ರಾವ್‌, ಪೆರ್ಮುಡ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.