ಮುಳುಗಡೆ ಜನರ ಮುಗಿಯದ ಕಥೆ; ಹೊಸ ಊರಿನ ಜನರ ಮಾಸದ ಹಳೆಯ ನೆನಪುಗಳು

ಊರು (ಪುನರ್‌ ವಸತಿ ಕೇಂದ್ರಗಳು)ಗಳಲ್ಲಿ ಪುನಃ ನಿರ್ಮಾಣ ಮಾಡಲಾಗಿದೆಯಾದರೂ ಹಳೆಯ ಸವಿ ನೆನಪುಗಳು ಮಾತ್ರ ಇಂದಿಗೂ ಮಾಸಿಲ್ಲ.

Team Udayavani, Feb 19, 2022, 5:20 PM IST

ಮುಳುಗಡೆ ಜನರ ಮುಗಿಯದ ಕಥೆ; ಹೊಸ ಊರಿನ ಜನರ ಮಾಸದ ಹಳೆಯ ನೆನಪುಗಳು

ಕೃಷ್ಣೆಯ ಒಡಲಿನಲ್ಲಿ ಕಳೆದೊಂದು ವಾರದಿಂದ ಹಿನ್ನೀರು ಕಡಿಮೆಯಾಗುತ್ತಿದ್ದು, ಈವರೆಗೆ ಮುಳುಗಿದ ಶಾಲೆ-ದೇವಾಲಯಗಳು ಪುನಃ ಕಾಣುತ್ತಿವೆ. ಹೊಸ ಊರಿನಲ್ಲಿದ್ದ ಜನರು, ಹಳೆಯ ಊರಿನ ದೇವಾಲಯಗಳಿಗೆ ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತಿರುವುದು ಎಲ್ಲೆಡೆ ಕಾಣುತ್ತಿದೆ.

ಬಾಗಲಕೋಟೆ: ಇದು ಕೃಷ್ಣೆಯ ಒಡಲು. ಲಕ್ಷಾಂತರ ರೈತರ ಆರ್ಥಿಕ ಬದುಕು ಹಸನಾಗಿಸಿದ ಖ್ಯಾತಿ ಇದೆ. ಆದರೆ ಅಷ್ಟೇ ಜನರು ಬದುಕಿಗಾಗಿ ಬವಣೆ ಪಟ್ಟ ಪ್ರಸಂಗಗಳೂ ಇವೆ. ಪ್ರತಿವರ್ಷವೂ ಹಿನ್ನೀರು ಬಂದು ಸರಿದಾಗೊಮ್ಮೆ ಆ ಒಡಲು ನೋಡಿ ಜನರು ಕಣ್ಣೀರು ಹಾಕುತ್ತಾರೆ. ಇದಕ್ಕೆಲ್ಲ ಕಾರಣ ಹಲವು. ಹೌದು. ಹಿನ್ನೀರು ಬಂದು ಸಂತ್ರಸ್ತರ ಬದುಕಿಗಷ್ಟೇ ತೊಂದರೆಯಾಗಿಲ್ಲ. ಸಾವಿರಾರು ಜನರಿಗೆ ಆಶ್ರಯವಾಗಿದ್ದ ಗಿಡ-ಮರಗಳು, ದೇವಸ್ಥಾನಗಳು, ಶಾಲೆಗಳೂ ಮುಳುಗಿವೆ.

ಮುಳುಗಿದ ಹಳೆಯ ಶಾಲೆ, ದೇವಸ್ಥಾನಗಳ ಹೆಸರಿನಲ್ಲೇ ಹೊಸ ಊರು (ಪುನರ್‌ ವಸತಿ ಕೇಂದ್ರಗಳು)ಗಳಲ್ಲಿ ಪುನಃ ನಿರ್ಮಾಣ ಮಾಡಲಾಗಿದೆಯಾದರೂ ಹಳೆಯ ಸವಿ ನೆನಪುಗಳು ಮಾತ್ರ ಇಂದಿಗೂ ಮಾಸಿಲ್ಲ.

ಕೃಷ್ಣೆಯ ಒಡಲು ಸೇರಿದ 192 ಹಳ್ಳಿಗಳು:
ಜಿಲ್ಲೆಯನ್ನು ಇಂದಿಗೂ ಮುಳುಗಡೆ ಜಿಲ್ಲೆ, ತ್ಯಾಗಿಗಳ ಜಿಲ್ಲೆ ಎಂದೇ ಕರೆಯಲಾಗುತ್ತದೆ. ಕಾರಣ ಅಖಂಡ ವಿಜಯಪುರ ಜಿಲ್ಲೆಯ 192 ಹಳ್ಳಿಗಳು ಕೃಷ್ಣೆಯ ಹಿನ್ನೀರ ಒಡಲಿನಲ್ಲಿ ಮುಳುಗಿವೆ. ಅದಕ್ಕಾಗಿ 136 ಪುನರ್‌ವಸತಿ ಕೇಂದ್ರ ಸ್ಥಾಪಿಸಿ, ಪುನರ್‌ವಸತಿ, ಪುನರ್‌ ನಿರ್ಮಾಣ ಕಾರ್ಯ ನಡೆದಿದೆಯಾದರೂ ಅದೂ ಪೂರ್ಣ ಪ್ರಮಾಣದಲ್ಲಾಗಿಲ್ಲ.

ಇಂದಿಗೂ ಹಲವಾರು ಹಳ್ಳಿಗಳ ಜನರು, ತಮ್ಮ ಭಾವ-ಭಕುತಿಗಾಗಿ ಹಳೆಯ ಊರಿನಲ್ಲೇ ಇದ್ದಾರೆ. ಹಿನ್ನೀರು ಬಂದಾಗೊಮ್ಮೆ ಹೊಸ ಊರಿಗೆ ಬಂದರೆ, ನೀರು ಸರಿದಾಗ ಪುನಃ ಹಳೆಯ ಊರಿಗೆ ಹೋಗಿ ಮನೆ ಸ್ವಚ್ಛ ಮಾಡಿಕೊಂಡು, ದೀಪಹಚ್ಚಿ ಕೆಲ ದಿನ ವಾಸ  ಮಾಡುವ ಕುಟುಂಬಗಳೂ ಇವೆ. ಅದರಲ್ಲೂ ತಾಲೂಕಿನ ಕದಾಂಪುರ, ಸಾಳಗುಂದಿ, ಯಂಕಂಚಿ, ಮನಿನಾಗರ, ಹೊನ್ನರಹಳ್ಳಿ ಹೀಗೆ ಸುಮಾರು 11ಕ್ಕೂ ಹೆಚ್ಚು ಹಳ್ಳಿಯ ಜನರು ಹಳೆಯ ಹಳ್ಳಿಯಲ್ಲೇ ವಾಸವಾಗಿದ್ದಾರೆ. ಕಾರಣ ಅವರ ಮನೆ ಮುಳುಗಿದರೆ, ಹೊಲ ಪೂರ್ಣ ಮುಳುಗಿಲ್ಲ. ಅದು ಆಲಮಟ್ಟಿ ಜಲಾಶಯವನ್ನು 524.256 ಮೀಟರ್‌ಗೆ ಎತ್ತರಿಸಿದಾಗ ಮಾತ್ರ ಪೂರ್ಣ ಪ್ರಮಾಣದಲ್ಲಿ ಮುಳುಗಡೆಯಾಗುತ್ತದೆ.ಹೀಗಾಗಿ ಹೊಲ ನೋಡಿಕೊಳ್ಳಲು ಅವರೆಲ್ಲ ಹಳೆಯ ಊರಲ್ಲೇ ಇರಬೇಕಾದ ಅನಿವಾರ್ಯತೆ ಇದೆ.

ಬೀಳಗಿಯಲ್ಲಿ ಭಾವಾನುಭವಗಳೇ ಹೆಚ್ಚು:
ಕೃಷ್ಣೆ-ಘಟಪ್ರಭೆ ಒಡಲಿನಲ್ಲಿ ಅತಿ ಹೆಚ್ಚು ಮುಳುಗಡೆ ಹಳ್ಳಿಗಳು ಬರುತ್ತವೆ. ಅದರಲ್ಲೂ ಬಾಗಲಕೋಟೆಯ ಕಲಾದಗಿಯಿಂದ ಬೀಳಗಿ ತಾಲೂಕಿನ ಚಿಕ್ಕಸಂಗಮದವರೆಗೆ ಸುಮಾರು ಸುಮಾರು 56ಕ್ಕೂ ಹೆಚ್ಚು ಹಳ್ಳಿಗಳು ಮುಳುಗಡೆಯಾಗಿವೆ. ಆಲಮಟ್ಟಿ ಜಲಾಶಯ ನಿರ್ಮಾಣದಿಂದ ಅತಿ ಹೆಚ್ಚು ಹಳ್ಳಿಗಳನ್ನು ಕಳೆದುಕೊಂಡ ತಾಲೂಕುಗಳಲ್ಲಿ ಬೀಳಗಿ ಮೊದಲು. ಆಲಮಟ್ಟಿ ಜಲಾಶಯವನ್ನು ಈಗಿರುವ 519.60 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸಿದಾಗ ಈ ತಾಲೂಕಿನ ಮೂಲ ಹಳ್ಳಿಗಳಲ್ಲಿ 14 ಹಳ್ಳಿಗಳು ಮಾತ್ರ ಉಳಿಯಲಿವೆ. ಉಳಿದವುಗಳೆಲ್ಲ ಪುನರ್‌ವಸತಿ ಕೇಂದ್ರಗಳೇ. ಹೀಗಾಗಿ ಬೀಳಗಿ, ಬಾಗಲಕೋಟೆ, ಹುನಗುಂದ, ಜಮಖಂಡಿ ತಾಲೂಕಿನಲ್ಲಿ ಹಿನ್ನೀರ ಒಡಲಿನ ಭಾವಾನುಭವಗಳೇ ಹೆಚ್ಚು.

ಒಡಲ ತುಂಬಾ ದೇವಾಲಯಗಳ ಭಕುತಿ:
ಹಿನ್ನೀರ ಪ್ರದೇಶ ವ್ಯಾಪ್ತಿಯ ಶಾಲೆ, ಮನೆಗಳು ಸಾವಿರಾರು ಮುಳುಗಿವೆ. ಅವುಗಳ ಬಗ್ಗೆ ಜನರಿಗೆ ಭಾವಾನುಭವ ಇದ್ದರೂ, ಅತಿ ಹೆಚ್ಚು ಮನಸ್ಸಿಗೆ ನೋವು ತರುವುದೇ ಇಲ್ಲಿನ ದೇವಾಲಯಗಳ ಭಕುತಿ. ಉತ್ತರ ಕರ್ನಾಟಕ, ಅದರಲ್ಲೂ ಜಿಲ್ಲೆಯ ಜನರಿಗೆ ದೇವಾಲಯ, ದೇವರ ಮೇಲೆ ಅತಿ ಹೆಚ್ಚು ಭಕ್ತಿ-ಭಾವ. ಇಲ್ಲಿನ ದೇವಾಲಯಗಳ ಜಾತ್ರೆ, ವಾರ್ಷಿಕೋತ್ಸವ, ಕಾರ್ತಿಕೋತ್ಸವ ಹೀಗೆ ಹಲವು ಸಂಭ್ರಮಗಳಲ್ಲಿ ಪ್ರತಿಯೊಂದು ಹಳ್ಳಿಯ ಜನ ಭಕ್ತಿ-ಭಾವದಿಂದ ಭಾಗವಹಿಸಿ ಸಂಭ್ರಮಿಸುತ್ತಿದ್ದರು. ಆ ಎಲ್ಲ ದೇವಾಲಯಗಳನ್ನು ಹೊಸ ಊರಲ್ಲಿ ಪುನರ್‌ ನಿರ್ಮಾಣ ಮಾಡಲಾಗಿದೆಯಾದರೂ ಮೂಲ ಹಳ್ಳಿಯ ಪಾದಗಟ್ಟಿಗೆ ಹೋಗಿ ದೇವರ ಗರ್ಭಗುಡಿಗೆ ಹಣೆಹಚ್ಚಿ ನಮಸ್ಕರಿಸಿದಾಗಲೇ ಅವರಿಗೆ ಒಂದು ರೀತಿಯ ಖುಷಿ, ನೆಮ್ಮದಿ.

ಆದರೆ ಆ ಹಳೆಯ ಹಳ್ಳಿಗಳ ತುಂಬಾ ಪ್ರತಿವರ್ಷ ಸುಮಾರು 6ರಿಂದ 7 ತಿಂಗಳವರೆಗೂ ಕೃಷ್ಣೆಯ (ಆಲಮಟ್ಟಿ ಜಲಾಶಯ) ಒಡಲಿನ ಹಿನ್ನೀರು ಆವರಿಸಿಕೊಳ್ಳುತ್ತದೆ. ಆಗ ದೇವಾಲಯಗಳ ಕಳಸದವರೆಗೂ ನೀರು ಬಂದಿರುತ್ತದೆ. ಇದರಿಂದ ಆ ದೇವಾಲಯಗಳ ಪ್ರವೇಶಕ್ಕೆ ಅವಕಾಶವಿರಲ್ಲ. ಇನ್ನು ಬೀಳಗಿ ತಾಲೂಕಿನ ಬಾಡಗಿಯ ಭಕ್ಕೇಶ್ವರ ದೇವಾಲಯ ಎದುರು ಬೃಹತ್‌ ಗಂಟೆಯೊಂದಿದ್ದು, ಹಿನ್ನೀರಿನ ತೆರೆಗಳಿಗೆ ಆ ಗಂಟೆಯ ನೀನಾದ ತನ್ನಿಂದ ತಾನೆ ಕೇಳಿಸುತ್ತದೆ. ಇಂತಹ ಹಲವಾರು ಸುಂದರ ಕ್ಷಣಗಳನ್ನು ಹಿನ್ನೀರು ಆವರಿಸಿಕೊಂಡಾಗಲೊಮ್ಮೆ ಕಾಣಬಹುದು. ಆದರೆ ಅಂತಹ ಕ್ಷಣಗಳನ್ನು ಕಾಣುವ ಜನ, ಹಳೆಯ ನೆನಪು ಮೆಲಕು ಹಾಕಿ ಭಾವನೆಗಳಿಂದ ಕಣ್ಣೀರಾಗುತ್ತಾರೆ.

ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.