Belagavi: CA ಓದು ಬಿಟ್ಟು ಕೃಷಿ ಸಾಧನೆ; ತಿಂಗಳಿಗೆ ಲಕ್ಷ ಲಕ್ಷ ಗಳಿಸುತ್ತಿರುವ ಸಾಧಕಿ

35ರಿಂದ 40 ದಿನಗಳಲ್ಲಿ ಒಟ್ಟು ಮೂರು ಬಾರಿ ಮೆಣಸಿನಕಾಯಿ ಕತ್ತರಿಸಲಾಗುತ್ತದೆ.

Team Udayavani, May 17, 2023, 3:02 PM IST

Belagavi: CA ಓದು ಬಿಟ್ಟು ಕೃಷಿ ಸಾಧನೆ; ತಿಂಗಳಿಗೆ ಲಕ್ಷ ಲಕ್ಷ ಗಳಿಸುತ್ತಿರುವ ಸಾಧಕಿ

ಬೆಳಗಾವಿ: ಸಿಎ (ಚಾರ್ಟೆರ್ಡ್‌ ಅಕೌಂಟ್‌) ಮಾಡಿ ನೌಕರಿ ಹಿಡಿಯಬೇಕಿದ್ದ ಯುವತಿ ತಂದೆಯ ಸಾವಿನಿಂದಾಗಿ ಅರ್ಧಕ್ಕೆ ಓದು ಬಿಟ್ಟು ಕೃಷಿಯಲ್ಲಿ ತೊಡಗಿಕೊಂಡು ಒಂದು ಎಕರೆ ಜಮೀನಿನಲ್ಲಿ ತಿಂಗಳಿಗೆ ಲಕ್ಷ ಲಕ್ಷ ಆದಾಯ
ಗಳಿಸುವ ಮೂಲಕ ಸಾಧನೆ ಮಾಡಿದ್ದಾಳೆ. ಕೃಷಿ ಎಂದರೆ ಮೂಗು ಮುರಿಯುವ ಇಂದಿನ ದಿನಮಾನದಲ್ಲಿ ಈ ಯುವತಿ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದಾಳೆ.

ಬೆಳಗಾವಿ ತಾಲೂಕಿನ ಜಾಫರವಾಡಿ ಗ್ರಾಮದ 26 ವರ್ಷದ ನಿಕಿತಾ ವೈಜು ಪಾಟೀಲ ಎಂಬ ಯುವತಿ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾಳೆ. ಒಂದು ಎಕರೆ ಜಮೀನಿನಲ್ಲಿ ಮೆಣಸಿಕಾಯಿ ಬೆಳೆದು ತಿಂಗಳಿಗೆ 5ರಿಂದ 6 ಲಕ್ಷ ರೂ. ಗಳಿಸುತ್ತಿದ್ದಾಳೆ. ಯುವತಿಯ ಈ ಸಾಧನೆಗೆ ಇಡೀ ಗ್ರಾಮವೇ ಹೆಮ್ಮೆ ಪಡುತ್ತಿದೆ.

ಹೊಲದಲ್ಲಿ ಮನಸ್ಸು ಕೊಟ್ಟು ದುಡಿದರೆ ಭೂಮಿ ನಮ್ಮ ಕೈ ಬಿಡುವುದಿಲ್ಲ ಎಂದು ನಂಬಿರುವ ನಿಕಿತಾ ಮಾದರಿಯಾಗಿದ್ದಾಳೆ. ಇಂದಿನ ದಿನಮಾನದಲ್ಲಿ ಕೃಷಿ ಎಂದರೆ ಮೂಗು ಮುರಿಯುವ ಜನರಿಗೆ ಮಾದರಿ ಕೃಷಿ ಪದ್ಧತಿ ಅಳವಡಿಸಿಕೊಂಡು ಬಹುರಾಷ್ಟ್ರೀಯ ಕಂಪನಿಗಳಲ್ಲೂ ಸಿಗಲಾರದಷ್ಟು ಆದಾಯ ಯುವತಿ ನಿಕಿತಾ ಗಳಿಸುತ್ತಿದ್ದಾಳೆ.

ಚಿಂತೆಗೀಡಾಗಿದ್ದ ಕುಟುಂಬಕ್ಕೆ ಆಸರೆ: ಕಳೆದ ವರ್ಷ ಯುವತಿ ನಿಕಿತಾಳ ತಂದೆ ವೈಜು ಪಾಟೀಲ ಸ್ವಂತ ಹೊಲದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮನೆ ನಡೆಸುತ್ತಿದ್ದ ಯಜಮಾನನೇ ಇಲ್ಲವಾದಾಗ ಇಡೀ ಕುಟುಂಬ ದಿಗ್ಭ್ರಾಂತಗೊಂಡು ಏನೂ ತೋಚದೇ ತಲೆಗೆ ಕೈಹಚ್ಚಿ ಕುಳಿತುಕೊಂಡಿತು.

ನಾಲ್ಕು ಎಕರೆ ಜಮೀನಿದ್ದರೂ ಅದನ್ನು ಮಾಡುವವರು ಯಾರು ಎಂಬ ಪ್ರಶ್ನೆ ಕಾಡತೊಡಗಿತು. ನಿಕಿತಾ ಪಾಟೀಲ ಬೆಳಗಾವಿಯ ಭಾವುರಾವ ಕಾಕತಕರ ಕಾಲೇಜಿನಲ್ಲಿ ಬಿ.ಕಾಂ ಮುಗಿಸಿ ಭರತೇಶ ಕಾಲೇಜಿನಲ್ಲಿ ಸಿ.ಎ(ಚಾರ್ಟೆರ್ಡ್‌ ಅಕೌಂಟೆಂಟ್‌) ತರಬೇತಿಗೆ ಪ್ರವೇಶ ಪಡೆದಿದ್ದಳು. ದ್ವಿತೀಯ ವರ್ಷ ಸಿ.ಎ ಓದುತ್ತಿದ್ದಾಗಲೇ ತಂದೆ ವೈಜು ಸಾವಿಗೀಡಾದರು.

ಇನ್ನು ಸಿ.ಎ ಪೂರ್ಣಗೊಳಿಸಿ ಮುಗಿಸಿ ಬೆಂಗಳೂರು ಅಥವಾ ಪುಣೆಯಲ್ಲಿ ನೌಕರು ಮಾಡುವ ಮಹದಾಸೆ ಹೊಂದಿದ್ದಳು. ತಂದೆಯ ಸಾವು ನಿಕಿತಾಳ ಜೀವನದಲ್ಲಿ ಅತಿ ದೊಡ್ಡ ದುರಂತವಾಯಿತು. ಕೃಷಿ ಮಾಡಿ ನಿಕಿತಾಳನ್ನು ತಂದೆ ಓದಿಸಿದ್ದರು. ಇನ್ನು ಕುಟುಂಬ ನಡೆಯುವುದಾದರೂ ಹೇಗೆ ಎಂದು ನಿಕಿತಾ ಚಿಂತೆಗೀಡಾದಳು.

ವಯಸ್ಸಾದ ತಾಯಿ ಅಂಜನಾ ಪಾಟೀಲ, ಹಿರಿಯ ಸಹೋದರ ಅಭಿಷೇಕಗೆ ಕೃಷಿ ಮಾಡುವುದು ಆಗದ ಮಾತು ಎಂದು ಅರಿತ ನಿಕಿತಾ ತಂದೆ ತೀರಿ ಹೋದ ಆರೇ ತಿಂಗಳಲ್ಲಿ ಸಿ.ಎ. ಓದನ್ನು ಅರ್ಧಕ್ಕೆ ಮೊಟಕುಗೊಳಿಸುವ ನಿರ್ಧಾರಕ್ಕೆ ಬಂದಳು. ಆಗ ನಿಕಿತಾಳ ನಿರ್ಧಾರದಿಂದ ಕುಟುಂಬ ಆಶ್ಚರ್ಯಗೊಂಡಿತು. ವಯಸ್ಸಿಗೆ ಬಂದ ಮಗಳು ಕೃಷಿಯಲ್ಲಿ ತೊಡಗಿಕೊಂಡರೆ ಹೇಗೆ ಎಂದು ಚಿಂತಿತರಾದರು. ಆಗ ತಾಯಿ ಹಾಗೂ ಅಣ್ಣನ ಮನವೊಲಿಸಿದ ನಿಕಿತಾ ಸಿ.ಎ. ಓದುವುದನ್ನು ಬಿಟ್ಟು ಕೃಷಿಕಳಾದಳು.

ವೈಜ್ಞಾನಿಕ ಪದ್ಧತಿಯಲ್ಲಿ ಕೃಷಿ: ಚಿಕ್ಕಂದಿನಿಂದಲೂ ನಿಕಿತಾಗೆ ಕೃಷಿಯಲ್ಲಿ ಬಹಳ ಆಸಕ್ತಿ. ಹೀಗಾಗಿ ತಂದೆಯ 4 ಎಕರೆ ಜಮೀನಿನಲ್ಲಿ ಮೊದಲಿಗೆ ಒಂದು ಎಕರೆಯಲ್ಲಿ ವೈಜ್ಞಾನಿಕ ಪದ್ಧತಿಯಲ್ಲಿ ಮೆಣಸಿಕಾಯಿಯನ್ನು ಮೂರು
ಭಾಗಗಳಾಗಿ ಹಚ್ಚಿದಳು. ಗಿಡಗಳನ್ನು ಹಚ್ಚುವಾಗ ಅಂತರ ಹೆಚ್ಚಿಸಿಕೊಂಡು ಪೈಪ್‌ ಮೂಲಕ ಹನಿ ನೀರಾವರಿ ಅಳವಡಿಸಿದಳು.

ಸುಮಾರು 3ರಿಂದ 4 ಅಡಿಗೂ ಹೆಚ್ಚು ಎತ್ತರಕ್ಕೆ ಬೆಳೆದ ಗಿಡಗಳಲ್ಲಿ ಹುಲುಸಾಗಿ ಮೆಣಸಿಕಾಯಿ ಬೆಳೆದವು. ಮೊದಲ ಬಾರಿಗೆ ಮೆಣಸಿನಕಾಯಿ ತೆಗೆಯುವಾಗ ನಾಲ್ಕು ಟನ್‌ಗೂ ಅಧಿಕ ಮೆಣಸಿಕಾಯಿ ಬಂತು. 10 ಕೆ.ಜಿ. ಮೆಣಸಿನಕಾಯಿಗೆ 500 ರೂ. ವರೆಗೂ ದರ ಇದೆ. ಸರಿಸುಮಾರು 2 ಲಕ್ಷ ರೂ. ಗೂ ಹೆಚ್ಚು ದರ ಬಂತು.

ತಿಂಗಳಿಗೆ 6 ಲಕ್ಷ ರೂ ಆದಾಯ: ಹೊಲದಲ್ಲಿ ಮೆಣಸಿನಕಾಯಿ ಕೀಳುವಾಗ 10-15 ಮಹಿಳೆಯರೇ ಕೆಲಸಕ್ಕೆ ಇದ್ದಾರೆ. 10-12 ದಿನಕ್ಕೊಮ್ಮೆ ಮೆಣಸಿನಕಾಯಿ ತೆಗೆಯಲಾಗುತ್ತದೆ. ಒಂದು ಎಕರೆ ಜಮೀನಿನಲ್ಲಿ ಮೂರು ಭಾಗ ಮಾಡಿರುವುದರಿಂದ ಒಂದು ಭಾಗದಲ್ಲಿಯ ಮೆಣಸಿನಕಾಯಿ ಕೀಳಲು 4-5 ದಿನ ಬೇಕಾಗುತ್ತದೆ. ಗಿಡಗಳ ಆರೈಕೆ, ನೀರು ಪೂರೈಸುವುದು, ಕಸ ತೆಗೆಯುವುದು ಸೇರಿ ಮತ್ತೆ 10-12 ದಿನಕ್ಕೆ ಎರಡನೇ ಭಾಗದಲ್ಲಿ ಮೆಣಸಿನಕಾಯಿ ತೆಗೆಯಲಾಗುತ್ತದೆ.

35ರಿಂದ 40 ದಿನಗಳಲ್ಲಿ ಒಟ್ಟು ಮೂರು ಬಾರಿ ಮೆಣಸಿನಕಾಯಿ ಕತ್ತರಿಸಲಾಗುತ್ತದೆ. ಒಮ್ಮೆ ಮೆಣಸಿನಕಾಯಿ ತೆಗೆದರೆ 4ರಿಂದ 4.50 ಟನ್‌ ಮೆಣಸಿನಕಾಯಿ ಬರುತ್ತದೆ. ಸುಮಾರು 2ರಿಂದ 2.30 ಲಕ್ಷ ರೂ. ವರೆಗೆ ದರ ಬರುತ್ತದೆ. 10-15 ಮಹಿಳೆಯರು ಕಾರ್ಮಿಕರಾಗಿ ದುಡಿಯುತ್ತಾರೆ. ದಿನಗೂಲಿ, ಔಷಧ ಸಿಂಪಡಣೆ, ನಿರ್ವಹಣೆ, ವಿದ್ಯುತ್‌ ಬಿಲ್‌ ಸೇರಿ ಖರ್ಚು ವೆಚ್ಚ ತೆಗೆದು ತಿಂಗಳಿಗೆ ಆರು ಲಕ್ಷ ರೂ. ವರೆಗೆ ಆದಾಯ ಸಿಗುತ್ತಿದೆ. ಜನೇವರಿಯಲ್ಲಿ ಗಿಡಗಳನ್ನು ಹಚ್ಚಿ ಏಪ್ರಿಲ್‌ ಮೊದಲ ವಾರದಿಂದ ಇಳುವರಿ ಆರಂಭವಾಗಿದೆ. ಈವರೆಗೆ ಒಟ್ಟು ಸುಮಾರು 8 ಲಕ್ಷಕ್ಕೂ ಅಧಿ ಕ ಆದಾಯ ನಿಕಿತಾಳಿಗೆ ಸಿಕ್ಕಿದೆ.

ಹೆಗಲಿಗೆ ಹೆಗಲು ಕೊಟ್ಟ ಅಣ್ಣ-ಚಿಕ್ಕಪ್ಪ
ಸಿ.ಎ. ಓದುತ್ತಿದ್ದ ನಿಕಿತಾ ತಂದೆಯ ನಿಧನಾ ನಂತರ ಕೃಷಿಯಲ್ಲಿ ತೊಡಗಿಕೊಂಡು ಬೆಳಗಾವಿ ತಾಲೂಕಿನಲ್ಲಿ ಉತ್ತಮ ಸಾಧನೆ ಮಾಡಿದ್ದಾಳೆ. ನೌಕರಿ ಹಿಡಿದು ಸಂಬಳ ಪಡೆಯುವುದಕ್ಕಿಂತ 10-15 ಮಹಿಳೆಯರಿಗೆ ಕೆಲಸ ಕೊಟ್ಟಿದ್ದಾಳೆ. ದಿನಗೂಲಿ ಮಹಿಳೆಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಆತ್ಮೀಯವಾಗಿ ತಾನೂ ಕೆಲಸ ಮಾಡುತ್ತಾಳೆ.

ಈಕೆಗೆ ಸಹೋದರ ಅಭಿಷೇಕ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದಾನೆ. ನಿಕಿತಾಳ ಚಿಕ್ಕಪ್ಪ ತಾನಾಜಿ ಪಾಟೀಲ ನಿಕಿತಾಗೆ ಕೃಷಿ ಸಲಹೆ ನೀಡುತ್ತಾರೆ. ಒಂದೆಡೆ ಅಣ್ಣ ಅಭಿಷೇಕ, ಇನ್ನೊಂದೆಡೆ ಚಿಕ್ಕಪ್ಪ ತಾನಾಜಿಯ ಮಾರ್ಗದರ್ಶನದಲ್ಲಿ ಕೈ ತುಂಬ ಆದಾಯ ಗಳಿಸುತ್ತಿದ್ದಾಳೆ.

ಮೆಣಸಿನಕಾಯಿಗೆ ಭಾರೀ ಬೇಡಿಕೆ
ಜಾಫರವಾಡಿಯ ಹೊಲದಲ್ಲಿ ನಿಕಿತಾ ಬೆಳೆಯುತ್ತಿರುವ ಮೆಣಸಿನಕಾಯಿಗೆ ಭಾರೀ ಬೇಡಿಕೆ ಇದೆ. 3ರಿಂದ 5 ಇಂಚು ಬೆಳೆಯುವ ಈ ಮೆಣಸಿನಕಾಯಿಗೆ ದರವೂ ಹೆಚ್ಚಿದೆ. ಮೆಣಸಿನಕಾಯಿ ಕತ್ತಿಸಿದ ಬಳಿಕ ಮನೆಯಲ್ಲಿಯೇ 10 ಕೆ.ಜಿ. ತೂಕ ಮಾಡಿ ಚೀಲದಲ್ಲಿ ಹಾಕಿ ನೇರವಾಗಿ ಎಪಿಎಂಸಿಗೆ ಕಳುಹಿಸುತ್ತಾಳೆ. ತರಕಾರಿ ಮಾರುಕಟ್ಟೆಗೆ ಹೋದ ಬಳಿಕ ತೂಕದಲ್ಲಿ ಮೋಸ ಎಂಬ ಮಾತೇ ಇಲ್ಲ. ಈ ಮೆಣಸಿನಕಾಯಿ ಗೋವಾ ಹಾಗೂ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಸಾಗಾಟ ಮಾಡಲಾಗುತ್ತದೆ.

ಚಿಕ್ಕಂದಿನಿಂದಲೂ ನನಗೆ ಕೃಷಿಯಲ್ಲಿ ಬಹಳ ಆಸಕ್ತಿ. ತಂದೆ ಕೃಷಿಯಲ್ಲಿ ಬಂದ ಆದಾಯದಲ್ಲಿ ನನ್ನನ್ನು ಓದಿಸಿದ್ದಾರೆ. ತಂದೆಯ ಸಾವು ನನ್ನ ಜೀವನದಲ್ಲಿ ಸಿಡಿಲು ಬಡಿದಂತಾಯಿತು. ಸಿ.ಎ. ಓದುವುದನ್ನು ಅರ್ಧಕ್ಕೆ ಮೊಟಕುಗೊಳಿಸಿ ಕೃಷಿಯಲ್ಲಿ
ತೊಡಗಿಕೊಂಡೆ. ಮೆಟ್ರೋ ಪಾಲಿಟನ್‌ ಸಿಟಿಯಲ್ಲಿ ನೌಕರಿ ಮಾಡುವುದಕ್ಕಿಂತ ಇದೇ ಲೇಸು. ವೈಜ್ಞಾನಿಕ ಪದ್ಧತಿಯಲ್ಲಿ ಮೆಣಸಿನಕಾಯಿ ಗಿಡ ಹಚ್ಚಿ ಉತ್ತಮ ಆದಾಯ ಪಡೆಯುತ್ತಿದ್ದೇನೆ.
∙ನಿಕಿತಾ ಪಾಟೀಲ,ಕೃಷಿ ಸಾಧಕಿ

*ಭೈರೋಬಾ ಕಾಂಬಳೆ

ಟಾಪ್ ನ್ಯೂಸ್

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.