ಕೊರಟಗೆರೆ ತಾಲೂಕಿನಲ್ಲಿ ದಾಖಲೆ ಬೆಲೆಗೆ ಮಾರಾಟವಾದ ವೀಳ್ಯದೆಲೆ


Team Udayavani, Feb 7, 2023, 6:00 PM IST

ಕೊರಟಗೆರೆ ತಾಲೂಕಿನಲ್ಲಿ ದಾಖಲೆ ಬೆಲೆಗೆ ಮಾರಾಟವಾದ ವೀಳ್ಯದೆಲೆ

ಕೊರಟಗೆರೆ; ತಾಲೂಕಿನ ತೋವಿನಕೆರೆ ಸಂತೆಯಲ್ಲಿ ವೀಳ್ಯದೆಲೆ ಕಟ್ಟಿಗೆ 160 ರೂಗಳ ದಾಖಲೆ ಬೆಲೆಗೆ ಮಾರಾಟವಾಗಿ ದಾಖಲೆ ನಿರ್ಮಿಸಿದ್ದು, ಇದುವರೆಗೂ ಈ ಬೆಲೆ ತಲುಪಿರಲಿಲ್ಲ, ಮಧುಗಿರಿ ತಾಲೂಕಿನ ಲಿಂಗಸಂದ್ರದ ಬೆಳೆಗಾರ ನಟರಾಜು ಸಂತೆಗೆ ತಂದಿದ್ದ ವೀಳ್ಯೆದೆಳೆ ಇದುವರೆಗೂ ಇಷ್ಟೊಂದು ದರಕ್ಕೆ ವೀಳ್ಯದೆಲೆ ಬೆಲೆ ಏರಿಕೆ ಯಾಗಿ ಹೆಚ್ಚಿನ ಬೆಲೆಗೆ ಮಾರಾಟವಾಯಿತು.

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ತೋವಿನಕೆರೆ ಸಂತೆಯಲ್ಲಿ ವೀಳ್ಯದೆಳೆ ಮಾರಾಟ ಹಲವು ದಶಕಗಳಿಂದ ನಡೆಯುತ್ತಿದೆ, ಮಧುಗಿರಿ ತಾಲೂಕು ದೊಡ್ಡೇರಿ ಹೋಬಳಿ, ತೋವಿನಕೆರೆ ಸುತ್ತಮುತ್ತಲಿನ ಪ್ರದೇಶಗಳ ವೀಳ್ಯದೆಲೆ ಬೆಳೆಯುವ ರೈತರು ಪ್ರತಿ ವಾರ ತೋವಿನಕೆರೆ ಸಂತೆಗೆ ತಂದು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುತ್ತಾರೆ, ಬೆಳೆಗಾರರು ಕಟ್ಟಿನಲ್ಲಿ ನೂರು ಎಲೆಗಳಿಗಿಂತ ಹೆಚ್ಚು ವೀಳ್ಯೆದೆಲೆ ಇಟ್ಟಿರುತ್ತಾರೆ, ಕಡಿಮೆಯಿರುವುದಿಲ್ಲ, ವೀಳ್ಯೆದೆಲೆ ಸಂಖ್ಯೆಯಲ್ಲಿ ಸುಳ್ಳು ಹೇಳಬಾರದು ಎಂದು ಬಲವಾದ ನಂಬಿಕೆ ಈ ಭಾಗದ ವೀಳ್ಯೆದೆಲೆ ಬೆಳೆಗಾರರಲ್ಲಿದೆ ಅದೇ ರೀತಿ ಇಂದಿಗೂ ನಡೆದುಕೊಂಡು ಬರುತ್ತಿದ್ದಾರೆ.

ಬೇರೆ ಮಾರುಕಟ್ಟೆಗಳಲ್ಲಿ ಕಟ್ಟಿನಲ್ಲಿ ಕಡಿಮೆ ಇಟ್ಟು ಮಾರುವುದು ಸಾಮಾನ್ಯ, ಆದರೆ ತೋವಿನಕೆರೆ ಸಂತೆಯಲ್ಲಿ ವೀಳ್ಯದೆಲೆ ಉತ್ತಮ ಹೆಸರು ಬರಲು ಮುಖ್ಯ ಕಾರಣ ಇದೇ, ಎನ್ನುತ್ತಾರೆ ಹಿರಿಯ ಕೃಷಿಕರು, ಶಿರಾ, ಮಧುಗಿರಿ, ಕೊಡಿಗೇನಹಳ್ಳಿ, ಗುಬ್ಬಿ, ತುಮಕೂರು, ಚೇಳೂರು ಹಾಗೂ ಆಂದ್ರಪ್ರದೇಶ ರಾಜ್ಯದ ಹಿಂದೂಪುರ ದಿಂದಲೂ ಖರೀದಿದಾರರು ತೋವಿನಕೆರೆ ಸಂತೆಗೆ ಬರುತ್ತಾರೆ, ಅಂಗಡಿಗಳಲ್ಲಿ ಚಿಲ್ಲದೆ ಮಾರಾಟಗಾರರು 200-220 ರೂಗಳಿಗೆ ಒಂದು ಕಟ್ಟು ಮಾರಾಟ ಮಾಡುತ್ತಿದ್ದಾರೆ, ತುಮಕೂರು ಜಿಲ್ಲೆಯ ತೋವಿನಕೆರೆ ವೀಳ್ಯೆದೆಲೆ ಸಂತೆಯಲ್ಲಿ ಬೆಳೆಗಾರರೇ ನೇರವಾಗಿ ಗ್ರಾಹಕರಿಗೆ ಮತ್ತು ಮರ್ಧವರ್ತಿಗಳಿಗೆ ಮಾರಾಟ ಮಾಡುವುದು ಹಲವು ದಶಕಗಳಿಂದ ನಡೆಯುತ್ತಿದೆ, ಇಲ್ಲಿನ ಕಟ್ಟುಗಳಲ್ಲಿ ನೂರು ಎಲೆಗಳಿಗಿಂತ ಹೆಚ್ಚು ಇರುತ್ತವೆ, ಕಡಿಮೆ ಇಟ್ಟುಮಾರಾಟ ಮಾಡುವುದಿಲ್ಲವೆಂದು ಬೇರೆ ಸ್ಥಳದ ಗ್ರಾಹಕರು ನಂಬಿದ್ದಾರೆ, ಸಂತೆಯಲ್ಲಿ ಬೆಳಿಗ್ಗೆ ೭ ಗಂಟಗೆ ಪ್ರಾರಂಭವಾಗುವ ವೀಳ್ಯದೆಲೆ ಮತ್ತೆ 10 ಗಂಟೆಗೆ ಮುಕ್ತಾಯವಾಗುತ್ತದೆ.

ವೀಳ್ಯದೆಲೆ ಬೆಳೆಗಾರ ಲಿಂಗಸಂದ್ರ ನಟರಾಜು ಬೆಲೆ ಹೆಚ್ಚಳದ ಬಗ್ಗೆ ಮಾಹಿತಿ ನೀಡಿ ಜನವರಿ ತಿಂಗಳ ಸಂತೆಯಲ್ಲಿ 100 ರೂಗಳ ಗಡಿ ದಾಟಿ ಮಾರಾಟವಾದರೆ ಫೆಬ್ರವರಿ ಮೊದಲವಾರ 160 ರೂಗಳು ತಲುಪಿದೆ, ಸಂತೆಯಲ್ಲಿ ಅತಿ ಕಡಿಮೆ ಬೆಲೆಗೆ ಮಾರಾಟವಾದ ವೀಳ್ಯದೆಲೆ ಎಂದರೆ 140 ರೂಗಳು, ವೀಳ್ಯೆದೆಲೆ ಬೆಲೆ ಹೆಚ್ಚಾಗಲು ಕಾರಣ ಹಬ್ಬಗಳು, ಜಾತ್ರೆಗಳು, ಮದುವೆಗಳು ಹೆಚ್ಚಾಗಿ ನಡೆಯುತ್ತಿದ್ದು ಈ ಸಂಪ್ರದಾಯದ ಕಾರ್ಯಕ್ರಮಗಳಿಗೆ ವೀಳ್ಯದೆಲೆ ಅವಶ್ಯಕ ವಸ್ತುವಾದ ಹಿನ್ನಲೆ ಹೆಚ್ಚು ಬೇಡಿಕೆ ಇರುವುದರಿಂದ ಹಾಗೂ ಚಳಿಯ ಕಾರಣದಿಂದ ವೀಳ್ಯದೆಲೆ ಇಳುವರಿ ಕಡಿಮೆಯಾಗಿದೆ. ಕಳೆದ ವರ್ಷ ಬಿದ್ದ ಮಳೆಯು ಇಳುವಿರಿ ಮೇಲೆ ಪರಿಣಾಮ ಬೀರಿದೆ, ವೀಳ್ಯದೆಲೆ ತೋಟಗಳಲ್ಲಿ ಶೇ. 70 ರಷ್ಟು ಇಳುವರಿ ಕಡಿಮೆಯಾಗಿದೆ, 100 ಪೆಂಡಿ ಬರುವ ಜಾಗದಲ್ಲಿ ಕೇವಲ 30 ಪೆಂಡಿ ವೀಳ್ಯದೆಲೆ ಬರುತ್ತಿಲ್ಲ ಈ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಾಗಿದೆ ಎಂದು ಅಬಿಪ್ರಾಯತಿಳಿಸಿದರು.

ಖರೀದಿದಾರ ಹರೀಶ್ ಮಾತನಾಡಿ ರೈತರು ವೀಳ್ಯೆದೆಲೆ ಬಳ್ಳಿಯನ್ನು ಮರದಿಂದ ಇಳಿಸಿ ಭೂಮಿಗೆ ಅದಿಯುತ್ತಿದ್ದಾರೆ, ಮತ್ತೆ ಬಳ್ಳಿ ಚಿಗುರು ಬರಬೇಕು, ಇದೇ ವಾತಾವರಣ ಮುಂದುವರೆದರೆ ಚಿಗುರು ಹೊಡೆಯುವುದು ತಡವಾಗುತ್ತದೆ, ಎಲೆಗಳು ಬರುವುದು ತಡವಾದರೆ ಎಲೆಯ ಬೆಲೆ ಇನ್ನು ಹೆಚ್ಚಾಗ ಬಹುದು ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದರು.

ಇದನ್ನೂ ಓದಿ: ಸಾಗರ: ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿ ಜಾತ್ರೆಗೆ ಅದ್ದೂರಿ ಚಾಲನೆ

ಟಾಪ್ ನ್ಯೂಸ್

siddaramaiah

ಕ್ಷೇತ್ರ ಇಲ್ಲದಿದ್ದರೆ 25 ಕ್ಷೇತ್ರಗಳಿಂದ ಆಫರ್ ಬರುತ್ತಿತ್ತಾ?: ಸಿದ್ದರಾಮಯ್ಯ

1-aadsdads

ಹೆಚ್ಚಿನ ಮಾದಕ ದ್ರವ್ಯಗಳು ಪಾಕ್ ನಿಂದ ರವಾನೆ; ಸಾಗರದಲ್ಲಿ ಭದ್ರತೆ ಬಲಪಡಿಸಬೇಕು: ಶಾ

pri-gh

ರಾಹುಲ್ ಗಾಂಧಿಯನ್ನು’ಮೀರ್ ಜಾಫರ್’ ಎಂದರು ; ಪ್ರಧಾನಿ ವಿರುದ್ಧ ಪ್ರಿಯಾಂಕಾ ಕಿಡಿ

U T KHADER

ರಾಹುಲ್ ಗಾಂಧಿ ಅನರ್ಹ ಪ್ರಕರಣ ಸಂಸದೀಯ ನಿಯಮ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ:ಯು.ಟಿ.ಖಾದರ್

Yatindra

ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ: ಡಾ.ಯತೀಂದ್ರ

1-sad-sad-d

64 ಅಧಿಕೃತ ತಿದ್ದುಪಡಿಗಳೊಂದಿಗೆ ಹಣಕಾಸು ಮಸೂದೆ ಅಂಗೀಕರಿಸಿದ ಲೋಕಸಭೆ

swamiji ticket

ಬೆಂಗಳೂರಿನಲ್ಲಿ ನೇಕಾರರಿಗೆ ಟಿಕೆಟ್‌ನೀಡಲು ಸ್ವಾಮೀಜಿಗಳಿಂದ ಒತ್ತಾಯ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aadsdads

ಹೆಚ್ಚಿನ ಮಾದಕ ದ್ರವ್ಯಗಳು ಪಾಕ್ ನಿಂದ ರವಾನೆ; ಸಾಗರದಲ್ಲಿ ಭದ್ರತೆ ಬಲಪಡಿಸಬೇಕು: ಶಾ

swamiji ticket

ಬೆಂಗಳೂರಿನಲ್ಲಿ ನೇಕಾರರಿಗೆ ಟಿಕೆಟ್‌ನೀಡಲು ಸ್ವಾಮೀಜಿಗಳಿಂದ ಒತ್ತಾಯ

ananth kumar hegde

ಕೇಂದ್ರ ಸರಕಾರದಿಂದ ಉತ್ತರ ಕನ್ನಡ ಜಿಲ್ಲೆಗೆ 232 ಕೋ.ರೂ. ಅನುದಾನ

ಅತಂತ್ರ ಸ್ಥಿತಿ ಬೇಡ, ಬಿಜೆಪಿಗೆ ಪೂರ್ಣ ಬಹುಮತ ನೀಡಿ: ಅಮಿತ್ ಶಾ

ಅತಂತ್ರ ಸ್ಥಿತಿ ಬೇಡ, ಬಿಜೆಪಿಗೆ ಪೂರ್ಣ ಬಹುಮತ ನೀಡಿ ಮೋದಿ ಕೈ ಬಲಪಡಿಸಿ: ಅಮಿತ್ ಶಾ

ಎಪ್ರಿಲ್‌ ಮೊದಲ ವಾರ ಬಿಜೆಪಿ ಪಟ್ಟಿ: ಬಿಡುಗಡೆ ಭಾಗ್ಯ ಕಾಣದ ಕಾಂಗ್ರೆಸ್‌ ಪಟ್ಟಿ

ಎಪ್ರಿಲ್‌ ಮೊದಲ ವಾರ ಬಿಜೆಪಿ ಪಟ್ಟಿ: ಬಿಡುಗಡೆ ಭಾಗ್ಯ ಕಾಣದ ಕಾಂಗ್ರೆಸ್‌ ಪಟ್ಟಿ

MUST WATCH

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

ಹೊಸ ಸೇರ್ಪಡೆ

siddaramaiah

ಕ್ಷೇತ್ರ ಇಲ್ಲದಿದ್ದರೆ 25 ಕ್ಷೇತ್ರಗಳಿಂದ ಆಫರ್ ಬರುತ್ತಿತ್ತಾ?: ಸಿದ್ದರಾಮಯ್ಯ

1-aadsdads

ಹೆಚ್ಚಿನ ಮಾದಕ ದ್ರವ್ಯಗಳು ಪಾಕ್ ನಿಂದ ರವಾನೆ; ಸಾಗರದಲ್ಲಿ ಭದ್ರತೆ ಬಲಪಡಿಸಬೇಕು: ಶಾ

pri-gh

ರಾಹುಲ್ ಗಾಂಧಿಯನ್ನು’ಮೀರ್ ಜಾಫರ್’ ಎಂದರು ; ಪ್ರಧಾನಿ ವಿರುದ್ಧ ಪ್ರಿಯಾಂಕಾ ಕಿಡಿ

ಜಿಲ್ಲೆಯಲ್ಲಿ 60 ಚೆಕ್‌ಪೋಸ್ಟ್‌ ಆರಂಭ; 25 ಲಕ್ಷ ರೂ. ನಗದು, 16 ಲಕ್ಷ ರೂ. ಸೀರೆ ವಶಕ್ಕೆ

ಜಿಲ್ಲೆಯಲ್ಲಿ 60 ಚೆಕ್‌ಪೋಸ್ಟ್‌ ಆರಂಭ; 25 ಲಕ್ಷ ರೂ. ನಗದು, 16 ಲಕ್ಷ ರೂ. ಸೀರೆ ವಶಕ್ಕೆ

mangalore acc

ತಾಯಿ – ಮಗ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್‌ ಡಿಕ್ಕಿ : ಬಾಲಕ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.