ಅಭ್ಯುದಯ ಮಂಡಲಕೆ ಸಪ್ತರ್ಷಿ ಬಲ
"ಶ್ರೀ ಮಧ್ಯಮ ವರ್ಗ': ಜನಸಾಮಾನ್ಯರತ್ತ ಗಮನ
Team Udayavani, Feb 2, 2023, 7:44 AM IST
ಹೊಸದಿಲ್ಲಿ: ಎಲ್ಲರಿಗೂ ಬಜೆಟ್ನಲ್ಲಿ ಏನಾದರೂ ಒಂದು ಕೊಟ್ಟೇ ಕೊಡುತ್ತಾರೆ, ಆದರೆ ನಮ್ಮನ್ನು ಮಾತ್ರ ಮರೆತುಬಿಡುತ್ತಾರೆ ಎಂಬ ದೇಶದ ಮಧ್ಯಮ ವರ್ಗದ ಮುನಿಸಿಗೆ ಕರಗಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಅವರ ಬಹುದಿನಗಳ ಬೇಡಿಕೆಯಾದ ಆದಾಯ ತೆರಿಗೆ ಸ್ಲಾéಬ್ ಮಿತಿ ಹೆಚ್ಚಳ ಮಾಡಿ ಕೋಪ ತಣಿಸಲು ಮುಂದಾಗಿದ್ದಾರೆ. ಹಾಗೆಯೇ ಉಳಿತಾಯ ಯೋಜನೆಗಳ ಮೂಲಕ ಮಹಿಳೆಯರ ಮನವೊಲಿಕೆಗೂ ಹೆಜ್ಜೆ ಇರಿಸಿದ್ದಾರೆ.
ಲೋಕಸಭೆಯಲ್ಲಿ ಬುಧವಾರ ತಮ್ಮ ಐದನೇ ಬಜೆಟ್ ಮಂಡಿಸಿದ ನಿರ್ಮಲಾ, ಯಾರಿಗೂ ಹೆಚ್ಚು ಹೊರೆ ನೀಡದೆ ಎಲ್ಲರನ್ನೂ ತೃಪ್ತಗೊಳಿಸುವ ಪ್ರಯತ್ನ ಮಾಡಿದ್ದಾರೆ. ರಕ್ಷಣೆ, ಆರೋಗ್ಯ, ಕೃಷಿ, ಗ್ರಾಮೀಣಾಭಿವೃದ್ಧಿ, ಮೂಲಸೌಕರ್ಯ, ರೈಲ್ವೇ, ಸಾರ್ವಜನಿಕ ವಿತರಣೆ -ಹೀಗೆ ಸಾಲು ಸಾಲು ಇಲಾಖೆಗಳಿಗೆ ಲಕ್ಷ ಲಕ್ಷ ಕೋಟಿ ರೂ. ಅನುದಾನ ನೀಡಿದ್ದಾರೆ.
ಬಜೆಟ್ನಲ್ಲಿ ಏಳು ಆದ್ಯತಾ ವಲಯಗಳನ್ನು ಗುರುತಿಸಲಾಗಿದ್ದು, ಇದನ್ನು “ಸಪ್ತರ್ಷಿ’ ಎಂದು ನಿರ್ಮಲಾ ಕರೆದಿದ್ದಾರೆ. ಹಾಗೆಯೇ “ಅಮೃತಕಾಲದಿಂದ ಶತಮಾನೋತ್ಸವದತ್ತ ಭಾರತ’ ಎಂಬ ಪರಿಕಲ್ಪನೆಯಡಿ ನಾಲ್ಕು ಅವಕಾಶಗಳನ್ನು ಗುರುತಿಸಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಮುನ್ನ ಮಂಡನೆಯಾಗಿರುವ ಪೂರ್ಣ ಪ್ರಮಾಣದ ಬಜೆಟ್ ಇದು ಎಂಬುದು ವಿಶೇಷ.
ಹೊಸ ತೆರಿಗೆ ಪದ್ಧತಿ
ಇದುವರೆಗೆ 5 ಲಕ್ಷ ರೂ.ಗಳ ವರೆಗೆ ಆದಾಯ ತೆರಿಗೆ ಇರಲಿಲ್ಲ. ಹೊಸ ತೆರಿಗೆ ಪದ್ಧತಿಯಂತೆ ಇದನ್ನು 7 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಹಾಗೆಯೇ ಹಳೇ ಪದ್ಧತಿಯಲ್ಲಿನ ಆದಾಯ ತೆರಿಗೆ ಸ್ಲಾéಬ್ಗಳ ಮಿತಿ ಏರಿಕೆ ಮಾಡಲಾಗಿದೆ.
ಸಪ್ತರ್ಷಿಗಳು
- ಸರ್ವ ಜನರ ತೋಟ (ಸರ್ವರ ಅಭಿವೃದ್ಧಿ)
- ಸರ್ವರಿಗೂ ವಿಕಾಸದ ಬೆಳಕು (ಕೊನೇ ವ್ಯಕ್ತಿಯವರೆಗೆ)
- ಹಣಕಾಸು ಸಮ್ಮಾನ (ಹಣಕಾಸು ವಿಭಾಗ)
- ಯುವಶಕ್ತಿ ಮೇವ ಜಯತೇ (ಯುವಶಕ್ತಿ)
- ಹಸಿರ ಹಾದಿಯಲ್ಲಿ (ಹಸುರು ಪ್ರಗತಿ)
- ಹೂಡಿಕೆ ಬೇಡಿಕೆ (ಮೂಲಸೌಕರ್ಯ, ಹೂಡಿಕೆ)
- ಬದುಕಿಗೆ ಡಿಜಿಟಲ್ ಸ್ಪರ್ಶ (ಸಾಮರ್ಥ್ಯಗಳ ಅನಾವರಣ)
ಇದು ಅಮೃತಕಾಲದ ಮೊದಲ ಬಜೆಟ್. ಸಮಾಜದ ಶ್ರೀಸಾಮಾನ್ಯನಿಗೆ ನಾವು ಆಯ್ಕೆಗಳನ್ನು ನೀಡಿದ್ದೇವೆ. ಎರಡು ರೀತಿಯ ತೆರಿಗೆ ಪದ್ಧತಿ ನೀಡಲಾಗಿದ್ದು, ಜನ ಅವರಿಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳ ಬಹುದು. ಇದರಿಂದ ತೆರಿಗೆದಾರರಿಗೆ ಅನುಕೂಲವಾಗಲಿದೆ.
-ನಿರ್ಮಲಾ ಸೀತಾರಾಮನ್, ವಿತ್ತ ಸಚಿವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ