‘ಇಲ್ಲೇನ್ ಮಾಡ್ತಿದ್ದೀಯಾ ನೀನು?’: ಸಚಿವ ಸೋಮಣ್ಣಗೆ ಮುಖ್ಯಮಂತ್ರಿ ಯಡಿಯೂರಪ್ಪ ತರಾಟೆ
Team Udayavani, Aug 28, 2019, 2:39 PM IST
ಬೆಂಗಳೂರು: ತನ್ನ ಹಿಂದೆಯೇ ಸುತ್ತುತ್ತಿದ್ದ ವಸತಿ ಸಚಿವ ವಿ ಸೋಮಣ್ಣ ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕ್ಲಾಸ್ ತೆಗೆದುಕೊಂಡ ಘಟನೆ ವಿಧಾನಸೌಧದಲ್ಲಿ ನಡೆದಿದೆ.
ಸೋಮಣ್ಣ ಅವರನ್ನು ಕಂಡ ಮುಖ್ಯಮಂತ್ರಿಯವರು ಸಿಟ್ಟಿನಿಂದ, ‘ಇಲ್ಲೇನ್ ಮಾಡ್ತಿದ್ದೀಯಾ ನೀನು? ನನ್ನ ಹಿಂದೆ ಯಾಕೆ ಓಡಾಡ್ತಿದ್ದೀಯಾ?’ ಎಂದು ಗರಂ ಆದರು. ಅಷ್ಟಕ್ಕೇ ಸುಮ್ಮನಾಗದ ಬಿಎಸ್.ವೈ, ‘ಅಲ್ಲಿ ಹೋಗಿ ಕೆಲ್ಸ ಮಾಡು ಅಂದ್ರೆ, ಇಲ್ಲಿ ಸ್ವಾಮಿಗಳ ಹಿಂದೆ ಓಡಾಡ್ತಿದ್ದೀಯಾ?’ ‘ಮೈಸೂರು ದಸರಾ ಸಿದ್ಧತೆ ನೋಡ್ಕೋ ಅಂದ್ರೆ ಇಲ್ಯಾಕೆ ನನ್ ಹಿಂದೆ ಓಡಾಡ್ತಿದ್ದೀಯಾ…? ಹೋಗು, ಮೈಸೂರಿಗೆ ಹೋಗಿ ದಸರಾ ಸಿದ್ಧತೆ ಮಾಡ್ಕೊಳ್ಳಿ’ ಎಂದು ಸೋಮಣ್ಣ ಅವರಿಗೆ ಕ್ಲಾಸ್ ತೆಗೆದುಕೊಂಡರು.