![1-kanwar-msid](https://www.udayavani.com/wp-content/uploads/2024/07/1-kanwar-msid-415x233.jpg)
Viral Video: ಬೈಕ್ ಮೇಲೇರಿ ಬಂದ ಕಾಳಿಂಗ ಸರ್ಪ…ಸಾವಿನ ದವಡೆಯಿಂದ ಪಾರಾದ ಸವಾರ!
Team Udayavani, Apr 1, 2024, 5:42 PM IST
![Viral Video: ಬೈಕ್ ಮೇಲೇರಿ ಬಂದ ಕಾಳಿಂಗ ಸರ್ಪ…ಸಾವಿನ ದವಡೆಯಿಂದ ಪಾರಾದ ಸವಾರ!](https://www.udayavani.com/wp-content/uploads/2024/04/Hero-620x337.jpg)
ಅಮೇಠಿ(ಉತ್ತರಪ್ರದೇಶ): ಪಾರ್ಕ್ ಮಾಡಿದ್ದ ಬೈಕ್ ಮೇಲೆ ದಿಢೀರನೆ ಕಾಳಿಂಗ ಸರ್ಪ ಹತ್ತಿ ಬಂದಿದ್ದು, ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಉತ್ತರಪ್ರದೇಶದ ಅಮೇಠಿಯ ರೈಲ್ವೆ ಕ್ರಾಸ್ ಸಮೀಪ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:Bangladesh: ನಿಮ್ಮ ಪತ್ನಿಯ ಭಾರತೀಯ ಸೀರೆಗಳನ್ನು ಸುಟ್ಟು ಹಾಕಿ: ಬಾಂಗ್ಲಾ ಪ್ರಧಾನಿ ಕಿಡಿ
ಬೈಕ್ ನಲ್ಲಿ ಕಾಳಿಂಗ ಸರ್ಪವನ್ನು ಕಂಡು ಹೆದರಿ ಹೌಹಾರಿದ ಸವಾರ, ಕೂಡಲೇ ಬೈಕ್ ನಿಂದ ಹಾರಿದ್ದ. ಅಮೇಠಿ ಜಯಾಸ್ ಪೊಲೀಸ್ ಠಾಣಾ ವ್ಯಾಪ್ತಿಯ ಪರ್ಸಾದೇಪುರ್ ರೈಲ್ವೆ ಕ್ರಾಸಿಂಗ್ ಸಮೀಪ ಭಾನುವಾರ (ಮಾರ್ಚ್ 31) ಸಂಜೆ ಈ ಘಟನೆ ನಡೆದಿತ್ತು ಎಂದು ವರದಿ ತಿಳಿಸಿದೆ.
ಬೈಖ್ ನ ಹೆಡ್ ಲೈಟ್ ಭಾಗದಿಂದ ಕಾಳಿಂಗ ಸರ್ಪ ಮೇಲೇರಿ ಬಂದು, ಬುಸುಗುಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಹಾವನ್ನು ಕಂಡು ದೂರ ಸರಿದು, ಬೈಕ್ ಸವಾರ ವಿಡಿಯೋ ಮಾಡಿರುವುದಾಗಿ ವರದಿ ವಿವರಿಸಿದೆ.
अमेठी – क्रासिंग बंद होने के चलते खड़ी बाइक पर चढ़ा सांप
➡बाइक पर सांप देख बाइक सवार युवक छोड़कर भागा
➡सांप का वीडियो बनाकर सोशल मीडिया पर किया वायरल
➡गांधी नगर के छतोह रोड पर स्थित रेलवे क्रासिंग का मामला.#Amethi pic.twitter.com/yEY8Fe7ZWs— भारत समाचार | Bharat Samachar (@bstvlive) April 1, 2024
ವಿಷಯ ತಿಳಿದ ಸ್ಥಳೀಯರು ಗುಂಪುಗೂಡತೊಡಗಿದ್ದರು. ನಂತರ ಬೈಕ್ ಮೇಲೆ ಇದ್ದ ಕಾಳಿಂಗ ಸರ್ಪವನ್ನು ಹಿಡಿದು ಅರಣ್ಯದೊಳಕ್ಕೆ ಬಿಡಲಾಯಿತು ಎಂದು ವರದಿ ತಿಳಿಸಿದೆ. ಸಮೀಪದ ಅರಣ್ಯ ಪ್ರದೇಶ ಇರುವ ಅಶ್ವತ್ಥ ಮರದ ಸಮೀಪ ಕಾಳಿಂಗ ಸರ್ಪ ವಾಸವಾಗಿದ್ದು, ಆಗಾಗ ಈ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಟಾಪ್ ನ್ಯೂಸ್
![1-kanwar-msid](https://www.udayavani.com/wp-content/uploads/2024/07/1-kanwar-msid-415x233.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Viral: ಮದುವೆಯಾಗಿ ಮೂರೇ ನಿಮಿಷದಲ್ಲಿ ನಡೆಯಿತು ವಿಚ್ಚೇದನ; ಈ ನಿರ್ಧಾರಕ್ಕೆ ಕಾರಣವೇನು?](https://www.udayavani.com/wp-content/uploads/2024/07/9-15-150x90.jpg)
Viral: ಮದುವೆಯಾಗಿ ಮೂರೇ ನಿಮಿಷದಲ್ಲಿ ನಡೆಯಿತು ವಿಚ್ಚೇದನ; ಈ ನಿರ್ಧಾರಕ್ಕೆ ಕಾರಣವೇನು?
![Video: ರಸ್ತೆಗಾಗಿ ಇಬ್ಬರು ಮಹಿಳೆಯರನ್ನು ಜೀವಂತ ಸಮಾಧಿ ಮಾಡಲು ಮುಂದಾದ ದುಷ್ಕರ್ಮಿಗಳು](https://www.udayavani.com/wp-content/uploads/2024/07/madhyapradesh-1-150x83.jpg)
Shocking: ರಸ್ತೆಗಾಗಿ ಇಬ್ಬರು ಮಹಿಳೆಯರನ್ನೇ ಜೀವಂತ ಸಮಾಧಿ ಮಾಡಲು ಮುಂದಾದ ದುರುಳರು…
![Video: ಮಕ್ಕಳು ತರಗತಿಯಲ್ಲಿ ಇದ್ದ ವೇಳೆಯೇ ಕುಸಿದು ಬಿದ್ದ ಗೋಡೆ… ವಿದ್ಯಾರ್ಥಿಗೆ ಗಾಯ](https://www.udayavani.com/wp-content/uploads/2024/07/school-2-150x84.jpg)
Wall Collapses: ಮಕ್ಕಳು ತರಗತಿಯಲ್ಲಿರುವಾಗಲೇ ಕುಸಿದು ಬಿದ್ದ ಗೋಡೆ.. ಭಯಾನಕ ವಿಡಿಯೋ ವೈರಲ್
![1-insta](https://www.udayavani.com/wp-content/uploads/2024/07/1-insta-150x104.jpg)
Instagram Influencer ಆನ್ವಿ ಕಾಮ್ದಾರ್ ಕಮರಿಗೆ ಬಿದ್ದು ಮರಣ
![best](https://www.udayavani.com/wp-content/uploads/2024/07/best-150x79.jpg)
Crow-ded Bus: Best ಬಸ್ಸಲ್ಲಿ ಕಾಗೆಗಳ ಸವಾರಿ… ನೆಟ್ಟಿಗರಿಂದ ಬೆಸ್ಟ್ ಬೆಸ್ಟ್ ಕಾಮೆಂಟ್ಸ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.