ಆರೋಗ್ಯ ಟಿಪ್ಸ್: ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಆರೋಗ್ಯ ಸಮಸ್ಯೆಗಳು

ಮಕ್ಕಳು ಹಾಗೂ ಹಿರಿಯರನ್ನು ಈ ಕಾಲದಲ್ಲಿ ಜಾಗೃತೆಯಿಂದ ನೋಡಿಕೊಳ್ಳಬೇಕು

ಕಾವ್ಯಶ್ರೀ, Dec 12, 2022, 5:40 PM IST

web-exclusive-health

ಚಳಿಗಾಲ ಈಗಾಗಲೇ ಆರಂಭವಾಗಿದೆ. ಕಾಲ ಬದಲಾದಂತೆ ಕಾಲಕ್ಕೆ ತಕ್ಕಂತೆ ಆರೋಗ್ಯ ಸಮಸ್ಯೆಗಳು ಕಾಡುವುದು ಸಾಮಾನ್ಯ ಸಂಗತಿ. ತಂಪು ವಾತಾವರಣ ಕಾಯಿಲೆಗಳು ಬೇಗ ಹರಡಲು ಕಾರಣವಾಗುತ್ತದೆ. ಈ ಸಮಯದಲ್ಲಿ ತಾಪಮಾನ ಕಡಿಮೆ ಆಗಿರುವುದರಿಂದ ತಂಪಾದ ಗಾಳಿ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಆರೋಗ್ಯ ಸಮಸ್ಯೆಗಳೆಂದರೆ ನೆಗಡಿ, ಕಫ, ಕೆಮ್ಮು, ಜ್ವರ ಇತ್ಯಾದಿ. ಈ ಸಮಯದಲ್ಲಿ ಅಸ್ತಮಾ ಇದ್ದವರು ಹೆಚ್ಚಿನ ಎಚ್ಚರ ವಹಿಸಬೇಕು. ಒಣ ತ್ವಚೆ ಇರುವವರಿಗೆ ಸಮಸ್ಯೆ ಸಾಮಾನ್ಯ. ಮಕ್ಕಳು ಹಾಗೂ ಹಿರಿಯರನ್ನು ಈ ಕಾಲದಲ್ಲಿ ಜಾಗೃತೆಯಿಂದ ನೋಡಿಕೊಳ್ಳಬೇಕು. ಆರೋಗ್ಯ ಸಮಸ್ಯೆ ಇರುವವರು ಬೆಚ್ಚಗಿರುವ ಪ್ರದೇಶದಲ್ಲಿರಬೇಕು.

ಚಳಿಗಾಲದ ಕೆಲವು ಆರೋಗ್ಯ ಸಮಸ್ಯೆಗಳು:

ಒಣ ಚರ್ಮ ಸಮಸ್ಯೆ

ಇದು ಚಳಿಗಾಲದಲ್ಲಿ ಕಂಡು ಬರುವ ಅತ್ಯಂತ ಸಾಮಾನ್ಯ ಸಮಸ್ಯೆ. ಚರ್ಮ ಒಣಗುವುದು, ಚರ್ಮ ಬಿರುಕು ಬಿಡುವುದು, ತುರಿಕೆ, ರಕ್ತಸ್ರಾವ, ನೋವು ಮತ್ತು ಸೋಂಕು ಉಂಟಾಗುತ್ತದೆ. ಒಣ ತುಟಿ ಸಮಸ್ಯೆ, ತಂಪಾದ ಗಾಳಿಯಿಂದಾಗಿ ತುಟಿಗಳು ಒಣಗುತ್ತವೆ. ಹಾಗಾಗಿ ಈ ಸಮಸ್ಯೆ ತೊಡೆದು ಹಾಕಲು ಚಳಿಗಾಲದಲ್ಲಿ ಮಾಯಿಶ್ಚರೈಸರ್‌ ಹಚ್ಚಿರಿ.

ಕೀಲು ನೋವು, ಸಂಧಿವಾತದ ನೋವು

ಈ ಸಮಯದಲ್ಲಿ ಕೀಲು ನೋವು ಸಮಸ್ಯೆ, ಸಂಧಿವಾತ ಸಮಸ್ಯೆ ರೋಗಿಗಳನ್ನು ಕಾಡುತ್ತದೆ. ತಾಪಮಾನ ಇಳಿಕೆ ಕೀಲು ನೋವಿಗೆ ಕಾರಣವಾಗುತ್ತದೆ. ಚಳಿ ಹೆಚ್ಚಾಗುತ್ತಿದ್ದಂತೆ ಮಂಡಿಗಳಲ್ಲಿ, ಕೈಗಳಲ್ಲಿ ನೋವು ಕಾಣಿಸಲಾರಂಭಿಸುತ್ತದೆ. ಈ ಸಮಸ್ಯೆಗೆ ಉಣ್ಣೆಯ ಬೆಚ್ಚಗಿನ ಬಟ್ಟೆ ಧರಿಸಿ. ವ್ಯಾಯಾಮ ಮಾಡುವುದು ತುಂಬಾ ಒಳ್ಳೆಯದು. ದೇಹ ಬೆಚ್ಚಗಿರಲು ತಂಪಾದ ಆಹಾರಕ್ಕಿಂತ ಬಿಸಿ ಆಹಾರವನ್ನು ಹೆಚ್ಚಾಗಿ ಸೇವಿಸಿ.

ಖಿನ್ನತೆ

ಈ ವಾತಾವರಣದಲ್ಲಿ ಒಂದು ರೀತಿಯ ಉದಾಸೀನ ಮೂಡುವುದು ಸಾಮಾನ್ಯ. ಆದರೆ ಕೆಲವರಲ್ಲಿ ಖಿನ್ನತೆ ಹೆಚ್ಚಿಸುತ್ತಿದ್ದು, ಯಾವುದೇ ಕೆಲಸ ಮಾಡಲು ಆಸಕ್ತಿ ಮೂಡುವುದಿಲ್ಲ. ಈ ಉದಾಸೀನತೆಯಿಂದ ದೂರವಿರಲು ಬಿಸಿಲಿಗೆ ಮೈಯೊಡ್ಡಬೇಕು. ಇದು ಆರೋಗ್ಯ ವೃದ್ಧಿಸಲು ತುಂಬಾ ಸಹಕಾರಿ. ನಿಮ್ಮನ್ನು ನೀವು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಒಳ್ಳೆಯದು.

ಉಸಿರಾಟದ ತೊಂದರೆ

ಚಳಿಗಾಲದಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಶೀತ, ನೆಗಡಿಯಿಂದ ಕಟ್ಟಿದ ಮೂಗು, ಕೆಮ್ಮು ಕೂಡ ಆರಂಭವಾಗುತ್ತದೆ. ಚಳಿಗಾಲದಲ್ಲಿ ಶೀತ ಗಾಳಿಯು ನೇರವಾಗಿ ಉಸಿರಾಟದ ಪ್ರದೇಶವನ್ನು ಆಕ್ರಮಿಸುತ್ತದೆ. ಇದರಿಂದಾಗಿ ಮೂಗು ಕಟ್ಟುವಿಕೆ, ಸ್ರವಿಸುವ ಮೂಗು, ಕೆಮ್ಮು ಮುಂತಾದ ಸಮಸ್ಯೆಗಳು ಬರಬಹುದು.

ಅಸ್ತಮಾ

ಚಳಿಗಾಲದ ಹವಾಮಾನದಲ್ಲಿ ಅಸ್ತಮಾ ಸಮಸ್ಯೆ ಕಾಡುತ್ತದೆ. ಶ್ವಾಸಕೋಶ ಸಮಸ್ಯೆ ಉಂಟಾಗುತ್ತದೆ. ಚಳಿಗಾಲದಲ್ಲಿ ಉಸಿರಾಟ ಸಮಸ್ಯೆ ಉಂಟಾಗುತ್ತದೆ. ಗಾಳಿಯಲ್ಲಿ ಬಹಳಷ್ಟು ಅಲರ್ಜಿನ್‌ ಗಳಿವೆ. ಇದು ಅಸ್ತಮಾ ಉಂಟಾಗಲು ಮುಖ್ಯ ಕಾರಣ. ವಿಷಕಾರಿ ಅಂಶಗಳನ್ನು ಉಸಿರಾಡುವುದನ್ನು ತಪ್ಪಿಸಿ. ಮಾಸ್ಕ್ ಧರಿಸಿ.

ಒತ್ತಡ ಸಮಸ್ಯೆ

ಅನೇಕ ಜನರು ಚಳಿಗಾಲದಲ್ಲಿ ಒತ್ತಡ ಸಮಸ್ಯೆ ಅನುಭವಿಸುತ್ತಾರೆ. ಇದನ್ನು ಸೀಸನಲ್ ಎಫೆಕ್ಟಿವ್ ಡಿಸಾರ್ಡರ್ ಎನ್ನಲಾಗುತ್ತದೆ. ಒತ್ತಡ ಸಂಬಂಧಿ ಕಾಯಿಲೆಗಳು ಕಡಿಮೆ ಮಾಡಲು ಕ್ರಿಯಾಶೀಲರಾಗಿರಿ. ಚಟುವಟಿಕೆಯಿಂದ ಇರಬೇಕು. ಏಕಾಗ್ರತೆ ಸಾಧಿಸಲು ಧ್ಯಾನ, ಯೋಗ ಮಾಡಿ.

ಗಂಟಲಿನ ಸಮಸ್ಯೆ

ಚಳಿಗಾಲದಲ್ಲಿ ನೆಗಡಿ, ಕೆಮ್ಮು ಉಂಟಾಗುವುದರಿಂದ ಗಂಟಲು ಸಮಸ್ಯೆ ಸಾಮಾನ್ಯ.  ಗಂಟಲು ಕಿರಿ ಕಿರಿ, ನೋವು ಉಂಟಾಗುವ ಸಾಧ್ಯತೆ ಹೆಚ್ಚು. ವೈರಲ್ ಸೋಂಕಿನಿಂದಾಗಿ ಗಂಟಲಿನ ಬಾವು ಕೂಡ ಆಗಬಹುದು. ಇದು ಗಂಟಲಿನಲ್ಲಿ ನೋವನ್ನು ಉಂಟುಮಾಡುತ್ತದೆ.  ವೈರಲ್ ಸೋಂಕು ಗಂಟಲು, ಶೀತ ಮತ್ತು ಜ್ವರಕ್ಕೆ ಕಾರಣವಾಗುತ್ತದೆ. ಇದನ್ನ ತಡೆಯಲು ಆರೋಗ್ಯಕರ ಆಹಾರ ಸೇವನೆ ಮುಖ್ಯ. ಆದಷ್ಟು ಬಿಸಿ ಆಹಾರ ಪದಾರ್ಥ ಸೇವನೆ ರೂಢಿಸಿಕೊಳ್ಳಿ. ಸಾಧ್ಯವಾದರೆ ಬೆಚ್ಚಗಿನ ನೀರು ಕುಡಿಯಿರಿ. ಗಂಟಲು ಕಿರಿ ಕಿರಿ, ನೋವು ಇದ್ದರೇ ಬೆಚ್ಚಗಿನ ನೀರಿನಲ್ಲಿ ಉಪ್ಪು ಬೆರೆಸಿ ಆ ನೀರಿನಿಂದ ಗಂಟಲು ಮುಕ್ಕಳಿಸಿ. ಸಮಸ್ಯೆ ಪರಿಹಾರ ಸಾಧ್ಯ.

ಚಳಿಗಾಲದಲ್ಲಿ ಇದನ್ನು ಪಾಲಿಸಿ, ಆರೋಗ್ಯವಂತರಾಗಿರಿ:

  • ತಂಪು ಅಥವಾ ಫ್ರಿಜ್ ನಲ್ಲಿರವ ಆಹಾರ ಬಳಸದೆ ಬಿಸಿ ಬಿಸಿ ಆಹಾರ ಸೇವಿಸಿ. ಬಿಸಿ ನೀರು ಕುಡಿಯಿರಿ.
  • ಎಣ್ಣೆ ಹೆಚ್ಚಾಗಿ ಹಾಕಿದ ಆಹಾರ ಪದಾರ್ಥಗಳನ್ನು ಸೇವಿಸಬೇಡಿ. ಕರಿದ ತಿಂಡಿಗಳನ್ನು ಸೇವಿಸಬೇಡಿ.
  • ಶುಂಠಿ, ಬೆಳ್ಳುಳ್ಳಿ, ಚಕ್ಕೆ, ಲವಂಗ ಕರಿಮೆಣಸಿನ ಬಳಕೆ ಆಹಾರ ಪದಾರ್ಥದಲ್ಲಿ ಹೆಚ್ಚಾಗಿ ಬಳಸಿ.
  • ಬೆಚ್ಚಗಿರುವ, ಉಣ್ಣೆಯ ಬಟ್ಟೆಗಳನ್ನು ಧರಿಸಿ
  • ಒಣ ಚರ್ಮದ ಸಮಸ್ಯೆ ಹೆಚ್ಚಾಗಿರುವುದರಿಂದ ಕೊಬ್ಬರಿ ಎಣ್ಣೆಯನ್ನು ಮೈ ಕೈಗೆ ಹಚ್ಚಿ.
  • ಜ್ವರ, ಶೀತ, ನೆಗಡಿ, ಕೆಮ್ಮು ಕಾಣಿಸಿಕೊಂಡಾಗ ನಿರ್ಲಕ್ಷಿಸದೆ ಆಸ್ಪತ್ರಗೆ ಭೇಟಿ ನೀಡಿ.

– ಕಾವ್ಯಶ್ರೀ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.