ಬೆಳಗಾವಿ ಹುಡುಗನ ಕ್ಯಾಚ್‌ಗೆ ಫಿದಾ; ವಿಡಿಯೋ ಶೇರ್‌ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ ಸಚಿನ್‌

ಫುಟ್‌ಬಾಲ್‌ ಆಡುವುದನ್ನೂ ಕಲಿತಿರುವ ಹುಡುಗನನ್ನು ನೀವು ಕರೆ ತಂದಾಗ ಏನಾಗುತ್ತದೆ

Team Udayavani, Feb 13, 2023, 3:34 PM IST

ಬೆಳಗಾವಿ ಹುಡುಗನ ಕ್ಯಾಚ್‌ಗೆ ಫಿದಾ; ವಿಡಿಯೋ ಶೇರ್‌ ಮಾಡಿ ಮೆಚುಗೆ ವ್ಯಕ್ತಪಡಿಸಿದ ಸಚಿನ್‌

ಬೆಳಗಾವಿ: ಬೆಳಗಾವಿಯಲ್ಲಿ ನಡೆದಿರುವ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಬೌಂಡರಿ ಲೈನ್‌ನಲ್ಲಿ ಅದ್ಭುತವಾಗಿ ಕ್ಯಾಚ್‌ ಹಿಡಿದಿರುವುದನ್ನು ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಸೇರಿದಂತೆ ಅನೇಕ ಕ್ರಿಕೆಟ್‌ ದಿಗ್ಗಜರು ಕೊಂಡಾಡಿದ್ದು, ಈ ಕ್ಯಾಚ್‌ ವಿಶ್ವದೆಲ್ಲೆಡೆ ಪ್ರಸಿದ್ಧಿಯಾಗಿದೆ.

ನಗರದ ಟಿಳಕವಾಡಿಯ ವ್ಯಾಕ್ಸಿನ್‌ ಡಿಪೋದಲ್ಲಿ ಶಾರೀ ಸ್ಫೋರ್ಟ್ಸ್ ಆಯೋಜಿಸಿರುವ ಕ್ರಿಕೆಟ್‌ ಟ್ರೋಫಿಯಲ್ಲಿ ಬೆಳಗಾವಿಯ ಕಿರಣ ತರಳೇಕರ ಎಂಬ ಆಟಗಾರ ಬೌಂಡರಿ ಲೈನ್‌ನಲ್ಲಿ ಮೇಲಕ್ಕೆ ಹಾರಿ ಕ್ಯಾಚ್‌ ಹಿಡಿದು ತಾವು ಬೌಂಡರಿ ಲೈನ್‌ ಹೊರಕ್ಕೆ ಹೋಗುವಾಗ ಮತ್ತೆ ಬಾಲ್‌ ಮೇಲಕ್ಕೆ ಹಾರಿಸಿ ಫ‌ುಟ್‌ಬಾಲ್‌ ರೀತಿಯಲ್ಲಿ ಬ್ಯಾಕ್‌ ಶಾಟ್‌ ಹೊಡೆದಿದ್ದಾರೆ. ಆಗ ಮೈದಾನದೊಳಗೆ ಮತ್ತೂಬ್ಬ ಆಟಗಾರ ಬೌಲ್‌ ಕ್ಯಾಚ್‌ ಹಿಡಿದಿರುವುದು ಕ್ರಿಕೆಟ್‌ ಜಗತ್ತಿನಲ್ಲಿ ಭಾರೀ ಮೆಚ್ಚುಗೆಗೆ  ಕಾರಣವಾಗಿದೆ. ಕಿರಣ ತರಳೇಕರ ಅಷ್ಟೊಂದು ಅದ್ಭುತವಾಗಿ ಕ್ಯಾಚ್‌ ಮಾಡಿರುವುದನ್ನು ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಟ್ವೀಟ್‌ ಮೂಲಕ ವಿಡಿಯೋ ಶೇರ್‌ ಮಾಡಿದ್ದಾರೆ.

ಫುಟ್‌ಬಾಲ್‌ ಆಡುವುದನ್ನೂ ಕಲಿತಿರುವ ಹುಡುಗನನ್ನು ನೀವು ಕರೆ ತಂದಾಗ ಏನಾಗುತ್ತದೆ! ಎಂಬುದರ ಅರಿವಾಯಿತು ಎಂದು ಟ್ವೀಟ್‌ ಮಾಡುವ ಮೂಲಕ ಕಿರಣ ತರಳೇಕರನನ್ನು ಕೊಂಡಾಡಿದ್ದಾರೆ.

ನ್ಯೂಜಿಲೆಂಡನ್‌ ಜಿಮ್ಮಿ ನಿಶಮ್‌, ಇಂಗ್ಲೆಂಡ್‌ನ‌ ಮಾಜಿ ಆಟಗಾರ ಮೈಕೆಲ್‌ ವಾನ್‌ ಸೇರಿದಂತೆ ಅನೇಕರು ಟ್ವೀಟ್‌ನಲ್ಲಿ ವಿಡಿಯೋ ಶೇರ್‌ ಮಾಡಿದ್ದಾರೆ. ವ್ಯಾಕ್ಸಿನ್‌ ಡಿಪೋ ಮೈದಾನದಲ್ಲಿ ನಡೆದಿರುವ ಕ್ರಿಕೆಟ್‌ ಪಂದ್ಯಾವಳಿಯ ಸೆಮಿ ಫೈನಲ್‌ ನಲ್ಲಿ ಎಸ್‌ಆರ್‌ಎಸ್‌ ತಂಡದ ವಿರುದ್ಧ ಸಾಯಿರಾಜ್‌ ವಾರಿಯರ್ಸ್‌ ತಂಡದ ಕಿರಣ ತರಳೇಕರ ಬೌಂಡರಿ ಲೈನ್‌ನಲ್ಲಿ ಕ್ಯಾಚ್‌ ಹಿಡಿದಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

ಎರಡು ತಿಂಗಳ ಹಿಂದೆಯಷ್ಟೇ ಸಚಿನ್‌ ತೆಂಡೂಲ್ಕರ್‌ ಗೋವಾಕ್ಕೆ ತೆರಳುವ ಮಾರ್ಗದಲ್ಲಿ ಬೆಳಗಾವಿಯ ಮಚ್ಛೆ ಎಂಬ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಚಹಾ ಅಂಗಡಿಗೆ ತೆರಳಿ ಚಹಾ ಸೇವಿಸಿರುವ ವಿಡಿಯೋ ತಮ್ಮ ಫೇಸ್‌ ಬುಕ್‌ನಲ್ಲಿ ಶೇರ್‌ ಮಾಡಿದ್ದರು. ಈಗ ಮತ್ತೊಮ್ಮೆ ಬೆಳಗಾವಿಯ ಈ ಪ್ರಸಂಗವನ್ನು ಶೇರ್‌ ಮಾಡಿದ್ದು ಬೆಳಗಾವಿಗರಲ್ಲಿ ಸಂತಸಕ್ಕೆ ಕಾರಣವಾಗಿದೆ.

ಟಾಪ್ ನ್ಯೂಸ್

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Viral: ಕಚ್ಚಿದ ಹಾವನ್ನೇ ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು

Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು

1-wqeqwwq

Hyderabad; ಢಿಕ್ಕಿಯಾದ ಬಳಿಕ 2 ಕಿ.ಮೀ. ಬೈಕ್ ಎಳೆದೊಯ್ದ ಲಾರಿ: ಸವಾರ?

Ahmedabad: ಪಾರ್ಕಿಂಗ್‌ ಏರಿಯಾದಲ್ಲಿ ಆಡುತ್ತಿದ್ದ ಒಂದು ವರ್ಷದ ಮಗುವಿನ ಮೇಲೆ ಹರಿದ ಕಾರು

Ahmedabad: ಪಾರ್ಕಿಂಗ್‌ ಏರಿಯಾದಲ್ಲಿ ಆಡುತ್ತಿದ್ದ ಒಂದು ವರ್ಷದ ಮಗುವಿನ ಮೇಲೆ ಹರಿದ ಕಾರು

1-weewqe

Save water call !;ಸಂಗಾತಿ ಜತೆ ಸ್ನಾನ ಮಾಡಿ ನೀರು ಉಳಿಸಿ: ಮೇಯರ್‌!

1-e–ewqeqweqw

FIR ದಾಖಲಿಸದ ಪೊಲೀಸ್‌ಗೆ ಆರತಿ ಎತ್ತಿದಳು! ; Viral Video

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.