ಗರಿಷ್ಠ ರಾಜಸ್ವ ಸಂಗ್ರಹವಿದ್ದರೂ ತೀವ್ರ ಸಿಬಂದಿ ಕೊರತೆ: ಇದು ಮಂಗಳೂರು ಆರ್‌ಟಿಒ ವ್ಯಥೆ

ಮೈಸೂರಿನಿಂದ ಬರಬೇಕು ಪ್ರಭಾರ ಆರ್‌ಟಿಒ

Team Udayavani, Feb 3, 2023, 7:55 AM IST

ಗರಿಷ್ಠ ರಾಜಸ್ವ ಸಂಗ್ರಹವಿದ್ದರೂ ತೀವ್ರ ಸಿಬಂದಿ ಕೊರತೆ: ಇದು ಮಂಗಳೂರು ಆರ್‌ಟಿಒ ವ್ಯಥೆ

ಮಂಗಳೂರು: ಮೈಸೂರಿನಿಂದ ವಾರಕ್ಕೊಮ್ಮೆ ಇಲ್ಲಿಗೆ ಬರುವ ಆರ್‌ಟಿಒ ಅಧಿಕಾರಿ, ಬಹುತೇಕ ಹುದ್ದೆಗಳು ಖಾಲಿಯಾಗಿಯೇ ಇರುವ ಕಚೇರಿ, ರಾಶಿ ಬೀಳುತ್ತಿರುವ ಕಡತಗಳು… ಕೆಲಸಕ್ಕಾಗಿ ಪದೇ ಪದೇ ಎಡತಾಕಬೇಕಾಗಿ ಬರುವ ಸಾರ್ವಜನಿಕರು…

ಅತ್ಯಧಿಕ ರಾಜಸ್ವ ಸಂಗ್ರಹ ಮಾಡಿಕೊಡುವ ಸಾರಿಗೆ ಕಚೇರಿ ಎಂಬ ಹೆಗ್ಗಳಿಕೆ ಪಡೆದ ಮಂಗಳೂರು ಆರ್‌ಟಿಒ ಕಚೇರಿಯ ಪರಿಸ್ಥಿತಿ ಇದು. ಜಿಲ್ಲೆಯ ಇತರ ಎರಡು ಕಚೇರಿಗಳಾಗಿರುವ ಪುತ್ತೂರು, ಬಂಟ್ವಾಳದ ಪರಿಸ್ಥಿತಿಯೂ ಭಿನ್ನವೇನಿಲ್ಲ.

ಅತಿ ಮುಖ್ಯ ಹುದ್ದೆ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ)ಯದ್ದು. ನವೆಂಬರ್‌ನಿಂದೀಚೆಗೆ ಮಂಗಳೂರಿಗೆ ಪೂರ್ಣಕಾಲಿಕ ಆರ್‌ಟಿಒ ಬಂದಿಲ್ಲ. ಆರಂಭದಲ್ಲಿ ಉಡುಪಿಯ ಅಧಿಕಾರಿಯನ್ನು ಪ್ರಭಾರ ಆಗಿ ನಿಯೋಜಿಸಲಾಯಿತು. ಈಗ ಮೈಸೂರಿನ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಅವರು ವಾರಕ್ಕೊಮ್ಮೆ ಬಂದು ಮೂರು ದಿನ ಇಲ್ಲಿರುತ್ತಾರೆ. ಅವರಿಲ್ಲದಾಗ ಕಡತಗಳು ರಾಶಿ ಬೀಳುತ್ತವೆ.

ಪೂರ್ಣಕಾಲಿಕ ಅಧಿಕಾರಿ ಅಗತ್ಯ
ಮುಖ್ಯವಾಗಿ ಆಡಳಿತದ ಮುಖ್ಯಾಧಿಕಾರಿ, ಸಹಿ ಅಧಿಕಾರಿಯೂ ಆರ್‌ಟಿಒ ಅವರೇ ಆಗಿರುವುದರಿಂದ ಅವರೇ ಪ್ರಭಾರವಾದರೆ ಮಹತ್ವದ ಕೆಲಸಗಳು ಬಾಕಿಯಾಗುತ್ತವೆ. ಅಲ್ಲದೆ ಜಿಲ್ಲಾ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಯೂ ಅವರೇ ಆಗಿರುವುದರಿಂದ ಅವರಿಗೆ ಜವಾಬ್ದಾರಿ ಹೆಚ್ಚಿರುತ್ತದೆ. ಅವೆಲ್ಲವೂ ಸುಸೂತ್ರವಾಗಿ ನಡೆಯಲು ಪೂರ್ಣಕಾಲಿಕ ಅಧಿಕಾರಿಯ ನಿಯೋಜನೆಯಾಗಬೇಕಿದೆ.

ಇದೇ ರೀತಿ ಲೆಕ್ಕ ಪತ್ರಾಧಿಕಾರಿ 1 ಹುದ್ದೆ, ತೆರಿಗೆ/ಖಜಾನಾಧಿಕಾರಿ (1), ಲೆಕ್ಕಾಧೀಕ್ಷಕರು (1), ಪ್ರಥಮ ದರ್ಜೆ ಸಹಾಯಕ (9), ಲೆಕ್ಕಪರಿಶೋಧಕ (1) ಅಲ್ಲದೆ 28 ದ್ವಿತೀಯ ದರ್ಜೆ ಸಹಾಯಕ ಹುದ್ದೆ ಸಹಿತ 73 ಹುದ್ದೆಗಳು ಖಾಲಿ ಬಿದ್ದಿವೆ. 6 ಮಂದಿಯನ್ನು ಇದೇ ಕಚೇರಿಯಿಂದ ಬೇರೆ ಕಚೇರಿಗಳಿಗೆ ನಿಯೋಜನೆ ಮಾಡಿದ್ದರೆ ಐವರು ಇತರ ಕಚೇರಿಗಳಿಂದ ಇಲ್ಲಿ ನಿಯೋಜನೆಯಲ್ಲಿದ್ದಾರೆ.

ಚಾಲನಾ ಪರೀಕ್ಷೆ ಇತ್ಯಾದಿಗೆ ಬೇಕಾಗುವ ಮೋಟಾರು ವಾಹನ ನಿರೀಕ್ಷಕರ ಹುದ್ದೆ 12ರಲ್ಲಿ 9 ಖಾಲಿ ಇವೆ. ಹಿರಿಯ ಮೋಟಾರು ವಾಹನ ನಿರೀಕ್ಷಕರ 6 ಹುದ್ದೆ ಖಾಲಿ. ಖಜಾನೆ ಕಾವಲುಗಾರರೂ ಇಲ್ಲ, ರಾತ್ರಿ ಕಾವಲುಗಾರರೂ ಇಲ್ಲ.

ಗರಿಷ್ಠ ರಾಜಸ್ವ ಸಂಗ್ರಹ
ಬೆಂಗಳೂರು ಬಿಟ್ಟರೆ ಗರಿಷ್ಠ ರಾಜಸ್ವ ಸಂಗ್ರಹವಾಗುವ ಕಚೇರಿ ಮಂಗಳೂರು ಆರ್‌ಟಿಒ. ಕಳೆದ 5 ವರ್ಷಗಳ ಅಂಕಿ-ಅಂಶ ನೋಡಿದರೆ ಸರಾಸರಿ 190 ಕೋಟಿ ರೂ. ರಾಜಸ್ವ ಬರುತ್ತಿದೆ. ಹಾಗಿರುವಾಗ ಸೌಲಭ್ಯ ಕೊರತೆ ಯಾಕೆ ಎನ್ನುವುದು ನಾಗರಿಕರ ಪ್ರಶ್ನೆ.

ನಾವು ರಾಜ್ಯದಲ್ಲಿ ಗರಿಷ್ಠ, ಎಂದರೆ ಶೇ. 99ರಷ್ಟು ಗುರಿ ಸಾಧಿಸುತ್ತೇವೆ, ಈ ಬಾರಿ ನಮ್ಮ ಇಲಾಖೆಯಲ್ಲಿ 8 ಸಾವಿರ ಕೋಟಿ ರೂ. ರಾಜಸ್ವ ಸಂಗ್ರಹವಾಗಿದೆ. ಆದರೆ ಸಿಬಂದಿ ಕೊರತೆ ತೀವ್ರ ಇರುವುದು ನಿಜ. ಮುಖ್ಯಮಂತ್ರಿಯವರು ಈ ಬಾರಿ ಸಿಬಂದಿ ನೇಮಕಾತಿಗೆ ಒಪ್ಪಿದ್ದಾರೆ. ಮಂಗಳೂರಿನ ಸ್ಥಿತಿಯ ಅರಿವಿದೆ, ರೆಗ್ಯುಲರ್‌ ಆರ್‌ಟಿಒ ನಿಯೋಜನೆಗೆ ಕ್ರಮ ಕೈಗೊಳ್ಳುವೆ.
– ಶ್ರೀರಾಮುಲು, ಸಾರಿಗೆ ಸಚಿವರು

ಪುತ್ತೂರು ಕಚೇರಿ
2022 -23ರ ರಾಜಸ್ವ ಗುರಿ: 59.73 ಕೋಟಿ ರೂ.
ಸಾಧನೆ: 44.52 ಕೋಟಿ ರೂ. (ಡಿಸೆಂಬರ್‌ ವರೆಗೆ)
ಮಂಜೂರಾದ ಹುದ್ದೆ: 25
ಖಾಲಿ ಹುದ್ದೆ: 16
ಭರ್ತಿಯಾದ ಹುದ್ದೆ: 8

ಬಂಟ್ವಾಳ ಕಚೇರಿ
2020-21ರ ರಾಜಸ್ವ ಗುರಿ 36.48 ಕೋ.ರೂ.
ಸಂಗ್ರಹ-25.62 ಕೋಟಿ ರೂ.
2021-22 ರಾಜಸ್ವ ಗುರಿ-39.47 ಕೋಟಿ ರೂ.
ಸಂಗ್ರಹ-29.43 ಕೋಟಿ ರೂ.
2022-23 ರಾಜಸ್ವ ಗುರಿ-45.40 ಕೋ.ರೂ.
ಸಂಗ್ರಹ 27.11 ಕೋ.ರೂ. (ಜನವರಿ ವರೆಗೆ)
ಮಂಜೂರಾದ ಹುದ್ದೆಗಳು – 14
ಪ್ರಸ್ತುತ ಇರುವುದು – 5 ಮಂದಿ

– ವೇಣುವಿನೋದ್‌ ಕೆ.ಎಸ್‌.

ಟಾಪ್ ನ್ಯೂಸ್

narsapur

ಕರ್ನಾಟಕದ ನರಸಾಪುರದಲ್ಲಿ ಆರಂಭವಾಗಲಿದೆ ಹೊಂಡಾ ಎಲೆಕ್ಟ್ರಿಕ್‌ ವಾಹನ ತಯಾರಿಕಾ ಘಟಕ

siddaramaiah

ಚುನಾವಣೆಗೆ ಐಟಿ ಅಧಿಕಾರಿಗಳ ನೇಮಕ ; ಕಾಂಗ್ರೆಸ್ ಕಟ್ಟಿಹಾಕಲು ಪ್ಲ್ಯಾನ್: ಸಿದ್ದರಾಮಯ್ಯ

ರಾಮಮಂದಿರ ನಿರ್ಮಾಣಕ್ಕೆ  ಬ್ಲೂಪ್ರಿಂಟ್‌ ಬಿಡುಗಡೆ

ರಾಮಮಂದಿರ ನಿರ್ಮಾಣಕ್ಕೆ  ಬ್ಲೂಪ್ರಿಂಟ್‌ ಬಿಡುಗಡೆ

ಆರೋಗ್ಯ ಟಿಪ್ಸ್: ಅಜೀರ್ಣ ಸಮಸ್ಯೆ ಮತ್ತು ಪರಿಹಾರ

ಆರೋಗ್ಯ ಟಿಪ್ಸ್: ಅಜೀರ್ಣ ಸಮಸ್ಯೆ ಕಾಡುತ್ತಿದೆಯೇ? ಇಲ್ಲಿದೆ..ಮನೆಮದ್ದು ಪರಿಹಾರ

1-dsfsdfsdf

ಬ್ಯಾಂಕ್ ಖಾತೆ ಆಧಾರಿತ UPI ಪಾವತಿಗಳಿಗೆ ಯಾವುದೇ ಶುಲ್ಕವಿಲ್ಲ: NPCI ಸ್ಪಷ್ಟನೆ

ಕಾಂಗ್ರೆಸ್‌ 2ನೇ ಪಟ್ಟಿ ಆಯ್ಕೆ ಕಬ್ಬಿಣದ ಕಡಲೆ?

ಕಾಂಗ್ರೆಸ್‌ 2ನೇ ಪಟ್ಟಿ ಆಯ್ಕೆ ಕಬ್ಬಿಣದ ಕಡಲೆ?

1-csdsdadsa

ಸಾಶಾ ಅಗಲುವಿಕೆಯ ಬೆನ್ನಲ್ಲೇ ನಾಲ್ಕು ಮರಿಗಳಿಗೆ ಜನ್ಮ ನೀಡಿದ ನಮೀಬಿಯಾದಿಂದ ತಂದ ಚೀತಾ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-mangaluru-college

ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಎನ್ ವಿಷನ್ – 2023 ಉದ್ಘಾಟನಾ ಸಮಾರಂಭ

ಮಂಗಳೂರು: ಇಬ್ಬರು ಬೈಕ್ ಕಳ್ಳರ ಬಂಧನ; ಕಳವುಗೈದ ಬೈಕ್‌ ನಲ್ಲಿ ತಿರುಗಾಡಿ ಸಿಕ್ಕಿಬಿದ್ದರು

ಮಂಗಳೂರು: ಇಬ್ಬರು ಬೈಕ್ ಕಳ್ಳರ ಬಂಧನ; ಕಳವುಗೈದ ಬೈಕ್‌ ನಲ್ಲಿ ತಿರುಗಾಡಿ ಸಿಕ್ಕಿಬಿದ್ದರು

ನಿಷೇಧಿತ ಇ- ಸಿಗರೇಟ್‌ ಹತ್ತಿಕ್ಕುವವರಿಲ್ಲ ! ಗ್ರಾಮೀಣ ಪ್ರದೇಶದಲ್ಲೂ ಮಾರಾಟ ಅವ್ಯಾಹತ!

ನಿಷೇಧಿತ ಇ- ಸಿಗರೇಟ್‌ ಹತ್ತಿಕ್ಕುವವರಿಲ್ಲ ! ಗ್ರಾಮೀಣ ಪ್ರದೇಶದಲ್ಲೂ ಮಾರಾಟ ಅವ್ಯಾಹತ!

ಬಿಎಡ್‌, ಎಂಎ ಪದವೀಧರರಾದರೂ ಮಾಸಿಕ ವೇತನ 8,500 ರೂ.!

ಬಿಎಡ್‌, ಎಂಎ ಪದವೀಧರರಾದರೂ ಮಾಸಿಕ ವೇತನ 8,500 ರೂ.!

ಕರಾವಳಿಗೆ ಜಿ20 ಸಭೆ ಆತಿಥ್ಯದ ಕನಸು!

ಕರಾವಳಿಗೆ ಜಿ20 ಸಭೆ ಆತಿಥ್ಯದ ಕನಸು!

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

narsapur

ಕರ್ನಾಟಕದ ನರಸಾಪುರದಲ್ಲಿ ಆರಂಭವಾಗಲಿದೆ ಹೊಂಡಾ ಎಲೆಕ್ಟ್ರಿಕ್‌ ವಾಹನ ತಯಾರಿಕಾ ಘಟಕ

ಕೊಳ್ಳೇಗಾಲ ‘ಕೈ’ ಟಿಕೆಟ್‌ಗೆ ಇಬ್ಬರ ಹೆಸರು ಫೈನಲ್‌

ಕೊಳ್ಳೇಗಾಲ ‘ಕೈ’ ಟಿಕೆಟ್‌ಗೆ ಇಬ್ಬರ ಹೆಸರು ಫೈನಲ್‌

siddaramaiah

ಚುನಾವಣೆಗೆ ಐಟಿ ಅಧಿಕಾರಿಗಳ ನೇಮಕ ; ಕಾಂಗ್ರೆಸ್ ಕಟ್ಟಿಹಾಕಲು ಪ್ಲ್ಯಾನ್: ಸಿದ್ದರಾಮಯ್ಯ

ರಾಮಮಂದಿರ ನಿರ್ಮಾಣಕ್ಕೆ  ಬ್ಲೂಪ್ರಿಂಟ್‌ ಬಿಡುಗಡೆ

ರಾಮಮಂದಿರ ನಿರ್ಮಾಣಕ್ಕೆ  ಬ್ಲೂಪ್ರಿಂಟ್‌ ಬಿಡುಗಡೆ

tdy-17

ಬೆಂಗಳೂರು ಗ್ರಾಮಾಂತರ: ಕಮಲ ಅಭ್ಯರ್ಥಿಗಳ ಆಯ್ಕೆ ಕುತೂಹಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.