ಗರಿಷ್ಠ ರಾಜಸ್ವ ಸಂಗ್ರಹವಿದ್ದರೂ ತೀವ್ರ ಸಿಬಂದಿ ಕೊರತೆ: ಇದು ಮಂಗಳೂರು ಆರ್‌ಟಿಒ ವ್ಯಥೆ

ಮೈಸೂರಿನಿಂದ ಬರಬೇಕು ಪ್ರಭಾರ ಆರ್‌ಟಿಒ

Team Udayavani, Feb 3, 2023, 7:55 AM IST

ಗರಿಷ್ಠ ರಾಜಸ್ವ ಸಂಗ್ರಹವಿದ್ದರೂ ತೀವ್ರ ಸಿಬಂದಿ ಕೊರತೆ: ಇದು ಮಂಗಳೂರು ಆರ್‌ಟಿಒ ವ್ಯಥೆ

ಮಂಗಳೂರು: ಮೈಸೂರಿನಿಂದ ವಾರಕ್ಕೊಮ್ಮೆ ಇಲ್ಲಿಗೆ ಬರುವ ಆರ್‌ಟಿಒ ಅಧಿಕಾರಿ, ಬಹುತೇಕ ಹುದ್ದೆಗಳು ಖಾಲಿಯಾಗಿಯೇ ಇರುವ ಕಚೇರಿ, ರಾಶಿ ಬೀಳುತ್ತಿರುವ ಕಡತಗಳು… ಕೆಲಸಕ್ಕಾಗಿ ಪದೇ ಪದೇ ಎಡತಾಕಬೇಕಾಗಿ ಬರುವ ಸಾರ್ವಜನಿಕರು…

ಅತ್ಯಧಿಕ ರಾಜಸ್ವ ಸಂಗ್ರಹ ಮಾಡಿಕೊಡುವ ಸಾರಿಗೆ ಕಚೇರಿ ಎಂಬ ಹೆಗ್ಗಳಿಕೆ ಪಡೆದ ಮಂಗಳೂರು ಆರ್‌ಟಿಒ ಕಚೇರಿಯ ಪರಿಸ್ಥಿತಿ ಇದು. ಜಿಲ್ಲೆಯ ಇತರ ಎರಡು ಕಚೇರಿಗಳಾಗಿರುವ ಪುತ್ತೂರು, ಬಂಟ್ವಾಳದ ಪರಿಸ್ಥಿತಿಯೂ ಭಿನ್ನವೇನಿಲ್ಲ.

ಅತಿ ಮುಖ್ಯ ಹುದ್ದೆ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ)ಯದ್ದು. ನವೆಂಬರ್‌ನಿಂದೀಚೆಗೆ ಮಂಗಳೂರಿಗೆ ಪೂರ್ಣಕಾಲಿಕ ಆರ್‌ಟಿಒ ಬಂದಿಲ್ಲ. ಆರಂಭದಲ್ಲಿ ಉಡುಪಿಯ ಅಧಿಕಾರಿಯನ್ನು ಪ್ರಭಾರ ಆಗಿ ನಿಯೋಜಿಸಲಾಯಿತು. ಈಗ ಮೈಸೂರಿನ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಅವರು ವಾರಕ್ಕೊಮ್ಮೆ ಬಂದು ಮೂರು ದಿನ ಇಲ್ಲಿರುತ್ತಾರೆ. ಅವರಿಲ್ಲದಾಗ ಕಡತಗಳು ರಾಶಿ ಬೀಳುತ್ತವೆ.

ಪೂರ್ಣಕಾಲಿಕ ಅಧಿಕಾರಿ ಅಗತ್ಯ
ಮುಖ್ಯವಾಗಿ ಆಡಳಿತದ ಮುಖ್ಯಾಧಿಕಾರಿ, ಸಹಿ ಅಧಿಕಾರಿಯೂ ಆರ್‌ಟಿಒ ಅವರೇ ಆಗಿರುವುದರಿಂದ ಅವರೇ ಪ್ರಭಾರವಾದರೆ ಮಹತ್ವದ ಕೆಲಸಗಳು ಬಾಕಿಯಾಗುತ್ತವೆ. ಅಲ್ಲದೆ ಜಿಲ್ಲಾ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಯೂ ಅವರೇ ಆಗಿರುವುದರಿಂದ ಅವರಿಗೆ ಜವಾಬ್ದಾರಿ ಹೆಚ್ಚಿರುತ್ತದೆ. ಅವೆಲ್ಲವೂ ಸುಸೂತ್ರವಾಗಿ ನಡೆಯಲು ಪೂರ್ಣಕಾಲಿಕ ಅಧಿಕಾರಿಯ ನಿಯೋಜನೆಯಾಗಬೇಕಿದೆ.

ಇದೇ ರೀತಿ ಲೆಕ್ಕ ಪತ್ರಾಧಿಕಾರಿ 1 ಹುದ್ದೆ, ತೆರಿಗೆ/ಖಜಾನಾಧಿಕಾರಿ (1), ಲೆಕ್ಕಾಧೀಕ್ಷಕರು (1), ಪ್ರಥಮ ದರ್ಜೆ ಸಹಾಯಕ (9), ಲೆಕ್ಕಪರಿಶೋಧಕ (1) ಅಲ್ಲದೆ 28 ದ್ವಿತೀಯ ದರ್ಜೆ ಸಹಾಯಕ ಹುದ್ದೆ ಸಹಿತ 73 ಹುದ್ದೆಗಳು ಖಾಲಿ ಬಿದ್ದಿವೆ. 6 ಮಂದಿಯನ್ನು ಇದೇ ಕಚೇರಿಯಿಂದ ಬೇರೆ ಕಚೇರಿಗಳಿಗೆ ನಿಯೋಜನೆ ಮಾಡಿದ್ದರೆ ಐವರು ಇತರ ಕಚೇರಿಗಳಿಂದ ಇಲ್ಲಿ ನಿಯೋಜನೆಯಲ್ಲಿದ್ದಾರೆ.

ಚಾಲನಾ ಪರೀಕ್ಷೆ ಇತ್ಯಾದಿಗೆ ಬೇಕಾಗುವ ಮೋಟಾರು ವಾಹನ ನಿರೀಕ್ಷಕರ ಹುದ್ದೆ 12ರಲ್ಲಿ 9 ಖಾಲಿ ಇವೆ. ಹಿರಿಯ ಮೋಟಾರು ವಾಹನ ನಿರೀಕ್ಷಕರ 6 ಹುದ್ದೆ ಖಾಲಿ. ಖಜಾನೆ ಕಾವಲುಗಾರರೂ ಇಲ್ಲ, ರಾತ್ರಿ ಕಾವಲುಗಾರರೂ ಇಲ್ಲ.

ಗರಿಷ್ಠ ರಾಜಸ್ವ ಸಂಗ್ರಹ
ಬೆಂಗಳೂರು ಬಿಟ್ಟರೆ ಗರಿಷ್ಠ ರಾಜಸ್ವ ಸಂಗ್ರಹವಾಗುವ ಕಚೇರಿ ಮಂಗಳೂರು ಆರ್‌ಟಿಒ. ಕಳೆದ 5 ವರ್ಷಗಳ ಅಂಕಿ-ಅಂಶ ನೋಡಿದರೆ ಸರಾಸರಿ 190 ಕೋಟಿ ರೂ. ರಾಜಸ್ವ ಬರುತ್ತಿದೆ. ಹಾಗಿರುವಾಗ ಸೌಲಭ್ಯ ಕೊರತೆ ಯಾಕೆ ಎನ್ನುವುದು ನಾಗರಿಕರ ಪ್ರಶ್ನೆ.

ನಾವು ರಾಜ್ಯದಲ್ಲಿ ಗರಿಷ್ಠ, ಎಂದರೆ ಶೇ. 99ರಷ್ಟು ಗುರಿ ಸಾಧಿಸುತ್ತೇವೆ, ಈ ಬಾರಿ ನಮ್ಮ ಇಲಾಖೆಯಲ್ಲಿ 8 ಸಾವಿರ ಕೋಟಿ ರೂ. ರಾಜಸ್ವ ಸಂಗ್ರಹವಾಗಿದೆ. ಆದರೆ ಸಿಬಂದಿ ಕೊರತೆ ತೀವ್ರ ಇರುವುದು ನಿಜ. ಮುಖ್ಯಮಂತ್ರಿಯವರು ಈ ಬಾರಿ ಸಿಬಂದಿ ನೇಮಕಾತಿಗೆ ಒಪ್ಪಿದ್ದಾರೆ. ಮಂಗಳೂರಿನ ಸ್ಥಿತಿಯ ಅರಿವಿದೆ, ರೆಗ್ಯುಲರ್‌ ಆರ್‌ಟಿಒ ನಿಯೋಜನೆಗೆ ಕ್ರಮ ಕೈಗೊಳ್ಳುವೆ.
– ಶ್ರೀರಾಮುಲು, ಸಾರಿಗೆ ಸಚಿವರು

ಪುತ್ತೂರು ಕಚೇರಿ
2022 -23ರ ರಾಜಸ್ವ ಗುರಿ: 59.73 ಕೋಟಿ ರೂ.
ಸಾಧನೆ: 44.52 ಕೋಟಿ ರೂ. (ಡಿಸೆಂಬರ್‌ ವರೆಗೆ)
ಮಂಜೂರಾದ ಹುದ್ದೆ: 25
ಖಾಲಿ ಹುದ್ದೆ: 16
ಭರ್ತಿಯಾದ ಹುದ್ದೆ: 8

ಬಂಟ್ವಾಳ ಕಚೇರಿ
2020-21ರ ರಾಜಸ್ವ ಗುರಿ 36.48 ಕೋ.ರೂ.
ಸಂಗ್ರಹ-25.62 ಕೋಟಿ ರೂ.
2021-22 ರಾಜಸ್ವ ಗುರಿ-39.47 ಕೋಟಿ ರೂ.
ಸಂಗ್ರಹ-29.43 ಕೋಟಿ ರೂ.
2022-23 ರಾಜಸ್ವ ಗುರಿ-45.40 ಕೋ.ರೂ.
ಸಂಗ್ರಹ 27.11 ಕೋ.ರೂ. (ಜನವರಿ ವರೆಗೆ)
ಮಂಜೂರಾದ ಹುದ್ದೆಗಳು – 14
ಪ್ರಸ್ತುತ ಇರುವುದು – 5 ಮಂದಿ

– ವೇಣುವಿನೋದ್‌ ಕೆ.ಎಸ್‌.

ಟಾಪ್ ನ್ಯೂಸ್

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

10

ದ.ಕ: ಬಿಜೆಪಿ ಜತೆಗಿನ ಮೈತ್ರಿಗೆ ವಿರೋಧ: 42 ಮಂದಿ ಜೆಡಿಎಸ್ ಪದಾಧಿಕಾರಿಗಳು ‘ಕೈʼ ಸೇರ್ಪಡೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Moodabidri ಮೆದುಳು ಜ್ವರ ಉಲ್ಬಣಿಸಿ ವಿದ್ಯಾರ್ಥಿನಿ ನಿಧನ

Moodabidri ಮೆದುಳು ಜ್ವರ ಉಲ್ಬಣಿಸಿ ವಿದ್ಯಾರ್ಥಿನಿ ನಿಧನ

Dakshina Kannada: ಮನೆಮನೆ ಭೇಟಿ ಮೂಲಕ ಮತದಾನ ಸೌಲಭ್ಯಕ್ಕೆ ಚಾಲನೆ

Dakshina Kannada: ಮನೆಮನೆ ಭೇಟಿ ಮೂಲಕ ಮತದಾನ ಸೌಲಭ್ಯಕ್ಕೆ ಚಾಲನೆ

Hajj Yatra: ಕಂತು ಪಾವತಿಗೆ ಎ. 27ರಂದು ಕೊನೆಯ ದಿನ

Hajj Yatra: ಕಂತು ಪಾವತಿಗೆ ಎ. 27ರಂದು ಕೊನೆಯ ದಿನ

Mangaluru ಪ್ರಧಾನಿಯ ಕೈ ಸೇರಿದ ಕರಾವಳಿ ಕಲಾವಿದನ “ಆಯಿಲ್‌ ಕ್ಯಾನ್ವಾಸ್‌’

Mangaluru ಪ್ರಧಾನಿಯ ಕೈ ಸೇರಿದ ಕರಾವಳಿ ಕಲಾವಿದನ “ಆಯಿಲ್‌ ಕ್ಯಾನ್ವಾಸ್‌’

ರಾಜ್ಯಪ್ರಶಸ್ತಿ ಪುರಸ್ಕೃತ ಕಲಾವಿದೆ ಗಿಡಿಗೆರೆ ರಾಮಕ್ಕ ನಿಧನ

ರಾಜ್ಯಪ್ರಶಸ್ತಿ ಪುರಸ್ಕೃತ ಕಲಾವಿದೆ ಗಿಡಿಗೆರೆ ರಾಮಕ್ಕ ನಿಧನ

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

10

ದ.ಕ: ಬಿಜೆಪಿ ಜತೆಗಿನ ಮೈತ್ರಿಗೆ ವಿರೋಧ: 42 ಮಂದಿ ಜೆಡಿಎಸ್ ಪದಾಧಿಕಾರಿಗಳು ‘ಕೈʼ ಸೇರ್ಪಡೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.