ಅರ್ಹತಾ ಫುಟ್ಬಾಲ್: ಬಲಿಷ್ಠ ಕತಾರ್ ವಿರುದ್ಧ ಎಡವಿದ ಭಾರತ
Team Udayavani, Jun 4, 2021, 10:12 PM IST
ದೋಹಾ (ಕತಾರ್): ವಿಶ್ವಕಪ್ ಹಾಗೂ ಏಶ್ಯನ್ ಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ ಆತಿಥೇಯ ಕತಾರ್ ವಿರುದ್ಧ ಏಕೈಕ ಗೋಲಿನ ಸೋಲಿಗೆ ತುತ್ತಾಗಿದೆ. ಗೋಲ್ಕೀಪರ್ ಗುರುಪ್ರೀತ್ ಸಿಂಗ್ ಅವರ ಅಮೋಘ ಸಾಹಸದಿಂದಾಗಿ ತಂಡ ಭಾರೀ ಸೋಲಿನಿಂದ ಪಾರಾಯಿತು.
ಕತಾರ್ನ ಅಬ್ಧೆಲ್ ಅಜಿಜ್ 33ನೇ ನಿಮಿಷದಲ್ಲಿ ಪಂದ್ಯದ ಏಕೈಕ ಗೋಲು ಬಾರಿಸಿದರು. ಪಂದ್ಯದುದ್ದಕ್ಕೂ ಏಶ್ಯನ್ ಚಾಂಪಿಯನ್ ಕತಾರ್ ಭಾರತದ ಮೇಲೆ ಸವಾರಿ ಮಾಡುತ್ತ ಹೋಯಿತು. 6 ಪಂದ್ಯಗಳಿಂದ 3 ಅಂಕ ಗಳಿಸಿರುವ ಭಾರತವಿನ್ನೂ ಗೆಲುವಿನ ಖಾತೆ ತೆರೆದಿಲ್ಲ. ಸದ್ಯ 4ನೇ ಸ್ಥಾನದಲ್ಲೇ ಉಳಿದಿದೆ.
2019ರ ಮೊದಲ ಲೆಗ್ನಲ್ಲಿ ಇತ್ತಂಡ ಗಳ ನಡುವಿನ ಪಂದ್ಯ ಗೋಲುರಹಿತ ಡ್ರಾ ಆಗಿತ್ತು. ಈ ಸಲವೂ ಸುನೀಲ್ ಚೆಟ್ರಿ ಪಡೆ ಇಂಥದೇ ಪ್ರತಿರೋಧ ನೀಡೀತೆಂಬ ನಿರೀಕ್ಷೆ ಇತ್ತು. ಆದರೆ ಇದು ಹುಸಿಯಾಯಿತು. ಗೋಲ್ಕೀಪರ್ ಸಂಧು ಕತಾರ್ನ ಬರೋಬ್ಬರಿ 9 ಗೋಲುಗಳ ಅವಕಾಶವನ್ನು ತಪ್ಪಿಸಿ ಭಾರತದ ಮರ್ಯಾದೆ ಕಾಪಾಡಿದರು.
ಇದನ್ನೂ ಓದಿ :ಟಿ20 : ಪಾಕ್ ತಂಡದಲ್ಲಿ ಮೊಯಿನ್ ಖಾನ್ ಪುತ್ರ ಆಜಂ ಖಾನ್ ಗೆ ಅವಕಾಶ
ಹತ್ತೇ ಮಂದಿ ಆಟಗಾರರು
ಭಾರತದ ಹಿನ್ನಡೆಗೆ ಇನ್ನೂ ಒಂದು ಕಾರಣ ಇತ್ತು. 18ನೇ ನಿಮಿಷದ ಬಳಿಕ ಕೇವಲ 10 ಆಟಗಾರರೊಂದಿಗೆ ಆಡುವ ಒತ್ತಡಕ್ಕೆ ಸಿಲುಕಿತು. ರಾಹುಲ್ ಭೆಕೆ ಎರಡನೇ ಸಲ ಹಳದಿ ಕಾರ್ಡ್ ಪಡೆದ ಕಾರಣ ಪಂದ್ಯದಿಂದ ಹೊರ ನಡೆಯಬೇಕಾಯಿತು. ಅವರು ಬಾಕ್ಸ್ ಹೊರಗಡೆ ಚೆಂಡನ್ನು ಕೈಯಲ್ಲಿ ತಡೆದಿದ್ದರು. ಅವರಿಗೆ 9ನೇ ನಿಮಿಷ ದಲ್ಲಿ ಮೊದಲ ಹಳದಿ ಕಾರ್ಡ್ ತೋರಿಸಲಾಗಿತ್ತು.
ದ್ವಿತೀಯಾರ್ಧದಲ್ಲಿ ನಾಯಕ ಚೆಟ್ರಿ ಕೂಡ ಕಣಕ್ಕಿಳಿಯಲಿಲ್ಲ. ಇವರ ಬದಲು ಉದಾಂತ್ ಸಿಂಗ್ ಆಡಲಿಳಿದರು.
ಏಶ್ಯನ್ ಆಯ್ಕೆ ಜೀವಂತ
ಭಾರತ ಈಗಾಗಲೇ ಫಿಫಾ ವಿಶ್ವಕಪ್ ಸ್ಪರ್ಧೆಯಿಂದ ಹೊರಬಿದ್ದಿದೆ. ಆದರೆ 2023ರ ಏಶ್ಯನ್ ಕಪ್ ಆಯ್ಕೆಯನ್ನು ಜೀವಂತವಾಗಿರಿಸಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ