ಬೆಕ್ಕುಗಳು ಆಗಾಗಾ ಹುಲ್ಲು ತಿನ್ನುವುದೇಕೆ? ಹುಲ್ಲಿನಿಂದ ಬೆಕ್ಕುಗಳಿಗೆ ಆರೋಗ್ಯ ಲಾಭವಿದೆಯೇ…

ಹೌದು ಈ ಬೆಕ್ಕುಗಳೇಕೆ ಹುಲ್ಲು ತಿನ್ನುತ್ತವೆ ಎಂಬ ಪ್ರಶ್ನೆ ನಿಮ್ಮನ್ನೂ ಕಾಡುತ್ತಿರಬಹುದು?

Team Udayavani, Feb 23, 2023, 12:12 PM IST

ಬೆಕ್ಕುಗಳು ಆಗಾಗಾ ಹುಲ್ಲು ತಿನ್ನುತ್ತಿರುವುದೇಕೆ? ಹುಲ್ಲಿನಿಂದ ಬೆಕ್ಕುಗಳಿಗೆ ಆರೋಗ್ಯ ಲಾಭವಿದೆಯೇ…

ಹುಲಿ ಬೇಟೆಗೆ ಇಳಿದಾಗ ಎಂದೂ ಹುಲ್ಲು ತಿನ್ನುವುದಿಲ್ಲ ಎಂಬ ಆಡು ಮಾತೊಂದಿದೆ. ಆದರೆ ಬಹುತೇಕ ಮಂದಿ ನಮ್ಮ ಮನೆಯ ಅಥವಾ ಸುತ್ತಮುತ್ತ ಅಡ್ಡಾಡುವ ಬೆಕ್ಕು ಆಗಾಗ ಹುಲ್ಲು ತಿನ್ನುವುದನ್ನು ಗಮನಿಸಿರಬಹುದು. ಹೌದು ಈ ಬೆಕ್ಕುಗಳೇಕೆ ಹುಲ್ಲು ತಿನ್ನುತ್ತವೆ ಎಂಬ ಪ್ರಶ್ನೆ ನಿಮ್ಮನ್ನೂ ಕಾಡುತ್ತಿರಬಹುದು?

ಇದನ್ನೂ ಓದಿ:ಆಸ್ಕರ್‌ ಬಳಿಕ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿಗೆ ನಾಮಿನೇಟ್‌ ಆಯಿತು ʼRRR’

ಬಹುತೇಕ ಸಮಯಗಳಲ್ಲಿ ಬೆಕ್ಕುಗಳು ಆಗಾಗ ಹಲವಾರು ಕಾರಣಗಳಿಗಾಗಿ ಹುಲ್ಲನ್ನು ತಿನ್ನುತ್ತಿರುತ್ತವೆ ಎಂದು ವರದಿ ತಿಳಿಸಿದೆ. ಇದೇನು ತುಂಬಾ ಹೊಸ ವಿಚಾರವೇನಲ್ಲ, ಬೆಕ್ಕುಗಳ ಹೊರತಾಗಿಯೂ ಸಿಂಹ ಹಾಗೂ ಇತರ ವನ್ಯಜೀವಿಗಳು ಕೂಡಾ ಹುಲ್ಲನ್ನು ತಿನ್ನುತ್ತವೆ. ಹುಲ್ಲು ಮನುಷ್ಯನಿಗೆ ಅಹಿತಕರವಾಗಿದ್ದರೂ ಸಹ, ನಿಮ್ಮ ಬೆಕ್ಕು ಹುಲ್ಲು ತಿನ್ನಲು ಆರೋಗ್ಯಕರವಾದ ಕಾರಣಗಳಿವೆ ಎಂಬುದನ್ನು ಮರೆಯಬೇಡಿ!

ಆರೋಗ್ಯಕ್ಕೆ ಲಾಭ:

ಹುಲ್ಲಿನ ರಸದಲ್ಲಿ ಫೋಲಿಕ್ ಆ್ಯಸಿಡ್ ಅಂಶಗಳು ಹೇರಳವಾಗಿದ್ದು, ಇದರಿಂದಾಗಿ ಬೆಕ್ಕುಗಳು ಹುಲ್ಲು ತಿನ್ನುವುದರಿಂದ ಅವುಗಳ ಬೆಳವಣಿಗೆ ಮತ್ತು ಬೆಕ್ಕಿನ ರಕ್ತದಲ್ಲಿನ ಆಮ್ಲಜನಕ ಪ್ರಮಾಣವನ್ನು ಹೆಚ್ಚಿಸಲು ಸಹಾಯಕವಾಗುತ್ತದೆ. ಒಂದು ವೇಳೆ ನಿಮ್ಮ ಬೆಕ್ಕು ಆಗಾಗ ಹುಲ್ಲನ್ನು ತಿನ್ನುತ್ತಿದೆ ಎಂದಾದರೆ ಅದು ತನ್ನ ಜೀರ್ಣಕ್ರಿಯೆ ಅಗತ್ಯತೆ ಮತ್ತು ವಿಟಮಿನ್ ಹೆಚ್ಚಿಸಿಕೊಳ್ಳಲು ಬಯಸುತ್ತಿದೆ ಎಂದೇ ಅರ್ಥಮಾಡಿಕೊಳ್ಳಬೇಕು.

ಕರುಳಿನ ಚಲನೆಗೆ ಸಹಕಾರಿ: ಬೆಕ್ಕುಗಳು ಚರ್ಮ, ಸಣ್ಣ ಗರಿಗಳು, ಮೂಳೆ ಹಾಗೂ ಇತರ ವಸ್ತುಗಳನ್ನು ತಿನ್ನುತ್ತಿರುತ್ತವೆ, ಈ ವಸ್ತುಗಳು ಕೆಲವೊಮ್ಮೆ ಬೆಕ್ಕಿನ ಜೀರ್ಣಾಂಗದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ಕರುಳಿನ ಚಲನೆಗೆ ಅಡ್ಡಿಯುಂಟಾಗುತ್ತದೆ. ಆಗ ಬೆಕ್ಕಿಗೆ ಹೊಟ್ಟೆ ನೋವು ಬಂದಾಗ ಬೆಕ್ಕುಗಳು ತೆಳುವಾದ ಹುಲ್ಲನ್ನು ತಿನ್ನುವ ಮೂಲಕ ಹೊಟ್ಟೆ ನೋವನ್ನು ಶಮನಮಾಡಿಕೊಳ್ಳುತ್ತವೆ, ಅಗಲವಾದ ಹುಲ್ಲುಗಳು ಬೆಕ್ಕಿನ ಕರುಳಿನ ಚಲನೆಗೆ ಇನ್ನಷ್ಟು ಸಹಾಯಕವಾಗಲಿದೆ ಎಂದು ವರದಿ ವಿವರಿಸಿದೆ.

ಖುಷಿಯೂ ಹೌದು: ಬೆಕ್ಕುಗಳು ಸಾಂದರ್ಭಿಕವಾಗಿ ಹುಲ್ಲು ತಿನ್ನುವುದು ಅವುಗಳಿಗೆ ಖುಷಿಯ ವಿಚಾರವೂ ಹೌದಂತೆ. ಕೆಲವೊಮ್ಮೆ ಪಥ್ಯಕ್ಕಾಗಿ ಹುಲ್ಲನ್ನು ತಿನ್ನುತ್ತವೆ. ಒಂದು ವೇಳೆ ಅವುಗಳು ದೈನಂದಿನ ಆಹಾರವನ್ನು ತಿನ್ನುತ್ತಿವೆಯೋ ಅಥವಾ ಇಲ್ಲವೇ ಎಂಬುದನ್ನು ಗಮನಿಸಿ. ಇದರ ಜೊತೆಗೆ ನೀವು ಬೆಕ್ಕುಗಳಿಗೆ ನಾರಿನಾಂಶ ಇರುವ ಆಹಾರವನ್ನು ಹೆಚ್ಚು ನೀಡುವುದು ಕೂಡಾ ನಿಮಗಿರುವ ಮತ್ತೊಂದು ಆಯ್ಕೆಯಾಗಿದೆ.

ಹೊಟ್ಟೆ ನೋವು ನಿವಾರಣೆ: ಬೆಕ್ಕುಗಳು ಹುಲ್ಲನ್ನು ಸಮರ್ಪಕವಾಗಿ ಜೀರ್ಣಿಸಿಕೊಳ್ಳುವ ಕಿಣ್ವಗಳನ್ನು ಹೊಂದಿರುವುದಿಲ್ಲ. ಹಾಗಾಗಿ ಬೆಕ್ಕುಗಳು ಉದ್ದೇಶಪೂರ್ವಕವಾಗಿ ಹುಲ್ಲನ್ನು ತಿನ್ನುತ್ತವೆ, ನಂತರ ಅದನ್ನು ವಾಂತಿ ಮಾಡಿ ಹೊರಹಾಕುತ್ತವೆ. ಬೆಕ್ಕುಗಳು ತಮ್ಮ ಜೀರ್ಣಾಂಗದಲ್ಲಿ ತೊಂದರೆ ಕೊಡುವ ಮೂಳೆ, ಚರ್ಮ ಹಾಗೂ ಇತರ ವಸ್ತುಗಳನ್ನು ವಾಂತಿ ಮಾಡಿ ಹೊರಹಾಕುವುದನ್ನು ಗಮನಿಸಿರುತ್ತೀರಿ. ಬೆಕ್ಕುಗಳು ಎಷ್ಟು ಪ್ರಮಾಣದ ಹುಲ್ಲನ್ನು ತಿನ್ನಬೇಕೆಂಬುದನ್ನು ಅವುಗಳೇ ನಿಯಂತ್ರಿಸಿಕೊಳ್ಳುತ್ತವೆ. ಇದರ ಜೊತೆಗೆ ಕೀಟನಾಶಕ ಅಥವಾ ರಾಸಾಯನಿಕ ಲೇಪಿತ ಹುಲ್ಲುಗಳಿಂದ ನಿಮ್ಮ ಬೆಕ್ಕುಗಳನ್ನು ದೂರ ಇರಿಸಲು ಮುಂಜಾಗ್ರತಾ ಕ್ರಮ ವಹಿಸಿದರೆ ಉತ್ತಮ.

ಟಾಪ್ ನ್ಯೂಸ್

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

Jamyang Tsering Namgyal missed bjp ticket in ladakh

Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್‌ ಹಾಲಿ ಸಂಸದ ನಮ್‌ಗ್ಯಾಲ್‌ ಗೆ ಕೊಕ್‌

Biriyani was being served on paper plates with images of Lord Rama

Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.