ಫ್ರೆಂಚ್‌ ಓಪನ್‌: ಜೊಕೋ-ಸಿಸಿಪಸ್‌: ಯಾರಿಗೆ ಒಲಿದೀತು ಪ್ಯಾರಿಸ್‌?


Team Udayavani, Jun 13, 2021, 7:10 AM IST

ಫ್ರೆಂಚ್‌ ಓಪನ್‌: ಜೊಕೋ-ಸಿಸಿಪಸ್‌: ಯಾರಿಗೆ ಒಲಿದೀತು ಪ್ಯಾರಿಸ್‌?

ಪ್ಯಾರಿಸ್‌: ಕೆಲವು ಕ್ರೀಡಾಪಟುಗಳು ಗೆಲುವಿಗಿಂತ ಸೋಲಿನಿಂದಲೇ ಹೆಚ್ಚು ಸುದ್ದಿಯಾಗುತ್ತಾರೆ. ಇವರು ಗೆದ್ದರೆ ಅದೊಂದು ಮಾಮೂಲು ಸಂಗತಿ, ಆದರೆ ಮುಗ್ಗರಿಸಿ ಬಿದ್ದರೆ ಅದು ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸುವ ಬೆಳವಣಿಗೆ. ಚರ್ಚೆ, ವಿಶ್ಲೇಷಣೆಗೆ ಗ್ರಾಸವೊದಗಿಸುವ ವಿಷಯ. ಇದಕ್ಕೆ ತಾಜಾ ಉದಾಹರಣೆ ರಫೆಲ್‌ ನಡಾಲ್‌!

ಫ್ರೆಂಚ್‌ ಓಪನ್‌, ರೊಲ್ಯಾಂಡ್‌ ಗ್ಯಾರೋಸ್‌, ಆವೆಯಂಗಳ… ಎಂದೊಡನೆ ಅಲ್ಲಿ ಅಚ್ಚೊತ್ತುವ ಚಿತ್ರ ರಫೆಲ್‌ ನಡಾಲ್‌ ಅವರದು. ಪ್ಯಾರಿಸ್‌ನ ಈ ಅಂಕಣದಲ್ಲಿ ನಡಾಲ್‌ ಸಾಧನೆ-ಚರಿತ್ರೆ ಅಸಾಮಾನ್ಯ, ಅನುಪಮ. ಶುಕ್ರವಾರ ರಾತ್ರಿ ಅವರು ಮತ್ತೋರ್ವ ದೈತ್ಯ ಟೆನಿಸಿಗ, ವಿಶ್ವದ ನಂ.1 ಖ್ಯಾತಿಯ ಜೊಕೋವಿಕ್‌ ವಿರುದ್ಧ ಸೆಣಸು ವಾಗಲೂ ಫೇವರಿಟ್‌ ಆಟಗಾರನಾಗಿಯೇ ಗೋಚರಿಸಿªರು.

ಮೊದಲ ಸೆಟ್‌ ವಶಪಡಿಸಿ
ಕೊಂಡಾಗಲಂತೂ ನಡಾಲ್‌ ಫೈನಲ್‌ ಪ್ರವೇಶ ಪಕ್ಕಾ ಎಂಬ ಸಂದೇಶವೊಂದು ರವಾನೆ ಯಾಗತೊ ಡಗಿತು. ಆದರೆ ಮುಂದೆ ಸಂಭವಿಸಿದ್ದೇ ಬೇರೆ.

ಜೊಕೋ ಒಮ್ಮೆಲೇ ಜಬರ್ದಸ್ತ್ ಪ್ರದರ್ಶ ನದೊಂದಿಗೆ ತಿರುಗಿ ಬಿದ್ದರು. ನಡಾಲ್‌ ಜಾರುತ್ತ ಹೋದರು. ಮುಂದಿನ ಮೂರೂ ಸೆಟ್‌ಗಳನ್ನು ವಶಪಡಿಸಿಕೊಂಡ ಜೊಕೋವಿಕ್‌ ಫೈನಲ್‌ಗ‌ೂ ಮೊದಲೇ ಇತಿಹಾಸ ಬರೆದರು! ಜೊಕೋ ಗೆಲುವಿನ ಅಂತರ 3-6, 6-3, 7-6 (7-4), 6-2. ಈ ಪಂದ್ಯವನ್ನು 5ನೇ ಸೆಟ್‌ವರೆಗೂ ವಿಸ್ತರಿಸಲಾಗದ ಮಟ್ಟಕ್ಕೆ ನಡಾಲ್‌ ಕುಸಿದು ಹೋದದ್ದು ನಂಬಲಾಗದ ಸಂಗತಿ. ಮೊದಲ ಸೆಟ್‌ ಗೆದ್ದ ಬಳಿಕ ಅವರು ಕಾಲುನೋವಿಗೆ ಸಿಲುಕಿದ್ದೂ ಸೋಲಿಗೊಂದು ಕಾರಣ ಇರಬಹುದು.

2005ರಲ್ಲಿ ಫ್ರೆಂಚ್‌ ಓಪನ್‌ ಆಡಲಾರಂಭಿಸಿದ ಬಳಿಕ ನಡಾಲ್‌ ಅನುಭವಿಸಿದ ಕೇವಲ 3ನೇ ಸೋಲು ಇದಾಗಿದೆ. ಹಾಗೆಯೇ ಜೊಕೋವಿಕ್‌ ಪ್ಯಾರಿಸ್‌ನಲ್ಲಿ ಕಾಣುತ್ತಿರುವ ಕೇವಲ 5ನೇ ಫೈನಲ್‌. ಗೆದ್ದದ್ದು ಒಮ್ಮೆ ಮಾತ್ರ, 2016ರಲ್ಲಿ. ಅಂದು ಬ್ರಿಟನ್ನಿನ ಆ್ಯಂಡಿ ಮರ್ರೆ ಆವರನ್ನು 3-6, 6-1, 6-2, 6-4ರಿಂದ ಹಿಮ್ಮೆಟ್ಟಿಸಿದ್ದರು.

ಸಿಸಿಪಸ್‌ ಎದುರಾಳಿ
ರವಿವಾರ ಸಂಜೆ ನಡೆಯುವ ಪ್ರಶಸ್ತಿ ಕಾಳಗದಲ್ಲಿ ಜೊಕೋವಿಕ್‌ ಎದುರಾಳಿಯಾಗಿ ಕಣಕ್ಕಿಳಿಯುವವರು ಗ್ರೀಕ್‌ನ ಸ್ಟೆಫ‌ನೋಸ್‌ ಸಿಸಿಪಸ್‌. ಅವರಿಗೆ ಇದು ಮೊದಲ ಗ್ರ್ಯಾನ್‌ಸ್ಲಾಮ್‌ ಫೈನಲ್‌. ಜೊಕೋಗೆ 29ನೇ ಫೈನಲ್‌. ಆದರೆ ಫ‌ಲಿತಾಂಶ ಏನೂ ಆಗಬಹುದು,

ನಡಾಲ್‌-ಜೊಕೋ ಪಂದ್ಯದಂತೆ!
ಇಲ್ಲಿ ಸಿಸಿಪಸ್‌ ಗೆದ್ದರೆ ಇತಿಹಾಸವೊಂದು ನಿರ್ಮಾಣವಾಗುತ್ತದೆ. ಜೊಕೋ ಗೆದ್ದರೆ ಎಲ್ಲ 4 ಗ್ರ್ಯಾನ್‌ಸ್ಲಾಮ್‌ ಟ್ರೋಫಿಗಳನ್ನು ಎರಡು ಹಾಗೂ ಹೆಚ್ಚು ಸಲ ಎತ್ತಿದ ಕೇವಲ 3ನೇ ಟೆನಿಸಿಗನೆನಿಸುತ್ತಾರೆ. ಉಳಿದಿಬ್ಬರೆಂದರೆ ರಾಡ್‌ ಲೆವರ್‌ ಮತ್ತು ರಾಯ್‌ ಎಮರ್ಸನ್‌.

ಟಾಪ್ ನ್ಯೂಸ್

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Shotgun

Shotgun ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಕರಣ್‌: ವಿವಾದ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.