ಫ್ರೆಂಚ್ ಓಪನ್: ಜೊಕೋ-ಸಿಸಿಪಸ್: ಯಾರಿಗೆ ಒಲಿದೀತು ಪ್ಯಾರಿಸ್?
Team Udayavani, Jun 13, 2021, 7:10 AM IST
ಪ್ಯಾರಿಸ್: ಕೆಲವು ಕ್ರೀಡಾಪಟುಗಳು ಗೆಲುವಿಗಿಂತ ಸೋಲಿನಿಂದಲೇ ಹೆಚ್ಚು ಸುದ್ದಿಯಾಗುತ್ತಾರೆ. ಇವರು ಗೆದ್ದರೆ ಅದೊಂದು ಮಾಮೂಲು ಸಂಗತಿ, ಆದರೆ ಮುಗ್ಗರಿಸಿ ಬಿದ್ದರೆ ಅದು ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸುವ ಬೆಳವಣಿಗೆ. ಚರ್ಚೆ, ವಿಶ್ಲೇಷಣೆಗೆ ಗ್ರಾಸವೊದಗಿಸುವ ವಿಷಯ. ಇದಕ್ಕೆ ತಾಜಾ ಉದಾಹರಣೆ ರಫೆಲ್ ನಡಾಲ್!
ಫ್ರೆಂಚ್ ಓಪನ್, ರೊಲ್ಯಾಂಡ್ ಗ್ಯಾರೋಸ್, ಆವೆಯಂಗಳ… ಎಂದೊಡನೆ ಅಲ್ಲಿ ಅಚ್ಚೊತ್ತುವ ಚಿತ್ರ ರಫೆಲ್ ನಡಾಲ್ ಅವರದು. ಪ್ಯಾರಿಸ್ನ ಈ ಅಂಕಣದಲ್ಲಿ ನಡಾಲ್ ಸಾಧನೆ-ಚರಿತ್ರೆ ಅಸಾಮಾನ್ಯ, ಅನುಪಮ. ಶುಕ್ರವಾರ ರಾತ್ರಿ ಅವರು ಮತ್ತೋರ್ವ ದೈತ್ಯ ಟೆನಿಸಿಗ, ವಿಶ್ವದ ನಂ.1 ಖ್ಯಾತಿಯ ಜೊಕೋವಿಕ್ ವಿರುದ್ಧ ಸೆಣಸು ವಾಗಲೂ ಫೇವರಿಟ್ ಆಟಗಾರನಾಗಿಯೇ ಗೋಚರಿಸಿªರು.
ಮೊದಲ ಸೆಟ್ ವಶಪಡಿಸಿ
ಕೊಂಡಾಗಲಂತೂ ನಡಾಲ್ ಫೈನಲ್ ಪ್ರವೇಶ ಪಕ್ಕಾ ಎಂಬ ಸಂದೇಶವೊಂದು ರವಾನೆ ಯಾಗತೊ ಡಗಿತು. ಆದರೆ ಮುಂದೆ ಸಂಭವಿಸಿದ್ದೇ ಬೇರೆ.
ಜೊಕೋ ಒಮ್ಮೆಲೇ ಜಬರ್ದಸ್ತ್ ಪ್ರದರ್ಶ ನದೊಂದಿಗೆ ತಿರುಗಿ ಬಿದ್ದರು. ನಡಾಲ್ ಜಾರುತ್ತ ಹೋದರು. ಮುಂದಿನ ಮೂರೂ ಸೆಟ್ಗಳನ್ನು ವಶಪಡಿಸಿಕೊಂಡ ಜೊಕೋವಿಕ್ ಫೈನಲ್ಗೂ ಮೊದಲೇ ಇತಿಹಾಸ ಬರೆದರು! ಜೊಕೋ ಗೆಲುವಿನ ಅಂತರ 3-6, 6-3, 7-6 (7-4), 6-2. ಈ ಪಂದ್ಯವನ್ನು 5ನೇ ಸೆಟ್ವರೆಗೂ ವಿಸ್ತರಿಸಲಾಗದ ಮಟ್ಟಕ್ಕೆ ನಡಾಲ್ ಕುಸಿದು ಹೋದದ್ದು ನಂಬಲಾಗದ ಸಂಗತಿ. ಮೊದಲ ಸೆಟ್ ಗೆದ್ದ ಬಳಿಕ ಅವರು ಕಾಲುನೋವಿಗೆ ಸಿಲುಕಿದ್ದೂ ಸೋಲಿಗೊಂದು ಕಾರಣ ಇರಬಹುದು.
2005ರಲ್ಲಿ ಫ್ರೆಂಚ್ ಓಪನ್ ಆಡಲಾರಂಭಿಸಿದ ಬಳಿಕ ನಡಾಲ್ ಅನುಭವಿಸಿದ ಕೇವಲ 3ನೇ ಸೋಲು ಇದಾಗಿದೆ. ಹಾಗೆಯೇ ಜೊಕೋವಿಕ್ ಪ್ಯಾರಿಸ್ನಲ್ಲಿ ಕಾಣುತ್ತಿರುವ ಕೇವಲ 5ನೇ ಫೈನಲ್. ಗೆದ್ದದ್ದು ಒಮ್ಮೆ ಮಾತ್ರ, 2016ರಲ್ಲಿ. ಅಂದು ಬ್ರಿಟನ್ನಿನ ಆ್ಯಂಡಿ ಮರ್ರೆ ಆವರನ್ನು 3-6, 6-1, 6-2, 6-4ರಿಂದ ಹಿಮ್ಮೆಟ್ಟಿಸಿದ್ದರು.
ಸಿಸಿಪಸ್ ಎದುರಾಳಿ
ರವಿವಾರ ಸಂಜೆ ನಡೆಯುವ ಪ್ರಶಸ್ತಿ ಕಾಳಗದಲ್ಲಿ ಜೊಕೋವಿಕ್ ಎದುರಾಳಿಯಾಗಿ ಕಣಕ್ಕಿಳಿಯುವವರು ಗ್ರೀಕ್ನ ಸ್ಟೆಫನೋಸ್ ಸಿಸಿಪಸ್. ಅವರಿಗೆ ಇದು ಮೊದಲ ಗ್ರ್ಯಾನ್ಸ್ಲಾಮ್ ಫೈನಲ್. ಜೊಕೋಗೆ 29ನೇ ಫೈನಲ್. ಆದರೆ ಫಲಿತಾಂಶ ಏನೂ ಆಗಬಹುದು,
ನಡಾಲ್-ಜೊಕೋ ಪಂದ್ಯದಂತೆ!
ಇಲ್ಲಿ ಸಿಸಿಪಸ್ ಗೆದ್ದರೆ ಇತಿಹಾಸವೊಂದು ನಿರ್ಮಾಣವಾಗುತ್ತದೆ. ಜೊಕೋ ಗೆದ್ದರೆ ಎಲ್ಲ 4 ಗ್ರ್ಯಾನ್ಸ್ಲಾಮ್ ಟ್ರೋಫಿಗಳನ್ನು ಎರಡು ಹಾಗೂ ಹೆಚ್ಚು ಸಲ ಎತ್ತಿದ ಕೇವಲ 3ನೇ ಟೆನಿಸಿಗನೆನಿಸುತ್ತಾರೆ. ಉಳಿದಿಬ್ಬರೆಂದರೆ ರಾಡ್ ಲೆವರ್ ಮತ್ತು ರಾಯ್ ಎಮರ್ಸನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ
Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ