ಬೆಲೆಯೇರಿಕೆ ಎಫೆಕ್ಟ್: ಇಂಧನ ಮಾರಾಟ ಕುಸಿತ

ಪೆಟ್ರೋಲ್‌ ಮಾರಾಟ ಶೇ. 10ರಷ್ಟು, ಡೀಸೆಲ್‌ ಮಾರಾಟ ಶೇ. 15ರಷ್ಟು ಇಳಿಕೆ

Team Udayavani, Apr 17, 2022, 7:50 AM IST

ಬೆಲೆಯೇರಿಕೆ ಎಫೆಕ್ಟ್: ಇಂಧನ ಮಾರಾಟ ಕುಸಿತ

ನವದೆಹಲಿ: ಕೇವಲ 16 ದಿನಗಳ ಅವಧಿಯಲ್ಲಿ ತೈಲ ದರವು ದಾಖಲೆಯ ಏರಿಕೆ ಕಂಡ ಪರಿಣಾಮ, ಪ್ರಸಕ್ತ ತಿಂಗಳ ಮೊದಲಾರ್ಧದಲ್ಲಿ ಇಂಧನದ ಮಾರಾಟ ಪ್ರಮಾಣವು ಗಣನೀಯವಾಗಿ ಕುಸಿದಿತ್ತು ಎಂದು ಕೈಗಾರಿಕೆಗಳ ದತ್ತಾಂಶ ತಿಳಿಸಿದೆ.

ಮಾರ್ಚ್‌ ತಿಂಗಳ ಮೊದಲ 15 ದಿನಗಳಿಗೆ ಹೋಲಿಸಿದರೆ ಏಪ್ರಿಲ್‌ ತಿಂಗಳ ಮೊದಲಾರ್ಧದಲ್ಲಿ ಪೆಟ್ರೋಲ್‌ ಮಾರಾಟವು ಶೇ. 10ರಷ್ಟು ಇಳಿಕೆಯಾಗಿದೆ. ಡೀಸೆಲ್‌ ಬೇಡಿಕೆಯು ಶೇ.15.6ರಷ್ಟು ಕುಸಿತ ದಾಖಲಿಸಿದೆ. ಇನ್ನು, ಅಡುಗೆ ಅನಿಲದ ವಿಚಾರಕ್ಕೆ ಬಂದರೆ, ಏ.1-15ರ ಅವಧಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ ಮಾರಾಟವು ಶೇ. 1.7ರಷ್ಟು ಇಳಿದಿದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಏ.1-15ರ ಅವಧಿಯಲ್ಲಿ 1.12 ದಶಲಕ್ಷ ಟನ್‌ ಪೆಟ್ರೋಲ್‌ ಮಾರಾಟ ಮಾಡಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಶೇ. 12.1ರಷ್ಟು ಹೆಚ್ಚು. ಆದರೆ, ಪೆಟ್ರೋಲ್‌ ಬಳಕೆ ಪ್ರಮಾಣವು 2022ರ ಇದೇ ಅವಧಿಯಲ್ಲಿ 1.24 ದಶಲಕ್ಷ ಟನ್‌ ಆಗಿದ್ದರೆ, ಈ ವರ್ಷ ಶೇ.9.7ರಷ್ಟು ಕಡಿಮೆಯಿದೆ ಎಂದು ಅಂಕಿಅಂಶ ಹೇಳಿದೆ. ಪ್ರಸಕ್ತ ವರ್ಷದ ಮಾರ್ಚ್‌ ತಿಂಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಮಾರಾಟವು ಕ್ರಮವಾಗಿ ಶೇ. 18 ಮತ್ತು ಶೇ. 23.7ರಷ್ಟು ಹೆಚ್ಚಳವಾಗಿತ್ತು. ಬೆಲೆಯೇರಿಕೆಯ ನಿರೀಕ್ಷೆಯಿಂದ ಕೆಲವರು ಮೊದಲೇ ಟ್ಯಾಂಕ್‌ ಫುಲ್ ಮಾಡಿಟ್ಟುಕೊಂಡಿದ್ದರು ಎನ್ನಲಾಗಿದೆ.

ಮಾರ್ಚ್‌ 22ರಿಂದ ಏ.6ರ ನಡುವೆ ತೈಲ ದರವು ಲೀಟರ್‌ಗೆ 10 ರೂ.ಗಳಷ್ಟು ಏರಿಕೆಯಾಗಿದೆ. ಮಾ.22ರಂದು ಎಲ್‌ಪಿಜಿ ದರ 50 ರೂ. ಏರಿಕೆಯಾದ ಕಾರಣ, ಸಿಲಿಂಡರ್‌ಗೆ 949.50 ರೂ. ಆಗಿದೆ.

ಚಾಲ್ತಿ ಖಾತೆ ಕೊರತೆ ಹೆಚ್ಚಳ ಭೀತಿ
ಜಾಗತಿಕ ಕಚ್ಚಾ ತೈಲದ ದರ ಇದೇ ರೀತಿ ಏರಿಕೆಯಾಗುತ್ತಾ ಹೋದರೆ, ಭಾರತದ ಚಾಲ್ತಿ ಖಾತೆ ಕೊರತೆಯು (ಆಯಾತ-ನಿರ್ಯಾತದ ನಡುವಿನ ಅಂತರ) ಗಗನಕ್ಕೇರುವ ಭೀತಿ ಆರಂಭವಾಗಿದೆ. ಕಚ್ಚಾ ತೈಲ ದರವೇನಾದರೂ ಬ್ಯಾರೆಲ್‌ಗೆ 150 ಡಾಲರ್‌ಗೆ ತಲುಪಿದರೆ, 2022ರ ಚಾಲ್ತಿ ಖಾತೆ ಕೊರತೆಯು(ಸಿಎಡಿ) ಜಿಡಿಪಿಯ ಶೇ.5ಕ್ಕಿಂತಲೂ ಹೆಚ್ಚಾಗಲಿದೆ. ಇದು ದೇಶದ ಆರ್ಥಿಕತೆಗೆ ಭಾರೀ ಪೆಟ್ಟು ನೀಡಲಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ರೇಟಿಂಗ್‌ ಸಂಸ್ಥೆ ಹೇಳಿದೆ. ಆಮದು ಬಿಲ್‌ ಹೆಚ್ಚಳವಾದ ಕಾರಣ ಕಳೆದ ಡಿಸೆಂಬರ್‌ಗೆ ಅಂತ್ಯವಾದ ತ್ತೈಮಾಸಿಕ ಅವಧಿಯಲ್ಲಿ ದೇಶದ ಚಾಲ್ತಿ ಖಾತೆ ಕೊರತೆಯು ಜಿಡಿಪಿಯ ಶೇ.2.7ಕ್ಕೆ ತಲುಪಿತ್ತು. ಅದಕ್ಕೂ ಹಿಂದಿನ ತ್ತೈಮಾಸಿಕದಲ್ಲಿ ಇದು ಜಿಡಿಪಿಯ ಶೇ.1.3ರಷ್ಟಿತ್ತು.

ಟಾಪ್ ನ್ಯೂಸ್

Scrutiny of complaint against Modi: Election Commission

Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Scrutiny of complaint against Modi: Election Commission

Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Scrutiny of complaint against Modi: Election Commission

Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.