ಮೈಗ್ರೇನ್ ಎಂಬ ತಲೆಶೂಲೆ…ಇದರ ಲಕ್ಷಣಗಳೇನು? ಮೈಗ್ರೇನ್‌ಗೆ ಇದೆ ಮನೆ ಮದ್ದು

ವೈದ್ಯರ ಭೇಟಿಯ ನಂತರವೇ ವೈದ್ಯರ ಸಲಹೆಯಂತೆ ನೋವು ನಿವಾರಕ ಗುಳಿಗೆಗಳನ್ನು ತೆಗೆದುಕೊಳ್ಳಿ.

Team Udayavani, Jan 30, 2023, 5:45 PM IST

ಮೈಗ್ರೇನ್ ಎಂಬ ತಲೆಶೂಲೆ…ಇದರ ಲಕ್ಷಣಗಳೇನು? ಮೈಗ್ರೇನ್‌ಗೆ ಇದೆ ಮನೆ ಮದ್ದು

ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡದ ನಡುವೆ ಅನೇಕ ರೋಗಗಳು ಮನುಷ್ಯನನ್ನು ವ್ಯಾಪಿಸುತ್ತಿವೆ. ಅದರಲ್ಲೂ ಮನುಷ್ಯನಲ್ಲಿ ಸಾಮಾನ್ಯವಾಗಿ ಕಾಣುವ ರೋಗಗಳ ಪೈಕಿ ಮೈಗ್ರೇನ್‌ ಕೂಡ ಒಂದು. ಮೈಗ್ರೇನ್‌ ಅಂದರೆ ತಲೆನೋವಿನ ಮತ್ತೂಂದು ಭಾಗ. ತಲೆಯ ಮಧ್ಯ ಭಾಗದಲ್ಲಿ ನೋವಿದ್ದರೆ ಸಾಮಾನ್ಯ ತಲೆನೋವು ಎಂದರ್ಥ. ಆದರೆ, ಒಮ್ಮೊಮ್ಮೆ ತಲೆಯ ಎಡ, ಮತ್ತೂಮ್ಮೆ ತಲೆಯ ಬಲ ಭಾಗದಲ್ಲಿ ಆಗಾಗ ನೋವು ಕಾಣಿಸಿಕೊಂಡರೆ ಅದು ಮೈಗ್ರೇನ್‌ ತಲೆನೋವು ಎನ್ನಬಹುದು.

ಮೈಗ್ರೇನ್‌ ತಲೆನೋವು ಸಮಯದಲ್ಲಿ ಸಾಮಾನ್ಯವಾಗಿ ಕೆಲವರಿಗೆ ವಾಂತಿ ಬಂದಂತಹ ಅನುಭವವೂ ಆಗುವುದಿದೆ. ಕೆಲವರಿಗೆ ತಲೆಸುತ್ತು ಬರುವುದು, ನಿದ್ದೆ ಮರೀಚಿಕೆಯಾಗುವುದು, ಹೊಟ್ಟೆ ತೊಳೆಸುವಿಕೆ, ವಾಂತಿಯಾಗುವುದು ಇವೆಲ್ಲ ಲಕ್ಷಣಗಳು ಕಂಡುಬರುತ್ತವೆ. ಕೆಲವೊಂದು ಬಾರಿ ವಾಂತಿಯಾದ ಬಳಿಕ ತಲೆನೋವು ಕಡಿಮೆಯಾಗುತ್ತದೆ.

ಮೈಗ್ರೇನ್‌ ಕೆಲವರಿಗೆ ವಂಶಪಾರಂಪರ್ಯವಾಗಿಯೂ ಬರಬಹುದು. ಮೈಗ್ರೇನ್‌ ಬಂದರೆ ನೆಗಡಿಯಂತಹ ದೈಹಿಕ ಚಟುವಟಿಕೆಯಲ್ಲಿಯೂ ತಲೆನೋವು ಹೆಚ್ಚಿಸುತ್ತದೆ. ತಿಂಗಳಿಗೆ ಎರಡು ಬಾರಿ ಬಿಟ್ಟು ಬಿಟ್ಟು ತಲೆನೋವು ಬರುತ್ತಿದ್ದರೆ ಕೂಡಲೇ ವೈದ್ಯರನ್ನು ಭೇಟಿಯಾಗಿ. ವೈದ್ಯರ ಭೇಟಿಯ ನಂತರವೇ ವೈದ್ಯರ ಸಲಹೆಯಂತೆ ನೋವು ನಿವಾರಕ ಗುಳಿಗೆಗಳನ್ನು ತೆಗೆದುಕೊಳ್ಳಿ.

ಮೈಗ್ರೇನ್‌ಗೆ ಇದೆ ಮನೆ ಮದ್ದು
ಸಾಮಾನ್ಯ ಕಾಯಿಲೆಗೆ ಆ್ಯಂಟಿಬಯೋಟಿಕ್‌ ಔಷಧ ಸೇವನೆ ಮಾಡುವ ಮುನ್ನ ಮನೆ ಮದ್ದು ಸೇವಿಸುವುದು ಉತ್ತಮ. ಮೈಗ್ರೇನ್‌ ಕಾಯಿಲೆ ಇರುವ ಮಂದಿ ಒಂದು ಚಮಚ ಧನಿಯಾ ಪುಡಿಯನ್ನು ಒಂದು ಲೋಟ ನೀರಲ್ಲಿ ರಾತ್ರಿ ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮೈಗ್ರೇನ್‌ ನಿವಾರಣೆಯಾಗಬಹುದು. ಕೆಲವರಿಗೆ ಕಫ ಹೆಚ್ಚಾದಾಗ ಮೈಗ್ರೇನ್‌ ಆರಂಭವಾಗುತ್ತದೆ. ಈ ವೇಳೆ ಕಾಲು ಚಮಚ ಲವಂಗ ಎಣ್ಣೆಗೆ ಒಂದು ಚಮಚ ಏಲಕ್ಕಿ ಎಣ್ಣೆ ಬೆರೆಸಿ ಹಣೆಗೆ ಹಚ್ಚಿ ಮಸಾಜ್‌ ಮಾಡಬಹುದಾಗಿದೆ.

ಶುಂಠಿಯ ಬಳಕೆಯಿಂದ ತ್ವರಿತವಾಗಿ ಮೈಗ್ರೇನ್‌ ತಲೆನೋವಿಗೆ ಪರಿಹಾರ ಕಾಣಬಹುದಾಗಿದೆ. ಶುಂಠಿಯು ತಲೆಯಲ್ಲಿರುವ ರಕ್ತನಾಳಗಳ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ನೋವು ನಿವಾರಣೆಯಾಗುತ್ತದೆ. ಹಾಗೆಯೇ ಜೀರ್ಣಕ್ರಿಯೆಯನ್ನು ಉತ್ತೇಜಿಸುವುದರಿಂದ, ಮೈಗ್ರೇನ್‌ ಸಮಯದಲ್ಲಿ ಉಂಟಾಗುವ ವಾಕರಿಕೆ ಸಮಸ್ಯೆ ದೂರವಾಗುತ್ತದೆ. ದಾಲಿcನ್ನಿ ತುಂಡುಗಳನ್ನು ಪುಡಿ ಮಾಡಿ. ಅದಕ್ಕೆ ಸ್ವಲ್ಪ ನೀರು ಸೇರಿಸಿ ಗಟ್ಟಿಯಾದ ಪೇಸ್ಟ್‌ ಮಾಡಿ. ಇದನ್ನು ನಿಮ್ಮ ಹಣೆಯ ಮೇಲೆ ಹಚ್ಚಿ 30 ನಿಮಿಷಗಳ ಕಾಲ ಮಲಗಿಕೊಳ್ಳಿ. ಅನಂತರ ಅದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ಮೈಗ್ರೇನ್‌ ತಲೆನೋವು ಕಡಿಮೆಯಾಗುತ್ತದೆ. ನಿಮ್ಮ ತಲೆ ಮತ್ತು ಕುತ್ತಿಗೆಯ ಕೆಲವು ಸರಳ ವ್ಯಾಯಾಮಗಳಿಂದ ಸಹ ತಲೆನೋವಿನ ತೀವ್ರತೆಯನ್ನು ಕಡಿಮೆ ಮಾಡಬಹುದು. ಆದರೆ, ವ್ಯಾಯಾಮ ಮಾಡುವ ಮುನ್ನ ಯೋಗ ಶಿಕ್ಷಕರನ್ನು ಭೇಟಿಯಾಗಿ.

ವೈದ್ಯರ ಸಲಹೆ ಅಗತ್ಯ
ಇತ್ತೀಚಿನ ದಿನಗಳಲ್ಲಿ ತಲೆ ನೋವು ಸಾಮಾನ್ಯ. ಹಾಗಂತ ತಲೆನೋವು ನಿರ್ಲಕ್ಷಿಸಬಾರದು. ಕೆಲವೊಬ್ಬರಿಗೆ ವಂಶಪಾರಂಪರ್ಯವಾಗಿ ಮೈಗ್ರೇನ್‌ ತಲೆನೋವು ಬರಬಹುದು. ಯಾವುದೇ ಗುಳಿಗೆಗಳನ್ನು ವೈದ್ಯರ ಸಲಹೆ ಇಲ್ಲದೆ ಸೇವಿಸಬೇಡಿ.
– ಡಾ| ಹರಿಪ್ರಸಾದ್‌, ವೈದ್ಯರು

– ನವೀನ್‌ ಭಟ್‌, ಇಳಂತಿಲ

ಟಾಪ್ ನ್ಯೂಸ್

google

Google; ಪೈಥಾನ್‌ ತಂಡದ ಉದ್ಯೋಗಿಗಳ ವಜಾ

ಕಾರ್ತಿಕ್‌ ಪೆನ್‌ಡ್ರೈವ್‌ ಕೊಟ್ಟಿದ್ದು ನಿಜ: ದೇವರಾಜೇಗೌಡ

Hassan Pen Drive Case; ಕಾರ್ತಿಕ್‌ ಪೆನ್‌ಡ್ರೈವ್‌ ಕೊಟ್ಟಿದ್ದು ನಿಜ: ದೇವರಾಜೇಗೌಡ

lLondon sword attack

London; ಬೇಕಾಬಿಟ್ಟಿ ಖಡ್ಗ ಬೀಸಿದ ಯುವಕ: ಬಾಲಕ ಬಲಿ

INDWvsBANW: ಭಾರತಕ್ಕೆ 2-0 ಮುನ್ನಡೆ

INDWvsBANW: ಭಾರತಕ್ಕೆ 2-0 ಮುನ್ನಡೆ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

google

Google; ಪೈಥಾನ್‌ ತಂಡದ ಉದ್ಯೋಗಿಗಳ ವಜಾ

ಕಾರ್ತಿಕ್‌ ಪೆನ್‌ಡ್ರೈವ್‌ ಕೊಟ್ಟಿದ್ದು ನಿಜ: ದೇವರಾಜೇಗೌಡ

Hassan Pen Drive Case; ಕಾರ್ತಿಕ್‌ ಪೆನ್‌ಡ್ರೈವ್‌ ಕೊಟ್ಟಿದ್ದು ನಿಜ: ದೇವರಾಜೇಗೌಡ

lLondon sword attack

London; ಬೇಕಾಬಿಟ್ಟಿ ಖಡ್ಗ ಬೀಸಿದ ಯುವಕ: ಬಾಲಕ ಬಲಿ

INDWvsBANW: ಭಾರತಕ್ಕೆ 2-0 ಮುನ್ನಡೆ

INDWvsBANW: ಭಾರತಕ್ಕೆ 2-0 ಮುನ್ನಡೆ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.