Insomnia Disorder: ನಿದ್ರಾಹೀನತೆಗೆ ಕಾರಣಗಳೇನು…ಚಿಕಿತ್ಸಾ ವಿಧಾನಗಳೇನು?

3 ತಿಂಗಳುಗಳಿಗಿಂತ ಹೆಚ್ಚು ಅವಧಿಯಲ್ಲಿ ಕಂಡುಬಂದರೆ ದೀರ್ಘ‌ಕಾಲಿಕ ನಿದ್ರಾಹೀನತೆ ಎನ್ನಲಾಗುತ್ತದೆ.

Team Udayavani, May 19, 2023, 3:47 PM IST

Insomnia Disorder: ನಿದ್ರಾಹೀನತೆಗೆ ಕಾರಣಗಳೇನು…ಚಿಕಿತ್ಸಾ ವಿಧಾನಗಳೇನು?

ವಯಸ್ಕರಿಗೆ ಪ್ರತೀ ರಾತ್ರಿ ಕನಿಷ್ಠ 7ರಿಂದ 9 ತಾಸುಗಳ ನಿದ್ದೆ ಅಗತ್ಯವಾಗಿರುತ್ತದೆ. ನಿದ್ದೆಯನ್ನು ಆರಂಭಿಸುವುದು ಮತ್ತು ಕಾಯ್ದುಕೊಳ್ಳುವುದರಲ್ಲಿ ಕಷ್ಟವನ್ನು ನಿದ್ರಾಹೀನತೆ ಅಥವಾ ಇನ್ಸೋಮ್ನಿಯಾ ಎಂದು ಕರೆಯಲಾಗುತ್ತದೆ.

ನಿದ್ದೆಗೆ ಸಂಬಂಧಿಸಿದ ತೊಂದರೆಗಳು ಈ ಕೆಳಕಂಡಂತೆ ಇರಬಹುದು:
1. ನಿದ್ದೆ ಹೋಗುವುದಕ್ಕೆ ತೊಂದರೆ
2. ರಾತ್ರಿ ಹಲವು ಸಲ ಎಚ್ಚರವಾಗುವುದು ಮತ್ತು ಮತ್ತೆ ನಿದ್ದೆ ಮಾಡುವುದು ಕಷ್ಟವಾಗುವುದು
3. ಸಾಮಾನ್ಯವಾಗಿ ನಿದ್ದೆಯಿಂದ ಏಳುವುದಕ್ಕಿಂತ 2 ತಾಸು ಅಥವಾ ಅದಕ್ಕಿಂತ ಬೇಗನೆ ಎಚ್ಚರವಾಗುವುದು
4. ರಾತ್ರಿ ನಿದ್ದೆ ಮಾಡಿದ ಬಳಿಕವೂ ಉಲ್ಲಾಸರಹಿತರಾಗಿ, ವಿಶ್ರಾಂತಿರಹಿತರಾಗಿ ಇರುವುದು
ಮೇಲೆ ಹೇಳಿರುವ ನಿದ್ದೆಗೆ ಸಂಬಂಧಿಸಿದ ತೊಂದರೆಗಳು ವಾರದಲ್ಲಿ ಕನಿಷ್ಠ ಮೂರು ಬಾರಿ, ಕನಿಷ್ಠ ಒಂದು ತಿಂಗಳು ಕಂಡುಬಂದರೆ ಹಾಗೂ ಅದರಿಂದ ಹಗಲಿನ ದೈನಿಕ ಚಟುವಟಿಕೆಗಳಲ್ಲಿ ವ್ಯತ್ಯಯ ಉಂಟಾಗುತ್ತಿದ್ದರೆ ಆಗ ಅಂತಹ ವ್ಯಕ್ತಿ ನಿದ್ರಾಹೀನತೆಯಿಂದ ಬಳಲುತ್ತಿರುವುದಾಗಿ ನಿರ್ಧರಿಸಲಾಗುತ್ತದೆ. ನಿದ್ರಾಹೀನತೆಯು 3 ತಿಂಗಳುಗಳಿಗಿಂತ ಕಡಿಮೆ ಅವಧಿಯಲ್ಲಿ ಕಂಡುಬಂದರೆ ಅದನ್ನು ಅಲ್ಪಕಾಲದ ನಿದ್ರಾಹೀನತೆ ಎಂಬುದಾಗಿ ಕರೆಯಲಾಗುತ್ತದೆ. ಅದು 3 ತಿಂಗಳುಗಳಿಗಿಂತ ಹೆಚ್ಚು ಅವಧಿಯಲ್ಲಿ ಕಂಡುಬಂದರೆ ದೀರ್ಘ‌ಕಾಲಿಕ ನಿದ್ರಾಹೀನತೆ ಎನ್ನಲಾಗುತ್ತದೆ.

ನಿದ್ರಾಹೀನತೆಗೆ ಕಾರಣಗಳು
– ಇತ್ತೀಚೆಗಿನ ಒತ್ತಡ/ ಪರಿಸರದಲ್ಲಿ ಬದಲಾವಣೆ
– ದೈಹಿಕ ಆರೋಗ್ಯದಲ್ಲಿ ಸಮಸ್ಯೆಗಳು/ ವೈದ್ಯಕೀಯ ತೊಂದರೆಗಳು
– ಖಿನ್ನತೆ, ಮೇನಿಯಾ, ಉದ್ವಿಗ್ನತೆಯಂತಹ ಮನಶಾಸ್ತ್ರೀಯ ಅನಾರೋಗ್ಯಗಳು
– ಇತರ ಅನಾರೋಗ್ಯಗಳಿಗಾಗಿ ತೆಗೆದುಕೊಳ್ಳುತ್ತಿರುವ ಔಷಧ ಗಳು (ಉದಾ: ಪ್ರೊಪ್ರನೊಲಾಲ್‌, ಸ್ಟೀರಾಯ್ಡಗಳು ಇತ್ಯಾದಿ)
– ಮದ್ಯಪಾನ ಮತ್ತು ತಂಬಾಕು ಬಳಕೆ
– ವೈದ್ಯಕೀಯ ಅನಾರೋಗ್ಯಗಳಿಂದಾಗಿ ಉಂಟಾಗಿರುವ ಅಲ್ಪಕಾಲಿಕ ಅಥವಾ ದೀರ್ಘ‌ಕಾಲಿಕ ನೋವು

ನಿದ್ರಾಹೀನತೆಯ ಪರಿಣಾಮಗಳು
1. ಹಗಲಿನಲ್ಲಿ ದಣಿವು
2. ಏಕಾಗ್ರತೆಗೆ ಸಂಬಂಧಿಸಿದ ತೊಂದರೆಗಳು
3. ಸಿಟ್ಟಾಗುವುದು, ಉದ್ವಿಗ್ನತೆ
4. ಖಿನ್ನತೆಯನ್ನು ಬೆಳೆಸಿಕೊಳ್ಳುವ ಸಾಧ್ಯತೆ
5. ಪ್ರಸ್ತುತ ಇರುವ ಇತರ ದೈಹಿಕ/ ಮಾನಸಿಕ ಅನಾರೋಗ್ಯ ಉಲ್ಬಣಗೊಳ್ಳುವ ಸಾಧ್ಯತೆ

ನಿದ್ದೆಯ ಅಚ್ಚುಕಟ್ಟು ಕ್ರಮಗಳು
1. ನಿದ್ದೆ ಹೋಗುವ ಮತ್ತು ಎದ್ದೇಳುವ ಸಮಯವನ್ನು ಕ್ರಮಬದ್ಧಗೊಳಿಸುವುದು
2. ಹಗಲು ನಿದ್ದೆ ಮಾಡದಿರುವುದು
3. ಸಂಜೆ ಮತ್ತು ರಾತ್ರಿ ಕಾಫಿ/ ಚಹಾ ಸೇವಿಸದಿರುವುದು
4. ರಾತ್ರಿ ಬಿರುಸಾದ ವ್ಯಾಯಾಮ ಮಾಡದಿರುವುದು
5. ಧೂಮಪಾನ ಮತ್ತು ಮದ್ಯಪಾನ ತ್ಯಜಿಸುವುದು
6. ಮಲಗುವ ಸಂದರ್ಭದಲ್ಲಿ ಟಿವಿ, ಮೊಬೈಲ್‌ ಫೋನ್‌ ಬಳಕೆ ಮಾಡದಿರುವುದು
7. ರಾತ್ರಿ ಪ್ರಕಾಶಮಾನವಾದ ಬೆಳಕು ಇಲ್ಲದಂತೆ ನೋಡಿಕೊಳ್ಳುವುದು

ಚಿಕಿತ್ಸೆ
1. ನಿದ್ರಾಹೀನತೆಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಅದಕ್ಕೆ ಕಾರಣಗಳನ್ನು ವಿಶ್ಲೇಷಿಸಿ ಚಿಕಿತ್ಸೆ ಗೊಳಪಡಿಸಬೇಕಾಗುತ್ತದೆ.
2. ನಿದ್ದೆಯ ಅಚ್ಚುಕಟ್ಟು ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
3. ಈ ಎರಡು ಹೆಜ್ಜೆಗಳನ್ನು ಅನುಸರಿಸಿದ ಬಳಿಕವೂ ಪ್ರಯೋಜನ ಆಗದೆ ಇದ್ದಲ್ಲಿ ಮತ್ತು ಹಗಲಿನ ಚಟುವಟಿಕೆಗಳಿಗೆ ಆಗುವ ತೊಂದರೆ ಗಮನಾರ್ಹವಾಗಿದ್ದಲ್ಲಿ ಅಲ್ಪ ಅವಧಿಯ ಔಷಧ ಚಿಕಿತ್ಸೆ (2ರಿಂದ 4 ವಾರಗಳಿಗಿಂತ ಹೆಚ್ಚು ಅವಧಿಯದ್ದಲ್ಲದ) ವಿಧಾನವನ್ನು ಪರಿಗಣಿಸಬೇಕಾಗುತ್ತದೆ. ಔಷಧ ಆಯ್ಕೆಗಳಲ್ಲಿ ಬೆಂಜೊಡಯಾಜಪೈನ್‌ಗಳು, ನಾನ್‌-ಬೆಂಜೊಡಯಾಜಪೈನ್‌ಗಳಾಗಿರುವ ಜೊಲ್ಪಿಡೆಮ್‌ ಮತ್ತು ಅಗತ್ಯವಾದರೆ ಮೆಲಟೊನಿನ್‌ ಕೂಡ ಸೇರಿವೆ. ಬೆಂಜೊಡಯಾಜಪೈನ್‌ಗಳ ಮೇಲಿನ ಅವಲಂಬನೆ ಉಂಟಾಗುವ ವಿಚಾರವಾಗಿ ವೈದ್ಯರು ಎಚ್ಚರಿಕೆಯಿಂದ ಇರಬೇಕು ಮತ್ತು ಔಷಧಗಳನ್ನು 2-4 ವಾರಗಳಲ್ಲಿ ಹಂತಹಂತವಾಗಿ ಕಡಿಮೆಗೊಳಿಸಿ ಸ್ಥಗಿತಗೊಳಿಸಬೇಕು.
4. ದೀರ್ಘ‌ಕಾಲಿಕ ನಿದ್ರಾಹೀನತೆಯಿಂದ ಬಳಲುತ್ತಿರುವ ರೋಗಿಗಳಿಗೆ ಗ್ರಹಿಸುವುದಕ್ಕೆ ಸಂಬಂಧಿಸಿದ ವರ್ತನಾತ್ಮಕ ಚಿಕಿತ್ಸೆ )(ಕೊಗ್ನಿಟಿವ್‌ ಬಿಹೇವಿಯರ್‌ ಥೆರಪಿ) ಮತ್ತು ವಿಶ್ರಾಂತಿದಾಯಕ ಚಿಕಿತ್ಸೆಗಳನ್ನು ಒದಗಿಸುವುದು ಕೂಡ ಸೂಕ್ತವಾಗಿದೆ.

ಡಾ| ಸೋನಿಯಾ ಶೆಣೈ
ಅಸೋಸಿಯೇಟ್‌ ಪ್ರೊಫೆಸರ್‌, ಸೈಕಿಯಾಟ್ರಿ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ

ಟಾಪ್ ನ್ಯೂಸ್

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.