ಹಿಂದೂಸ್ಥಾನಿ ಮೇರು ಗಾಯಕಿ ಬೇಗಂ ಪರ್ವೀನ್ ಸುಲ್ತಾನಾ

ಸಂಗೀತವೇ ನನ್ನ ಧರ್ಮವೆನ್ನುವ ಅಸ್ಸಾಮಿನ ಕೋಗಿಲೆ

ವಿಷ್ಣುದಾಸ್ ಪಾಟೀಲ್, Nov 24, 2022, 7:56 PM IST

1-asdsd

ಭಾರತ ಹಲವು ಧರ್ಮಗಳ, ಕಲೆಗಳ ವೈವಿಧ್ಯತೆಯನ್ನು ತನ್ನೊಳಗೆ ಅಡಗಿಸಿಕೊಂಡಿರುವ ಪ್ರಪಂಚದ ಏಕಮಾತ್ರ ರಾಷ್ಟ್ರ. ಇಲ್ಲಿಯ ಸಂಗೀತ ವೈವಿಧ್ಯಕ್ಕೆ ಸಾಟಿಯಾಗುವ ಬೇರೊಂದು ರಾಷ್ಟ್ರ ಇಲ್ಲ ಎಂದರೆ ಅತಿಶಯೋಕ್ತಿ ಅಲ್ಲ. ಪ್ರಮುಖವಾಗಿ ನೂರಾರು ಗಾಯಕರು ಧರ್ಮಾತೀತವಾಗಿ, ಜಾತ್ಯಾತೀತವಾಗಿ ಖ್ಯಾತನಾಮರಾಗಿ ಸಂಗೀತ ಲೋಕವನ್ನು ಆಳಿದ್ದಾರೆ. ಅದರಲ್ಲಿಯೂ ಹಿಂದುಸ್ಥಾನಿ ಸಂಗೀತ ಅಗ್ರಗಣ್ಯ ಹಿಂದೂಸ್ಥಾನಿ ಗಾಯಕರಲ್ಲಿ ಒಬ್ಬರಾದ ಪರ್ವೀನ್ ಸುಲ್ತಾನಾ ಅವರ ಧ್ವನಿ ಸಂಗೀತ ಪ್ರೇಮಿಗಳನ್ನು ಧ್ಯಾನಸ್ಥದಿಂದ ಶಕ್ತಿಯುತವಾಗಿ ಪ್ರಚೋದಿಸುವ ಧ್ವನಿಗೆ ರೂಪಾಂತರಗೊಳ್ಳುತ್ತದೆ. ಪಟಿಯಾಲ ಘರಾನಾದ ಹಿರಿಮೆಯನ್ನು ಅವರ ಹಾಡುಗಾರಿಕೆಯಲ್ಲಿ ಪರಿಪೂರ್ಣವಾಗಿ ವ್ಯಕ್ತಪಡಿಸುವ ಗಾಯಕರಲ್ಲಿ ಒಬ್ಬರು.

ಮೇ 1950 ರಲ್ಲಿ ಇಕ್ರಾಮುಲ್ ಮಜೀದ್ ಮತ್ತು ಮಾರುಫಾ ಮಜೀದ್ ದಂಪತಿಯ ಪುತ್ರಿಯಾಗಿ ಜನಿಸಿದ ಬೇಗಂ ಪರ್ವೀನ್ ಸುಲ್ತಾನಾ ಭಾರತೀಯ ಪಟಿಯಾಲ ಘರಾನಾ ಶೈಲಿಯ ಹಿಂದೂಸ್ಥಾನಿ ಶಾಸ್ತ್ರೀಯ ಗಾಯಕಿಯರಲ್ಲಿ ಅಗ್ರ ಪಂಕ್ತಿಯ ಹೆಸರು.

ಪರ್ವೀನ್ ಸುಲ್ತಾನಾ ಅವರು ಆಚಾರ್ಯ ಚಿನ್ಮೊಯ್ ಲಾಹಿರಿಯವರಿಂದ ಪ್ರಾಥಮಿಕ ಸಂಗೀತ ತರಬೇತಿ ಪಡೆದರು. ವೃತ್ತಿಜೀವನವನ್ನು ಅಬ್ದುಲ್ ಮಜೀದ್ ಅವರ ಅಸ್ಸಾಮಿ ಚಲನಚಿತ್ರ ಮೊರೊಮ್ ತೃಷ್ನಾದಿಂದ ಪ್ರಾರಂಭಿಸಿದರು. ಅವರು ಬಾಲಿವುಡ್ ಚಲನಚಿತ್ರಗಳಾದ ಗದರ್, ಕುದ್ರತ್, ದೋ ಬೂಂದ್ ಪಾನಿ ಮತ್ತು ಪಕೀಜಾ ಸೇರಿ ನೂರಾರು ಅಸ್ಸಾಮಿ ಚಲನಚಿತ್ರಗಳಿಗೆ ಹಾಡಿದ್ದಾರೆ. ಇತ್ತೀಚೆಗೆ, ಅವರು ವಿಕ್ರಮ್ ಭಟ್ ಅವರ 1920 ರ ಥೀಮ್ ಹಾಡನ್ನು ಹಾಡಿ ಗಮನ ಸೆಳೆದರು.ಸಂಗೀತದ ಪಾಠಗಳನ್ನು ಪಡೆದ ಉಸ್ತಾದ್ ದಿಲ್ಶಾದ್ ಖಾನ್ ಅವರನ್ನು ವಿವಾಹವಾದರು. ಶಾದಾಬ್ ಖಾನ್ ಎಂಬ ಒಬ್ಬ ಮಗಳಿದ್ದಾಳೆ.

ಅಂದುಕೊಂಡಿದ್ದನ್ನು ಸಾಧಿಸುವ ಶಿಸ್ತು ಮತ್ತು ಸಮರ್ಪಣೆಯನ್ನು ನಾನು ನನ್ನ ತಂದೆ ಇಕ್ರಾಮುಲ್ ಮಜೀದ್ ಅವರಿಂದ ಕಲಿತಿದ್ದೇನೆ. ಅವರು ನನ್ನ ಮೊದಲ ಗುರು ಮತ್ತು ಇಂದು ನಾನು ಈ ಸ್ಥಿತಿಗೆ ಬರಲು ಕಾರಣ. ‘ಕ್ಷಣವನ್ನು ವಶಪಡಿಸಿಕೊಳ್ಳಿ’ ಎಂದು ಅವರು ಯಾವಾಗಲೂ ನನಗೆ ಹೇಳುತ್ತಿದ್ದರು ಎನ್ನುತ್ತಾರೆ ಹಿರಿಯ ಗಾಯಕಿ.

ಅಸ್ಸಾಂನ ನಾಗಾನ್ ಜಿಲ್ಲೆಯ ಪುರಾಣಿಗುಡಮ್‌ನಲ್ಲಿ ಬಾಲ್ಯ ಕಳೆದು ಹೆಚ್ಚಿನ ಅಭ್ಯಾಸಕ್ಕಾಗಿ ಕಲಿಯಲು ಕಲ್ಕತ್ತಾಗೆ ತೆರಳಿದರು. ಚಿನ್ಮೊಯ್ ಲಾಹಿರಿ ಮತ್ತು ಪತಿ ಉಸ್ತಾದ್ ದಿಲ್ಶಾದ್ ಖಾನ್ ಜೊತೆಗೆ ಮುಂಬೈಗೆ ಆಗಮಿಸಿ ಖ್ಯಾತಿಯ ಉತ್ತುಂಗಕ್ಕೆ ಏರಿದರು.

”ಸಂಗೀತ ಲೋಕದ ಪಯಣದುದ್ದಕ್ಕೂ ನನ್ನ ಪ್ರತಿಯೊಂದು ನಡೆಯ ಹಿಂದೆ ಸಂಗೀತವೇ ಉದ್ದೇಶವಾಗಿತ್ತು. ನನ್ನ ಧರ್ಮವೂ ಸಂಗೀತವಾಗಿದೆ” ಎಂದು ಪರ್ವೀನ್ ಹೇಳಿಕೊಳ್ಳುತ್ತಾರೆ.

ಇವರ ಸಂಗೀತ ಲೋಕದ ಸಾಧನೆಗೆ ಭಾರತ ಸರಕಾರ 1998 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 2014 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನುಯನ್ನು ನೀಡಿ ಗೌರವ ನೀಡಿದೆ.

ಗಂಧರ್ವ ಕಲಾನಿಧಿ(1980) ಮಿಯಾನ್ ತಾನ್ಸೆನ್ ಪ್ರಶಸ್ತಿ(1986) ಸಂಗೀತ ಸಮ್ರಗ್ಗಿ ಅಸ್ಸಾಂ ಸರ್ಕಾರದಿಂದ ಪ್ರದಾನ(1994) ಫಿಲ್ಮ್‌ಫೇರ್ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಪ್ರಶಸ್ತಿ-ಕುದ್ರತ್ (1981) “ಹಮೇ ತುಮ್ಸೆ ಪ್ಯಾರ್ ಕಿತ್ನಾ” ಹಾಡಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, (1999) ಅಸ್ಸಾಂ ಸರ್ಕಾರದಿಂದ ಶ್ರೀಮಂತ್ ಶಂಕರದೇವ್ ಪ್ರಶಸ್ತಿ ಇವರ ಸಾಧನೆಯ ಕಿರೀಟವನ್ನು ಅಲಂಕರಿಸಿವೆ.

ಪರ್ವೀನ್ ಅವರ ರಾಗ ಮಧುವಂತಿ,ಗೋರಖ್ ಕಲ್ಯಾಣ್,ಮಿಶ್ರ ಭೈರವಿ, ಕಲಾವತಿ, ರಾಗಶ್ರೀ,ಶ್ಯಾಮ್ ಕೌನ್ಸ್,ಶುದ್ಧ ಸಾರಂಗ್, ಮಿಶ್ರ ಕಾಪಿ, ಹಂಸಧ್ವನಿ ಗಳನ್ನು ಕೇಳುವುದೇ ಕರ್ಣಾನಂದಕರ.

ಟಾಪ್ ನ್ಯೂಸ್

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.