ಐಸಿಸಿ ವಿಶ್ವಕಪ್‌ ಟೆಸ್ಟ್‌ ಫೈನಲ್‌ : ಡ್ರಾ-ಟೈ ಆದರೆ ಇತ್ತಂಡಗಳೂ ಚಾಂಪಿಯನ್ಸ್‌


Team Udayavani, May 29, 2021, 7:40 AM IST

ಐಸಿಸಿ ವಿಶ್ವಕಪ್‌ ಟೆಸ್ಟ್‌ ಫೈನಲ್‌ : ಡ್ರಾ-ಟೈ ಆದರೆ ಇತ್ತಂಡಗಳೂ ಚಾಂಪಿಯನ್ಸ್‌

ದುಬಾೖ: ಭಾರತ-ನ್ಯೂಜಿಲ್ಯಾಂಡ್‌ ನಡುವಿನ ಚೊಚ್ಚಲ ವಿಶ್ವಕಪ್‌ ಟೆಸ್ಟ್‌ ಫೈನಲ್‌ ಪಂದ್ಯ ಸ್ಪಷ್ಟ ಫಲಿತಾಂಶ ಕಾಣದೇ ಹೋದರೆ ಆಗ ಚಾಂಪಿಯನ್‌ ತಂಡವನ್ನು ಹೇಗೆ ನಿರ್ಧರಿಸುವುದು ಎಂಬ ಪ್ರಶ್ನೆ ಹಾಗೂ ಕುತೂಹಲಕ್ಕೆ ಐಸಿಸಿ ಶುಕ್ರವಾರ ಉತ್ತರ ಒದಗಿಸಿದೆ. ಆಗ ಜಂಟಿ ವಿಜೇತರೆಂದು ತೀರ್ಮಾನಿಸಿ ಎರಡೂ ತಂಡಗಳಿಗೆ ಟ್ರೋಫಿ ನೀಡುವ ತೀರ್ಮಾನಕ್ಕೆ ಬಂದಿದೆ. ಯಾವುದೇ ರೀತಿಯ ಟೈ ಬ್ರೇಕರ್‌ ನಿಯಮವನ್ನು ಅಳವಡಿಸದಿರಲು ನಿರ್ಧರಿಸಿದೆ.

ಈ ಎರಡೂ ನಿಯಮಗಳನ್ನು ಟೆಸ್ಟ್‌ ಚಾಂಪಿಯನ್‌ಶಿಪ್‌ ಪಂದ್ಯಾವಳಿಯನ್ನು ಆಡಿಸುವ ಮೊದಲೇ, ಅಂದರೆ 2018ರ ಜೂನ್‌ನಲ್ಲೇ ಅಳವಡಿಸಲಾಗಿತ್ತೆಂದೂ, ಇದರಲ್ಲಿ ಯಾವುದೇ ಬದಲಾವಣೆ ತರಲಾಗದೆಂದೂ ಐಸಿಸಿ ತಿಳಿಸಿದೆ. ಹಾಗೆಯೇ ಅನಿವಾರ್ಯವಿದ್ದರಷ್ಟೇ ಮೀಸಲು ದಿನವನ್ನು ಇರಿಸಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ.

ಓವರ್‌ಗಳ ಹೊಂದಾಣಿಕೆ
ಟೆಸ್ಟ್‌ ಪಂದ್ಯವೆಂದರೆ ತಲಾ 90 ಓವರ್‌ಗಳ 5 ದಿನಗಳ ಆಟ. ಅಕಸ್ಮಾತ್‌ ಮಳೆ ಹಾಗೂ ಇನ್ನಿತರ ಪ್ರತಿಕೂಲ ಹವಾಮಾನದಿಂದಾಗಿ ದಿನದ 90 ಓವರ್‌ಗಳ ಕೋಟಾವನ್ನು ಪೂರ್ತಿಗೊಳಿಸಲು ಸಾಧ್ಯವಾಗದೇ ಹೋದರೆ ಆಗ ಮರುದಿನ ಪಂದ್ಯವನ್ನು ಬೇಗ ಆರಂಭಿಸಲಾಗುವುದು. ಜತೆಗೆ ವಿಳಂಬವಾಗಿ ಮುಗಿಸಿ 90 ಓವರ್‌ಗಳ ಕೋಟಾವನ್ನು ಸರಿದೂಗಿಸಲಾಗುವುದು.

ಅಕಸ್ಮಾತ್‌ ಈ ಅವಧಿಯಲ್ಲೂ ನಿಗದಿತ ಓವರ್‌ಗಳ ಆಟ ಸಾಧ್ಯವಾಗದೇ ಹೋದರಷ್ಟೇ ಮೀಸಲು ದಿನ ಇರಲಿದೆ. ಇದನ್ನು ಪೂರ್ತಿ 5 ದಿನಗಳ ಆಟದ ಮರುದಿನವಷ್ಟೇ ಅಳವಡಿಸಲಾಗುವುದು. ಅಗ ಜೂನ್‌ 23 ಮೀಸಲು ದಿನವಾಗಿರಲಿದೆ. ಒಂದು ವೇಳೆ ನಷ್ಟವಾದ ಅವಧಿಯನ್ನು ನಿಗದಿತ 5 ದಿನಗಳಲ್ಲಿ ಸರಿದೂಗಿಸಲು ಸಾಧ್ಯವಾದರೆ ಆಗ ಮೀಸಲು ದಿನ ಇರದು ಎಂದು ಐಸಿಸಿ ತಿಳಿಸಿದೆ.

ಗ್ರೇಡ್‌-1 ಡ್ನೂಕ್ಸ್‌ ಬಾಲ್‌
ಫೈನಲ್‌ ಪಂದ್ಯಕ್ಕೆ ಗ್ರೇಡ್‌-1 ಡ್ನೂಕ್ಸ್‌ ಚೆಂಡನ್ನು ಬಳಸಲಾಗುವುದು ಎಂದು ಐಸಿಸಿ ತಿಳಿಸಿದೆ. ಸಾಮಾನ್ಯವಾಗಿ ಭಾರತದಲ್ಲಿ ಎಸ್‌ಜಿ ಬಾಲ್ಸ್‌, ನ್ಯೂಜಿಲ್ಯಾಂಡ್‌ನ‌ಲ್ಲಿ ಕೂಕಬುರ ಚೆಂಡನ್ನು ಟೆಸ್ಟ್‌ ವೇಳೆ ಉಪಯೋಗಿಸಲಾಗುತ್ತದೆ.

5ನೇ ದಿನದ ಕೊನೆಯಲ್ಲಿ ಘೋಷಣೆ
ಫೈನಲ್‌ ಪಂದ್ಯಕ್ಕೆ ಮೀಸಲು ದಿನದ ಅಗತ್ಯವನ್ನು ಯಾವಾಗ ನಿರ್ಧರಿಸಲಾಗುತ್ತದೆ ಎಂಬ ಪ್ರಶ್ನೆಗೂ ಐಸಿಸಿ ಪರಿಹಾರ ಒದಗಿಸಿದೆ. ಅಂತಿಮ ದಿನದಾಟದ ಕೊನೆಯ ಒಂದು ಗಂಟೆಯ ಅವಧಿಯಲ್ಲಿ “ರಿಸರ್ವ್‌ ಡೇ’ ನಿರ್ಧಾರಕ್ಕೆ ಬರಲಾಗುವುದು ಎಂದಿದೆ.

ಫಲಿತಾಂಶಕ್ಕಾಗಿ ಅವಧಿ ವಿಸ್ತರಣೆ ಇಲ್ಲ
5 ದಿನಗಳ ಆಟ ಸಂಪೂರ್ಣಗೊಂಡು, ತಂಡವೊಂದರ ಗೆಲುವಿಗೆ ಒಂದೆರಡು ವಿಕೆಟ್‌ ಅಥವಾ ಕೆಲವೇ ರನ್‌ ಅಗತ್ಯವಿದ್ದ ಸಂದರ್ಭದಲ್ಲಿ ಸ್ಪಷ್ಟ ಫಲಿತಾಂಶಕ್ಕಾಗಿ ಪಂದ್ಯದ ಅವಧಿಯನ್ನು ವಿಸ್ತರಿಸಲಾಗದು; ಆಗ ಪಂದ್ಯವನ್ನು ಡ್ರಾ ಎಂದೇ ತೀರ್ಮಾನಿಸಿ ಇತ್ತಂಡಗಳನ್ನೂ ಚಾಂಪಿಯನ್‌ ಎಂದು ಘೋಷಿಸಲಾಗುವುದು ಎಂದು ಐಸಿಸಿ ಸ್ಪಷ್ಟಪಡಿಸಿದೆ.

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.