
ಕನಕಪುರ ಪ್ರಾಂತ್ಯದಲ್ಲಿ ಕಾವೇರಿ ಹೆಚ್ಚು ಮಲಿನ!
ಮದ್ರಾಸ್ ಐಐಟಿ ತಜ್ಞರ ವರದಿಯಲ್ಲಿ ಉಲ್ಲೇಖ ; ಸಾಂಪ್ರದಾಯಿಕ ತ್ಯಾಜ್ಯಗಳ ಜೊತೆಗೆ ಆಧುನಿಕ ತ್ಯಾಜ್ಯಗಳೂ ನೀರಿನಲ್ಲಿ ಪತ್ತೆ
Team Udayavani, Oct 8, 2021, 11:15 PM IST

ಚೆನ್ನೈ: ಕರ್ನಾಟಕ ಹಾಗೂ ತಮಿಳುನಾಡಿನ ಜೀವನದಿಯಾಗಿರುವ ಕಾವೇರಿ ನದಿಯ ನೀರು, ಕರ್ನಾಟಕದ ಕನಕಪುರ ಹಾಗೂ ತಮಿಳುನಾಡಿನ ಮೆಟ್ಟೂರು ವ್ಯಾಪ್ತಿಯಲ್ಲಿ ಹೆಚ್ಚು ಕಲುಷಿತವಾಗುತ್ತಿದೆ ಎಂದು ಮದ್ರಾಸ್ ಐಐಟಿ ತಜ್ಞರ ವರದಿಯೊಂದು ಹೇಳಿದೆ.
ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ಪರಿಸರ ಇಲಾಖೆ ಮತ್ತು ಯುನೈಟೆಡ್ ಕಿಂಗ್ಡಮ್ನ ನ್ಯಾಚುಲರ್ ಎನ್ವಿರಾನ್ಮೆಂಟ್ ರಿಸರ್ಚ್ ಕೌನ್ಸಿಲ್ನ ಧನಸಹಾಯದಿಂದ ನಡೆಸಲಾಗಿರುವ ಈ ಸಂಶೋಧನೆಯಲ್ಲಿ, ಕಾವೇರಿಯ ನೀರಿನಲ್ಲಿ ಸಾಂಪ್ರದಾಯಿಕ ಮಲಿನತೆಯ ಜೊತೆಗೆ ಆಧುನಿಕ ತ್ಯಾಜ್ಯಗಳೂ (ಔಷಧಗಳು, ಕೀಟನಾಶಕಗಳು, ಕೈಗಾರಿಕಾ ತ್ಯಾಜ್ಯಗಳು ಇತ್ಯಾದಿ) ಕಾಣಿಸಿಕೊಂಡಿದ್ದು, ಇದರಿಂದ ಮನುಷ್ಯರಿಗೆ ಹಾಗೂ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.
ವರದಿಯ ವಿಶೇಷತೆಯೇನು?
ಈ ಹಿಂದೆಯೂ ಕಾವೇರಿ ನೀರಿನ ಗುಣಮಟ್ಟವನ್ನು ಒರೆಗೆ ಹಚ್ಚುವಂಥ ಪರೀಕ್ಷೆಗಳು ನಡೆದಿದೆ. ಇದೇ ಮೊದಲ ಬಾರಿಗೆ ನದಿಯಲ್ಲಿನ ಮಲಿನಕ್ಕೆ ಕಾರಣವಾದ ಅಂಶಗಳ ಪ್ರಮಾಣವನ್ನು ಪತ್ತೆಹಚ್ಚಲಾಗಿದೆ. ಉದಾಹರಣೆಗೆ, ಕಾವೇರಿಯ ಪ್ರತಿ ಲೀಟರ್ ನೀರಿನಲ್ಲಿ 3,330.73 ನ್ಯಾನೋ ಗ್ರಾಂನಷ್ಟು ಕಾರ್ಬಾಮೆಝಿಪೈನ್ ಅಂಶವಿದೆ. ಇದು, ಅಪಸ್ಮಾರ ರೋಗಿಗಳಿಗೆ ನೀಡಲಾಗುವ ಔಷಧಿ. ಇದು ಆರೋಗ್ಯವಂತ ಮನುಷ್ಯರಲ್ಲಿ ಹಲವಾರು ಆರೋಗ್ಯ ಸಮಸ್ಯೆಯನ್ನು ಉಂಟು ಮಾಡುತ್ತದೆ. ಇಂಥ ಅನೇಕ ತ್ಯಾಜ್ಯಗಳೊಂದಿಗೆ, ಪರ್ನನಲ್ ಕೇರ್ ಸಾಮಗ್ರಿಗಳು, ಪ್ಲಾಸ್ಟಿಕ್, ಅಗ್ನಿಶಾಮಕ ರಾಸಾಯನಿಕಗಳು, ಭಾರದ ಲೋಹಗಳ ಅಂಶಗಳೂ ನೀರಿನಲ್ಲಿ ಕರಗತವಾಗಿವೆ. ಎಂದು ತಜ್ಞರು ತಿಳಿಸಿದ್ದಾರೆ.
ತಜ್ಞರ ತಂಡ:
ಐಐಟಿ ಮದ್ರಾಸ್ನ ಜಯಕುಮಾರ್ ರಂಗನಾಥನ್, ಇನjಮಾಮ್ ಉಲ್ ಹಕ್ ಎಸ್., ಕಾಮರಾಜ್ ರಾಧಾಕೃಷ್ಣನ್, ಮಂಥಿರಮ್ ಕಾರ್ತಿಕ್ ರವಿಚಂದ್ರನ್, ಲಿಗೆ ಫಿಲಿಪ್. ನದಿ ಹರಿಯುವ ಪ್ರದೇಶಗಳಲ್ಲಿನ 12 ಸ್ಥಳಗಳಿಂದ ನೀರಿನ ಸ್ಯಾಂಪಲ್ ಪಡೆದು ಪರೀಕ್ಷೆ ನಡೆಸಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fake Notes: ಜಾತ್ರೆಯಲ್ಲಿ ಐಸ್ಕ್ರೀಮ್ ಸವಿಯಲು ನಕಲಿ ನೋಟ್ಗಳನ್ನು ಬಳಸಿದ ಅಪ್ರಾಪ್ತರು

Manipur: ಬಂಡುಕೋರರ ಗುಂಡಿನ ದಾಳಿ: ಓರ್ವ ಬಿಎಸ್ಎಫ್ ಯೋಧ ಹುತಾತ್ಮ, ಇಬ್ಬರು ಯೋಧರಿಗೆ ಗಾಯ

Balasore Train Tragedy ಸಂತ್ರಸ್ತರಿಗೆ ರಿಲಯನ್ಸ್ ಫೌಂಡೇಷನ್ ಹತ್ತು ಅಂಶಗಳ ನೆರವು

VIDEO: ಅಂತರ್ಜಾತಿ ವಿವಾಹವಾದ ಸಹೋದರಿಯನ್ನು ಗಂಡನ ಮನೆಯಿಂದ ಬಲವಂತವಾಗಿ ಎಳೆದೊಯ್ದ ಸಹೋದರರು

Gujarat: ಕ್ರಿಕೆಟ್ ಬಾಲ್ ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳು ಕತ್ತರಿಸಿ, ಹಲ್ಲೆ
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು
ಹೊಸ ಸೇರ್ಪಡೆ

SPL23ಕರಾವಳಿ ಕೋಯಲ್ ಚಾಂಪಿಯನ್ಸ್: ಟೀಂ ಪ್ರತಿಮಾ ವಿನ್ನರ್, ಪಂಚಮ್ ಹಳೆಬಂಡಿ ಟೀಂ ರನ್ನರ್ ಅಪ್

ಚಿಕ್ಕಮಗಳೂರು: ಕಾಫಿತೋಟದ ಕಾರ್ಮಿಕ ಮಹಿಳೆ ಮೇಲೆ ಹುಲಿ ದಾಳಿ

Fake Notes: ಜಾತ್ರೆಯಲ್ಲಿ ಐಸ್ಕ್ರೀಮ್ ಸವಿಯಲು ನಕಲಿ ನೋಟ್ಗಳನ್ನು ಬಳಸಿದ ಅಪ್ರಾಪ್ತರು

HUNSUR: ಕೆಲ ದಿನಗಳಿಂದ ಕಣ್ಮರೆಯಾಗಿದ್ದ ಕಪ್ಪು ಚಿರತೆ ಪತ್ತೆ

ಹಾರೋಹಳ್ಳಿ: ಬೋನಿಗೆ ಬಿದ್ದ ಹತ್ತು ವರ್ಷದ ಗಂಡು ಚಿರತೆ