ಪಾಕ್ ಪಠ್ಯದಲ್ಲಿ ಭಾರತ, ಹಿಂದೂ ವಿರೋಧಿ ವಿಷ !
8, 9ನೇ ತರಗತಿ ಪಠ್ಯಗಳಲ್ಲಿ ಗಾಂಧೀಜಿ ಕೇವಲ ಹಿಂದೂ ಪರ ನಾಯಕನೆಂಬಂತೆ ವರ್ಣನೆ
Team Udayavani, Mar 10, 2023, 7:40 AM IST
ಇಸ್ಲಾಮಾಬಾದ್: ಭಯೋತ್ಪಾದನೆ, ಕುತಂತ್ರ, ಪಿತೂರಿಗಳಿಂದ ಸದಾ ಭಾರತದ ವಿರುದ್ಧ ವಿಷಕಾರುವ ನೆರೆಯ ಪಾಕಿಸ್ತಾನದ ಇನ್ನೊಂದು ಮುಖ ಬಯಲಾಗಿದೆ. ಅದು ತನ್ನ ಪಠ್ಯಪುಸ್ತಕಗಳಲ್ಲಿ ಮಹಾತ್ಮಾ ಗಾಂಧೀಜಿ ವಿರುದ್ಧವೂ ಸುಳ್ಳು ಮಾಹಿತಿಗಳನ್ನು ನೀಡಿದೆ. ಈ ಮೂಲಕ ಮಕ್ಕಳ ಮನಸ್ಸಿನಲ್ಲೂ ಭಾರತ ಹಾಗೂ ಹಿಂದೂಗಳ ವಿರುದ್ಧ ವಿಷಬೀಜ ಬಿತ್ತಲು ಮುಂದಾಗಿದೆ. ಈ ಮಾಹಿತಿ ನ್ಯೂಸ್ 18 ವರದಿಯೊಂದರಲ್ಲಿ ಪ್ರಕಟವಾಗಿದೆ.
ಅಲ್ಲಿನ ನ್ಯಾಷನಲ್ ಬುಕ್ ಫೆಡರೇಶನ್ ಪ್ರಕಟಿಸಿರುವ ಪಾಕ್ನ 8 ಮತ್ತು 9ನೇ ತರಗತಿ ಪಠ್ಯಪುಸ್ತಕಗಳಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರರಾದ ಗಾಂಧೀಜಿ ಕೇವಲ ಒಬ್ಬ ಹಿಂದೂ ಹಿತಾಸಕ್ತಿಯಿದ್ದ ನಾಯಕ ಮಾತ್ರ, ಅವರಿಗೆ ಮುಸ್ಲಿಮರ ಮೇಲೆ ಕಾಳಜಿಯಿರಲಿಲ್ಲ ಎಂದು ವರ್ಣಿಸಲಾಗಿದೆ. ಅಲ್ಲದೇ ಕಾಂಗ್ರೆಸ್ ಪಕ್ಷದ ನೇತೃತ್ವವನ್ನು ಗಾಂಧಿ ಮತ್ತು ಅವರ ಬೆಂಬಲಿಗರು ಹಿಡಿದ ನಂತರ ಹಿಂದೂಪರ ನಿಲುವನ್ನೇ ಹೆಚ್ಚಾಗಿ ಹೊಂದಿದ್ದರು. ಮುಸ್ಲಿಮರ ಹಕ್ಕುಗಳ ಬಗ್ಗೆ ಗೌರವವಿರಲಿಲ್ಲ. ಇದರಿಂದ ದ್ವೇಷ, ಅಸೂಯೆ, ಸಣ್ಣತನಗಳು ಶುರುವಾದವು ಎಂದು ಪಠ್ಯದಲ್ಲಿದೆ.
ಭಾರತ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯ ಬಗ್ಗೆ ಇರುವ 8ನೇ ತರಗತಿ ಪಠ್ಯದಲ್ಲಿ, ಹಲವರು ಭಾರತ ರಾಷ್ಟ್ರೀಯವಾದವನ್ನು ಬೆಂಬಲಿಸಲು ಕಾಂಗ್ರೆಸ್ ಸೇರಿದರು. ಅದು ಮುಖ್ಯವಾಗಿ ಹಿಂದೂ ಧರ್ಮವನ್ನೇ ಆದ್ಯತೆಯಾಗಿಟ್ಟುಕೊಂಡಿತ್ತು. ಆದ್ದರಿಂದ ಕಾಂಗ್ರೆಸ್ ಇಡೀ ಭಾರತದ ರಾಷ್ಟ್ರೀಯ ಧ್ವನಿಯಾಗುವುದರ ಬದಲು, ಬಹುತೇಕ ಹಿಂದೂ ಪರ ಪಕ್ಷವಾಗಿತ್ತು ಎಂದು ಹೇಳಲಾಗಿದೆ. ಒಟ್ಟಾರೆ ಹಲವು ಅಂತೆಕಂತೆಗಳನ್ನು ಪಠ್ಯದಲ್ಲಿ ತುಂಬಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು